AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 6 ರೂಗೆ ಈ ಬಾಲಿವುಡ್ ಹೀರೋನ ಊಟದ ಖರ್ಚು; ಸಣ್ಣ ಬಜೆಟ್​ನಲ್ಲೂ ಹಣ ಉಳಿಸೋದು ಹೇಗೆ, ಈ ನಟನಿಂದ ಪಾಠ

John Abraham those days.. ಹಿಂದಿನ ಸ್ಟಾರ್ ನಟರಲ್ಲಿ ಜಾನ್ ಅಬ್ರಹಾಂ ಒಬ್ಬರು. ಸಿನಿಮಾ ಹಿನ್ನೆಲೆ ಇಲ್ಲದೇ ಬಾಲಿವುಡ್​ಗೆ ಬಂದು ತಮ್ಮದೇ ಛಾಪು ಮೂಡಿಸಿರುವ ನಟ ಅವರು. ಸ್ವಾತಂತ್ರ್ಯ ದಿನೋತ್ಸವದಂದು ಅವರ ವೇದಾ ಸಿನಿಮಾ ಬಿಡುಗಡೆ ಆಗುತ್ತಿದೆ. ತಮ್ಮ ಹಳೆಯ ದಿನಗಳನ್ನು ಅವರು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ. ಆ ಬಗ್ಗೆ ಒಂದು ವರದಿ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 14, 2024 | 11:57 AM

ಸಿನಿಮಾ ಹೀರೋ, ಹೀರೋಯಿನ್​ಗಳನ್ನು ಬಹಳ ಜನರು ಸುಖಜೀವಿಗಳೆಂದು ಭಾವಿಸುವುದುಂಟು. ಮೊದಲಿಗೆ, ನಟನೆ ಎಂಬುದು ಮೋಜು ಮಸ್ತಿ ಅಲ್ಲ, ಅದಕ್ಕೆ ಶ್ರಮ, ಬದ್ಧತೆ ಎಲ್ಲವೂ ಅಗತ್ಯ ಎಂಬುದನ್ನು ಅರಿಯಬೇಕು. ಹಾಗೆಯೇ, ನಟರಾದವರೆಲ್ಲರೂ ಸುಖ ಜೀವನದಲ್ಲಿ ಬೆಳೆದವರಲ್ಲ ಎಂಬುದು ಗೊತ್ತಿರಲಿ. ಕಷ್ಟಕರ ಹಿನ್ನೆಲೆ ಇರುವ ಅದೆಷ್ಟೋ ನಟರಿದ್ದಾರೆ. ಬಾಲಿವುಡ್ ಹೀರೋ ಜಾನ್ ಅಬ್ರಹಾಂ ಅಂಥವರಲ್ಲಿ ಒಬ್ಬರು. ಜಾನ್ ಬದುಕು ನಿಜಕ್ಕೂ ಸಾಕಷ್ಟು ಕುತೂಹಲಗಳನ್ನು ಒಳಗೊಂಡಿವೆ. ಹಣ ಉಳಿಸುವುದು, ಹೂಡಿಕೆ ಮಾಡುವುದು ಹೇಗೆಂದು ಇವರ ಜೀವನ ನೋಡಿ ಕಲಿಯಬಹುದು.

ಸಿನಿಮಾ ಹೀರೋ, ಹೀರೋಯಿನ್​ಗಳನ್ನು ಬಹಳ ಜನರು ಸುಖಜೀವಿಗಳೆಂದು ಭಾವಿಸುವುದುಂಟು. ಮೊದಲಿಗೆ, ನಟನೆ ಎಂಬುದು ಮೋಜು ಮಸ್ತಿ ಅಲ್ಲ, ಅದಕ್ಕೆ ಶ್ರಮ, ಬದ್ಧತೆ ಎಲ್ಲವೂ ಅಗತ್ಯ ಎಂಬುದನ್ನು ಅರಿಯಬೇಕು. ಹಾಗೆಯೇ, ನಟರಾದವರೆಲ್ಲರೂ ಸುಖ ಜೀವನದಲ್ಲಿ ಬೆಳೆದವರಲ್ಲ ಎಂಬುದು ಗೊತ್ತಿರಲಿ. ಕಷ್ಟಕರ ಹಿನ್ನೆಲೆ ಇರುವ ಅದೆಷ್ಟೋ ನಟರಿದ್ದಾರೆ. ಬಾಲಿವುಡ್ ಹೀರೋ ಜಾನ್ ಅಬ್ರಹಾಂ ಅಂಥವರಲ್ಲಿ ಒಬ್ಬರು. ಜಾನ್ ಬದುಕು ನಿಜಕ್ಕೂ ಸಾಕಷ್ಟು ಕುತೂಹಲಗಳನ್ನು ಒಳಗೊಂಡಿವೆ. ಹಣ ಉಳಿಸುವುದು, ಹೂಡಿಕೆ ಮಾಡುವುದು ಹೇಗೆಂದು ಇವರ ಜೀವನ ನೋಡಿ ಕಲಿಯಬಹುದು.

1 / 6
ಜಾನ್ ಅಬ್ರಹಾಂ ನಟನಾಗುವ ಮುನ್ನ ಎಂಬಿಎ ಓದಿದ್ದರು. ಅವರ ಮೊದಲ ಉದ್ಯೋಗ ಮೀಡಿಯಾ ಪ್ಲಾನರ್. ಅದು 2000 ವರ್ಷದಕ್ಕಿಂತ ಮುಂಚಿನ ದಿನಗಳು. ಮೊದಲ ಕೆಲಸಕ್ಕೆ ಸಿಗುತ್ತಿದ್ದ ಸಂಬಳ 6,500 ರೂ. ನಂತರ ಅವರು ಮಾಡಲಿಂಗ್ ಕ್ಷೇತ್ರಕ್ಕೆ ಹೋದರು. ಬಳಿಕ ಸಿನಿಮಾ ನಂಟು ಹೀಗೆ ಅವರು ಬೆಳೆಯುತ್ತಾ ಹೋದರು...

ಜಾನ್ ಅಬ್ರಹಾಂ ನಟನಾಗುವ ಮುನ್ನ ಎಂಬಿಎ ಓದಿದ್ದರು. ಅವರ ಮೊದಲ ಉದ್ಯೋಗ ಮೀಡಿಯಾ ಪ್ಲಾನರ್. ಅದು 2000 ವರ್ಷದಕ್ಕಿಂತ ಮುಂಚಿನ ದಿನಗಳು. ಮೊದಲ ಕೆಲಸಕ್ಕೆ ಸಿಗುತ್ತಿದ್ದ ಸಂಬಳ 6,500 ರೂ. ನಂತರ ಅವರು ಮಾಡಲಿಂಗ್ ಕ್ಷೇತ್ರಕ್ಕೆ ಹೋದರು. ಬಳಿಕ ಸಿನಿಮಾ ನಂಟು ಹೀಗೆ ಅವರು ಬೆಳೆಯುತ್ತಾ ಹೋದರು...

2 / 6
ಜಾನ್ ಅಬ್ರಹಾಂ ತಮ್ಮ ಆರಂಭಿಕ ವೃತ್ತಿ ಕಾಲದ ದಿನಗಳನ್ನು ಯಾವ ಮುಜುಗರವೂ ಇಲ್ಲದೇ ಬಿಚ್ಚಿಡುತ್ತಾರೆ. ಅದು 1999ರ ವರ್ಷ. ಅವರಿಗೆ ಆಗುತ್ತಿದ್ದ ಖರ್ಚು ಬಹಳ ಕಡಿಮೆಯಂತೆ. ಬಹುತೇಕ ಹಣವನ್ನು ಅವರು ಉಳಿಸಿ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುತ್ತಿದ್ದರಂತೆ. ಅವರಿಗೆ ಮೊಬೈಲ್ ಇರಲಿಲ್ಲ. ಓಡಾಡಲು ಟ್ರೈನ್ ಪಾಸ್ ಇತ್ತು. ಎರಡು ಚಪಾತಿ ಮತ್ತು ದಾಲ್ ಫ್ರೈ, ಇದು ಅವರ ಮಧ್ಯಾಹ್ನದ ಊಟ. ಇದಕ್ಕೆ ಆಗ 6 ರೂ ಬೆಲೆ. ಆಫೀಸ್​ನಲ್ಲೇ ತಡವಾಗಿ ಇರುತ್ತಿದ್ದರಿಂದ ರಾತ್ರಿ ಊಟ ಮಾಡುತ್ತಿರಲಿಲ್ಲ. ಊಟ ಬಿಟ್ಟರೆ ಇವರಿಗೆ ಇತರ ಖರ್ಚೆಂದರೆ ಬೈಕ್​ಗೆ ಪೆಟ್ರೋಲ್​ನದ್ದು. ಹೀಗಾಗಿ ಬಹಳಷ್ಟು ಹಣ ಉಳಿಸುತ್ತಿದ್ದರಂತೆ.

ಜಾನ್ ಅಬ್ರಹಾಂ ತಮ್ಮ ಆರಂಭಿಕ ವೃತ್ತಿ ಕಾಲದ ದಿನಗಳನ್ನು ಯಾವ ಮುಜುಗರವೂ ಇಲ್ಲದೇ ಬಿಚ್ಚಿಡುತ್ತಾರೆ. ಅದು 1999ರ ವರ್ಷ. ಅವರಿಗೆ ಆಗುತ್ತಿದ್ದ ಖರ್ಚು ಬಹಳ ಕಡಿಮೆಯಂತೆ. ಬಹುತೇಕ ಹಣವನ್ನು ಅವರು ಉಳಿಸಿ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುತ್ತಿದ್ದರಂತೆ. ಅವರಿಗೆ ಮೊಬೈಲ್ ಇರಲಿಲ್ಲ. ಓಡಾಡಲು ಟ್ರೈನ್ ಪಾಸ್ ಇತ್ತು. ಎರಡು ಚಪಾತಿ ಮತ್ತು ದಾಲ್ ಫ್ರೈ, ಇದು ಅವರ ಮಧ್ಯಾಹ್ನದ ಊಟ. ಇದಕ್ಕೆ ಆಗ 6 ರೂ ಬೆಲೆ. ಆಫೀಸ್​ನಲ್ಲೇ ತಡವಾಗಿ ಇರುತ್ತಿದ್ದರಿಂದ ರಾತ್ರಿ ಊಟ ಮಾಡುತ್ತಿರಲಿಲ್ಲ. ಊಟ ಬಿಟ್ಟರೆ ಇವರಿಗೆ ಇತರ ಖರ್ಚೆಂದರೆ ಬೈಕ್​ಗೆ ಪೆಟ್ರೋಲ್​ನದ್ದು. ಹೀಗಾಗಿ ಬಹಳಷ್ಟು ಹಣ ಉಳಿಸುತ್ತಿದ್ದರಂತೆ.

3 / 6
ಹಣ ಗಳಿಸುವುದು ಅಪರಾಧವಲ್ಲ ಎನ್ನುತ್ತಾರೆ ಜಾನ್ ಅಬ್ರಹಾಂ. ‘ನಾವು ಬಂಡವಾಳಶಾಹಿ ಸಮಾಜದಲ್ಲಿ ವಾಸಿಸುತ್ತಿದ್ಧೇವೆ. ಹಣ ಗಳಿಸುವ ಮನಸ್ಸು ನಿಮ್ಮದಾಗಿರಬೇಕು. ಹಣ ಇಟ್ಟುಕೊಳ್ಳುವುದು ಅಪರಾಧವಲ್ಲ. ಹಾಗೆಯೇ, ಆ ಹಣದಲ್ಲಿ ನೀವು ಏನು ಮಾಡುತ್ತೀರಿ ಎಂಬುದೂ ಕೂಡ ಮುಖ್ಯ ಎನ್ನುತ್ತಾರೆ ಅವರು.

ಹಣ ಗಳಿಸುವುದು ಅಪರಾಧವಲ್ಲ ಎನ್ನುತ್ತಾರೆ ಜಾನ್ ಅಬ್ರಹಾಂ. ‘ನಾವು ಬಂಡವಾಳಶಾಹಿ ಸಮಾಜದಲ್ಲಿ ವಾಸಿಸುತ್ತಿದ್ಧೇವೆ. ಹಣ ಗಳಿಸುವ ಮನಸ್ಸು ನಿಮ್ಮದಾಗಿರಬೇಕು. ಹಣ ಇಟ್ಟುಕೊಳ್ಳುವುದು ಅಪರಾಧವಲ್ಲ. ಹಾಗೆಯೇ, ಆ ಹಣದಲ್ಲಿ ನೀವು ಏನು ಮಾಡುತ್ತೀರಿ ಎಂಬುದೂ ಕೂಡ ಮುಖ್ಯ ಎನ್ನುತ್ತಾರೆ ಅವರು.

4 / 6
ಸಾಕಷ್ಟು ಗಳಿಸಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಯಮವನ್ನು ತರಲಾಗಿದೆ. ಅಮೆರಿಕ, ಯೂರೋಪ್​ನಲ್ಲಿ ಶ್ರೀಮಂತರು ಸಾಮಾಜಿಕ ಕಾರ್ಯಗಳಿಗೆ (ಫಿಲಾಂತ್ರೋಪಿ) ಹಣ ಮೀಸಲಿಡುತ್ತಾರೆ. ಭಾರತದಲ್ಲಿ ಶ್ರೀಮಂತರನ್ನು ಈ ಕೆಲಸಗಳಿಗೆ ಬಲವಂತಪಡಿಸಬೇಕಾಗುತ್ತದೆ ಎಂದು ಹೇಳುತ್ತಾರೆ ಜಾನ್ ಅಬ್ರಹಾಂ.

ಸಾಕಷ್ಟು ಗಳಿಸಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಯಮವನ್ನು ತರಲಾಗಿದೆ. ಅಮೆರಿಕ, ಯೂರೋಪ್​ನಲ್ಲಿ ಶ್ರೀಮಂತರು ಸಾಮಾಜಿಕ ಕಾರ್ಯಗಳಿಗೆ (ಫಿಲಾಂತ್ರೋಪಿ) ಹಣ ಮೀಸಲಿಡುತ್ತಾರೆ. ಭಾರತದಲ್ಲಿ ಶ್ರೀಮಂತರನ್ನು ಈ ಕೆಲಸಗಳಿಗೆ ಬಲವಂತಪಡಿಸಬೇಕಾಗುತ್ತದೆ ಎಂದು ಹೇಳುತ್ತಾರೆ ಜಾನ್ ಅಬ್ರಹಾಂ.

5 / 6
ಎರಡು ಮೂರು ದಶಕಗಳಿಂದ ಬಾಲಿವುಡ್ ಚಿತ್ರಜಗತ್ತಿನಲ್ಲಿರುವ ಜಾನ್ ಅಬ್ರಹಾಂ ಅವರ ಹೊಸ ಸಿನಿಮಾ ವೇದಾ ನಾಳೆ (ಆ. 15) ಬಿಡುಗಡೆ ಆಗುತ್ತಿದೆ. ನಿಖಿಲ್ ಆಡ್ವಾಣಿ ನಿರ್ದೇಶನದ ಈ ಸಿನಿಮಾ ತಮಿಳಿನ ‘ವಿಕ್ರಂ ವೇದಾ’ ಚಿತ್ರದ ರೀಮೇಕ್ ಆಗಿದೆ. ಮಾಜಿ ಯೋಧನೊಬ್ಬರ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಹೋರಾಟದ ಸ್ಫೂರ್ತಿ ಕೊಡುವ ಕಥೆ ಈ ಸಿನಿಮಾದ್ದು.

ಎರಡು ಮೂರು ದಶಕಗಳಿಂದ ಬಾಲಿವುಡ್ ಚಿತ್ರಜಗತ್ತಿನಲ್ಲಿರುವ ಜಾನ್ ಅಬ್ರಹಾಂ ಅವರ ಹೊಸ ಸಿನಿಮಾ ವೇದಾ ನಾಳೆ (ಆ. 15) ಬಿಡುಗಡೆ ಆಗುತ್ತಿದೆ. ನಿಖಿಲ್ ಆಡ್ವಾಣಿ ನಿರ್ದೇಶನದ ಈ ಸಿನಿಮಾ ತಮಿಳಿನ ‘ವಿಕ್ರಂ ವೇದಾ’ ಚಿತ್ರದ ರೀಮೇಕ್ ಆಗಿದೆ. ಮಾಜಿ ಯೋಧನೊಬ್ಬರ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಹೋರಾಟದ ಸ್ಫೂರ್ತಿ ಕೊಡುವ ಕಥೆ ಈ ಸಿನಿಮಾದ್ದು.

6 / 6
Follow us
ಸಾಯಂಕಾಲ 6 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ವಿಕ್ಟರಿ ಪರೇಡ್
ಸಾಯಂಕಾಲ 6 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ವಿಕ್ಟರಿ ಪರೇಡ್
ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್
ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
VIDEO: ಇದು ಈ ಬಾರಿಯ ಐಪಿಎಲ್​ನ 10 ಲಕ್ಷ ರೂ. ಮೌಲ್ಯದ ಕ್ಯಾಚ್
VIDEO: ಇದು ಈ ಬಾರಿಯ ಐಪಿಎಲ್​ನ 10 ಲಕ್ಷ ರೂ. ಮೌಲ್ಯದ ಕ್ಯಾಚ್
ನಂಜೇಗೌಡರ ಕುಟುಂಬಸ್ಥರಿಂದಲೂ ರಾತ್ರಿಯಿಡೀ ವಿಜಯೋತ್ಸವ, ಕುಣಿತ
ನಂಜೇಗೌಡರ ಕುಟುಂಬಸ್ಥರಿಂದಲೂ ರಾತ್ರಿಯಿಡೀ ವಿಜಯೋತ್ಸವ, ಕುಣಿತ
ಮಕ್ಕಳೊಂದಿಗೆ ಮನೆಯಿಂದ ಹೊರಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡ ಗೃಹಿಣಿ
ಮಕ್ಕಳೊಂದಿಗೆ ಮನೆಯಿಂದ ಹೊರಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡ ಗೃಹಿಣಿ
RCB ಫ್ಯಾನ್ಸ್ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ?
RCB ಫ್ಯಾನ್ಸ್ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ?
ಒಂದು 'ಪದ' ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
ಒಂದು 'ಪದ' ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
ಗೃಹಲಕ್ಷ್ಮಿ ಹಣದಲ್ಲಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ