Bangalore Rains: ಬೆಂಗಳೂರು ಮಳೆ; ವರುಣನಿಂದ ಸೃಷ್ಟಿಯಾದ ಅವಾಂತರಗಳು ಒಂದಾ ಎರಡಾ, 206 ಮರಗಳು ಧರಾಶಾಹಿ
ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ಮರಗಳು ಬಿದ್ದಿದ್ದು ವಾಹನಗಳು ಜಖಂಗೊಂಡಿವೆ. ಮಳೆ ನೀರು ರಸ್ತೆಯಲ್ಲಿ ನಿಂತು ನದಿಯಂತಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ನಿದ್ದೆ ಮಾಡದೆ ನೀರು ಹೊರ ಹಾಕಿದ್ದಾರೆ.
Updated on:Jun 03, 2024 | 9:19 AM
![ಬೆಂಗಳೂರಲ್ಲಿ ನಿನ್ನೆ ಬೆಳಗ್ಗೆ ಸೂರ್ಯನ ಅಬ್ಬರ ಜೋರಾಗಿತ್ತು. ಇನ್ನೇನು ಮಳೆ ಬರಲ್ಲ ಎಂದು ವೀಕೆಂಡ್ ಮೂಡ್ಗೆ ಜಾರಿದ್ದ ಜನರಿಗೆ ವರುಣರಾಯ ಶಾಕ್ ನೀಡಿದ್ದಾನೆ. ಬೆಂಗಳೂರು ನಗರದಲ್ಲಿ 110.7 ಮಿಲಿ ಮೀಟರ್ ಮಳೆಯಾಗಿದೆ. ಬೆಂಗಳೂರಿನಾದ್ಯಂತ ಮಳೆಯಿಂದ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ 206 ಮರಗಳು ಧರೆಗುರುಳಿವೆ. ನಿನ್ನೆ ರಾತ್ರಿ 8 ಗಂಟೆ ವೇಳೆಗೆ 118 ಮರಗಳು ಧರೆಗುರುಳಿದ್ದವು.](https://images.tv9kannada.com/wp-content/uploads/2024/06/bengaluru-rain-4.jpg?w=1280&enlarge=true)
ಬೆಂಗಳೂರಲ್ಲಿ ನಿನ್ನೆ ಬೆಳಗ್ಗೆ ಸೂರ್ಯನ ಅಬ್ಬರ ಜೋರಾಗಿತ್ತು. ಇನ್ನೇನು ಮಳೆ ಬರಲ್ಲ ಎಂದು ವೀಕೆಂಡ್ ಮೂಡ್ಗೆ ಜಾರಿದ್ದ ಜನರಿಗೆ ವರುಣರಾಯ ಶಾಕ್ ನೀಡಿದ್ದಾನೆ. ಬೆಂಗಳೂರು ನಗರದಲ್ಲಿ 110.7 ಮಿಲಿ ಮೀಟರ್ ಮಳೆಯಾಗಿದೆ. ಬೆಂಗಳೂರಿನಾದ್ಯಂತ ಮಳೆಯಿಂದ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ 206 ಮರಗಳು ಧರೆಗುರುಳಿವೆ. ನಿನ್ನೆ ರಾತ್ರಿ 8 ಗಂಟೆ ವೇಳೆಗೆ 118 ಮರಗಳು ಧರೆಗುರುಳಿದ್ದವು.
![ಬಿರುಗಾಳಿ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಬಸವೇಶ್ವರನಗರದಲ್ಲಿ ಮರದ ಕೊಂಬೆ ಬಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ. ಜಯನಗರದಲ್ಲಿ ಮರದ ಕೊಂಬೆ ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಕೋರಮಂಗಲ ಬಳಿ ವಿದ್ಯುತ್ ಕಂಬ, ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.](https://images.tv9kannada.com/wp-content/uploads/2024/06/bengaluru-rain-6.jpg)
ಬಿರುಗಾಳಿ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಬಸವೇಶ್ವರನಗರದಲ್ಲಿ ಮರದ ಕೊಂಬೆ ಬಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ. ಜಯನಗರದಲ್ಲಿ ಮರದ ಕೊಂಬೆ ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಕೋರಮಂಗಲ ಬಳಿ ವಿದ್ಯುತ್ ಕಂಬ, ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.
![ಗಿರಿನಗರದ 13ನೇ ಕ್ರಾಸ್ನಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದ್ದರಿಂದ ಕಾರು ನಜ್ಜುಗುಜ್ಜಾಗಿದ್ವು. ಮರದಡಿ ಸಿಲುಕಿ 2 ಬೈಕ್ಗಳು ಜಖಂ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಾಮಕೃಷ್ಣ ಆಶ್ರಮ ಬಳಿ ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ.](https://images.tv9kannada.com/wp-content/uploads/2024/06/bengaluru-rain-1.jpg)
ಗಿರಿನಗರದ 13ನೇ ಕ್ರಾಸ್ನಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದ್ದರಿಂದ ಕಾರು ನಜ್ಜುಗುಜ್ಜಾಗಿದ್ವು. ಮರದಡಿ ಸಿಲುಕಿ 2 ಬೈಕ್ಗಳು ಜಖಂ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಾಮಕೃಷ್ಣ ಆಶ್ರಮ ಬಳಿ ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ.
![ಮಳೆಯ ಎಫೆಕ್ಟ್ ನಮ್ಮ ಮೆಟ್ರೋಗೂ ತಟ್ಟಿದೆ. ಟ್ರಿನಿಟಿ ನಿಲ್ದಾಣ ಹಾಗೂ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ಟ್ರ್ಯಾಕ್ ಮೇಲೆ ಮರದ ಕೊಂಬೆ ಮುರಿದು ಬಿದಿತ್ತು. ಇದ್ರಿಂದ ಟ್ರಿನಿಟಿ-ಎಂಜಿ ರಸ್ತೆ ನಡುವಿನ ಸಂಪರ್ಕಕ್ಕೆ ಬ್ರೇಕ್ ಬಿದ್ದಿತ್ತು. ಸದ್ಯ ಸಿಬ್ಬಂದಿ ತಡರಾತ್ರಿ ಮರದ ಕೊಂಬೆಗಳನ್ನು ತೆರವು ಮಾಡಿದ್ದಾರೆ. ಇಂದು ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಇರಲಿದೆ. ಎಂದಿನಂತೆ ವೈಟ್ಫೀಲ್ಡ್-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ.](https://images.tv9kannada.com/wp-content/uploads/2024/06/bengaluru-rain-3.jpg)
ಮಳೆಯ ಎಫೆಕ್ಟ್ ನಮ್ಮ ಮೆಟ್ರೋಗೂ ತಟ್ಟಿದೆ. ಟ್ರಿನಿಟಿ ನಿಲ್ದಾಣ ಹಾಗೂ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ಟ್ರ್ಯಾಕ್ ಮೇಲೆ ಮರದ ಕೊಂಬೆ ಮುರಿದು ಬಿದಿತ್ತು. ಇದ್ರಿಂದ ಟ್ರಿನಿಟಿ-ಎಂಜಿ ರಸ್ತೆ ನಡುವಿನ ಸಂಪರ್ಕಕ್ಕೆ ಬ್ರೇಕ್ ಬಿದ್ದಿತ್ತು. ಸದ್ಯ ಸಿಬ್ಬಂದಿ ತಡರಾತ್ರಿ ಮರದ ಕೊಂಬೆಗಳನ್ನು ತೆರವು ಮಾಡಿದ್ದಾರೆ. ಇಂದು ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಇರಲಿದೆ. ಎಂದಿನಂತೆ ವೈಟ್ಫೀಲ್ಡ್-ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ.
![ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಗಾಂಧಿ ಬಜಾರ್ ಕೋಆಪರೇಟಿವ್ ಬ್ಯಾಂಕ್ ಬಳಿ ಮರಗಳು ಧರೆಗುರುಳಿವೆ. ತುಮಕೂರು ರಿಜಿಸ್ಟ್ರೇಷನ್ ಹೊಂದಿರುವ ಐ-10 ಕಾರು ಜಖಂಗೊಂಡಿದೆ. ಮಳೆ ಆರ್ಭಟಕ್ಕೆ ಶಿವಾನಂದ ಸರ್ಕಲ್ನ ರೈಲ್ವೆ ಅಂಡರ್ ಪಾಸ್ನಲ್ಲಿ ಜಲಪಾತವೇ ಸೃಷ್ಟಿಯಾಗಿತ್ತು. ಕ್ಷಣಾರ್ಧದಲ್ಲಿ ಅಂಡರ್ ಪಾಸ್ನಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಇದೇ ವೇಳೆ ಬಂದ ಬಿಎಂಟಿಸಿ ಬಸ್ ಒಳಗೆ ನೀರು ನುಗ್ಗಿಕೆಟ್ಟು ನಿಲ್ತು. 20ಕ್ಕೂ ಹೆಚ್ಚು ಪ್ರಯಾಣಿಕರು ಪಾರಾದ್ರು.](https://images.tv9kannada.com/wp-content/uploads/2024/06/bengaluru-rain-7.jpg)
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಗಾಂಧಿ ಬಜಾರ್ ಕೋಆಪರೇಟಿವ್ ಬ್ಯಾಂಕ್ ಬಳಿ ಮರಗಳು ಧರೆಗುರುಳಿವೆ. ತುಮಕೂರು ರಿಜಿಸ್ಟ್ರೇಷನ್ ಹೊಂದಿರುವ ಐ-10 ಕಾರು ಜಖಂಗೊಂಡಿದೆ. ಮಳೆ ಆರ್ಭಟಕ್ಕೆ ಶಿವಾನಂದ ಸರ್ಕಲ್ನ ರೈಲ್ವೆ ಅಂಡರ್ ಪಾಸ್ನಲ್ಲಿ ಜಲಪಾತವೇ ಸೃಷ್ಟಿಯಾಗಿತ್ತು. ಕ್ಷಣಾರ್ಧದಲ್ಲಿ ಅಂಡರ್ ಪಾಸ್ನಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಇದೇ ವೇಳೆ ಬಂದ ಬಿಎಂಟಿಸಿ ಬಸ್ ಒಳಗೆ ನೀರು ನುಗ್ಗಿಕೆಟ್ಟು ನಿಲ್ತು. 20ಕ್ಕೂ ಹೆಚ್ಚು ಪ್ರಯಾಣಿಕರು ಪಾರಾದ್ರು.
![ರಣಮಳೆಗೆ ಸ್ಮಾರ್ಟ್ ಸಿಟಿ, ಬ್ರ್ಯಾಂಡ್ ಬೆಂಗಳೂರಿನ ಬಂಡವಾಳ ಬಯಲಾಯ್ತು. ಯಾವ ರಸ್ತೆಗೆ ಕಾಲಿಟ್ರೂ ನೀರು ಪ್ರವಾಹದಂತೆ ಹರೀತಿತ್ತು. ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ ಮಂಡಿಯುದ್ದ ಅಡಿಯಷ್ಟು ನೀರು ನಿಂತಿತ್ತು. ಇಡೀ ರಸ್ತೆಗಳೇ ನದಿಯಂತಾಗಿದ್ವು.](https://images.tv9kannada.com/wp-content/uploads/2024/06/bengaluru-rain-5.jpg)
ರಣಮಳೆಗೆ ಸ್ಮಾರ್ಟ್ ಸಿಟಿ, ಬ್ರ್ಯಾಂಡ್ ಬೆಂಗಳೂರಿನ ಬಂಡವಾಳ ಬಯಲಾಯ್ತು. ಯಾವ ರಸ್ತೆಗೆ ಕಾಲಿಟ್ರೂ ನೀರು ಪ್ರವಾಹದಂತೆ ಹರೀತಿತ್ತು. ಮಾರ್ಕೆಟ್, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ ಮಂಡಿಯುದ್ದ ಅಡಿಯಷ್ಟು ನೀರು ನಿಂತಿತ್ತು. ಇಡೀ ರಸ್ತೆಗಳೇ ನದಿಯಂತಾಗಿದ್ವು.
![ವರುಣಾರ್ಭಟಕ್ಕೆ ಹೈರಾಣಾಗಿದ್ದು ಬೈಕ್ ಸವಾರರು. ಸೈಲೆನ್ಸರ್ಗೆ ನೀರು ನುಗ್ಗಿ ಹತ್ತಾರು ವಾಹನಗಳು ಕೆಟ್ಟು ನಿಂತಿವು. ಸವಾರರು ಮಳೆಯಲ್ಲೇ ಗಾಡಿಗಳನ್ನ ತಳ್ಳುತ್ತಾ ಹೆಣಗಾಡಿದ್ರು. ಇನ್ನೂ ಕೆ.ಪಿ.ಅಗ್ರಹಾರದ ಕಲ್ಯಾಣಿ ರಸ್ತೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ರು.](https://images.tv9kannada.com/wp-content/uploads/2024/06/bengaluru-rain-2.jpg)
ವರುಣಾರ್ಭಟಕ್ಕೆ ಹೈರಾಣಾಗಿದ್ದು ಬೈಕ್ ಸವಾರರು. ಸೈಲೆನ್ಸರ್ಗೆ ನೀರು ನುಗ್ಗಿ ಹತ್ತಾರು ವಾಹನಗಳು ಕೆಟ್ಟು ನಿಂತಿವು. ಸವಾರರು ಮಳೆಯಲ್ಲೇ ಗಾಡಿಗಳನ್ನ ತಳ್ಳುತ್ತಾ ಹೆಣಗಾಡಿದ್ರು. ಇನ್ನೂ ಕೆ.ಪಿ.ಅಗ್ರಹಾರದ ಕಲ್ಯಾಣಿ ರಸ್ತೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ರು.
Published On - 7:23 am, Mon, 3 June 24
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ](https://images.tv9kannada.com/wp-content/uploads/2024/07/ind-vs-sl-5.jpg?w=280&ar=16:9)
![ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2024/07/smriti-mandhana-1.jpg?w=280&ar=16:9)
![ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು](https://images.tv9kannada.com/wp-content/uploads/2024/07/gold-items-7.jpg?w=280&ar=16:9)
![KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ? KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ?](https://images.tv9kannada.com/wp-content/uploads/2024/07/cabinet-approves-upgradation-of-krs-brindavan-do-you-know-what-features-it-will-have-1.jpg?w=280&ar=16:9)
![ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್](https://images.tv9kannada.com/wp-content/uploads/2024/07/charaideo.jpg?w=280&ar=16:9)
![‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ ‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ](https://images.tv9kannada.com/wp-content/uploads/2024/07/tamanna.jpg?w=280&ar=16:9)
![ಕೆಆರ್ಎಸ್ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ ಕೆಆರ್ಎಸ್ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ](https://images.tv9kannada.com/wp-content/uploads/2024/07/krs-dam1.jpg?w=280&ar=16:9)
![ತಂಪುಪಾನೀಯ ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಯೋಚಿಸಿ ನೋಡಿ ತಂಪುಪಾನೀಯ ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಯೋಚಿಸಿ ನೋಡಿ](https://images.tv9kannada.com/wp-content/uploads/2024/07/using-plastic-straw-is-harmful-to-health-know-straw-side-effects-in-kannada-2.jpg?w=280&ar=16:9)
![ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್ ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್](https://images.tv9kannada.com/wp-content/uploads/2024/07/vijayalkashmi-6.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)
![ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ](https://images.tv9kannada.com/wp-content/uploads/2024/07/in-surathkal-electric-pole-and-tree-uprooted-by-tornado-1.jpg?w=280&ar=16:9)
![ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು](https://images.tv9kannada.com/wp-content/uploads/2024/07/dinakar-chikkanna.jpg?w=280&ar=16:9)
![‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ ‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ](https://images.tv9kannada.com/wp-content/uploads/2024/07/ap-arjun-1.jpg?w=280&ar=16:9)
![ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್ ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್](https://images.tv9kannada.com/wp-content/uploads/2024/07/iqbal-hussain-3.jpg?w=280&ar=16:9)
![ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ](https://images.tv9kannada.com/wp-content/uploads/2024/07/hdk-75.jpg?w=280&ar=16:9)
![ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ! ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!](https://images.tv9kannada.com/wp-content/uploads/2024/07/ramanagara-2.jpg?w=280&ar=16:9)
![ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ! ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!](https://images.tv9kannada.com/wp-content/uploads/2024/07/in-a-trending-video-woman-catches-snake-behind-computers-in-a-office.jpg?w=280&ar=16:9)
![ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್ ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್](https://images.tv9kannada.com/wp-content/uploads/2024/07/nethravati-cow-save.jpg?w=280&ar=16:9)
![ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ](https://images.tv9kannada.com/wp-content/uploads/2024/07/suraj-3.jpg?w=280&ar=16:9)