AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ನಿಂದ ಬಳಲುತ್ತಿದ್ದ ಮಿಲ್ಖಾ ಸಿಂಗ್ ಮಡದಿ ನಿರ್ಮಲ್ ಕೌರ್ ನಿಧನ

ಕೊರೊನಾ ಸೋಂಕಿತರಾಗಿದ್ದ ಅವರು ಮೂರು ವಾರಗಳಿಂದ ಆಸ್ಪತ್ರೆಯಲ್ಲಿದ್ದರು. ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯೂ ಆಗಿದ್ದ ನಿರ್ಮಲ್ ಅವರ ಆರೋಗ್ಯವು ಕಳೆದ ಕೆಲ ದಿನಗಳಿಂದ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊವಿಡ್​ನಿಂದ ಬಳಲುತ್ತಿದ್ದ ಮಿಲ್ಖಾ ಸಿಂಗ್ ಮಡದಿ ನಿರ್ಮಲ್ ಕೌರ್ ನಿಧನ
ಪತಿ ಮಿಲ್ಖಾ ಸಿಂಗ್ ಅವರೊಂದಿಗೆ ನಿರ್ಮಲ್ ಕೌರ್
TV9 Web
| Edited By: |

Updated on:Jun 13, 2021 | 11:23 PM

Share

ಚಂಡಿಗಡ: ಮಿಲ್ಖಾಸಿಂಗ್ ಮಡದಿ ಮತ್ತು ಖ್ಯಾತ ವಾಲಿಬಾಲ್ ಆಟಗಾರ್ತಿ ನಿರ್ಮಲ್ ಕೌರ್ (85) ಕೊವಿಡ್-19ರಿಂದ ಭಾನುವಾರ ನಿಧನರಾದರು. ಕೊರೊನಾ ಸೋಂಕಿತರಾಗಿದ್ದ ಅವರು ಮೂರು ವಾರಗಳಿಂದ ಆಸ್ಪತ್ರೆಯಲ್ಲಿದ್ದರು. ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯೂ ಆಗಿದ್ದ ನಿರ್ಮಲ್ ಅವರ ಆರೋಗ್ಯವು ಕಳೆದ ಕೆಲ ದಿನಗಳಿಂದ ಹದಗೆಟ್ಟಿತ್ತು.

ಕೊರೊನಾ ಸೋಂಕಿನಿಂದಾಗಿ ನಿರ್ಮಲ್ ಕೌರ್ ಅವರ ಆಕ್ಸಿಜನ್ ಮಟ್ಟ ಕುಸಿದಿತ್ತು. ಅವರಿಗೆ ಎಚ್​ಎಫ್​ಎನ್​ಸಿ (High Flow Nasal Cannula – HFNC) ಮತ್ತು ಎನ್​ಐವಿ Non Invasive Ventilator – NIV) ಸಾಧನಗಳ ಮೂಲಕ ಚಿಕಿತ್ಸೆ ನೀಡಲಾಯಿತು. ಆದರೂ ಅವರ ದೇಹಸ್ಥಿತಿ ಸುಧಾರಿಸಲಿಲ್ಲ. ಮೇ ಕೊನೆಯ ವಾರದಲ್ಲಿ ಆಸ್ಪತ್ರೆಗೆ ದಾಖಲಾದ ನಂತರ ಅವರಲ್ಲಿ ನ್ಯೂಮೊನಿಯಾ ಕಾಣಿಸಿಕೊಂಡಿತು. ಇದೇ ವೇಳೆ 91 ವರ್ಷದ ಮಿಲ್ಖಾ ಸಿಂಗ್ ಅವರನ್ನು ಸಹ ಮೊಹಾಲಿಯ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಮಿಲ್ಖಾ ಸಿಂಗ್ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳಿಸಲಾಯಿತು. ಆದರೆ ನಿರ್ಮಲ್ ಅವರ ಆರೋಗ್ಯ ಸುಧಾರಿಸಲಿಲ್ಲ. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು.

‘ಕೊವಿಡ್ ವಿರುದ್ಧ ಸುದೀರ್ಘ ಹೋರಾಟದ ನಂತರ ನಿರ್ಮಲ್ ಕೌರ್ ಭಾನುವಾರ ಸಂಜೆ 4 ಗಂಟೆಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರು ಪಂಜಾಬ್ ಸರ್ಕಾರದಲ್ಲಿ ಮಹಿಳೆಯರ ಕ್ರೀಡಾ ವಿಭಾಗದ ಮಾಜಿ ನಿರ್ದೇಶಕಿ ಮತ್ತು ಭಾರತೀಯ ವಾಲಿಬಾಲ್ ತಂಡದ ನಾಯಕಿಯಾಗಿದ್ದರು. ಈಗಲೂ ತೀವ್ರ ನಿಗಾ ಘಟಕದಲ್ಲಿಯೇ ಇರುವ ಮಿಲ್ಖಾಸಿಂಗ್ ಪತ್ನಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ವಿಷಾದದ ಸಂಗತಿ ಎಂದು ಮಿಲ್ಖಾ ಸಿಂಗ್-ನಿರ್ಮಲ್ ಕೌರ್ ಕುಟುಂಬ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಮಿಲ್ಖಾ ಮತ್ತು ನಿರ್ಮಲ್ ದಂಪತಿಗಳು ಚಂಡಿಗಡದಲ್ಲಿ ಅಪಾರ ಪ್ರೀತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದರು. ಇವರಿಬ್ಬರ ಪ್ರೇಮದ ಕಥೆಯು 1960ರಷ್ಟರು ಹಿಂದಕ್ಕೆ ಹೋಗುತ್ತದೆ. ಈಗ ಪಾಕಿಸ್ತಾನದಲ್ಲಿರುವ ಶೇಖ್​ಪುರದಲ್ಲಿ ನಿರ್ಮಲ್ ಅಕ್ಟೋಬರ್ 8, 1938ರಲ್ಲಿ ಜನಿಸಿದರು. ಪಂಬಾಜ್ ವಾಲಿಬಾಲ್ ತಂಡಕ್ಕೆ ಮೂರು ಬಾರಿ ನಾಯಕಿಯಾಗಿದ್ದರು. 1955ರಲ್ಲಿ ಭಾರತ ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದಾಗ ಮಿಲ್ಖಾ ಸಿಂಗ್ ಭೇಟಿಯಾಗಿದ್ದರು.

ಚಂಡಿಗಡದಲ್ಲಿ 1960-61ರಲ್ಲಿ ಕ್ರೀಡಾ ಆಡಳಿತಗಾರರಾಗಿ ಇಬ್ಬರನ್ನೂ ನಿಯುಕ್ತಿಗೊಳಿಸಲಾಗಿತ್ತು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. 1962ರಲ್ಲಿ ಮಿಲ್ಖಾ-ನಿರ್ಮಲ್ ಮದುವೆ ನಡೆದಿತ್ತು. 1958ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿರ್ಮಲ್ ಕೌರ್, ವಾಲೀಬಾಲ್ ಪಂದ್ಯಗಳಲ್ಲಿ ಸಲ್ವಾರ್ ಕಮೀಜ್ ಧರಿಸಿಯೇ ಆಡುತ್ತಿದ್ದರು. ಇತರರಂತೆ ಶಾರ್ಟ್ಸ್​ ಅಥವಾ ಸ್ಕರ್ಟ್ ಧರಿಸುತ್ತಿರಲಿಲ್ಲ. ಚಂಡಿಗಡದಲ್ಲಿ ಅತ್ಯುತ್ತಮ ದರ್ಜೆಯ ಕ್ರೀಡಾ ಸೌಕರ್ಯ ಅಭಿವೃದ್ಧಿಪಡಿಸಿದ್ದ ನಿರ್ಮಲ್ ಕೌರ್ 1990ರ ದಶಕದ್ಲಿ ನಿವೃತ್ತರಾದರು.

‘ಚಂಡಿಗಡದ ಹಾಕಿ ಮತ್ತು ಟೆನಿಸ್ ಕ್ರೀಡಾಂಗಣಗಳೂ ಸೇರಿದಂತೆ ಪಂಜಾಬ್​ನಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಕರ್ಯ ರೂಪುಗೊಳ್ಳಲು ನಿರ್ಮಲ್ ತಮ್ಮದೇ ಅದ ಕೊಡುಗೆ ನೀಡಿದ್ದಾರೆ. ಹಲವು ಕ್ರೀಡಾ ಸಂಕೀರ್ಣಗಳು ಅವರ ಕಾಲದಲ್ಲಿ ಸ್ಥಾಪನೆಯಾದವು. ಚಂಡಿಗಡದಲ್ಲಿ ಹತ್ತಾರು ರಾಷ್ಟ್ರೀಯ, ಅಂತರರಾಷ್​ರೀಯ ಪಂದ್ಯಾವಳಿಗಳನ್ನು ಆಯೋಇಸಿದ್ದರು. 1955ರಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ವಾಲೀಬಾಲ್ ತಂಡ ರಷ್ಯಾ ಪ್ರವಾಸ ಕೈಗೊಂಡಾಗ ನಿರ್ಮಲ್ ಅದರ ನಾಯಕಿಯಾಗಿದ್ದರು ಎಂದು ಭಾರತೀಯ ವಾಲಿಬಾಲ್ ಫೇಡರೇಷನ್​ನ ಕಾರ್ಯದರ್ಶಿ ವಿಜಯ್​ಪಾಲ್ ಸಿಂಗ್ ನೆನಪಿಸಿಕೊಂಡರು.

(Volleyball team captian Nirmal Kaur dies after fighting Covid-19 for 3 weeks Milkha Singhs wife)

ಇದನ್ನೂ ಓದಿ: ಆಮ್ಲಜನಕ ಮಟ್ಟ ಕುಸಿತ; ಆಸ್ಪತ್ರೆಗೆ ದಾಖಲಾದ ಮಿಲ್ಖಾ ಸಿಂಗ್.. ಫ್ಲೈಯಿಂಗ್ ಸಿಖ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಇದನ್ನೂ ಓದಿ: ಹಿಸ್ಸಾರ್​​ನಲ್ಲಿ ಹಿರಿಯ ಪೊಲೀಸ್​ ಅಧಿಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಸಜ್ಜಾದ ರೈತರು; ನಿಯಂತ್ರಣಕ್ಕೆ ಸಿದ್ಧರಾಗಿರುವ ಭದ್ರತಾ ಸಿಬ್ಬಂದಿ

Published On - 11:15 pm, Sun, 13 June 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ