- Kannada News Photo gallery Cricket photos Team Indias Last ICC Trophy On This Day 10 Year Ago India Won Last Icc Title Beat England in Icc Champions Trophy 2013
Team India’s Last ICC Trophy: ಭಾರತ ಕೊನೆಯದಾಗಿ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಭರ್ತಿ 10 ವರ್ಷ
Team India’s Last ICC Trophy: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಈ ದಿನದಂದು ಅಂದರೆ ಜೂನ್ 23, 2013 ರಂದು ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು.
Updated on:Jun 23, 2023 | 5:07 PM

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಈ ದಿನದಂದು ಅಂದರೆ ಜೂನ್ 23, 2013 ರಂದು ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ಗಳಿಂದ ಮಣಸಿದ್ದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.

ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದರೊಂದಿಗೆ ಧೋನಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಕೂಡ ನಿರ್ಮಿಸಿದ್ದರು. ಅದೆನೆಂದರೆ, ಧೋನಿ ತಮ್ಮ ನಾಯಕತ್ವದಲ್ಲಿ ಮೂರು ಐಸಿಸಿ ಟ್ರೋಫಿಗಳನ್ನು ಭಾರತದ ಮಡಿಲಿಗೆ ಹಾಕಿದ್ದರು. ಇದರೊಂದಿಗೆ ಈ 3 ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದರು.

2013ರ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2011 ರಲ್ಲಿ ಏಕದಿನ ವಿಶ್ವಕಪ್, ಅದಕ್ಕೂ ಮುನ್ನು ಅಂದರೆ 4 ವರ್ಷಗಳ ಮೊದಲು 2007 ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಎತ್ತಿಹಿಡಿದಿತ್ತು.

ಭಾರತ ಕೊನೆಯಾದಾಗಿ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಬರೋಬ್ಬರಿ 10 ವರ್ಷಗಳು ಕಳೆದಿವೆ. ಹಲವು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹದಲ್ಲಿ ಎಡವಿ ಖಾಲಿ ಕೈಯಲ್ಲಿ ವಾಪಸ್ಸಾಗಿದೆ. ಈ ಮೊದಲು 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿತ್ತು.

ಇತ್ತೀಚೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಆಡಿತು. ಆದರೆ, ಪ್ರಶಸ್ತಿ ಗೆಲ್ಲುವ ಕನಸಿಗೆ ಆಸ್ಟ್ರೇಲಿಯಾ ತಣ್ಣೀರೆರಚ್ಚಿತ್ತು. ಇದಕ್ಕೂ ಮೊದಲು 2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಡಬ್ಲ್ಯುಟಿಸಿಯ ಫೈನಲ್ನಲ್ಲಿ ಆಡಿತ್ತು. ಆದರೆ ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲನುಭವಿಸಿತ್ತು. ಈ 10 ವರ್ಷಗಳಲ್ಲಿ ಭಾರತ ಒಟ್ಟು 4 ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ತಲುಪಿದ್ದು, ನಾಲ್ಕು ಬಾರಿಯೂ ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ.

ಇದೀಗ ಭಾರತಕ್ಕೆ ಈ ವರ್ಷ ಐಸಿಸಿ ಟ್ರೋಫಿಯ ಬರವನ್ನು ತವರಿನಲ್ಲಿ ಕೊನೆಗಾಣಿಸಲು ಅವಕಾಶವಿದೆ. ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯಲಿದ್ದು, ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಇದರ ಲಾಭವನ್ನು ಪಡೆದು ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿದೆ.

ಇನ್ನು 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಸಂಬಂಧಿಸಿದಂತೆ, ಆ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತೋರಿದ ಚಾಣಾಕ್ಷತೆ ಈಗಲೂ ಕ್ರಿಕೆಟ್ ಅಭಿಮಾಗಳ ಮನದಲ್ಲಿ ಅಚ್ಚಳಿದಂತೆ ಉಳಿದಿದೆ. ಏಕೆಂದರೆ ಭಾರತ ಸೋಲಿನ ದವಡೆಯಲ್ಲಿದ್ದರು ಧೃತಿಗೆಡದ ಧೋನಿ, ಕೊನೆಯ ಓವರ್ ಅನ್ನು ಅಶ್ವಿನ್ ಅವರಿಂದ ಬೌಲ್ ಮಾಡಿಸಿ ಟೀಂ ಇಂಡಿಯಾಕ್ಕೆ 5 ರನ್ಗಳ ರೋಚಕ ಜಯ ತಂದುಕೊಟ್ಟಿದ್ದರು.
Published On - 5:05 pm, Fri, 23 June 23









