ಪಾಕಿಸ್ತಾನದ ಮುಖವನ್ನು ಜಗತ್ತಿನೆದುರು ಬಯಲು ಮಾಡುತ್ತೇನೆ; ಅಸಾದುದ್ದೀನ್ ಓವೈಸಿ
ಭಾರತದ ಭಯೋತ್ಪಾದನಾ ವಿರೋಧಿ ಅಭಿಯಾನದ ಭಾಗವಾಗಿ ಪಾಕಿಸ್ತಾನದ ಅಲಿ ಮುಖವನ್ನು ಜಗತ್ತಿಗೆ ಬಹಿರಂಗಪಡಿಸುತ್ತೇನೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಪಾಕಿಸ್ತಾನವು 'ಇಸ್ಲಾಮಿಕ್' ದೇಶ ಎಂಬ ಹೇಳಿಕೆ ಆಧಾರರಹಿತ ಎಂದು ಜಗತ್ತು ತಿಳಿದುಕೊಳ್ಳಬೇಕು ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಭಾರತವು 20 ಕೋಟಿ ಮುಸ್ಲಿಮರಿಗೂ ನೆಲೆಯಾಗಿದೆ ಎಂದು ಅವರು ಹೇಳಿದ್ದಾರೆ.

ಹೈದರಾಬಾದ್, ಮೇ 17: ಕೇಂದ್ರ ಸರ್ಕಾರ ನಿಯೋಜಿಸಿರುವ ಪಾಕಿಸ್ತಾನದ ವಿರುದ್ಧದ ‘ಟೀಮ್ ಇಂಡಿಯಾ’ ನಿಯೋಗದಲ್ಲಿ ತಮ್ಮನ್ನು ಸೇರಿಸಿಕೊಂಡಿದ್ದಕ್ಕೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಸಂತೋಷ ವ್ಯಕ್ತಪಡಿಸಿದ್ದಾರೆ. “ನಾವು ಭಾರತ ಸರ್ಕಾರ ಮತ್ತು ನಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ. ನಾವು ಬೇರೆ ದೇಶಗಳಿಗೆ ಹೋಗಿ ಪಾಕಿಸ್ತಾನದಿಂದಾಗಿ ನಮ್ಮ ದೇಶದ ಹೆಣ್ಣುಮಕ್ಕಳು ಹೇಗೆ ವಿಧವೆಯರಾಗುತ್ತಿದ್ದಾರೆ, ನಮ್ಮ ಮಕ್ಕಳು ಹೇಗೆ ಅನಾಥರಾಗುತ್ತಿದ್ದಾರೆ ಮತ್ತು ಪಾಕಿಸ್ತಾನವು ನಮ್ಮ ದೇಶವನ್ನು ಹೇಗೆ ಅಸ್ಥಿರಗೊಳಿಸಲು ಬಯಸುತ್ತಿದೆ ಎಂಬುದನ್ನು ಹೇಳುತ್ತೇವೆ” ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. “ನಾನು ಇರುವ ಗುಂಪನ್ನು ನನ್ನ ಆತ್ಮೀಯ ಸ್ನೇಹಿತ ಸಂಸದ ಬೈಜಯಂತ್ ಜೈ ಪಾಂಡಾ ಮುನ್ನಡೆಸುತ್ತಾರೆ” ಎಂದು ಓವೈಸಿ ಹೇಳಿದ್ದಾರೆ.
“ನಮ್ಮ ದೇಶದಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ, ಇದನ್ನು ನಾವು ಇಡೀ ಜಗತ್ತಿಗೆ ಹೇಳಬೇಕು. ಇದು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ವಿಷಯವಲ್ಲ. ವಿದೇಶಕ್ಕೆ ಹೋಗುವ ಮೊದಲು ನಾವು ಸಭೆ ಕೂಡ ನಡೆಸುತ್ತೇವೆ. ಇದು ಒಂದು ದೊಡ್ಡ ಕೆಲಸ. ಈ ಜವಾಬ್ದಾರಿಯನ್ನು ಚೆನ್ನಾಗಿ ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಜಗತ್ತಿನ ಮುಂದೆ ಪಾಕಿಸ್ತಾನದ ನಿಜರೂಪವನ್ನು ಬಯಲು ಮಾಡುತ್ತೇವೆ” ಎಂದು ಓವೈಸಿ ಹೇಳಿದ್ದಾರೆ.
ಇದನ್ನೂ ಓದಿ: Waqf Amendment Bill: ಓವೈಸಿ, ತೇಜಸ್ವಿ ಸೂರ್ಯ ಸೇರಿದಂತೆ 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚನೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನವದೆಹಲಿ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೇಂದ್ರ ಸರ್ಕಾರವು ವಿದೇಶಿ ರಾಷ್ಟ್ರಗಳಿಗೆ ಭಯೋತ್ಪಾದನಾ ವಿರೋಧಿ ಸರ್ವಪಕ್ಷ ನಿಯೋಗಗಳನ್ನು ಸೇರಿಕೊಂಡಿದ್ದಾರೆ. ಈ ಭೇಟಿಗಳ ಸಮಯದಲ್ಲಿ ಪಾಕಿಸ್ತಾನದ ಉದ್ದೇಶಗಳನ್ನು ವಿದೇಶಿ ಸರ್ಕಾರಗಳಿಗೆ ಬಹಿರಂಗಪಡಿಸುವುದಾಗಿ ಓವೈಸಿ ಹೇಳಿದ್ದಾರೆ.
#WATCH | Hyderabad, Telangana | AIMIM Chief Asaduddin Owaisi says, “We are representing the government of India and our country… We are going to those countries to tell how our daughters are getting widowed, our children are being orphaned, and how Pakistan wants to destabilise… https://t.co/TngTjjx51Z pic.twitter.com/UIN5isjU72
— ANI (@ANI) May 17, 2025
“ಮಾಜಿ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ ಅವರ ಕಾಲದಿಂದಲೂ ಭಾರತವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ನಲುಗುತ್ತಿದೆ. ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ದಾಳಿಗಳು, 2001ರ ಸಂಸತ್ತಿನ ದಾಳಿ, ಉರಿ ಮತ್ತು ಪಠಾಣ್ಕೋಟ್ ಘಟನೆಗಳು, ರಿಯಾಸಿ ಮತ್ತು ಪಹಲ್ಗಾಮ್ನಲ್ಲಿ ಇತ್ತೀಚೆಗೆ ಪ್ರವಾಸಿಗರ ಹತ್ಯೆಗಳು ಸೇರಿದಂತೆ ಈ ಇತಿಹಾಸದ ಬಗ್ಗೆ ನಾವು ಜಗತ್ತಿಗೆ ತಿಳಿಸಬೇಕು. ಇದು ಮಾನವೀಯತೆಗೆ ಬೆದರಿಕೆಯಾಗಿದೆ” ಎಂದು ಓವೈಸಿ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಹಾನಿ ಮಾಡುವ ಮುನ್ನ ಪಾಕ್ 100 ಬಾರಿ ಯೋಚಿಸಬೇಕು ಅಂಥಾ ಕ್ರಮ ಕೈಗೊಳ್ಳಿ: ಓವೈಸಿ
ಪಾಕಿಸ್ತಾನವು ತನ್ನನ್ನು ಇಸ್ಲಾಮಿಕ್ ರಾಷ್ಟ್ರವೆಂದು ಬಿಂಬಿಸಿಕೊಳ್ಳುವ ಪ್ರಯತ್ನಗಳನ್ನು ಟೀಕಿಸಿದ ಓವೈಸಿ ಭಾರತ ಕೂಡ ಸುಮಾರು 200 ಮಿಲಿಯನ್ ಮುಸ್ಲಿಮರಿಗೆ ನೆಲೆಯಾಗಿದೆ ಎಂದು ಎತ್ತಿ ತೋರಿಸಿದರು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಆಪರೇಷನ್ ಸಿಂಧೂರ್ನ ಉದ್ದೇಶಗಳನ್ನು ಉತ್ತೇಜಿಸಲು ಭಾರತದ ಬದ್ಧತೆಯನ್ನು ಪ್ರತಿನಿಧಿಸಲು ಪ್ರಮುಖ ದೇಶಗಳಿಗೆ ಭೇಟಿ ನೀಡುವ ನಿಯೋಗದ ಭಾಗವಾಗಲು ಕೇಂದ್ರದ ನಾಮನಿರ್ದೇಶನವನ್ನು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಶರದ್ ಚಂದ್ರ ಪವಾರ್) ನಾಯಕಿ ಸುಪ್ರಿಯಾ ಸುಳೆ ಸಹ ಒಪ್ಪಿಕೊಂಡಿದ್ದಾರೆ.
ಏಳು ನಿಯೋಗಗಳ ನೇತೃತ್ವವನ್ನು 7 ಸಂಸದರು ವಹಿಸಲಿದ್ದಾರೆ. ಅವರಲ್ಲಿ ಕಾಂಗ್ರೆಸ್ನಿಂದ ಶಶಿ ತರೂರ್, ಬಿಜೆಪಿಯಿಂದ ರವಿಶಂಕರ್ ಪ್ರಸಾದ್, ಜೆಡಿಯುನಿಂದ ಸಂಜಯ್ ಕುಮಾರ್ ಝಾ, ಬಿಜೆಪಿಯಿಂದ ಬೈಜಯಂತ್ ಪಾಂಡಾ, ಡಿಎಂಕೆಯಿಂದ ಕನಿಮೋಳಿ ಕರುಣಾನಿಧಿ, ಎನ್ಸಿಪಿಯಿಂದ ಸುಪ್ರಿಯಾ ಸುಳೆ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಸೇರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




