Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯ ಗುಣವಾದರೂ ಫಿಸಿಯೋಥೆರಪಿ ಯಾಕೆ ಅಗತ್ಯ?

ಫಿಸಿಯೋಥೆರಪಿಯ ಮುಖ್ಯ ಉದ್ದೇಶವೆಂದರೆ ನೋವು ನಿರ್ವಹಣೆ. ಗಾಯದ ನಂತರ ನೋವು ಆಗಾಗ ಕಾಣಿಸಿಕೊಂಡು ಚಿಕಿತ್ಸೆ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ದಿನನಿತ್ಯದ ಚಟುವಟಿಕೆಗಳನ್ನು ಮಾಡುವುದೇ ಕಷ್ಟವಾಗುತ್ತದೆ. ಇದಕ್ಕೆ ಫಿಸಿಯೋಥೆರಪಿ ಅಗತ್ಯ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೂ ಫಿಸಿಯೋಥೆರಪಿ ಚಿಕಿತ್ಸೆ ಪರಿಣಾಮಕಾರಿ.

ಸುಷ್ಮಾ ಚಕ್ರೆ
|

Updated on:Sep 08, 2023 | 4:14 PM

ಫಿಸಿಯೋಥೆರಪಿ ಮಾಡಿಸುವುದರಿಂದ ನಮ್ಮ ದೇಹಕ್ಕೆ ನಾನಾ ರೀತಿಯ ಅನುಕೂಲಗಳಿವೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಂತೆ ನಾವು ಅಸ್ಥಿರಂಧ್ರತೆ ಅಥವಾ ಸಂಧಿವಾತದಿಂದ ಮಂಡಿ ಚಿಪ್ಪಿನ ಬದಲಾವಣೆ ಮಾಡುವ ಸ್ಥಿತಿಗೆ ತಲುಪುತ್ತೇವೆ. ಈ ಸ್ಥಿತಿಯಲ್ಲಿ ನಮಗೆ ಫಿಸಿಯೋಥೆರಪಿಯ ಅಗತ್ಯವಿರುತ್ತದೆ.

ಫಿಸಿಯೋಥೆರಪಿ ಮಾಡಿಸುವುದರಿಂದ ನಮ್ಮ ದೇಹಕ್ಕೆ ನಾನಾ ರೀತಿಯ ಅನುಕೂಲಗಳಿವೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಮಗೆ ವಯಸ್ಸಾದಂತೆ ನಾವು ಅಸ್ಥಿರಂಧ್ರತೆ ಅಥವಾ ಸಂಧಿವಾತದಿಂದ ಮಂಡಿ ಚಿಪ್ಪಿನ ಬದಲಾವಣೆ ಮಾಡುವ ಸ್ಥಿತಿಗೆ ತಲುಪುತ್ತೇವೆ. ಈ ಸ್ಥಿತಿಯಲ್ಲಿ ನಮಗೆ ಫಿಸಿಯೋಥೆರಪಿಯ ಅಗತ್ಯವಿರುತ್ತದೆ.

1 / 9
ಫಿಸಿಯೋಥೆರಪಿ ನರರೋಗದ ಸಮಸ್ಯೆಗಳನ್ನು ನಿಯಂತ್ರಣ ಮಟ್ಟದಲ್ಲಿಡುತ್ತದೆ. ಒಬ್ಬ ವ್ಯಕ್ತಿಯು ವಯಸ್ಸಾಗುತ್ತಿದಂತೆ, ನರಗಳ ದೌರ್ಬಲ್ಯಕ್ಕೆ ಮತ್ತು ನರಸಂಬಂಧಿ ರೋಗಗಳಿಗೆ ತುತ್ತಾಗುತ್ತಾನೆ. ಪಾರ್ಕಿನ್ಸನ್ ಕಾಯಿಲೆ, ದೀರ್ಘಾವಧಿಯ ಆಯಾಸ, ಬುದ್ಧಿ ಭ್ರಮಣೆ, ಪಾರ್ಶ್ವವಾಯು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಫಿಸಿಯೋಥೆರಪಿ ನರರೋಗದ ಸಮಸ್ಯೆಗಳನ್ನು ನಿಯಂತ್ರಣ ಮಟ್ಟದಲ್ಲಿಡುತ್ತದೆ. ಒಬ್ಬ ವ್ಯಕ್ತಿಯು ವಯಸ್ಸಾಗುತ್ತಿದಂತೆ, ನರಗಳ ದೌರ್ಬಲ್ಯಕ್ಕೆ ಮತ್ತು ನರಸಂಬಂಧಿ ರೋಗಗಳಿಗೆ ತುತ್ತಾಗುತ್ತಾನೆ. ಪಾರ್ಕಿನ್ಸನ್ ಕಾಯಿಲೆ, ದೀರ್ಘಾವಧಿಯ ಆಯಾಸ, ಬುದ್ಧಿ ಭ್ರಮಣೆ, ಪಾರ್ಶ್ವವಾಯು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

2 / 9
ಈ ರೀತಿಯ ಪ್ರಕರಣಗಳಲ್ಲಿ ಫಿಸಿಯೋಥೆರಪಿ ತನ್ನ ನರಸ್ನಾಯುಗಳ ಮತ್ತು ಸ್ನಾಯುಅಸ್ಥಿಗಳ ಚಿಕಿತ್ಸಾ ವಿಧಾನದಿಂದ ರೋಗ ಇನ್ನಷ್ಟು ಹದಗೆಡುವುದನ್ನು ತಡೆಗಟ್ಟುತ್ತದೆ. ತೊಂದರೆಗೊಳಗಾದ ಅಂಗಗಳ ಫಿಸಿಯೋಥೆರಪಿ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಆ ಅಂಗಗಳಲ್ಲಿ ಸುಧಾರಣೆ ಕಂಡುಬಂದು ಚಲನೆಗಳನ್ನು ಪುನರಾರಂಭಿಸುತ್ತದೆ.

ಈ ರೀತಿಯ ಪ್ರಕರಣಗಳಲ್ಲಿ ಫಿಸಿಯೋಥೆರಪಿ ತನ್ನ ನರಸ್ನಾಯುಗಳ ಮತ್ತು ಸ್ನಾಯುಅಸ್ಥಿಗಳ ಚಿಕಿತ್ಸಾ ವಿಧಾನದಿಂದ ರೋಗ ಇನ್ನಷ್ಟು ಹದಗೆಡುವುದನ್ನು ತಡೆಗಟ್ಟುತ್ತದೆ. ತೊಂದರೆಗೊಳಗಾದ ಅಂಗಗಳ ಫಿಸಿಯೋಥೆರಪಿ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಆ ಅಂಗಗಳಲ್ಲಿ ಸುಧಾರಣೆ ಕಂಡುಬಂದು ಚಲನೆಗಳನ್ನು ಪುನರಾರಂಭಿಸುತ್ತದೆ.

3 / 9
ಶಸ್ತ್ರಚಿಕಿತ್ಸೆಯ ನಂತರ ತೊಂದರೆ ಉಂಟಾಗುವ ಅಪಾಯವನ್ನು ನಿರ್ಣಯಿಸುವಲ್ಲಿ ಶಸ್ತ್ರಕ್ರಿಯೆಯ ಮುನ್ನ ಮಾಡಿದ ಫಿಸಿಯೋಥೆರಪಿ ಸಹಾಯ ಮಾಡುತ್ತದೆ. ಹಾಗೇ, ಶಸ್ತ್ರಚಿಕಿತ್ಸೆಯ ನಂತರ ನೀವು ವೇಗವಾಗಿ ಚೇತರಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಶಸ್ತ್ರಚಿಕಿತ್ಸೆಯ ನಂತರ ತೊಂದರೆ ಉಂಟಾಗುವ ಅಪಾಯವನ್ನು ನಿರ್ಣಯಿಸುವಲ್ಲಿ ಶಸ್ತ್ರಕ್ರಿಯೆಯ ಮುನ್ನ ಮಾಡಿದ ಫಿಸಿಯೋಥೆರಪಿ ಸಹಾಯ ಮಾಡುತ್ತದೆ. ಹಾಗೇ, ಶಸ್ತ್ರಚಿಕಿತ್ಸೆಯ ನಂತರ ನೀವು ವೇಗವಾಗಿ ಚೇತರಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

4 / 9
ಹೃದಯ ಮತ್ತು ಎದೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ತಮ್ಮ ಗಾಯದಿಂದ ಹೇಗೆ ಬೇಗ ಚೇತರಿಸಿಕೊಳ್ಳುವುದು ಎಂದು ಹೇಳಿಕೊಡಲಾಗುತ್ತದೆ. ಓರ್ವ ಫಿಸಿಯೋಥೆರಪಿ ತಜ್ಞ ಶಸ್ತ್ರಕ್ರಿಯೆಯ ನಂತರ ತನ್ನ ರೋಗಿಗೆ ಎಲ್ಲ ವ್ಯಾಯಾಮಗಳ ವಿಧಾನಗಳನ್ನು ಹೇಳಿಕೊಡುತ್ತಾರೆ.

ಹೃದಯ ಮತ್ತು ಎದೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ತಮ್ಮ ಗಾಯದಿಂದ ಹೇಗೆ ಬೇಗ ಚೇತರಿಸಿಕೊಳ್ಳುವುದು ಎಂದು ಹೇಳಿಕೊಡಲಾಗುತ್ತದೆ. ಓರ್ವ ಫಿಸಿಯೋಥೆರಪಿ ತಜ್ಞ ಶಸ್ತ್ರಕ್ರಿಯೆಯ ನಂತರ ತನ್ನ ರೋಗಿಗೆ ಎಲ್ಲ ವ್ಯಾಯಾಮಗಳ ವಿಧಾನಗಳನ್ನು ಹೇಳಿಕೊಡುತ್ತಾರೆ.

5 / 9
ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಪ್ರಸೂತಿಯ ನಂತರ ಮಹಿಳೆಯು ತನ್ನ ದೇಹದ ಕಡೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಈ ಸಮಯದಲ್ಲಾಗುವ ಎಷ್ಟೋ ಹಾರ್ಮೋನುಗಳ ಏಕಾಏಕಿ ಬದಲಾವಣೆ ಬೆನ್ನುಗಳನ್ನು ಹಿಡಿಯಬೇಕಿದ್ದ ಸ್ನಾಯುಗಳನ್ನು ಮೃದು ಮಾಡಿ ಹಿಗ್ಗಿಸಲು ಶುರುಮಾಡುತ್ತದೆ. ನಿಮ್ಮ ಪಕ್ಕೆಲುಬುಗಳ ಸ್ನಾಯು ಮತ್ತು ಹೊಟ್ಟೆಯ ಸ್ನಾಯುಗಳು ಹಿಗ್ಗಲು ಶುರು ಮಾಡುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಪ್ರಸೂತಿಯ ನಂತರ ಮಹಿಳೆಯು ತನ್ನ ದೇಹದ ಕಡೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಈ ಸಮಯದಲ್ಲಾಗುವ ಎಷ್ಟೋ ಹಾರ್ಮೋನುಗಳ ಏಕಾಏಕಿ ಬದಲಾವಣೆ ಬೆನ್ನುಗಳನ್ನು ಹಿಡಿಯಬೇಕಿದ್ದ ಸ್ನಾಯುಗಳನ್ನು ಮೃದು ಮಾಡಿ ಹಿಗ್ಗಿಸಲು ಶುರುಮಾಡುತ್ತದೆ. ನಿಮ್ಮ ಪಕ್ಕೆಲುಬುಗಳ ಸ್ನಾಯು ಮತ್ತು ಹೊಟ್ಟೆಯ ಸ್ನಾಯುಗಳು ಹಿಗ್ಗಲು ಶುರು ಮಾಡುತ್ತದೆ.

6 / 9
ಆಗ ನಿಮ್ಮ ಫಿಸಿಯೋಥೆರಪಿ ತಜ್ಞರು ನಿಮಗೆ ಕೆಲವು ಸರಿಯಾದ ವಿಧಾನಗಳನ್ನು ಮತ್ತು ವ್ಯಾಯಾಮಗಳಾದ ಕೆಗೆಲ್ ವ್ಯಾಯಾಮಗಳು, ಹಿಗ್ಗುವಿಕೆಯ ವ್ಯಾಯಾಮಗಳು ಇತ್ಯಾದಿಯನ್ನು ಕಲಿಸುವುದರಿಂದ ನಿಮ್ಮ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಿ ನಿಮ್ಮ ದೇಹದಲ್ಲಾಗುವ ಅಥವಾ ಆಗಿರುವ ಬದಲಾವಣೆಗಳಿಂದ ಬೇಗ ಗುಣವಾಗಲು ಸಹಾಯ ಮಾಡುತ್ತದೆ.

ಆಗ ನಿಮ್ಮ ಫಿಸಿಯೋಥೆರಪಿ ತಜ್ಞರು ನಿಮಗೆ ಕೆಲವು ಸರಿಯಾದ ವಿಧಾನಗಳನ್ನು ಮತ್ತು ವ್ಯಾಯಾಮಗಳಾದ ಕೆಗೆಲ್ ವ್ಯಾಯಾಮಗಳು, ಹಿಗ್ಗುವಿಕೆಯ ವ್ಯಾಯಾಮಗಳು ಇತ್ಯಾದಿಯನ್ನು ಕಲಿಸುವುದರಿಂದ ನಿಮ್ಮ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸಿ ನಿಮ್ಮ ದೇಹದಲ್ಲಾಗುವ ಅಥವಾ ಆಗಿರುವ ಬದಲಾವಣೆಗಳಿಂದ ಬೇಗ ಗುಣವಾಗಲು ಸಹಾಯ ಮಾಡುತ್ತದೆ.

7 / 9
ಫಿಸಿಯೋಥೆರಪಿ ಕೇವಲ ಬಾಧಿತ ಅಂಗಾಗಗಳಲ್ಲಿ ಮಾತ್ರ ಕೆಲಸ ಮಾಡದೆ ಪೂರ್ಣ ದೇಹದ ಮೇಲೆ ಗಮನಕೊಡುತ್ತದೆ. ಹಾಗಾಗಿ ಇದು ಉಸಿರಾಟದ ತೊಂದರೆಗಳು, ಹೃದಯ ಮತ್ತು ಶ್ವಾಸಕೋಶದ ತೊಂದರೆಗಳನ್ನು ಪೂರ್ಣವಾಗಿ ಗುಣಪಡಿಸುತ್ತದೆ.

ಫಿಸಿಯೋಥೆರಪಿ ಕೇವಲ ಬಾಧಿತ ಅಂಗಾಗಗಳಲ್ಲಿ ಮಾತ್ರ ಕೆಲಸ ಮಾಡದೆ ಪೂರ್ಣ ದೇಹದ ಮೇಲೆ ಗಮನಕೊಡುತ್ತದೆ. ಹಾಗಾಗಿ ಇದು ಉಸಿರಾಟದ ತೊಂದರೆಗಳು, ಹೃದಯ ಮತ್ತು ಶ್ವಾಸಕೋಶದ ತೊಂದರೆಗಳನ್ನು ಪೂರ್ಣವಾಗಿ ಗುಣಪಡಿಸುತ್ತದೆ.

8 / 9
ಫಿಸಿಯೋಥೆರಪಿ ವ್ಯಾಯಾಮಗಳು ದೇಹವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಫಿಸಿಯೋಥೆರಪಿ ತಜ್ಞ ಶಿಫಾರಸು ಮಾಡಿದ ವ್ಯಾಯಾಮವನ್ನು ಮಾಡುವಾಗ, ಕೆಲವು ಸ್ನಾಯು ಬಲಪಡಿಸುವ ಮತ್ತು ವಿಸ್ತರಿಸುವ ವ್ಯಾಯಾಮಗಳು, ನಿಮ್ಮ ದೇಹದ ಸ್ನಾಯುಗಳನ್ನು ವಿವಿಧ ಕೋನಗಳಲ್ಲಿ ಚಲಿಸುವಂತೆ ಮಾಡಿ ಅದರ ಮೂಲಕ ರಕ್ತ ಚಲಾವಣೆಯನ್ನು ಹೆಚ್ಚು ಮಾಡುತ್ತದೆ. ಇದು ನಿಮಗೆ ಶಸ್ತ್ರಚಿಕಿತ್ಸೆ ನಂತರ ಆದ ಗಾಯದಿಂದ ಚೇತರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನಿಮ್ಮ ನೋವು ಮತ್ತು ಗಾಯ ನಿಮ್ಮ ಜೀವನಶೈಲಿಯ ಮೇಲೆ ನಿರ್ಬಂಧ ಹೇರದೆ ಇರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯವಾಗಿರಿ.

ಫಿಸಿಯೋಥೆರಪಿ ವ್ಯಾಯಾಮಗಳು ದೇಹವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಫಿಸಿಯೋಥೆರಪಿ ತಜ್ಞ ಶಿಫಾರಸು ಮಾಡಿದ ವ್ಯಾಯಾಮವನ್ನು ಮಾಡುವಾಗ, ಕೆಲವು ಸ್ನಾಯು ಬಲಪಡಿಸುವ ಮತ್ತು ವಿಸ್ತರಿಸುವ ವ್ಯಾಯಾಮಗಳು, ನಿಮ್ಮ ದೇಹದ ಸ್ನಾಯುಗಳನ್ನು ವಿವಿಧ ಕೋನಗಳಲ್ಲಿ ಚಲಿಸುವಂತೆ ಮಾಡಿ ಅದರ ಮೂಲಕ ರಕ್ತ ಚಲಾವಣೆಯನ್ನು ಹೆಚ್ಚು ಮಾಡುತ್ತದೆ. ಇದು ನಿಮಗೆ ಶಸ್ತ್ರಚಿಕಿತ್ಸೆ ನಂತರ ಆದ ಗಾಯದಿಂದ ಚೇತರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನಿಮ್ಮ ನೋವು ಮತ್ತು ಗಾಯ ನಿಮ್ಮ ಜೀವನಶೈಲಿಯ ಮೇಲೆ ನಿರ್ಬಂಧ ಹೇರದೆ ಇರುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯವಾಗಿರಿ.

9 / 9

Published On - 4:13 pm, Fri, 8 September 23

Follow us
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ