AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಖ್ಪತಿ ದೀದಿ ಫಲಾನುಭವಿಗಳೊಂದಿಗೆ ಮೋದಿ ವಿಶೇಷ ಸಂವಾದ: ಟಿಪ್ಪಣಿ ಮಾಡಿಕೊಂಡ ಪ್ರಧಾನಿ

ಮಾರ್ಚ್ 8ರಂದು, ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರು ಲಖ್ಪತಿ ದೀದಿ ಯೋಜನೆಯ ಫಲಾನುಭವಿ ಮಹಿಳೆಯರೊಂದಿಗೆ ವಿಶೇಷ ಸಂವಾದ ನಡೆಸಿದರು. ಯೋಜನೆಯ ಯಶಸ್ಸು ಮತ್ತು ಭವಿಷ್ಯದ ಗುರಿಗಳ ಬಗ್ಗೆ ಚರ್ಚಿಸಲಾಯಿತು. ಮಹಿಳೆಯರು ತಮ್ಮ ಯಶಸ್ಸಿನ ಕಥೆಗಳನ್ನು ಹಂಚಿಕೊಂಡರು. ವ್ಯಾಪಾರ ವಿಸ್ತರಣೆ ಮತ್ತು ಆನ್‌ಲೈನ್ ಮಾರುಕಟ್ಟೆಗೆ ಬಗ್ಗೆ ಪ್ರಧಾನಿ ಮೋದಿ ಸಲಹೆ ನೀಡಿದರು.

ಲಖ್ಪತಿ ದೀದಿ ಫಲಾನುಭವಿಗಳೊಂದಿಗೆ ಮೋದಿ ವಿಶೇಷ ಸಂವಾದ: ಟಿಪ್ಪಣಿ ಮಾಡಿಕೊಂಡ ಪ್ರಧಾನಿ
ಲಖ್ಪತಿ ದೀದಿ ಫಲಾನುಭವಿಗಳೊಂದಿಗೆ ಮೋದಿ ವಿಶೇಷ ಸಂವಾದ: ಟಿಪ್ಪಣಿ ಮಾಡಿಕೊಂಡ ಪ್ರಧಾನಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 08, 2025 | 8:14 PM

Share

ಗುಜರಾತ್​, ಮಾರ್ಚ್​ 08: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುಜರಾತ್​ನ ನವ್ಸಾರಿ ಜಿಲ್ಲೆಯಲ್ಲಿ ಲಖ್ಪತಿ ದೀದಿ ಯೋಜನೆಯ (Lakhpati Didi) ಫಲಾನುಭವಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು. ಸಿಇಒಗಳೊಂದಿಗೆ ನಡೆಸುವ ಅಂದರೆ ಬೋರ್ಡ್ ರೂಮ್ ಶೈಲಿಯಲ್ಲಿ ಸಂವಾದ ನಡೆದದ್ದು ಮತ್ತಷ್ಟು ವಿಶೇಷವಾಗಿತ್ತು. ಈ  ಸಂವಾದ ವೇಳೆ ಪ್ರಧಾನಿ ಮೋದಿ ಅವರು ಚರ್ಚೆಯ ಮುಖ್ಯ ಅಂಶಗಳನ್ನು ತನ್ನ ನೋಟ್​ಪ್ಯಾಡ್​​ನಲ್ಲಿ​ ಟಿಪ್ಪಣಿ ಮಾಡಿಕೊಂಡರು.

ವಿಶೇಷ ಸಂವಾದದಲ್ಲಿ ಹೆಚ್ಚಿನ ಮಹಿಳೆಯರು ತಾವು ಲಖ್ಪತಿ ದೀದಿ ಯೋಜನೆಯ ಫಲಾನುಭವಿಗಳಾಗಲು  ಸಾಧ್ಯವಾಗಿದ್ದು ನಿಮ್ಮಿಂದ ಎಂದು ಹೇಳಿದ್ದಾರೆ. ಲಖ್ಪತಿ ದೀದಿಗಳ ಫಲಾನುಭವಿಗಳ ಸಕಾರಾತ್ಮಕ ಅನುಭವಿ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ, 3 ಕೋಟಿ ಲಖ್ಪತಿ ದೀದಿಗಳ ಗುರಿಯನ್ನು ಶೀಘ್ರದಲ್ಲೇ ದಾಟಲಾಗುವುದು ಮತ್ತು ಮುಂಬರುವ ಸಮಯದಲ್ಲಿ 5 ಕೋಟಿ ಗುರಿಯನ್ನು ಸಹ ಸಾಧಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಗುಜರಾತ್​ನಲ್ಲಿ ‘ಲಖ್ಪತಿ ದೀದಿ’ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ಇದನ್ನೂ ಓದಿ
Image
ಗುಜರಾತ್​ನಲ್ಲಿ ಲಖ್ಪತಿ ದೀದಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಮೋದಿ
Image
ಪ್ರಧಾನಿ ಮೋದಿಯವರ ‘ಎಕ್ಸ್​’ ಖಾತೆಯನ್ನು ನಿರ್ವಹಿಸಲಿರುವ ಈ ಮಹಿಳೆರ್ಯಾರು?
Image
ಮಾರ್ಚ್ 8 ರಂದೇ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುವುದು ಏಕೆ?
Image
ಮಹಿಳಾ ದಿನದಂದು ಗುಜರಾತ್‌ಗೆ ಮೋದಿ: ಲಖ್‌ಪತಿ ದೀದಿ ಕಾರ್ಯಕ್ರಮದಲ್ಲಿ ಭಾಗಿ

ಸಂವಾದದಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರು ಮಾತನಾಡಿ, ಮುಂದಿನ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಲಖ್ಪತಿ ದೀದಿ ಯೋಜನೆ ಬದಲು ಕರೋಡ್‌ಪತಿ ದೀದಿ ಯೋಜನೆಯ ಫಲಾನುಭವಿಗಳಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಬ್ಬ ಡ್ರೋನ್ ಪೈಲಟ್ ಅವರು ವಿಮಾನವನ್ನು ಹಾರಿಸಲು ಸಾಧ್ಯವಿಲ್ಲ, ಆದರೆ ಪ್ರಧಾನಿ ಮೋದಿ ಅವರ ಕಾರಣದಿಂದಾಗಿ, ಅವರಿಗೆ ಡ್ರೋನ್ ಪೈಲಟ್ ಆಗುವ ಅವಕಾಶ ಸಿಕ್ಕಿದೆ ಎಂದು ಹೇಳಿದರು. ತನ್ನ ಮನೆ ಮತ್ತು ಹಳ್ಳಿಯಲ್ಲಿ, ತನ್ನನ್ನು ಅತ್ತಿಗೆ ಎಂದು ಕರೆಯುವ ಬದಲು ಪೈಲಟ್ ಎಂದು ಕರೆಯಲಾಗುತ್ತದೆ ಎಂದು ಮತ್ತೋರ್ವ ಮಹಿಳೆ ಹೇಳಿದ್ದಾರೆ.

ವ್ಯಾಪಾರ ವಿಸ್ತರಣೆ ಯೋಜನೆಯ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ, ತಮ್ಮ ವ್ಯವಹಾರವನ್ನು ಆನ್​ಲೈನ್​​​ಗೆ ತರುವಂತೆ ಲಖ್ಪತಿ ದೀದಿ ಯೋಜನೆಯ ಫಲಾನುಭವಿಗಳಿಗೆ ಸಲಹೆ ನೀಡಿದರು. ಆ ಮೂಲಕ ಮಾರುಕಟ್ಟೆಗೆ ಪ್ರವೇಶವನ್ನು ಹೊಂದಬಹುದು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಅಭಿವೃದ್ಧಿ ಹೊಂದಿದ ಭಾರತದ ಹಾದಿಯಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪ್ರಧಾನಿ ಮೋದಿಯವರ ‘ಎಕ್ಸ್​’ ಖಾತೆಯನ್ನು ನಿರ್ವಹಿಸಲಿರುವ ಈ ಮಹಿಳೆರ್ಯಾರು?

ಮಾರುಕಟ್ಟೆಯನ್ನು ಉತ್ತೇಜಿಸಲು ಪ್ರಧಾನಿಯವರ ಉಪಕ್ರಮವನ್ನು ಶ್ಲಾಘಿಸಿದ ಮಹಿಳೆಯೊಬ್ಬರು, ಗುಜರಾತ್‌ನ ತಮ್ಮ ಖಖ್ರಾ ಜನಪ್ರಿಯವಾಗಿದೆ ಎಂದು ಹೇಳಿದರು. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇಂತಹ ಪ್ರಯತ್ನಗಳಿಂದ ಖಖ್ರಾ ಗುಜರಾತ್‌ಗೆ ಸೀಮಿತವಾಗಿಲ್ಲ, ಇಡೀ ದೇಶದಲ್ಲಿ ಪ್ರಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 pm, Sat, 8 March 25

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ