9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ. ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ […]

9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ
ಸಾಧು ಶ್ರೀನಾಥ್​

Updated on: Oct 28, 2020 | 3:40 PM

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ.
ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ ಒಬ್ಬೊಬ್ಬರಾಗಿ ಬಾವಿ ವರೆಗೂ ಎಳೆದೊಯ್ದು, ಬಾವಿಗೆ ಹಾಕಿದ್ದ. ಇದೀಗ, ಸಂಜಯ ಕುಮಾರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಮೃತರ ಸಂಬಂಧಿಕರು, ಮೃತರ ಪರ ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.

Published On - 3:28 pm, Wed, 28 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us