ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ನಡೆದರೇ, ಇತ್ತ ರಾಯಚೂರಿನ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂರ್ತಿ ಏಕಶಿಲಾ ವಿಗ್ರಹವಾಗಿದ್ದು, ಏಳು ಜನ ಭಕ್ತರಿದ್ದ ಟ್ರಸ್ಟ್ ನಿರ್ಮಿಸಿದೆ.
Updated on:Jan 22, 2024 | 10:43 AM

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ನಡೆದರೇ, ಇತ್ತ ರಾಯಚೂರಿನಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಹೌದು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಮುಹೂರ್ತದಲ್ಲೇ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಈ ಮೂರ್ತಿ ಏಕಶಿಲಾ ವಿಗ್ರಹವಾಗಿದ್ದು, ಏಳು ಜನ ಭಕ್ತರಿದ್ದ ಟ್ರಸ್ಟ್ ನಿರ್ಮಿಸಿದೆ.

ರಾಮ ಭಂಟ ಹನುಮನ 32 ಅಡಿ ವಿಗ್ರಹದ ಎದುರೇ ಪ್ರಭು ಶ್ರೀರಾಮನ 36 ಅಡಿ ಏಕಶಿಲಾ ವಿಗ್ರಹ ನೆಲೆಗೊಂಡಿದೆ.

ಈ ಹಿಂದೆ ರಾಮ ಲಕ್ಷ್ಮಣ ವನವಾಸದ ವೇಳೆ ಆಂದ್ರದ ಮಾದಾವರಂ ಬಳಿಯ ಅರಣ್ಯಕ್ಕೆ ಆಗಮಿಸಿದ್ದರು. ಅಂದು ಅವರು ಕುಳಿತು ವಿಶ್ರಾಂತಿ ಪಡೆದ ಬಂಡೆಯನ್ನು ರಾಯರ ಮೂಲ ಬೃಂದಾವನಕ್ಕೆ ಬಳಕೆ ಮಾಡಲಾಗಿದೆ.

ಹೀಗಾಗಿ ನಿತ್ಯ ರಾಯರಿಗೂ ಮೊದಲು ಮಂತ್ರಾಲಯದಲ್ಲಿ ಮೂಲ ರಾಮ ದೇವರ ಪೂಜೆ ನೆರವೇರತ್ತದೆ.

ಹೀಗಾಗಿ ಮಂತ್ರಾಲಯದಲ್ಲಿ ಅಭಯ ಶ್ರೀರಾಮನ ಸ್ಥಾಪನೆಗೆ ಶ್ರೀ ಸುಬುಧೇಂದ್ರ ತೀರ್ಥರ ಸಲಹೆ ನೀಡಿದ್ದಾರೆ.
Published On - 10:42 am, Mon, 22 January 24



















