AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಶುಭ್​ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ವಿಭಿನ್ನ ಕಾಮೆಂಟ್ ಮಾಡಿದ ಸಚಿನ್ ತೆಂಡೂಲ್ಕರ್..!

IPL 2023: ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

ಪೃಥ್ವಿಶಂಕರ
|

Updated on: May 22, 2023 | 3:44 PM

Share
ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.

ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್​ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್​ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್​ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್​ಸಿಬಿ ಸೋಲು ಮುಂಬೈಗೆ ಪ್ಲೇ ಆಫ್​ ಟಿಕೆಟ್​ ಅನ್ನು ಖಚಿತಪಡಿಸಿದೆ.

1 / 5
ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.

ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್​ಗೇರಲು ಆರ್​ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.

2 / 5
ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.

ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್​ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್​ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್​ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್​ಸಿಬಿ ನೀಡಿದ 197 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್​ ಗಿಫ್ಟ್ ನೀಡಿತು.

3 / 5
ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್​ನ ಶುಭ್​ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.

4 / 5
ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

ಗಿಲ್ ಆಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್​ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್​ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್​ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.

5 / 5
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ
ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ