WITT Summit 2026: ತೈಲ ಬಿಕ್ಕಟ್ಟು – ಭಾರತ ಏನು ಯೋಚಿಸುತ್ತಿದೆ ಎಂಬುದು ಜಗತ್ತಿಗೆ ಮುಖ್ಯ ಎಂದ ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

PM Modi in WITT Summit 2026: ಟಿವಿ9 ವಾರ್ಷಿಕ ಶೃಂಗಸಭೆಯಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್​ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು. ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

WITT Summit 2026: ತೈಲ ಬಿಕ್ಕಟ್ಟು - ಭಾರತ ಏನು ಯೋಚಿಸುತ್ತಿದೆ ಎಂಬುದು ಜಗತ್ತಿಗೆ ಮುಖ್ಯ ಎಂದ ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
ಬರುಣ್ ದಾಸ್

Updated on: Mar 23, 2026 | 8:46 PM

ನವದೆಹಲಿ, ಮಾರ್ಚ್ 23: ಟಿವಿ9 ವಾರ್ಷಿಕ ಶೃಂಗಸಭೆಯಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್​ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು. ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಪ್ರಧಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಯ ಮಾಡಿಕೊಂಡಿರುವುದಕ್ಕೆ ಬರುಣ್ ದಾಸ್ ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿಯವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ಬಳಿಕ ಮಾತು ಮುಂದುವರಿಸಿದ ಬರುಣ್ ದಾಸ್, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಜಾಗತಿಕ ಆರ್ಥಿಕತೆಗೆ ಎಷ್ಟು ಮಾರಕವಾಗಿದೆ ಎಂಬುದನ್ನು ಸ್ಮರಿಸಿ ಆತಂಕ ವ್ಯಕ್ತಪಡಿಸಿದರು.

ಜಾಗತಿಕ ಆರ್ಥಿಕತೆ ನಾಡಿಮಿಡಿತಗಳಾದ ಫುಯಲ್ (ಇಂಧನ), ಫುಡ್ (ಆಹಾರ), ಫಿನಾನ್ಸ್ (ಹಣಕಾಸು), ಈ ಮೂರು ಎಫ್​ಗಳ ಮೇಲೆ ಯುದ್ಧದ ಅಪಾಯ ನೆಟ್ಟಿದೆ. ಇಡೀ ಜಗತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. 1973ರ ಅರಬ್ ತೈಲ ಬಿಕ್ಕಟ್ಟು, 1979ರ ಇರಾನ್ ಕ್ರಾಂತಿ, 1990ರ ಗಲ್ಫ್ ಯುದ್ಧಕ್ಕಿಂತಲೂ ಇದು ತೀವ್ರತೆಯ ಪರಿಸ್ಥಿತಿ ಹೊಂದಿದೆ. ಇಂಥ ಹೊತ್ತಲ್ಲಿ ಜಗತ್ತು ಏನು ಯೋಚಿಸುತ್ತಿದೆ ಎಂಬುದಕ್ಕಿಂತ ಭಾರತ ಏನು ಯೋಚಿಸುತ್ತಿದೆ ಎನ್ನೋದಿ ಜಗತ್ತಿಗೆ ಮುಖ್ಯ ಎಂದು ಟಿವಿ9 ನೆಟ್ವರ್ಕ್ ಸಿಇಒ ಹೇಳಿದರು.

ಇದನ್ನೂ ಓದಿ: WITT Summit 2026: ಇಂದಿನಿಂದ ವಿಟ್ ಶೃಂಗಸಭೆ ಆರಂಭ; ಪ್ರಧಾನಿ ಮೋದಿ ಸೇರಿ ಮಹಾನ್​​ ದಿಗ್ಗಜರು ಭಾಗಿ

ದೆಹಲಿಯ ಅಶೋಕಾ ಹೋಟೆಲ್​ನಲ್ಲಿ ಆಯೋಜಿಸಲಾಗಿರುವ ಈ ಡಬ್ಲ್ಯುಐಟಿಟಿ ಸಮಿಟ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬರುಣ್ ದಾಸ್, ಪ್ರಧಾನಿಗಳ ಮೂರು ಮಂತ್ರಗಳನ್ನು ಪ್ರಸ್ತಾಪಿಸಿದರು.

ರಿಟರ್ನ್ ಆನ್ ಗವರ್ನೆನ್ಸ್, ಮೋದಿ ಮಲ್ಟಿಪ್ಲೈಯರ್ ಎಫೆಕ್ಟ್, ಸಿಡಿಆರ್ ಈ ಮೂರು ಮಂತ್ರಗಳ ಜೊತೆಗೆ ಮೋದಿ ಅವರ ಹೊಸ ಮಂತ್ರ ‘ಸ್ಥಿತ ಪ್ರಜ್ಞೆ’ ತಮಗೆ ಕಾಣುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಪ್ರಮುಖ ಸಲಹೆಯೇ ‘ಸ್ಥಿತ ಪ್ರಜ್ಞೆ’ ಆಗಿತ್ತು. ಸ್ಥಿತಪ್ರಜ್ಞೆ ಎಂದರೆ ಎಲ್ಲರನ್ನೂ ನ್ಯಾಯಯುತವಾಗಿ ನಡೆಸಿಕೊಳ್ಳುವುದು ಎಂದರ್ಥ ಎಂದು ಬರುಣ್ ದಾಸ್ ಹೇಳಿದರು.

ಇದನ್ನೂ ಓದಿ: WITT Summit 2026: ರಾಜಕೀಯದಿಂದ ಕ್ರೀಡೆಯವರೆಗೆ; ವಿಟ್ ಶೃಂಗಸಭೆಯ 2ನೇ ದಿನದ ಆಕರ್ಷಣೆಗಳಿವು

‘ನಾವು ಇಂದು ಅತ್ಯಂತ ಅಸ್ಥಿರವಾದ ದಿನಗಳಲ್ಲಿ ಬದುಕುತ್ತಿದ್ದೇವೆ. ಪಶ್ಚಿಮ ಏಷ್ಯಾದ ಯುದ್ಧಕ್ಕೂ ಮೊದಲು ಸುಂಕದ ಸಮರವು ವಿಶ್ವದ ಆರ್ಥಿಕತೆಯನ್ನು ನಡುಗಿಸಿತ್ತು. ಸೇನಾ ಬಲದ ಯುದ್ಧ ಒಂದಾದರೆ, ಆರ್ಥಿಕ ಯುದ್ಧ ಮತ್ತೊಂದು. ಜಗತ್ತಿನ 830 ಕೋಟಿ ಜನರು ಬಾಧಿತರಾಗಿದ್ದಾರೆ. ಈ ಜಾಗತಿಕ ಅಸ್ಥಿರತೆ ನಡುವೆ ಭಾರತ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲ, ಜಾಗತಿಕ ವ್ಯವಸ್ಥೆ ಸ್ಥಿರಗೊಳಿಸಲು ನೆರವಾಗಿದೆ ಎಂದು ಟಿವಿ9 ನೆಟ್ವರ್ಕ್​ನ ಎಂಡಿಯೂ ಆದ ಬರುಣ್ ದಾಸ್ ಹೇಳಿದರು.

ಬರುಣ್ ದಾಸ್ ಅವರ ಭಾಷಣಕ್ಕೂ ಮುನ್ನ, ಮೈ ಹೋಮ್ ಗ್ರೂಪ್​ನ ಛೇರ್ಮನ್ ಜುಪಲ್ಲಿ ರಾಮೇಶ್ವರ್ ರಾವ್ ಅವರೂ ಮಾತನಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us