AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Energy Week: ಇಂಡಿಯಾ ಎನರ್ಜಿ ವೀಕ್​ನಲ್ಲಿ ಗಮನ ಸೆಳೆದ ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ವೀಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಬಾರಿ ಒಲೆಕ್ಟ್ರಾ ಕಂಪನಿಯ ವಿದ್ಯುತ್ ಚಾಲಿತ ಟಿಪ್ಪರ್ ಇಂಡಿಯಾ ಎನರ್ಜಿ ವೀಕ್​ನಲ್ಲಿ ಹೆಚ್ಚು ಗಮನಸೆಳೆದಿದೆ.

TV9 Web
| Edited By: |

Updated on:Feb 06, 2023 | 10:34 PM

Share
Bengaluru BIEC PM Modi inaugurated India Energy Week Electric-powered tipper that caught attention details in kannada

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ವೀಕ್ ಉದ್ಘಾಟನೆಗೊಂಡಿದೆ. ಇಂಧನ ಸಪ್ತಾಹವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದು, ವಸ್ತುಪ್ರದರ್ಶನ ಮಳಿಗೆಗಳು ಈ ಬಾರಿಯ ಮುಖ್ಯ ಹೈಲೈಟ್ಸ್. ಇಂಡಿಯಾ ಎನರ್ಜಿ ವೀಕ್​ನಲ್ಲಿ ಈ ಬಾರಿ ಗಮನ ಸೆಳೆಯುತ್ತಿರುವುದು ಒಲೆಕ್ಟ್ರಾ ಕಂಪನಿಯ ವಿದ್ಯುತ್ ಚಾಲಿತ ಟಿಪ್ಪರ್.

1 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಬೆಂಗಳೂರಿನ ರಸ್ತೆಗಳಲ್ಲಿ ವಿದ್ಯುತ್ ಚಾಲಿತ ಸ್ಕೂಟರ್ ಬೈಕ್​ಗಳು ಸಾಮಾನ್ಯವಾಗಿವೆ. ವಿದ್ಯುತ್ ಚಾಲಿತ ಕಾರುಗಳು ಕೂಡ ಕಡಿಮೆಯೇನಿಲ್ಲ. ಆದರೆ ಇದೀಗ ಮತ್ತೊಂದು ಗಮನಾರ್ಹ ವಿಚಾರ ಅಂದರೆ ಅದು ವಿದ್ಯುತ್ ಚಾಲಿತ ಹೆವಿ ಟಿಪ್ಪರ್​ಗಳು. ಸಂಪೂರ್ಣವಾಗಿ ಇಲೆಕ್ಟ್ರಿಕ್ ಟಿಪ್ಪರ್​ಗಳನ್ನು ರಸ್ತೆಗೆ ಇಳಿಸುವುದಕ್ಕೆ ಒಲೆಕ್ಟ್ರಾ ಕಂಪನಿ ಸಿದ್ದವಾಗಿದ್ದು, ಇಂಡಿಯಾ ಎನರ್ಜಿ ವೀಕ್​ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ.

2 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಸುಮಾರು 85 ಕಿ.ಮೀ.ನಷ್ಟು ಹೈ ಸ್ಪೀಡ್ ಕೆಪ್ಯಾಸಿಟಿ ಹೊಂದಿರುವ ಇಲೆಕ್ಟ್ರಿಕ್ ಟಿಪ್ಪರ್ 6 ಗಂಟೆ ಫುಲ್ ಚಾರ್ಜ್ ಮಾಡಿದರೆ ಸಾಕು ಸುಮಾರು 220 ಕಿ.ಮೀ.ನಷ್ಟು ದೂರ ಹೆವಿ ಡ್ಯೂಟಿ ಮಾಡುವುದಕ್ಕೆ ಟಿಪ್ಪರ್ ರೆಡಿಯಾಗತ್ತದೆ. ಒಲೆಕ್ಟ್ರಾ ಕಂಪನಿ ಹೆವಿ ವೆಹಿಕಲ್ ಇವಿ ಟಿಪ್ಪರ್ ತರುವ ಮೊದಲು ಇಲೆಕ್ಟ್ರಿಕ್ ಬಸ್ಸುಗಳ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

3 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಈಗಾಗಲೇ ವಿವಿಧ ರಾಜ್ಯಗಳಲ್ಲಿ ಒಲೆಕ್ಟ್ರಾ ಕಂಪನಿಯ ಸಾವಿರಕ್ಕೂ ಹೆಚ್ಚು ಇ.ವಿ ಬಸ್ಸುಗಳು ಸಾರ್ವಜನಿಕರ ಸೇವೆ ಮಾಡುತ್ತಿವೆ. ಜನರು ಸಾಮಾನ್ಯವಾಗಿ ಯೋಚಿಸೋದು ಇ.ವಿ ವೆಹಿಕಲ್​ಗಳು ಹೆಚ್ಚಿನ ದೂರ ಸಾಗಾಟ ಮಾಡುವುದಕ್ಕೆ ಸಾಧ್ಯವಿಲ್ಲವೇನೋ? ಅಂತ. ಆದರೆ ಬಸ್ಸುಗಳನ್ನೇ ರಸ್ತೆಗೆ ಇಳಿಸಿ ದಾಖಲೆ ಬರೆದಿದ್ದ ಎಂಇಐಎಲ್ ಕಂಪನಿಯ ಸಹೋದರ ಸಂಸ್ಥೆ ಒಲೆಕ್ಟ್ರಾ ಇದೀಗ ಟಿಪ್ಪರ್ ನಂತಹ ಹೆವಿ ವೆಹಿಕಲ್ ಕೂಡ ನಿರ್ಮಾಣ ಮಾಡಿ ದಾಖಲೆ ಬರೆಯಲು ಹೊರಟಿದೆ.

4 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಇಂಡಿಯಾ ಎನರ್ಜಿ ವೀಕ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇ.ವಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಭರವಸೆ ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಇ.ವಿ ವೆಹಿಕಲ್​ಗಳು ಪ್ರಮುಖವಾಗಿವೆ. ಇದಕ್ಕೆ ಇಲೆಕ್ಟ್ರಿಕ್ ಟಿಪ್ಪರ್​ಗಳ ಕೊಡುಗೆ ಬಹಳ ದೊಡ್ಡದಿದೆ.

5 / 6
Bengaluru BIEC PM Modi inaugurated India Energy Week Electric-powered tipper that caught attention details in kannada

ಇಲೆಕ್ಟ್ರಿಕ್ ಟಿಪ್ಪರ್​ಗಳನ್ನು ಜಲಸಂಪನ್ಮೂಲ, ಗಣಿಗಾರಿಕೆ ಸೇರಿದಂತೆ ಯಾವುದೇ ಬೃಹತ್ ಉದ್ಯಮಗಳಿಗೂ ಬಳಕೆ ಮಾಡಿಕೊಳ್ಳಬಹುದು. ಇಂಡಿಯಾ ಎನರ್ಜಿ ವೀಕ್ ಒಲೆಕ್ಟ್ರಾ ಕಂಪನಿಯ ಕಾರಣದಿಂದಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. (ವರದಿ: ಪ್ರಸನ್ನ ಗಾಂವ್ಕರ್)

6 / 6

Published On - 10:16 pm, Mon, 6 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ