Ravindra Jadeja: 12 ವಿಕೆಟ್ ಉರುಳಿಸಿದ ರವೀಂದ್ರ ಜಡೇಜಾ; ಡೆಲ್ಲಿ ತಂಡಕ್ಕೆ ಹೀನಾಯ ಸೋಲು

Ravindra Jadeja: ರವೀಂದ್ರ ಜಡೇಜಾ ಅವರು ರಣಜಿ ಟ್ರೋಫಿಯಲ್ಲಿ ದೆಹಲಿ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಒಟ್ಟು 12 ವಿಕೆಟ್‌ಗಳನ್ನು ಪಡೆದರು. ಜಡೇಜಾ ಅವರ ಸ್ಪಿನ್ ಮ್ಯಾಜಿಕ್​ಹೆ ನಲುಗಿದ ದೆಹಲಿ ತಂಡ ಸಂಪೂರ್ಣವಾಗಿ ಶರಣಾಯಿತು. ಜಡೇಜಾ ಅವರ ಈ ಅದ್ಭುತ ಪ್ರದರ್ಶನ ಸೌರಾಷ್ಟ್ರ ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟಿತು.

ಪೃಥ್ವಿಶಂಕರ
|

Updated on:Jan 24, 2025 | 8:49 PM

ರಣಜಿ ಟ್ರೋಫಿಯಲ್ಲಿ ಡೆಲ್ಲಿ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ರವೀಂದ್ರ ಜಡೇಜಾ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಾರಕ ದಾಳಿ ನಡೆಸಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡವನ್ನು ಹೆಡೆಮುರಿ ಕಟ್ಟಿದರು. ಜಡೇಜಾ ಸ್ಪಿನ್ ಮ್ಯಾಜಿಕ್​ನ ಮುಂದೆ ಸ್ಫೋಟಕ ಬ್ಯಾಟ್ಸ್‌ಮನ್ ರಿಷಬ್ ಪಂತ್​ಗೂ ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಜಡೇಜಾ ಅವರ ವಿಧ್ವಂಸಕ ಎಸೆತಗಳ ಮುಂದೆ ಡೆಲ್ಲಿ ತಂಡ ಸಂಪೂರ್ಣ ಶರಣಾದಂತಿತ್ತು.

ರಣಜಿ ಟ್ರೋಫಿಯಲ್ಲಿ ಡೆಲ್ಲಿ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ರವೀಂದ್ರ ಜಡೇಜಾ, ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಾರಕ ದಾಳಿ ನಡೆಸಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡವನ್ನು ಹೆಡೆಮುರಿ ಕಟ್ಟಿದರು. ಜಡೇಜಾ ಸ್ಪಿನ್ ಮ್ಯಾಜಿಕ್​ನ ಮುಂದೆ ಸ್ಫೋಟಕ ಬ್ಯಾಟ್ಸ್‌ಮನ್ ರಿಷಬ್ ಪಂತ್​ಗೂ ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಜಡೇಜಾ ಅವರ ವಿಧ್ವಂಸಕ ಎಸೆತಗಳ ಮುಂದೆ ಡೆಲ್ಲಿ ತಂಡ ಸಂಪೂರ್ಣ ಶರಣಾದಂತಿತ್ತು.

1 / 6
ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದರು. ಈ ಎಡಗೈ ಸ್ಪಿನ್ನರ್ ರಾಜ್‌ಕೋಟ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತಮ್ಮ ಅನುಭವದ ಧಾರೆ ಎರೆದರು. ಇದರಿಂದಾಗಿ ಡೆಲ್ಲಿ ಬ್ಯಾಟ್ಸ್​ಮನ್​ಗಳಿಗೆ ವಿಕೆಟ್​ನಲ್ಲಿ ಉಳಿಯುವುದು ಕಷ್ಟವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಕೇವಲ 38 ರನ್‌ ನೀಡಿ 7 ವಿಕೆಟ್‌ ಪಡೆದರು. ಈ ಮೂಲಕ ಜಡೇಜಾ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದರು. ಈ ಎಡಗೈ ಸ್ಪಿನ್ನರ್ ರಾಜ್‌ಕೋಟ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತಮ್ಮ ಅನುಭವದ ಧಾರೆ ಎರೆದರು. ಇದರಿಂದಾಗಿ ಡೆಲ್ಲಿ ಬ್ಯಾಟ್ಸ್​ಮನ್​ಗಳಿಗೆ ವಿಕೆಟ್​ನಲ್ಲಿ ಉಳಿಯುವುದು ಕಷ್ಟವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಕೇವಲ 38 ರನ್‌ ನೀಡಿ 7 ವಿಕೆಟ್‌ ಪಡೆದರು. ಈ ಮೂಲಕ ಜಡೇಜಾ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಪಡೆದರು.

2 / 6
ಈ ಎಡಗೈ ಸ್ಪಿನ್ನರ್ ದೆಹಲಿಯ ಆರಂಭಿಕ ಆಟಗಾರ ಸನತ್ ಸಾಂಗ್ವಾನ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಅರ್ಪಿತ್ ರಾಣಾ ಕೂಡ ಜಡೇಜಾಗೆ ಬಲಿಯಾದರು. ಜಾಂಟಿ ಸಿಧು ಮತ್ತು ನಂತರ ರಿಷಬ್ ಪಂತ್ ಕೂಡ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಗುಸೇನ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ತಮ್ಮ ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

ಈ ಎಡಗೈ ಸ್ಪಿನ್ನರ್ ದೆಹಲಿಯ ಆರಂಭಿಕ ಆಟಗಾರ ಸನತ್ ಸಾಂಗ್ವಾನ್ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಅರ್ಪಿತ್ ರಾಣಾ ಕೂಡ ಜಡೇಜಾಗೆ ಬಲಿಯಾದರು. ಜಾಂಟಿ ಸಿಧು ಮತ್ತು ನಂತರ ರಿಷಬ್ ಪಂತ್ ಕೂಡ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮಯಾಂಕ್ ಗುಸೇನ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ತಮ್ಮ ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

3 / 6
ಇದಾದ ಬಳಿಕ ಸುಮಿತ್ ಮಾಥೂರ್ ಕೂಡ ಜಡ್ಡುಗೆ ಬಲಿಯಾದರು. ಅಂತಿಮವಾಗಿ ಡೆಲ್ಲಿ ನಾಯಕ ಆಯುಷ್ ಬಧೋನಿ ಅವರನ್ನು ವಜಾ ಮಾಡುವ ಮೂಲಕ ಜಡೇಜಾ 7 ವಿಕೆಟ್​ಗಳನ್ನು ಪೂರ್ಣಗೊಳಿಸಿದರು. ಇದಲ್ಲದೆ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ಐವತ್ತು ಡಾಟ್ ಬಾಲ್‌ಗಳನ್ನು ಎಸೆದರು.

ಇದಾದ ಬಳಿಕ ಸುಮಿತ್ ಮಾಥೂರ್ ಕೂಡ ಜಡ್ಡುಗೆ ಬಲಿಯಾದರು. ಅಂತಿಮವಾಗಿ ಡೆಲ್ಲಿ ನಾಯಕ ಆಯುಷ್ ಬಧೋನಿ ಅವರನ್ನು ವಜಾ ಮಾಡುವ ಮೂಲಕ ಜಡೇಜಾ 7 ವಿಕೆಟ್​ಗಳನ್ನು ಪೂರ್ಣಗೊಳಿಸಿದರು. ಇದಲ್ಲದೆ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ಐವತ್ತು ಡಾಟ್ ಬಾಲ್‌ಗಳನ್ನು ಎಸೆದರು.

4 / 6
ರವೀಂದ್ರ ಜಡೇಜಾ ಅವರ ರಣಜಿ ಟ್ರೋಫಿ ದಾಖಲೆಯ ಕುರಿತು ಮಾತನಾಡುವುದಾದರೆ, ಜಡೇಜಾ19 ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಆರನೇ ಬಾರಿಗೆ ಪಂದ್ಯದಲ್ಲಿ 10 ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದ್ದಾರೆ. ಜಡೇಜಾ ಅವರು 46 ರಣಜಿ ಟ್ರೋಫಿ ಪಂದ್ಯಗಳಲ್ಲಿ 208 ವಿಕೆಟ್‌ಗಳನ್ನು ಪಡೆದಿದ್ದು, ಅವರ ಬೌಲಿಂಗ್ ಸರಾಸರಿ ಕೇವಲ 21.25 ಆಗಿದೆ.

ರವೀಂದ್ರ ಜಡೇಜಾ ಅವರ ರಣಜಿ ಟ್ರೋಫಿ ದಾಖಲೆಯ ಕುರಿತು ಮಾತನಾಡುವುದಾದರೆ, ಜಡೇಜಾ19 ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಆರನೇ ಬಾರಿಗೆ ಪಂದ್ಯದಲ್ಲಿ 10 ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದ್ದಾರೆ. ಜಡೇಜಾ ಅವರು 46 ರಣಜಿ ಟ್ರೋಫಿ ಪಂದ್ಯಗಳಲ್ಲಿ 208 ವಿಕೆಟ್‌ಗಳನ್ನು ಪಡೆದಿದ್ದು, ಅವರ ಬೌಲಿಂಗ್ ಸರಾಸರಿ ಕೇವಲ 21.25 ಆಗಿದೆ.

5 / 6
ಡೆಲ್ಲಿ ಮೊದಲ ಇನಿಂಗ್ಸ್‌ನಲ್ಲಿ 188 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ರವೀಂದ್ರ ಜಡೇಜಾ ತಂಡ 271 ರನ್ ಗಳಿಸಿ 83 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದರ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ, ಜಡೇಜಾ ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ, ಸೌರಾಷ್ಟ್ರ ಡೆಲ್ಲಿಯನ್ನು ಕೇವಲ 94 ರನ್‌ಗಳಿಗೆ ಕಟ್ಟಿಹಾಕಿತು. ಈ ಮೂಲಕ ಕೇವಲ 12 ರನ್‌ಗಳ ಗುರಿಯನ್ನು ಸೌರಾಷ್ಟ್ರ ಕೇವಲ 3.1 ಓವರ್‌ಗಳಲ್ಲಿ 10 ವಿಕೆಟ್‌ಗಳು ಬಾಕಿ ಇರುವಂತೆಯೇ ಸುಲಭವಾಗಿ ಬೆನ್ನಟ್ಟಿತು.

ಡೆಲ್ಲಿ ಮೊದಲ ಇನಿಂಗ್ಸ್‌ನಲ್ಲಿ 188 ರನ್ ಗಳಿಸಿತ್ತು, ಇದಕ್ಕೆ ಉತ್ತರವಾಗಿ ರವೀಂದ್ರ ಜಡೇಜಾ ತಂಡ 271 ರನ್ ಗಳಿಸಿ 83 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದರ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ, ಜಡೇಜಾ ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ, ಸೌರಾಷ್ಟ್ರ ಡೆಲ್ಲಿಯನ್ನು ಕೇವಲ 94 ರನ್‌ಗಳಿಗೆ ಕಟ್ಟಿಹಾಕಿತು. ಈ ಮೂಲಕ ಕೇವಲ 12 ರನ್‌ಗಳ ಗುರಿಯನ್ನು ಸೌರಾಷ್ಟ್ರ ಕೇವಲ 3.1 ಓವರ್‌ಗಳಲ್ಲಿ 10 ವಿಕೆಟ್‌ಗಳು ಬಾಕಿ ಇರುವಂತೆಯೇ ಸುಲಭವಾಗಿ ಬೆನ್ನಟ್ಟಿತು.

6 / 6

Published On - 8:43 pm, Fri, 24 January 25

Follow us
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು