AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಅತಿಥಿಗೃಹಗಳಿಗೆ ಮರುನಾಮಕರಣ ಮಾಡಿದ ಯೋಗಿ ಸರ್ಕಾರ; ಹಿಂದು ನದಿ, ಧಾರ್ಮಿಕ ಸ್ಥಳಗಳ ಹೆಸರು

ಹೆಸರು ಬದಲಾವಣೆ ಪ್ರಕ್ರಿಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಬರುವ ದಿನಗಳಲ್ಲಿ ಉತ್ತರ ಪ್ರದೇಶದ ಸುಮಾರು 12 ಜಿಲ್ಲೆಗಳು, ಪಟ್ಟಣಗಳ ಮರುನಾಮಕರಣ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ನೇತೃತ್ವದಲ್ಲಿ ಅಲ್ಲಿನ ಸಚಿವರು, ಶಾಸಕರೆಲ್ಲ ಸೇರಿ ಯೋಜನೆ ರೂಪಿಸುತ್ತಿದ್ದಾರೆ.

9 ಅತಿಥಿಗೃಹಗಳಿಗೆ ಮರುನಾಮಕರಣ ಮಾಡಿದ ಯೋಗಿ ಸರ್ಕಾರ; ಹಿಂದು ನದಿ, ಧಾರ್ಮಿಕ ಸ್ಥಳಗಳ ಹೆಸರು
ಯೋಗಿ ಆದಿತ್ಯನಾಥ
TV9 Web
| Edited By: |

Updated on: Oct 08, 2021 | 4:37 PM

Share

ಲಖನೌ: ಇಷ್ಟು ದಿನ ಜಿಲ್ಲೆಗಳು, ಸ್ಥಳಗಳ ಹೆಸರು ಬದಲಿಸುತ್ತಿದ್ದ ಉತ್ತರ ಪ್ರದೇಶ ಸರ್ಕಾರ (Uttar Pradesh Government) ಇದೀಗ 9 ಅತಿಥಿಗೃಹಗಳಿಗೆ (Guest Houses) ಮರುನಾಮಕರಣ ಮಾಡಿದೆ. ಲಖನೌ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಗಳಲ್ಲಿ ಇರುವ ಯುಪಿ ಸರ್ಕಾರಕ್ಕೆ ಸೇರಿದ ಅತಿಥಿಗೃಹಗಳ ಹೆಸರು ಬದಲಿಸಿದ್ದು, ಅವಕ್ಕೆಲ್ಲ ಇದೀಗ ಹಿಂದೂ ನದಿಗಳು ಮತ್ತು ಹಿಂದು ಧಾರ್ಮಿಕ ಪ್ರದೇಶಗಳ ಹೆಸರನ್ನು ಇಡಲಾಗಿದೆ.  

ದೆಹಲಿಯಲ್ಲಿರುವ ಯುಪಿ ಭವನಕ್ಕೆ ಉತ್ತರ ಪ್ರದೇಶ ಭವನ ಸಂಗಮ್​​ ಎಂದು ಹೆಸರಿಡಲಾಗಿದ್ದು, ಯುಪಿ ಸದನಕ್ಕೆ ತ್ರಿವೇಣಿ ಎಂದು ನಾಮಕರಣವಾಗಿದೆ. ಲಖನೌದ ಮಹಾತ್ಮ ಗಾಂಧಿ ಮಾರ್ಗದಲ್ಲಿರುವ ವಿವಿಐಪಿ ಗೆಸ್ಟ್​​ಹೌಸ್​​ಗೆ ಸಾಕೇತ್​ ವಿವಿಐಪಿ ಗೆಸ್ಟ್​​ ಹೌಸ್​​ ಎಂಬ ಹೆಸರಿಡಲಾಗಿದೆ.  ದಲಿಬಾಗ್​​​ ವಿಐಪಿ ಅತಿಥಿಗೃಹಕ್ಕೆ ಯಮುನಾ, ವಿಕ್ರಮಾದಿತ್ಯ ಮಾರ್ಗದಲ್ಲಿರುವ ಅತಿಥಿಗೃಹಕ್ಕೆ ಗೋಮತಿ ಮತ್ತು ಮೀರಾಬಾಯಿ ಮಾರ್ಗದಲ್ಲಿರುವ ಸರ್ಕಾರಿ ಗೆಸ್ಟ್​ಹೌಸ್​​ಗೆ ಸರಯೂ, ಬಟ್ಲರ್ ಪ್ಯಾಲೇಸ್​ ಕಾಲನಿಯಲ್ಲಿರುವ ಗೆಸ್ಟ್​​ಹೌಸ್​​ಗೆ ನೈಮಿಶಾರಣ್ಯ  ಎಂದು ಹೆಸರಿಡಲಾಗಿದೆ ಎಂದು ಸರ್ಕಾರಿ ಕಚೇರಿ ತಿಳಿಸಿದೆ.  ಮುಂಬೈನಲ್ಲಿ ಇರುವ ಉತ್ತರಪ್ರದೇಶ ಸರ್ಕಾರಕ್ಕೆ ಸೇರಿದ ಅತಿಥಿ ಗೃಹವನ್ನು ಇನ್ನು ವೃಂದಾವನ ಎಂದು ಕರೆಯಲಾಗುವುದು, ಹಾಗೇ ಕೋಲ್ಕತ್ತದಲ್ಲಿರುವ ಯುಪಿ ಸರ್ಕಾರಿ ಗೆಸ್ಟ್​​ಹೌಸ್​​ನ್ನು ಗಂಗಾ ಎಂದು ಹೆಸರಿಸಲಾಗುವುದು ಎಂದೂ ಹೇಳಲಾಗಿದೆ.

ಹೆಸರು ಬದಲಾವಣೆ ಪ್ರಕ್ರಿಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಬರುವ ದಿನಗಳಲ್ಲಿ ಉತ್ತರ ಪ್ರದೇಶದ ಸುಮಾರು 12 ಜಿಲ್ಲೆಗಳು, ಪಟ್ಟಣಗಳ ಮರುನಾಮಕರಣ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ನೇತೃತ್ವದಲ್ಲಿ ಅಲ್ಲಿನ ಸಚಿವರು, ಶಾಸಕರೆಲ್ಲ ಸೇರಿ ಯೋಜನೆ ರೂಪಿಸುತ್ತಿದ್ದಾರೆ  ಎಂದು ವರದಿಯಾಗಿದೆ.  ಸಂಭಾಲ್​​ಗೆ ಪ್ರಥ್ವಿರಾಜ್​ ನಗರ ಅಥವಾ ಕಲ್ಕಿ ನಗರ ಎಂದು ನಾಮಕರಣ ಮಾಡಬೇಕು ಎಂದು ಯುಪಿ ಪ್ರೌಢಶಿಕ್ಷಣ ಸಚಿವ ಗುಲಾಬ್​ ದೇವಿ ಇಂಗಿತ ವ್ಯಕ್ತಪಡಿಸಿದ್ದಾರೆ. ದೇವಬಂದ್​​ ಕ್ಷೇತ್ರಕ್ಕೆ ದೇವವೃಂದ ಎಂದು ಹೆಸರಿಡಬೇಕು ಎಂದು ಅಲ್ಲಿನ ಬಿಜೆಪಿ ಶಾಸಕ ಬ್ರಿಜೇಶ್​ ಸಿಂಗ್​ ಪ್ರಸ್ತಾವನೆ ಇಟ್ಟಿದ್ದಾರೆ. ಇನ್ನು ಫಿರೋಜಾಬಾದ್​​ ಜಿಲ್ಲೆಯನ್ನು ಚಂದ್ರನಗರ ಎಂದು ಬದಲಿಸಬೇಕು ಎಂಬ ನಿರ್ಣಯವನ್ನು ಫಿರೋಜಾಬಾದ್​ ಜಿಲ್ಲಾ ಪಂಚಾಯತ್​ ಈಗಾಗಲೇ ಅಂಗೀಕರಿಸಿದೆ.

ಇದನ್ನೂ ಓದಿ: ‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

ಲಖಿಂಪುರ್ ಖೇರಿ ಪ್ರಕರಣವು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅವಕಾಶವನ್ನು ಹೆಚ್ಚಿಸಲಿದೆಯೇ? ಪ್ರಶಾಂತ್ ಕಿಶೋರ್ ಏನಂತಾರೆ?

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ