- Kannada News Photo gallery Cricket photos Team India captain Rohit Sharma skip the Ram Mandir Pran Pratishtha ceremony Here is the reason
Ram Mandir Inauguration: ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರೋಹಿತ್ ಶರ್ಮಾ ಗೈರು: ಕಾರಣವೇನು?
Rohit Sharma: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ವರದಿ ಆಗಿದೆ. ಹಿಟ್ಮ್ಯಾನ್ ಹೈದರಾಬಾದ್ಗೆ ಪ್ರಯಾಣಿಸಲಿರುವ ಕಾರಣ ಸಮಾರಂಭದಿಂದ ಹೊರಗುಳಿಯುವ ಸಾಧ್ಯತೆಯಿದೆಯಂತೆ.
Updated on: Jan 22, 2024 | 10:59 AM

ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಇಡೀ ಭಾರತವೇ ಕಣ್ತುಂಬಿಕೊಳ್ಳುತ್ತಿದೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಕೆಲವು ದೊಡ್ಡ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಸಮಾರಂಭಕ್ಕೆ 1000 ಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದಾರೆ.

ಆದಾಗ್ಯೂ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ವರದಿ ಆಗಿದೆ. ಹಿಟ್ಮ್ಯಾನ್ ಹೈದರಾಬಾದ್ಗೆ ಪ್ರಯಾಣಿಸಲಿರುವ ಕಾರಣ ಸಮಾರಂಭದಿಂದ ಹೊರಗುಳಿಯುವ ಸಾಧ್ಯತೆಯಿದೆಯಂತೆ.

ಕ್ರಿಕ್ಬಜ್ನ ವರದಿಯ ಪ್ರಕಾರ, ರೋಹಿತ್ ಶರ್ಮಾ ಜನವರಿ 25 ರಂದು (ಗುರುವಾರ) ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ಗಾಗಿ ಅಭ್ಯಾಸವನ್ನು ಪ್ರಾರಂಭಿಸಲು ಜನವರಿ 22 ರಂದು ಹೈದರಾಬಾದ್ಗೆ ಪ್ರಯಾಣಿಸಲಿದ್ದಾರೆ.

ಟೀಮ್ ಇಂಡಿಯಾ ಆಟಗಾರರಿಗೆ ಜನವರಿ 21 ರಂದು (ಭಾನುವಾರ) ಐಚ್ಛಿಕ ನೆಟ್ ಸೆಷನ್ ಆಯೋಜಿಸಲಾಗಿತ್ತು. ಆದರೆ, ಇದನ್ನು ರೋಹಿತ್ ಶರ್ಮಾ ತಪ್ಪಿಸಿಕೊಂಡಿದ್ದರು. ಅವರು ತಮ್ಮ ತವರು ನಗರವಾದ ಮುಂಬೈನಲ್ಲಿರುವ BKC ಮೈದಾನದಲ್ಲಿ ವೈಯಕ್ತಿಕವಾಗಿ ಪ್ರ್ಯಾಕ್ಟೀಸ್ ಮಾಡಿದ್ದರು.

ರೋಹಿತ್ ಶರ್ಮಾ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸುವ ಯಾವುದೇ ಫೋಟೋವನ್ನು ಹಂಚಿಕೊಳ್ಳಲಿಲ್ಲ. ಆದರೆ, ಎರಡು ದಿನಗಳ ಮೊದಲು ರೋಹಿತ್ಗೆ ಆಹ್ವಾನವನ್ನು ನೀಡಲಾಗಿದೆ ಎನ್ನಲಾಗಿದೆ.

ರೋಹಿತ್ ಸೋಮವಾರ ಭಾರತ ತಂಡವನ್ನು ಸೇರಿಕೊಂಡರೆ, ಅವರು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಗೈರಾಗುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಕೆಲ ಆಟಗಾರರು ಅಯೋಧ್ಯೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
