
ಟಿ20 ವಿಶ್ವಕಪ್ಗಾಗಿ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಅಚ್ಚರಿಯ ಎಂಟ್ರಿ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ. ಎಲ್ಲರೂ ಯಾವ ಆಟಗಾರರಿಗೆ ಸ್ಥಾನ ಸಿಗಲಿದೆ ಎಂದು ಯೋಚಿಸಿದ್ದರೆ, ಅತ್ತ ಬಿಸಿಸಿಐ ಆಯ್ಕೆ ಸಮಿತಿ ಕೋಚ್ಗೂ ಅಚ್ಚರಿ ಮೂಡುವಂತೆ ಮೆಂಟರ್ ಸ್ಥಾನದಲ್ಲಿ ಧೋನಿಯನ್ನು ಆಯ್ಕೆ ಮಾಡಿದ್ದರು. ಇದೀಗ ರಾತ್ರೋರಾತ್ರಿ ಟೀಮ್ ಇಂಡಿಯಾದಲ್ಲಿ ಸೃಷ್ಟಿಯಾಗಿರುವ ಮಾರ್ಗದರ್ಶಕ ಹುದ್ದೆ ಬಗ್ಗೆ ಚರ್ಚೆಗಳು ಶುರುವಾಗಿದೆ.


ನಾನು ಕೂಡ ಮಹೇಂದ್ರ ಸಿಂಗ್ ಧೋನಿ ಅವರ ದೊಡ್ಡ ಅಭಿಮಾನಿ. ಆದರೆ ಅವೆಲ್ಲವನ್ನೂ ಪಕ್ಕರಿಸಿ ಯೋಚಿಸಿದರೆ, ಧೋನಿಯ ಆಗಮನದಿಂದ ತಂಡದಲ್ಲಿ ಅಂತಹದ್ದೇನು ಬದಲಾವಣೆ ಆಗಲಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಜಡೇಜಾ ತಿಳಿಸಿದ್ದಾರೆ.

ಏಕೆಂದರೆ ಧೋನಿ ನಿವೃತ್ತರಾಗುವ ಮುನ್ನವೇ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಾಗಿತ್ತು. ಆ ಬಳಿಕ ಧೋನಿ 2 ವರ್ಷಗಳ ಕಾಲ ಸೀಮಿತ ಓವರ್ ಕ್ರಿಕೆಟ್ ಆಡಿದ್ದರು. ಅಂದರೆ ಧೋನಿ 2 ವರ್ಷಗಳ ಕಾಲ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಿದ್ದರು. ಇದೀಗ ಹೊಸ ಜವಾಬ್ದಾರಿ ನೀಡಿ ಕರೆಸಿಕೊಂಡಿರುವುದು ಯಾಕೆ ಎಂದು ಅಜಯ್ ಜಡೇಜಾ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮತ್ತು ರವಿಶಾಸ್ತ್ರಿ ಅವರ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಇಲ್ಲಿ ತಂಡವನ್ನು ವಿಶ್ವದಲ್ಲೇ ನಂಬರ್ 1 ಸ್ಥಾನಕ್ಕೇರಿಸಿದ ಯಶಸ್ವಿ ಕೋಚ್ ಇರುವಾಗ ಟೀಮ್ ಇಂಡಿಯಾಗೆ ಮಾರ್ಗದರ್ಶಕರ ಅಗತ್ಯವೇನಿದೆ. ಬಿಸಿಸಿಐಯ ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಜಡೇಜಾ ತಿಳಿಸಿದ್ದಾರೆ.
Published On - 4:39 pm, Sun, 12 September 21