WITT TV9 Global Summit 2024: ಅಸಾದುದ್ದೀನ್ ಓವೈಸಿ ಮಾತನಾಡಿದಷ್ಟು ಪ್ರಧಾನಿ ಮೋದಿಗೆ ಲಾಭ ಹೆಚ್ಚು: ಬಾಬಾ ರಾಮ್​ದೇವ್​

ಟಿವಿ9 ನೆಟ್​ವರ್ಕ್​ ಆಯೋಜಿಸಿದ್ದ ವಾಟ್​ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಯೋಗಗುರು ಬಾಬಾ ರಾಮ್​ದೇವ್ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಮಾತನಾಡಿದ ಅವರು ಅಸಾದುದ್ದೀನ್ ಓವೈಸಿ ಮಾತನಾಡಿದಷ್ಟು, ಪ್ರಧಾನಿ ಮೋದಿಗೆ ಹೆಚ್ಚು ಲಾಭವಿದೆ ಎಂದರು.

WITT TV9 Global Summit 2024: ಅಸಾದುದ್ದೀನ್ ಓವೈಸಿ ಮಾತನಾಡಿದಷ್ಟು ಪ್ರಧಾನಿ ಮೋದಿಗೆ ಲಾಭ ಹೆಚ್ಚು: ಬಾಬಾ ರಾಮ್​ದೇವ್​

Updated on: Feb 27, 2024 | 12:39 PM

‘‘ಅಸಾದುದ್ದೀನ್ ಓವೈಸಿ ಎಷ್ಟು ಮಾತನಾಡುತ್ತಾರೋ, ಪ್ರಧಾನಿ ನರೇಂದ್ರ ಮೋದಿಗೆ ಲಾಭ ಹೆಚ್ಚು’’ ಎಂದು ಯೋಗಗುರು ಬಾಬಾ ರಾಮ್​ದೇವ್(Baba Ramdev) ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ ಮೂರು ದಿನಗಳ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’’ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದು ದೇಶ, ಒಂದು ಕಾನೂನು ಇರಬೇಕು, ತ್ತರಾಖಂಡದಿಂದ ಯುಸಿಸಿ ಆರಂಭಗೊಂಡಿರುವುದು ಉತ್ತಮ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜ್ಯಗಳು ಈ ನಿಟ್ಟಿನಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ. ದೇಶಕ್ಕಿಂತ ದೊಡ್ಡದು ಯಾವುದೂ ಸಾಧ್ಯವಿಲ್ಲ.ಈ ವಿಷಯವನ್ನು ಓವೈಸಿ ವಿರೋಧಿಸುತ್ತಲೇ ಬಂದಿದ್ದಾರೆ.

ಈ ಕುರಿತು ಮಾತನಾಡಿದ ರಾಮ್‌ದೇವ್ ಅವರು ವಿಕೃತ ಮನಸ್ಸಿನ ವ್ಯಕ್ತಿ. ಅವರ ಪೂರ್ವಜರೂ ದೇಶ ವಿರೋಧಿಗಳಾಗಿದ್ದರು. ಅವರು ಹೇಳುವ ಋಣಾತ್ಮಕ ಮಾತುಗಳಿಂದ ಮೋದಿಯವರು ಲಾಭ ಪಡೆಯುತ್ತಾರೆ ಎಂದು ಹೇಳಿದರು.

ಮುಂದಿನ ಕೆಲವು ವರ್ಷಗಳಲ್ಲಿ, ಭಾರತವು ಮೂರನೇ ಅಲ್ಲ, ಅದು ಎರಡನೇ ಆರ್ಥಿಕತೆಯಾಗಬಹುದು. ಅಲ್ಲದೆ, ಜನರು ಕಷ್ಟಪಟ್ಟು ಕೆಲಸ ಮಾಡಿದರೆ ಮುಂದಿನ 10 ವರ್ಷಗಳಲ್ಲಿ ಅಂದರೆ 2035 ರ ವೇಳೆಗೆ ನಾವು ಭಾರತವನ್ನು ವಿಶ್ವದ ನಂಬರ್ ಒನ್ ಆರ್ಥಿಕತೆಯನ್ನಾಗಿ ಮಾಡಬಹುದು.

ಮತ್ತಷ್ಟು ಓದಿ: WITT TV9 Global Summit 2024: ಪಾಕಿಸ್ತಾನ ಉಗ್ರರನ್ನು ಎಲ್ಲಿವರೆಗೆ ಸಲಹುತ್ತೋ ಅಲ್ಲಿವರೆಗೆ ಭಾರತ-ಪಾಕ್ ಸಂಬಂಧ ಸರಿಹೋಗದು: ರಾಜನಾಥ್​ ಸಿಂಗ್

ದೇಶದಲ್ಲಿ ಹುಟ್ಟಿದವರು ಭಾರತ ರತ್ನ
ಸರ್ಕಾರದಿಂದ ಪಡೆದಿರುವ ಸಹಾಯದ ಆರೋಪದ ಕುರಿತು ರಾಮ್‌ದೇವ್, ನಾನು ಸರ್ಕಾರದಿಂದ ಒಂದು ರೂಪಾಯಿಯ ಲಾಭವನ್ನು ಪಡೆದಿಲ್ಲ ಎಂದು ಹೇಳಿದರು. ದೇಶದಲ್ಲಿ ಯಾರೇ ಹುಟ್ಟಿದರೂ ಅವರೆಲ್ಲರೂ ಭಾರತ ರತ್ನ ಎಂದರು.

ನಮ್ಮ ಅಭಿವೃದ್ಧಿ ಜಾಗತಿಕವಾಗಿ ಹೋಗುತ್ತಿದೆ, ಆದರೆ ಭಾರತವು ಇಂದು ಇಡೀ ಜಗತ್ತಿನಲ್ಲಿ ರಾಜಕೀಯವಾಗಿ ಜನಪ್ರಿಯವಾಗುತ್ತಿದೆ ಎಂದು ಹೇಳಿದರು. ದೇಶಕ್ಕೆ ಪ್ರಧಾನಿ ಮೋದಿಯಂತಹ ನಾಯಕ ಇದ್ದಾರೆ. ವಿಶ್ವದ ಅನೇಕ ನಾಯಕರು ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

ದೇಶದಲ್ಲಿ ಕೆಲವರು ಮಾದಕ ವ್ಯಸನಿಗಳಿದ್ದಾರೆ, ಕೆಲವರು ಖಿನ್ನತೆಯಲ್ಲಿದ್ದಾರೆ, ಕೆಲವರು ವೃದ್ಧರಿದ್ದಾರೆ, ಅವರಿಗೂ ನಾವು ಅವರ ಸೇವೆ ಮಾಡಬೇಕು ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:38 pm, Tue, 27 February 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us