AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ಡಾರ್ಜಲಿಂಗ್​​ನ ರಸ್ತೆಬದಿಯ ಸ್ಟಾಲ್​​​ನಲ್ಲಿ ಪಾನಿಪೂರಿ ತಯಾರಿಸಿ ಜನರಿಗೆ ನೀಡಿದ ಮಮತಾ ಬ್ಯಾನರ್ಜಿ

ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ.

Watch  ಡಾರ್ಜಲಿಂಗ್​​ನ ರಸ್ತೆಬದಿಯ ಸ್ಟಾಲ್​​​ನಲ್ಲಿ ಪಾನಿಪೂರಿ ತಯಾರಿಸಿ ಜನರಿಗೆ ನೀಡಿದ ಮಮತಾ ಬ್ಯಾನರ್ಜಿ
ಜನರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ಬ್ಯಾನರ್ಜಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jul 13, 2022 | 3:01 PM

Share

ಡಾರ್ಜಲಿಂಗ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಂಗಳವಾರ ಡಾರ್ಜಲಿಂಗ್​​ನ (Darjeeling) ರಸ್ತೆ ಬದಿಯಲ್ಲಿರುವ ಪಾನಿಪೂರಿ ಸ್ಟಾಲ್ಲ್​​ನಲ್ಲಿ ಪಾನಿಪೂರಿ (Panipuri) ತಯಾರಿಸಿ ಜನರಿಗೆ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಡಾರ್ಜಲಿಂಗ್​​ಗೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಅವರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ದೀದಿಯನ್ನು ವಿಡಿಯೊದಲ್ಲಿ ಕಾಣಬಹುದು. ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಪಾನಿಪೂರಿಯನ್ನು ಪುಚ್ಕಾ ಎಂದು ಕರೆಯಲಾಗುತ್ತದೆ. ಮಹಿಳೆಯರ ಸ್ವಸಹಾಯ ಗುಂಪು ಕ್ವೀನ್ ಆಫ್ ಹಿಲ್ಸ್ ಗೆ ಭೇಟಿ ನೀಡಿದ ಮಮತಾ ಅಲ್ಲಿ ಪಾನಿಪೂರಿ ಮಾಡಿ ಜನರಿಗೆ ನೀಡಿದ್ದಾರೆ .

ಟಿಎಂಸಿ ಕೂಡಾ ಈ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರು ಡಾರ್ಜಲಿಂಗ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸ್ಟಾಲ್ ಗೆ ಭೇಟಿನೀಡಿ ಅಲ್ಲಿ ಪುಚ್ಕಾ ತಯಾರಿಸಿ ಮಕ್ಕಳಿಗೆ ನೀಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ
Image
Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್
Image
Watch ಮಹಾರಾಷ್ಟ್ರದ ನಾನೆಘಾಟ್​​​ನಲ್ಲಿರುವ ಹಿಮ್ಮುಖ ಜಲಪಾತದ ವಿಸ್ಮಯಕ್ಕೆ ದಂಗಾದ ನೆಟ್ಟಿಗರು
Image
Viral Video: ಎಲಾನ್ ಮಸ್ಕ್​ನ ಸ್ಪೇಸ್​ಎಕ್ಸ್​ ಪ್ಲಾಂಟ್​​ನಲ್ಲಿ ರಾಕೆಟ್ ಬೂಸ್ಟರ್​ ಸ್ಫೋಟ; ವಿಡಿಯೋ ಇಲ್ಲಿದೆ

ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದಲ್ಲಿ ಹೊಸದಾಗಿ ಆಯ್ಕೆ ಆದ ಮಂಡಳಿ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮಮತಾ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದರು. ಈ ಹಿಂದೆ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದಾಗ ಮಮತಾ ಅವರು ಜನಪ್ರಿಯ ಟಿಬೆಟಿಯನ್ ತಿಂಡಿ ಮೊಮೊ ತಯಾರಿಸಿದ್ದರು. 2019ರಲ್ಲಿ ದಿಘಾದಿಂದ ಕೊಲ್ಕತ್ತಾಕ್ಕೆ ಮರಳುವಾಗ ಅವರು ಚಹಾ ತಯಾರಿಸಿ ಎಲ್ಲರಿಗೂ ನೀಡಿದ್ದರು.

Follow Us
ಡಿಕೆಶಿ ಸಿಟಿ ರೌಂಡ್ಸ್: ಫುಟ್​ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ಡಿಕೆಶಿ ಸಿಟಿ ರೌಂಡ್ಸ್: ಫುಟ್​ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ