AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು, ಹೇಗಿತ್ತು ಅಂದಿನ ಕಿತ್ತೂರು ಸಂಸ್ಥಾನದ ಪರಿಸ್ಥಿತಿ?

Kittur Rani Chennamma and British rule: ಕಿತ್ತೂರು ಸ್ವತಂತ್ರ ಸಂಸ್ಥಾನವಾಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಯುದ್ಧ ಸಿದ್ಧತೆಗಳನ್ನು ಪೂರೈಸಿಕೊಳ್ಳುವವರೆಗೆ ಸಂಧಾನದ ಮಾತು ಆಡುತ್ತಿದ್ದ ಬ್ರಿಟಿಷರು ತಮ್ಮ ಯುದ್ಧ ಖೈದಿಗಳು ಬಿಡುಗಡೆ ಆಗುತ್ತಲೇ ಆಧುನಿಕ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿಯೇ ಬಿಟ್ಟರು. ಬ್ರಿಟಿಷರಿಗೆ ಕಿತ್ತೂರು ಕೋಟೆಯಲ್ಲಿದ್ದ ವಿದ್ರೋಹಿಗಳು ಕೈಜೋಡಿಸಿದರು. ಕೋಟೆಯಲ್ಲಿದ್ದ ಮದ್ದಿನ ಮನೆಯಲ್ಲಿ ಮೋಸ ಮಾಡಿಬಿಟ್ಟರು. ಬ್ರಿಟಿಷರ ಫಿರಂಗಿಗಳು ಕಿತ್ತೂರಿನ ಕೋಟೆಯ ಭಾಗಗಳನ್ನು ಕೆಡವಿದವು. ಕಿತ್ತೂರು ಕಾಪಾಡಲು, ದೇಶವಾಸಿಗಳ ರಕ್ಷಣೆಗೆ ಚೆನ್ನಮ್ಮ ಯತ್ನಿಸುತ್ತಿದ್ದರೆ ಕಿತ್ತೂರು ಸೈನಿಕರು ಕೆಚ್ಚೆದೆಯಿಂದ ಹೋರಾಟ ಮುಂದುವರಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು, ಹೇಗಿತ್ತು ಅಂದಿನ ಕಿತ್ತೂರು ಸಂಸ್ಥಾನದ ಪರಿಸ್ಥಿತಿ?
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ 200 ವರ್ಷವಾಯ್ತು
Follow us
ಸಾಧು ಶ್ರೀನಾಥ್​
|

Updated on:Aug 12, 2024 | 11:23 AM

ಭಾರತವನ್ನು ವಶಪಡಿಸಿಕೊಂಡು ತನ್ನ ಪ್ರಭುತ್ವವನ್ನು ನೆಲೆಗೊಳಿಸಲು ಯತ್ನಿಸುತ್ತಿದ್ದ ಬ್ರಿಟಿಷರಿಗೆ (British East India Company) ಪರಿಣಾಮಕಾರಿ ಪ್ರತಿರೋಧ ಒಡ್ಡಿದ ಕನ್ನಡನಾಡಿನ ವೀರರಾಣಿ ಕಿತ್ತೂರು ಚೆನ್ನಮ್ಮ ( Kittur Rani Chennamma). ಪುಟ್ಟ ಸಂಸ್ಥಾನವಾದರೂ ಸಮೃದ್ಧವಾಗಿದ್ದ ಕಿತ್ತೂರು ಸಂಸ್ಥಾನದ (princely state) ಪ್ರಸಿದ್ಧ ದೇಸಾಯಿ ಮಲ್ಲಸರ್ಜನ ಕಿರಿಯ ಮಡದಿ ಚೆನ್ನಮ್ಮ. ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತದರ ಆಸುಪಾಸಿನ ಪ್ರದೇಶಗಳನ್ನು 1858 ರಿಂದ 1824 ರವರೆಗೆ ಆಳಿದವರೇ ಕಿತ್ತೂರಿನ ದೇಸಾಯಿಗಳು. ವಿಖ್ಯಾತ ವಿಜಯನಗರ ಸಾಮ್ರಾಜ್ಯದ ಪತನಾನಂತರ ಹುಟ್ಟಿಕೊಂಡ ಹಲವಾರು ಸಣ್ಣಪುಟ್ಟ ಮನೆತನಗಳಲ್ಲಿ ಕಿತ್ತೂರಿನ ದೇಸಾಯಿಗಳ ಮನೆತನವೂ ಒಂದು. ದೇಸಾಯಿಗಳ ಮನೆತನದ ಮಲ್ಲಸರ್ಜನ ಪಟ್ಟಕ್ಕೆ ಬಂದಿದ್ದು 1782 ರಲ್ಲಿ. 700 ಹಳ್ಳಿಗಳನ್ನು ಒಳಗೊಂಡಿದ್ದು ಕಲಘಟಗಿ, ಮುನವಳ್ಳಿ, ನರಗುಂದ, ಧಾರವಾಡದವರೆಗೂ ವಿಸ್ತರಿಸಿದ್ದ ಕಿತ್ತೂರು ರಾಜ್ಯದ ಮೇಲೆ ಮಲ್ಲಸರ್ಜನ ಕಾಲದಲ್ಲಿ ಹೈದರಾಲಿ ಖಾನ್, ಟೀಪು ಸುಲ್ತಾನ್ ಮತ್ತು ಮರಾಠರು ದಾಳಿ ಮಾಡಿದ್ದರು. ಮರಾಠರು ದೇಸಾಯಿಯನ್ನು ಸೆರೆಹಿಡಿದಿದ್ದರು. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮನೇ ರಾಜ್ಯದ ಆಡಳಿತ ಸೂತ್ರಗಳನ್ನು ಹಿಡಿದಿದ್ದರು. ಪೇಶ್ವೆಗಳ ಬಂಧನದಲ್ಲಿದ್ದ ಮಲ್ಲಸರ್ಜ ತನ್ನ ಕೊನೆಗಾಲದಲ್ಲಿ ಬಿಡುಗಡೆ ಹೊಂದಿ ಕಿತ್ತೂರಿಗೆ ಹಿಂತಿರುಗಿದರೂ ಬಹುಬೇಗ ತೀರಿಕೊಂಡ. ಮಲ್ಲಸರ್ಜನ ಮಗ ಶಿವಲಿಂಗ ರುದ್ರ ಸರ್ಜ ಪಟ್ಟಕ್ಕೆ ಬಂದರೂ ಎಂಟು ವರ್ಷಗಳಲ್ಲಿಯೇ ಅನಾರೋಗ್ಯಪೀಡಿತನಾಗಿ ಮರಣಿಸಿದ. ಈ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಇವರು ಮಾಸ್ತ ಮರಡಿ ಗೌಡರ ಮಗ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡು ಮಲ್ಲಸರ್ಜನನು ತೀರಿಕೊಂಡ ಬಳಿಕ ಚೆನ್ನಮ್ಮನೆ ದತ್ತಕನ ಹೆಸರಿನಿಂದ ರಾಜ್ಯಭಾರ ಮಾಡುತ್ತಿದ್ದಳು. ತಮಗೆ ಶಿವಲಿಂಗ ರುದ್ರ ಸರ್ಜ ಸಹಾಯ ಮಾಡಿದ್ದರಿಂದ ಆತನಿಗೆ ವಂಶಪಾರಂಪರ್ಯವಾಗಿ ಕಿತ್ತೂರು ಆಳಲು ಸನ್ನದು ನೀಡಿದ್ದರು....

Published On - 2:22 pm, Sat, 10 August 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ