ಮಹಿಳೆ, ವ್ಯಾಪಾರಿಗಳಿಗೆ ಕಿರುಕುಳ ನೀಡುವವರನ್ನು ಯಮರಾಜ ಸ್ವಾಗತಿಸುತ್ತಾನೆ; ಗೋರಖ್ಪುರದಲ್ಲಿ ಸಿಎಂ ಯೋಗಿ ಆದಿತ್ಯನಾಥ್
ದೀನ್ ದಯಾಳ್ ಉಪಾಧ್ಯಾಯ ಗೋರಖ್ಪುರ ವಿಶ್ವವಿದ್ಯಾಲಯದಲ್ಲಿ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಸಮಾಜವಾದಿ ಪಕ್ಷದ ಮೇಲೆ ದಾಳಿ ಮಾಡಿದರು ಮತ್ತು ಹಿಂದಿನ ಸರ್ಕಾರವು ಪ್ರತಿ ರಾಜ್ಯದಲ್ಲಿಯೂ ಮಾಫಿಯಾವನ್ನು ಹೊಂದಿತ್ತು. ಆದರೆ ಬಿಜೆಪಿ ಸರ್ಕಾರವು ರಾಜ್ಯದಲ್ಲಿ 'ಒಂದು ಜಿಲ್ಲೆ ಒಂದು ವೈದ್ಯಕೀಯ ಕಾಲೇಜು' ಅನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.

ಗೋರಖ್ಪುರ, ಮಾರ್ಚ್ 25: ಮಹಿಳೆಯರು ಅಥವಾ ವ್ಯಾಪಾರಿಗಳಿಗೆ ಕಿರುಕುಳ ನೀಡಲು ಯಾರಾದರೂ ಪ್ರಯತ್ನಿಸಿದರೆ ಅವರನ್ನು ‘ಯಮರಾಜ್’ ಸ್ವಾಗತಿಸುತ್ತಾನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಕಟುವಾಗಿ ಟೀಕಿಸಿದರು. ಗೋರಖ್ಪುರದ ದೀನ್ ದಯಾಳ್ ಉಪಾಧ್ಯಾಯ ಗೋರಖ್ಪುರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ‘ಭಾರತೀಯ ಯೋಗ ಸಂಪ್ರದಾಯದಲ್ಲಿ ಯೋಗಿರಾಜ್ ಬಾಬಾ ಗಂಭೀರನಾಥರ ಕೊಡುಗೆ’ ಎಂಬ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿದರು.”ಗೋರಖ್ಪುರ ನಗರ ಈಗ ಸ್ಮಾರ್ಟ್ ಸಿಟಿಯಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದ ಶುಚಿತ್ವ ವ್ಯವಸ್ಥೆ ಸುಧಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಭಾರತ ಬದಲಾಗಿದೆ. ಪ್ರತಿಯೊಬ್ಬರೂ ನಮ್ಮ ದೇಶಕ್ಕೆ ಬರಲು ಬಯಸುತ್ತಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು. ಈ ಬ್ರಹ್ಮಾಂಡದ ನಿಗೂಢತೆಗಳ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ, ಭಾರತದ ಉಪನಿಷತ್ತುಗಳು ಅದರ ದೊಡ್ಡ ಭಂಡಾರ. ನಾವು ಉಪನಿಷತ್ತುಗಳಿಂದ ದೂರವಾಗಿದ್ದೇವೆ ಎಂಬುದು ನಮ್ಮ ಸಮಸ್ಯೆಯಾಗಿತ್ತು. ಅದರ ಫಲಿತಾಂಶಗಳು ನಮ್ಮ ಮುಂದಿವೆ. ನಮ್ಮ ಹಿಂದೆ ಓಡುತ್ತಿದ್ದ ಪ್ರಪಂಚದ ಹಿಂದೆ ನಾವು ಓಡಲು ಪ್ರಾರಂಭಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ರೂಪಾಂತರಗೊಳ್ಳುತ್ತಿರುವ ಭಾರತವನ್ನು ನೋಡಿದ್ದೇವೆ. ಈಗ, ಎಲ್ಲರೂ ಭಾರತಕ್ಕೆ ಬರಲು ಬಯಸುತ್ತಿದ್ದಾರ. ಅವರು ಭಾರತದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಬಯಸುತ್ತಿದ್ದಾರೆ. ಭಾರತದ ಯೋಗದ ಪರಿಕಲ್ಪನೆಯನ್ನು ಈಗ ಇಡೀ ಜಗತ್ತಿನಲ್ಲಿ ಆಚರಿಸಲಾಗುತ್ತಿದೆ” ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು.
#WATCH | Gorakhpur | Uttar Pradesh CM Yogi Adityanath says, “…If you want to know about the mysteries of this universe, then India’s Upanishads are the biggest store of it. It was our problem that we distanced ourselves from it (Upanishads). The results are in front of us. We… pic.twitter.com/y6O0b4gOJS
— ANI (@ANI) March 25, 2025
ಇದನ್ನೂ ಓದಿ: ಉತ್ತರ ಪ್ರದೇಶ: ಪತ್ನಿ, ಮೂವರು ಮಕ್ಕಳ ಮೇಲೆ ಗುಂಡು ಹಾರಿಸಿದ ಬಿಜೆಪಿ ನಾಯಕ, ಇಬ್ಬರು ಸಾವು
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಸಮಾಜವಾದಿ ಪಕ್ಷದ ಮೇಲೆ ದಾಳಿ ಮಾಡಿದರು ಮತ್ತು ಹಿಂದಿನ ಸರ್ಕಾರವು ಪ್ರತಿ ರಾಜ್ಯದಲ್ಲಿಯೂ ಮಾಫಿಯಾವನ್ನು ಹೊಂದಿತ್ತು. ಆದರೆ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ‘ಒಂದು ಜಿಲ್ಲೆ ಒಂದು ವೈದ್ಯಕೀಯ ಕಾಲೇಜು’ ಅನ್ನು ಸ್ಥಾಪಿಸಿದೆ ಎಂದು ಹೇಳಿದರು.
ಹಿಂದಿನ ಸರ್ಕಾರವು ಪ್ರತಿ ಜಿಲ್ಲೆಯಲ್ಲೂ ಜನರನ್ನು ಸುಲಿಗೆ ಮಾಡುವ, ಭೂಮಿಯನ್ನು ಕಸಿದುಕೊಳ್ಳುವ, ಅಕ್ರಮ ಗಣಿಗಾರಿಕೆ ನಡೆಸುವ ಮತ್ತು ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವ ಮಾಫಿಯಾವನ್ನು ಹೊಂದಿತ್ತು. ಅವರ ಗೂಂಡಾಗಳು ವ್ಯಾಪಾರಿಗಳು ಮತ್ತು ಹೆಣ್ಣುಮಕ್ಕಳಿಗೆ ಅಪಾಯಕಾರಿಯಾಗಿದ್ದರು. “ನಾವು ಮಾಫಿಯಾವನ್ನು ಕೊನೆಗೊಳಿಸಿದ್ದಲ್ಲದೆ, ‘ಒಂದು ಜಿಲ್ಲೆ ಒಂದು ವೈದ್ಯಕೀಯ ಕಾಲೇಜು’ ಸ್ಥಾಪಿಸಿದ್ದೇವೆ” ಎಂದು ಅವರು ಹೇಳಿದರು.
अगर किसी ने बेटी और व्यापारी को छेड़ा तो उस अपराधी के लिए यमराज के घर जाने का रास्ता भी खुल जाएगा… pic.twitter.com/SAdc1tvXFs
— Yogi Adityanath (@myogiadityanath) March 25, 2025
ಇದನ್ನೂ ಓದಿ: ಗೋರಖ್ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಂಗವಿಕಲರಿಗೆ ಮೋಟಾರೀಕೃತ ತ್ರಿಚಕ್ರ ವಾಹನಗಳನ್ನು ವಿತರಿಸಿದರು ಮತ್ತು ಗೋರಖ್ಪುರದಲ್ಲಿ ರಾಜ್ಯ ಸರ್ಕಾರದ 8 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಆಧರಿಸಿದ ಪ್ರದರ್ಶನಕ್ಕೆ ಭೇಟಿ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Tue, 25 March 25