AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣ: ಮದುವೆ ಮೆರವಣಿಗೆ ವೇಳೆ ಎಸೆದ ಹಣ ಹಿಡಿಯಲು ಹೋಗಿ ಹೆಣವಾದ ಬಾಲಕ

ಮದುವೆ ಮೆರವಣಿಗೆ ವೇಳೆ ಎಸೆದ ಹಣ ಹಿಡಿಯಲು ಹೋಗಿ ಬಾಲಕ ಸಾವನ್ನಪ್ಪಿರುವ ಘಟನೆ ಹರ್ಯಾಣದ ಸೋನಿಪತ್​ನಲ್ಲಿ ನಡೆದಿದೆ. ಮದುವೆಗೆ ಬಂದವರು ಮೆರವಣಿಗೆ ಸಮಯದಲ್ಲಿ ಎಸೆದ ಹಣವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ವಿದ್ಯುತ್​ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ರೋಹ್ಟಕ್​ನಿಂದ ಮದುವೆ ಮೆರವಣಿಗೆ ತಾಜ್​ಪುರ್ ಗ್ರಾಮದ ತೋಟದ ಮನೆಗೆ ಆಗಮಿಸಿದಾಗ ತಡರಾತ್ರಿ ಈ ಘಟನೆ ಸಂಭವಿಸಿದೆ.

ಹರ್ಯಾಣ: ಮದುವೆ ಮೆರವಣಿಗೆ ವೇಳೆ ಎಸೆದ ಹಣ ಹಿಡಿಯಲು ಹೋಗಿ ಹೆಣವಾದ ಬಾಲಕ
ಮದುವೆ
ನಯನಾ ರಾಜೀವ್
|

Updated on:Mar 08, 2025 | 2:53 PM

Share

ಹರ್ಯಾಣ, ಮಾರ್ಚ್​ 8: ಮದುವೆ ಮೆರವಣಿಗೆ ವೇಳೆ ಎಸೆದ ಹಣ ಹಿಡಿಯಲು ಹೋಗಿ ಬಾಲಕ ಸಾವನ್ನಪ್ಪಿರುವ ಘಟನೆ ಹರ್ಯಾಣದ ಸೋನಿಪತ್​ನಲ್ಲಿ ನಡೆದಿದೆ. ಮದುವೆಗೆ ಬಂದವರು ಮೆರವಣಿಗೆ ಸಮಯದಲ್ಲಿ ಎಸೆದ ಹಣವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ವಿದ್ಯುತ್​ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ರೋಹ್ಟಕ್​ನಿಂದ ಮದುವೆ ಮೆರವಣಿಗೆ ತಾಜ್​ಪುರ್ ಗ್ರಾಮದ ತೋಟದ ಮನೆಗೆ ಆಗಮಿಸಿದಾಗ ತಡರಾತ್ರಿ ಈ ಘಟನೆ ಸಂಭವಿಸಿದೆ.

ಮದುವೆಗೆ ಬಂದ ಅತಿಥಿಗಳು ಸಂಭ್ರಮದಲ್ಲಿದ್ದಾಗ ನೃತ್ಯ ಮಾಡುತ್ತಾ ನೋಟುಗಳನ್ನು ಎಸೆಯುತ್ತಿದ್ದರು. ಗ್ರಾಮದ ನಿವಾಸಿ ಮತ್ತು 8 ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಾಲಕ ತೋಟದ ಮನೆಯ ಛಾವಣಿ ಮೇಲೆ ನಿಂತು ನೋಟುಗಳನ್ನು ಆಯ್ದುಕೊಳ್ಳುತ್ತಿದ್ದ. ಹೈ-ವೋಲ್ಟೇಜ್ ವಿದ್ಯುತ್ ತಂತಿಗಳಿಗೆ ನೇರ ಸಂಪರ್ಕಕ್ಕೆ ಬಂದು ಕೂಡಲೇ ಸಾವನ್ನಪ್ಪಿದ್ದಾನೆ.

ಆ ಹುಡುಗನ ಕುಟುಂಬವು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವನ ಹೆತ್ತವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಮೂಲಗಳ ಪ್ರಕಾರ, ಆ ಬಾಲಕ ವಿವಾಹ ಆಚರಣೆಗಳಿಂದ ಆಕರ್ಷಿತನಾಗಿ ಬರಾತ್ ಮೆರವಣಿಗೆಯ ಹತ್ತಿರ ಹೋಗಿದ್ದ.

ಪ್ರತ್ಯಕ್ಷದರ್ಶಿಗಳು  ಹೇಳಿರುವ  ಪ್ರಕಾರ, ವಿದ್ಯುತ್ ಆಘಾತ ಎಷ್ಟು ತೀವ್ರವಾಗಿತ್ತು ಎಂದರೆ ಹುಡುಗನ ದೇಹವು ಸುಟ್ಟು ಕರಕಲಾಗಿತ್ತು, ಮದುವೆಗೆ ಬಂದಿದ್ದವರು ಆಘಾತಕ್ಕೊಳಗಾದರು. ಅತಿಥಿಗಳಲ್ಲಿ ಭೀತಿ ಹರಡುತ್ತಿದ್ದಂತೆ ಆಚರಣೆಗಳು ಹಠಾತ್ತನೆ ನಿಂತುಹೋದವು.

ಮತ್ತಷ್ಟು ಓದಿ: Video: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ತಾಜ್‌ಪುರ ಗ್ರಾಮದ ತ್ಯಾಗಿ ಫಾರ್ಮ್‌ಹೌಸ್‌ನಲ್ಲಿ ಈ ಘಟನೆ ನಡೆದಿದ್ದು, ರೋಹ್ಟಕ್‌ನಿಂದ ಮದುವೆ ಮೆರವಣಿಗೆ ಬಂದಿತ್ತು. ಗ್ರಾಮದ ಹಲವಾರು ಮಕ್ಕಳು ಆಚರಣೆಯನ್ನು ವೀಕ್ಷಿಸುತ್ತಿದ್ದರು.

ಅತಿಥಿಗಳು ಎಸೆದ ನೋಟುಗಳನ್ನು ಸಂಗ್ರಹಿಸುವ ಪ್ರಯತ್ನದಲ್ಲಿ, ಬಲಿಪಶು ಫಾರ್ಮ್‌ಹೌಸ್ ಛಾವಣಿಯ ಮೇಲೆ ಹತ್ತಿ ಆಕಸ್ಮಿಕವಾಗಿ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿದ್ದಾನೆ. ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕುಟುಂಬದ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:51 pm, Sat, 8 March 25

Follow Us
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!