ಉತ್ತರಾಖಂಡ್​: ಗುರುದ್ವಾರದೊಳಗೆ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ

ಉತ್ತರಾಖಂಡದ ನಾನಕ್‌ಮಟ್ಟಾ ಗುರುದ್ವಾರದೊಳಗೆ ಸಿಬ್ಬಂದಿಯನ್ನು ಗುರುವಾರ ಮುಂಜಾನೆ ಇಬ್ಬರು ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತರನ್ನು ಬಾಬಾ ತಾರ್ಸೆಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ಉತ್ತರಾಖಂಡ್​: ಗುರುದ್ವಾರದೊಳಗೆ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ
ಪೊಲೀಸ್​
Image Credit source: India Today

Updated on: Mar 28, 2024 | 11:40 AM

ಉತ್ತರಾಖಂಡದ ನಾನಕ್‌ಮಟ್ಟಾ ಗುರುದ್ವಾರದೊಳಗೆ ಸಿಬ್ಬಂದಿಯನ್ನು ಗುರುವಾರ ಮುಂಜಾನೆ ಇಬ್ಬರು ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತರನ್ನು ಬಾಬಾ ತಾರ್ಸೆಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ಘಟನೆಯನ್ನು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕರು ದೃಢಪಡಿಸಿದ್ದು, ಇಂದು ಬೆಳಗ್ಗೆ 7 ಗಂಟೆಗೆ ಕೊಲೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮುಸುಕುಧಾರಿಗಳಾದ ಇಬ್ಬರು ದುಷ್ಕರ್ಮಿಗಳು ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್‌ಗೆ ಗುಂಡು ಹಾರಿಸಿದ್ದಾರೆ ಎಂದು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ತಿಳಿಸಿದ್ದಾರೆ.

ಅವರನ್ನು ಕೂಡಲೇ ಖತಿಮಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್​​​​ಗೆ ಬಾಂಬ್ ಬೆದರಿಕೆ; ತನಿಖೆ ನಡೆಸಿದಾಗ ಪೊಲೀಸರೇ ಶಾಕ್!

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ತನಿಖೆಗಾಗಿ, ಪೊಲೀಸ್ ಪ್ರಧಾನ ಕಛೇರಿಯು ಎಸ್‌ಐಟಿಯನ್ನು ರಚಿಸಿದೆ.
ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಇದನ್ನು ತಮ್ಮ ಪ್ರಮುಖ ಆದ್ಯತೆಯಾಗಿ ಇರಿಸಿಕೊಳ್ಳಲು ಮತ್ತು ಎಲ್ಲಾ ಕೋನಗಳನ್ನು ಸೂಕ್ಷ್ಮವಾಗಿ ತನಿಖೆ ಮಾಡಲು ತಿಳಿಸಲಾಗಿದೆ.

ಹಂತಕರ ದೃಶ್ಯಾವಲಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ, ಒಂದು ಗುಂಡು ಅವರ ಹೊಟ್ಟೆಯ ಮೂಲಕ ಹಾದು ಹೋಗಿತ್ತು. ಕೊಲೆಗಾರರು ಪೇಟ ಧರಿಸಿದ್ದರು. ಬೈಕ್ ಹಿಂದೆ ನೀಲಿ ಬಣ್ಣದ ಬ್ಯಾಗ್ ಕಟ್ಟಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us