- Kannada News Photo gallery Bigg Boss Kannada Season 11 Full List photos and their Details Bigg Boss Kannada Cinema News
BBK11: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ 17 ಸ್ಪರ್ಧಿಗಳ ಹೆಸರು, ವಿವರ, ಫೋಟೋ
Bigg Boss Kannada season 11 Contestant list: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಹಲವು ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್ನಲ್ಲಿ ಮೂಡಿ ಬಂದಿದೆ. ಸ್ಪರ್ಧಿಗಳ ಫೋಟೋ, ವಿವರ ಇಲ್ಲಿದೆ.
Updated on: Sep 30, 2024 | 6:30 AM

‘ಭವ್ಯಾ ಗೌಡ’ ಅವರು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ. ಅವರು ದೊಡ್ಮನೆಯಲ್ಲಿ ಸ್ವರ್ಗದ ಬಾಗಿಲು ತೆಗೆದಿದ್ದಾರೆ. ಅವರು ಈ ಮೊದಲು ‘ಗೀತಾ’ ಧಾರಾವಾಹಿಯಲ್ಲಿ ನಟಿಸಿದ್ದರು.

ಯಮುನಾ ಶ್ರೀನಿಧಿ ಅವರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದಾರೆ. ಅವರು ಕೂಡ ಸ್ವರ್ಗದ ಬಾಗಿಲು ತೆಗೆದಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸೋಶಿಯಲ್ ಮೀಡಿಯಾ ಖೋಟಾ ಮೂಲಕ ಎಂಟ್ರಿ ಕೊಟ್ಟವರು ಧನರಾಜ್ ಆಚಾರ್. ಮಗು ಜನಿಸಿದ ಒಂದೇ ತಿಂಗಳಿಗೆ ಅವರು ದೊಡ್ಮನೆಗೆ ಬಂದಿದ್ದಾರೆ. ಅವರಿಗೆ ಸ್ವರ್ಗ ಸಿಕ್ಕಿದೆ.

‘ಸತ್ಯ’ ಧಾರಾವಾಹಿ ಮೂಲಕ ಫೇಮಸ್ ಆದ ಗೌತಮಿ ಜಾಧವ್ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಸಿನಿಮಾ ಮಾಡಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಅವರ ಆಡು ಭಾಷೆ ಮರಾಠಿ. ನಂತರ ಅವರು ಕನ್ನಡ ಕಲಿತರು. ಬಿಗ್ ಬಾಸ್ನಲ್ಲಿ ಸ್ವರ್ಗದಲ್ಲಿ ಇದ್ದಾರೆ.

ಈ ಬಾರಿ ದೊಡ್ಮನೆಗೆ ಅನುಷಾ ರೈ ಕೂಡ ಬಂದಿದ್ದಾರೆ. ‘ಧೈರ್ಯಂ ಸರ್ವತ್ರ ಸಾಧನಂ’, ‘ಬಿಎಂಡಬ್ಲ್ಯೂ’, ‘ಖಡಕ್’, ‘ರೈಡರ್’, ‘ದಮಯಂತಿ’ ಮೊದಲಾದ ಸಿನಿಮಾಗಳಲ್ಲಿ ಅವರು ಸಣ್ಣ-ಪುಟ್ಟ ಪಾತ್ರ ಮಾಡಿದ್ದಾರೆ. ಅವರಿಗೆ ನರಕ ಸಿಕ್ಕಿದೆ.

ಹಿರಿಯ ನಟ ಕೀರ್ತಿರಾಜ್ ಅವರ ಮಗ ಧರ್ಮ ಕೀರ್ತಿರಾಜ್ ದೊಡ್ಮನೆಗೆ ಬಂದಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ‘ನವಗ್ರಹ’ ಸಿನಿಮಾದಲ್ಲಿ ನಟಿಸಿದ್ದರು. ಅವರಿಗೆ ಸ್ವರ್ಗ ಸಿಕ್ಕಿದೆ.

ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿ ಇದ್ದಿದ್ದು ಜಗದೀಶ್. ಅವರು ವೃತ್ತಿಯಲ್ಲಿ ವಕೀಲರು. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಬಂದಿದ್ದು, ರ್ಯಾಶ್ ಆಗಿ ಅವರು ದೊಡ್ಮನೆಯಲ್ಲಿ ನಡೆದುಕೊಳ್ಳುವ ಸಾಧ್ಯತೆ ಇದೆ. ಅವರಿಗೆ ಸ್ವರ್ಗ ಸಿಕ್ಕಿದೆ.

ಶಿಶಿರ್ ಅವರು ಕಿರುತೆರೆ ಹಾಗೂ ಹಿರಿತೆರೆ ನಟ. ಅವರಿಗೆ 33 ವರ್ಷ. ಅವರು ಅಡುಗೆ ಮಾಡುತ್ತಾರೆ. ಅವರು ದೊಡ್ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಖ್ಯಾತಿ ಹೆಚ್ಚಾಗೋ ನಿರೀಕ್ಷೆ ಇದೆ. ಶಿಶಿರ್ಗೆ ನರಕ ಸಿಕ್ಕಿದೆ.

ತ್ರಿವಿಕ್ರಂ ಕೂಡ ಬಿಗ್ ಬಾಸ್ಗೆ ಬಂದಿದ್ದಾರೆ. ಅವರು ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ‘ಆರ್ಟಿಸ್ಟ್ ಆಗಿ ಆರು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಸಾಧನೆ ಮಾಡಬೇಕು ಎಂದರೆ ವೇದಿಕೆ ಏರಬೇಕು. ಅಂಥಹ ವೇದಿಕೆ ಇದು’ ಎಂದಿದ್ದಾರೆ ಅವರು. ತ್ರಿವಿಕ್ರಂ ಸ್ವರ್ಗದ ಬಾಗಿಲು ತಟ್ಟಿದ್ದಾರೆ.

ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್ ಪಾತ್ರಗಳ ಮೂಲಕ ಫೇಮಸ್ ಆದವರು ಹಂಸ. ಈಗ ಅವರಿಗೆ ದೊಡ್ಮನೆಯಲ್ಲಿ ಅವಕಾಶ ಸಿಕ್ಕಿದೆ. ಅವರು ಸ್ವರ್ಗದ ಬಾಗಿಲನ್ನು ತಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ಗೆ ಮಾನಸಾ ಬಂದಿದ್ದಾರೆ. ಸೀಸನ್ 10ರ ಸ್ಪರ್ಧಿ ತುಕಾಲಿ ಸಂತೋಷ್ ಅವರ ಪತ್ನಿ. ಮಾನಸಾ ಅವರು ‘ಗಿಚ್ಚಿ ಗಿಲಿಗಿಲಿ 3’ನಲ್ಲಿ ಕಾಣಿಸಿಕೊಂಡಿದ್ದರು. ತುಕಾಲಿ ಸಂತೋಷ್ ಕೂಡ ಈ ಶೋನಲ್ಲಿ ಇದ್ದರು. ಅವರಿಗೆ ನರಕ ಸಿಕ್ಕಿದೆ.

ಗೋಲ್ಡ್ ಸುರೇಶ್ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಮೈತುಂಬಾ ಅವರು ಚಿನ್ನ ಹೇರಿಕೊಂಡು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ವಿಶೇಷ. ಅವರು ನರಕ ಸೇರಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಸಿಂಧೋಗಿ ಅವರ ಆಗಮನ ಆಗಿದೆ. ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಅವರು ಅಪ್ಪ-ಅಮ್ಮ ಕಳೆದುಕೊಂಡಿದ್ದಾರೆ. ಅವರು ಒಂಟಿಯಾಗಿ ಬದುಕಿದ್ದಾರೆ. ಐಶ್ವರ್ಯಾ ಸ್ವರ್ಗದಲ್ಲಿದ್ದಾರೆ.

ಅರೆಸ್ಟ್ ಆಗಿ ಜೈಲು ಸೇರಿದ್ದು ಚೈತ್ರಾ ಕುಂದಾಪುರ. ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಹಿಂದೂ ಚಿಂತನೆಗಳ ಮೂಲಕ ಗುರುತಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರಿಗೆ ನರಕ ಸಿಕ್ಕಿದೆ.

ಉಗ್ರಂ ಮಂಜು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಉಗ್ರಂ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರಿಗೆ ಸ್ವರ್ಗ ಸಿಕ್ಕಿದೆ.

ಮೋಕ್ಷಿತಾ ಪೈ ಅವರು ‘ಪಾರು’ ಎಂದೇ ಫೇಮಸ್ ಆದವರು. ಅವರು ಜೀ ಕನ್ನಡದ ‘ಪಾರು’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರಿಗೆ ನರಕ ಸಿಕ್ಕಿದೆ.

ರಂಜಿತ್ ಕುಮಾರ್ ಅವರು ನಟನಾಗಿ, ಕ್ರಿಕೆಟರ್ ಆಗಿ ಹೆಸರು ಮಾಡಿದ್ದಾರೆ. ಸಿಸಿಎಲ್ನಲ್ಲಿ ಸುದೀಪ್ ತಂಡದಲ್ಲೇ ಅವರು ಆಡಿದ್ದಾರೆ. ಅವರು ‘ಶನಿ’ ಧಾರಾವಾಹಿ ಮಾಡಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನರಕ ಸಿಕ್ಕಿದೆ.









