AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ಡಾರ್ಜಲಿಂಗ್​​ನ ರಸ್ತೆಬದಿಯ ಸ್ಟಾಲ್​​​ನಲ್ಲಿ ಪಾನಿಪೂರಿ ತಯಾರಿಸಿ ಜನರಿಗೆ ನೀಡಿದ ಮಮತಾ ಬ್ಯಾನರ್ಜಿ

ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ.

Watch  ಡಾರ್ಜಲಿಂಗ್​​ನ ರಸ್ತೆಬದಿಯ ಸ್ಟಾಲ್​​​ನಲ್ಲಿ ಪಾನಿಪೂರಿ ತಯಾರಿಸಿ ಜನರಿಗೆ ನೀಡಿದ ಮಮತಾ ಬ್ಯಾನರ್ಜಿ
ಜನರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ಬ್ಯಾನರ್ಜಿ
TV9 Web
| Edited By: |

Updated on: Jul 13, 2022 | 3:01 PM

Share

ಡಾರ್ಜಲಿಂಗ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಂಗಳವಾರ ಡಾರ್ಜಲಿಂಗ್​​ನ (Darjeeling) ರಸ್ತೆ ಬದಿಯಲ್ಲಿರುವ ಪಾನಿಪೂರಿ ಸ್ಟಾಲ್ಲ್​​ನಲ್ಲಿ ಪಾನಿಪೂರಿ (Panipuri) ತಯಾರಿಸಿ ಜನರಿಗೆ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಡಾರ್ಜಲಿಂಗ್​​ಗೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಅವರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ದೀದಿಯನ್ನು ವಿಡಿಯೊದಲ್ಲಿ ಕಾಣಬಹುದು. ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಪಾನಿಪೂರಿಯನ್ನು ಪುಚ್ಕಾ ಎಂದು ಕರೆಯಲಾಗುತ್ತದೆ. ಮಹಿಳೆಯರ ಸ್ವಸಹಾಯ ಗುಂಪು ಕ್ವೀನ್ ಆಫ್ ಹಿಲ್ಸ್ ಗೆ ಭೇಟಿ ನೀಡಿದ ಮಮತಾ ಅಲ್ಲಿ ಪಾನಿಪೂರಿ ಮಾಡಿ ಜನರಿಗೆ ನೀಡಿದ್ದಾರೆ .

ಟಿಎಂಸಿ ಕೂಡಾ ಈ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರು ಡಾರ್ಜಲಿಂಗ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸ್ಟಾಲ್ ಗೆ ಭೇಟಿನೀಡಿ ಅಲ್ಲಿ ಪುಚ್ಕಾ ತಯಾರಿಸಿ ಮಕ್ಕಳಿಗೆ ನೀಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ
Image
Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್
Image
Watch ಮಹಾರಾಷ್ಟ್ರದ ನಾನೆಘಾಟ್​​​ನಲ್ಲಿರುವ ಹಿಮ್ಮುಖ ಜಲಪಾತದ ವಿಸ್ಮಯಕ್ಕೆ ದಂಗಾದ ನೆಟ್ಟಿಗರು
Image
Viral Video: ಎಲಾನ್ ಮಸ್ಕ್​ನ ಸ್ಪೇಸ್​ಎಕ್ಸ್​ ಪ್ಲಾಂಟ್​​ನಲ್ಲಿ ರಾಕೆಟ್ ಬೂಸ್ಟರ್​ ಸ್ಫೋಟ; ವಿಡಿಯೋ ಇಲ್ಲಿದೆ

ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದಲ್ಲಿ ಹೊಸದಾಗಿ ಆಯ್ಕೆ ಆದ ಮಂಡಳಿ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮಮತಾ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದರು. ಈ ಹಿಂದೆ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದಾಗ ಮಮತಾ ಅವರು ಜನಪ್ರಿಯ ಟಿಬೆಟಿಯನ್ ತಿಂಡಿ ಮೊಮೊ ತಯಾರಿಸಿದ್ದರು. 2019ರಲ್ಲಿ ದಿಘಾದಿಂದ ಕೊಲ್ಕತ್ತಾಕ್ಕೆ ಮರಳುವಾಗ ಅವರು ಚಹಾ ತಯಾರಿಸಿ ಎಲ್ಲರಿಗೂ ನೀಡಿದ್ದರು.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ