Sign In

By signing in or creating an account, you agree with Associated Broadcasting Company's Terms & Conditions and Privacy Policy.

Heel Pain: ಹಿಮ್ಮಡಿ ನೋವು ಉಂಟಾಗಲು 5 ಕಾರಣಗಳಿವು

ಹಿಮ್ಮಡಿ ನೋವನ್ನು ನಿರ್ಲಕ್ಷ್ಯಿಸಿ ನೀವು ಕೆಲಸ ಮುಂದುವರೆಸಿದರೆ ಆ ನೋವು ಗಂಭೀರ ರೂಪ ತಾಳಬಹುದು. ಹಿಮ್ಮಡಿ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಹಾಟ್‌ ವಾಟರ್‌ ಬ್ಯಾಗ್​ನಿಂದ ಮಸಾಜ್‌ ಮಾಡಿಕೊಳ್ಳಿ. ಅಥವಾ ರೆಡಿಮೇಡ್ ಐಸ್ ಪ್ಯಾಕ್​ ಕೂಡ ಬಳಸಬಹುದು.

ಸುಷ್ಮಾ ಚಕ್ರೆ
|

Updated on: Sep 06, 2023 | 3:05 PM

ಹಿಮ್ಮಡಿ ನೋವು ಬಹುತೇಕ ಎಲ್ಲರನ್ನೂ ಒಂದಲ್ಲ ಒಂದು ಬಾರಿಯಾದರೂ ಕಾಡಿರುವ ಆರೋಗ್ಯ ಸಮಸ್ಯೆಯಾಗಿದೆ. 1 ಮೈಲಿ ನಡೆದಾಗ ನಾವು ನಮ್ಮ ಪಾದದ ಮೇಲೆ 60 ಟನ್​ನಷ್ಟು ಒತ್ತಡ ಹಾಕಿರುತ್ತೇವೆ. ಆ ಹೊರೆಯನ್ನು ಪಾದಗಳು ನಿಭಾಯಿಸಬಲ್ಲವು. ಆದರೆ, ಪಾದ ಅಥವಾ ಹಿಮ್ಮಡಿಯ ಆರೋಗ್ಯ ಸರಿಯಿಲ್ಲದಿದ್ದರೆ ನೋವು ಪದೇಪದೆ ಮರುಕಳಿಸಬಹುದು. ಹಿಮ್ಮಡಿ ನೋವನ್ನು ನಿರ್ಲಕ್ಷ್ಯಿಸಿ ನೀವು ಕೆಲಸ ಮುಂದುವರೆಸಿದರೆ ಆ ನೋವು ಗಂಭೀರ ರೂಪ ತಾಳಬಹುದು. ಹಿಮ್ಮಡಿ ನೋವು ಹೆಚ್ಚಾಗಲು 5 ಪ್ರಮುಖ ಕಾರಣಗಳು ಇಲ್ಲಿವೆ.

ಹಿಮ್ಮಡಿ ನೋವು ಬಹುತೇಕ ಎಲ್ಲರನ್ನೂ ಒಂದಲ್ಲ ಒಂದು ಬಾರಿಯಾದರೂ ಕಾಡಿರುವ ಆರೋಗ್ಯ ಸಮಸ್ಯೆಯಾಗಿದೆ. 1 ಮೈಲಿ ನಡೆದಾಗ ನಾವು ನಮ್ಮ ಪಾದದ ಮೇಲೆ 60 ಟನ್​ನಷ್ಟು ಒತ್ತಡ ಹಾಕಿರುತ್ತೇವೆ. ಆ ಹೊರೆಯನ್ನು ಪಾದಗಳು ನಿಭಾಯಿಸಬಲ್ಲವು. ಆದರೆ, ಪಾದ ಅಥವಾ ಹಿಮ್ಮಡಿಯ ಆರೋಗ್ಯ ಸರಿಯಿಲ್ಲದಿದ್ದರೆ ನೋವು ಪದೇಪದೆ ಮರುಕಳಿಸಬಹುದು. ಹಿಮ್ಮಡಿ ನೋವನ್ನು ನಿರ್ಲಕ್ಷ್ಯಿಸಿ ನೀವು ಕೆಲಸ ಮುಂದುವರೆಸಿದರೆ ಆ ನೋವು ಗಂಭೀರ ರೂಪ ತಾಳಬಹುದು. ಹಿಮ್ಮಡಿ ನೋವು ಹೆಚ್ಚಾಗಲು 5 ಪ್ರಮುಖ ಕಾರಣಗಳು ಇಲ್ಲಿವೆ.

1 / 7
1. ಪ್ಲಾಂಟರ್ ಫ್ಯಾಸಿಟಿಸ್ ಎಂಬುದು ಹಿಮ್ಮಡಿ ನೋವಿಗೆ ಒಂದು ಮುಖ್ಯ ಕಾರಣವಾಗಿದೆ. ಪ್ಲಾಂಟರ್ ಎಂಬುದು ಹಿಮ್ಮಡಿಯ ಮೂಳೆಯಿಂದ ಪಾದದ ತುದಿಯವರೆಗೆ ಚಲಿಸುವ ಬಲವಾದ ಅಸ್ಥಿರಜ್ಜು. ಅಸ್ಥಿರಜ್ಜು ಹಿಮ್ಮಡಿ ಮೂಳೆಗೆ ಅಂಟಿಕೊಳ್ಳುವ ಸ್ಥಳದಲ್ಲಿ ನೋವು ಹೆಚ್ಚಾಗಿರುತ್ತದೆ. 40-70 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಾಗಿರುವ ಮಹಿಳೆಯರಲ್ಲೂ ಪ್ಲ್ಯಾಂಟರ್ ಫ್ಯಾಸಿಟಿಸ್ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ತೂಕ ಅಥವಾ ಬೊಜ್ಜು ಇರುವವರಲ್ಲೂ ಇದು ಕಾಣಿಸಿಕೊಳ್ಳುತ್ತದೆ.

1. ಪ್ಲಾಂಟರ್ ಫ್ಯಾಸಿಟಿಸ್ ಎಂಬುದು ಹಿಮ್ಮಡಿ ನೋವಿಗೆ ಒಂದು ಮುಖ್ಯ ಕಾರಣವಾಗಿದೆ. ಪ್ಲಾಂಟರ್ ಎಂಬುದು ಹಿಮ್ಮಡಿಯ ಮೂಳೆಯಿಂದ ಪಾದದ ತುದಿಯವರೆಗೆ ಚಲಿಸುವ ಬಲವಾದ ಅಸ್ಥಿರಜ್ಜು. ಅಸ್ಥಿರಜ್ಜು ಹಿಮ್ಮಡಿ ಮೂಳೆಗೆ ಅಂಟಿಕೊಳ್ಳುವ ಸ್ಥಳದಲ್ಲಿ ನೋವು ಹೆಚ್ಚಾಗಿರುತ್ತದೆ. 40-70 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಾಗಿರುವ ಮಹಿಳೆಯರಲ್ಲೂ ಪ್ಲ್ಯಾಂಟರ್ ಫ್ಯಾಸಿಟಿಸ್ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ತೂಕ ಅಥವಾ ಬೊಜ್ಜು ಇರುವವರಲ್ಲೂ ಇದು ಕಾಣಿಸಿಕೊಳ್ಳುತ್ತದೆ.

2 / 7
2. ಅಕಿಲ್ಸ್ ಟೆಂಡೈನಿಟಿಸ್ ಎಂಬುದು ಅಂಗಾಂಶದ ಬ್ಯಾಂಡ್ ಆಗಿದ್ದು, ಅದು ನಿಮ್ಮ ಸ್ನಾಯುಗಳನ್ನು ಹಿಮ್ಮಡಿಯ ಮೂಳೆಗೆ ಸಂಪರ್ಕಿಸುತ್ತದೆ. ನೀವು ನಡೆಯುವಾಗ, ಓಡುವಾಗ, ಜಿಗಿಯುವಾಗ ಇದನ್ನು ಬಳಸುತ್ತೀರಿ. ಅಕಿಲ್ಸ್ ಟೆಂಡೈನಿಟಿಸ್ ಸಮಸ್ಯೆ ಸಾಮಾನ್ಯವಾಗಿ ಓಟಗಾರರು, ಹೆಚ್ಚು ವ್ಯಾಯಾಮ ಮಾಡುವವರಲ್ಲಿ ಕಂಡುಬರುತ್ತದೆ.

2. ಅಕಿಲ್ಸ್ ಟೆಂಡೈನಿಟಿಸ್ ಎಂಬುದು ಅಂಗಾಂಶದ ಬ್ಯಾಂಡ್ ಆಗಿದ್ದು, ಅದು ನಿಮ್ಮ ಸ್ನಾಯುಗಳನ್ನು ಹಿಮ್ಮಡಿಯ ಮೂಳೆಗೆ ಸಂಪರ್ಕಿಸುತ್ತದೆ. ನೀವು ನಡೆಯುವಾಗ, ಓಡುವಾಗ, ಜಿಗಿಯುವಾಗ ಇದನ್ನು ಬಳಸುತ್ತೀರಿ. ಅಕಿಲ್ಸ್ ಟೆಂಡೈನಿಟಿಸ್ ಸಮಸ್ಯೆ ಸಾಮಾನ್ಯವಾಗಿ ಓಟಗಾರರು, ಹೆಚ್ಚು ವ್ಯಾಯಾಮ ಮಾಡುವವರಲ್ಲಿ ಕಂಡುಬರುತ್ತದೆ.

3 / 7
3. ಹೀಲ್ ಬರ್ಸಿಟಿಸ್ ಎಂಬುದು ಉರಿಯೂತದ ಸ್ಥಿತಿಯಾಗಿದೆ. ಹಿಮ್ಮಡಿಗಳ ಮೇಲೆ ಗಟ್ಟಿಯಾಗಿ ನಡೆಯುವುದರಿಂದ ಆಗುವ ಕಿರಿಕಿರಿಯಿಂದ ಉರಿಯೂತ ಉಂಟಾಗುತ್ತದೆ. ಚಪ್ಪಲಿಗಳಿಂದ ಹಿಮ್ಮಡಿಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹಿಮ್ಮಡಿಯ ಒಳಭಾಗದಲ್ಲಿ ಅಥವಾ ಅದರ ಹಿಂಭಾಗದಲ್ಲಿ ನೀವು ನೋವನ್ನು ಅನುಭವಿಸಬಹುದು. ದಿನ ಕಳೆದಂತೆ ಈ ನೋವು ಉಲ್ಬಣಗೊಳ್ಳುತ್ತದೆ.

3. ಹೀಲ್ ಬರ್ಸಿಟಿಸ್ ಎಂಬುದು ಉರಿಯೂತದ ಸ್ಥಿತಿಯಾಗಿದೆ. ಹಿಮ್ಮಡಿಗಳ ಮೇಲೆ ಗಟ್ಟಿಯಾಗಿ ನಡೆಯುವುದರಿಂದ ಆಗುವ ಕಿರಿಕಿರಿಯಿಂದ ಉರಿಯೂತ ಉಂಟಾಗುತ್ತದೆ. ಚಪ್ಪಲಿಗಳಿಂದ ಹಿಮ್ಮಡಿಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹಿಮ್ಮಡಿಯ ಒಳಭಾಗದಲ್ಲಿ ಅಥವಾ ಅದರ ಹಿಂಭಾಗದಲ್ಲಿ ನೀವು ನೋವನ್ನು ಅನುಭವಿಸಬಹುದು. ದಿನ ಕಳೆದಂತೆ ಈ ನೋವು ಉಲ್ಬಣಗೊಳ್ಳುತ್ತದೆ.

4 / 7
4. ಮಕ್ಕಳಲ್ಲಿ ಹಿಮ್ಮಡಿ ನೋವು ಅದರಲ್ಲೂ ಯುವ ಕ್ರೀಡಾಪಟುಗಳಲ್ಲಿ ಹಿಮ್ಮಡಿ ನೋವು ಹೆಚ್ಚಾಗಿರುತ್ತದೆ. ಇದು ಸಾಮಾನ್ಯವಾಗಿ 8-13 ವರ್ಷ ವಯಸ್ಸಿನ ಹುಡುಗಿಯರ ಮೇಲೆ ಮತ್ತು 10-15 ವರ್ಷ ವಯಸ್ಸಿನ ಹುಡುಗರ ಮೇಲೆ ಪರಿಣಾಮ ಬೀರುತ್ತದೆ. ಹಿಮ್ಮಡಿ ಮೂಳೆಯು ಕಾಲುಗಳ ಅಸ್ಥಿರಜ್ಜುಗಳಿಗಿಂತ ವೇಗವಾಗಿ ಬೆಳೆಯುತ್ತದೆ.

4. ಮಕ್ಕಳಲ್ಲಿ ಹಿಮ್ಮಡಿ ನೋವು ಅದರಲ್ಲೂ ಯುವ ಕ್ರೀಡಾಪಟುಗಳಲ್ಲಿ ಹಿಮ್ಮಡಿ ನೋವು ಹೆಚ್ಚಾಗಿರುತ್ತದೆ. ಇದು ಸಾಮಾನ್ಯವಾಗಿ 8-13 ವರ್ಷ ವಯಸ್ಸಿನ ಹುಡುಗಿಯರ ಮೇಲೆ ಮತ್ತು 10-15 ವರ್ಷ ವಯಸ್ಸಿನ ಹುಡುಗರ ಮೇಲೆ ಪರಿಣಾಮ ಬೀರುತ್ತದೆ. ಹಿಮ್ಮಡಿ ಮೂಳೆಯು ಕಾಲುಗಳ ಅಸ್ಥಿರಜ್ಜುಗಳಿಗಿಂತ ವೇಗವಾಗಿ ಬೆಳೆಯುತ್ತದೆ.

5 / 7
5. ಹೀಲ್ ಸ್ಪರ್ಸ್ ಹಿಮ್ಮಡಿ ಮೂಳೆಯ ಕೆಳಭಾಗದಲ್ಲಿ ಎಲುಬಿನ ಮುಂಚಾಚಿರುವಿಕೆಯನ್ನು ಉಂಟುಮಾಡುತ್ತವೆ. ಹೀಲ್ ಸ್ಪರ್ಸ್ ಕ್ರೀಡಾಪಟುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ.

5. ಹೀಲ್ ಸ್ಪರ್ಸ್ ಹಿಮ್ಮಡಿ ಮೂಳೆಯ ಕೆಳಭಾಗದಲ್ಲಿ ಎಲುಬಿನ ಮುಂಚಾಚಿರುವಿಕೆಯನ್ನು ಉಂಟುಮಾಡುತ್ತವೆ. ಹೀಲ್ ಸ್ಪರ್ಸ್ ಕ್ರೀಡಾಪಟುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ.

6 / 7
ಹಿಮ್ಮಡಿ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಹಾಟ್‌ ವಾಟರ್‌ ಬ್ಯಾಗ್​ನಿಂದ ಮಸಾಜ್‌ ಮಾಡಿಕೊಳ್ಳಿ. ಇದು ನೋವನ್ನು ನಿವಾರಿಸುವುದು ಮಾತ್ರವಲ್ಲದೆ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಅಥವಾ ಬಾಟಲಿಯಲ್ಲಿ ನೀರು ತುಂಬಿಸಿ ಫ್ರಿಜ್‌ನಲ್ಲಿಡಿ. ಅದು ಗಟ್ಟಿಯಾದಾಗ ಆ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ ಪಾದಗಳ ಅಡಿಭಾಗಕ್ಕೆ ಮಸಾಜ್ ಮಾಡಿ. ಅಥವಾ ರೆಡಿಮೇಡ್ ಐಸ್ ಪ್ಯಾಕ್​ ಕೂಡ ಬಳಸಬಹುದು. ಅಥವಾ ಒಂದು ಬಕೆಟ್ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಹಾಕಿ. ನಿಮ್ಮ ಪಾದಗಳನ್ನು ಸ್ವಲ್ಪ ಸಮಯದವರೆಗೆ ಅದರಲ್ಲಿ ಮುಳುಗಿಸಿಟ್ಟುಕೊಳ್ಳಿ. ಇದರಿಂದಲೂ ಹಿಮ್ಮಡಿ ನೋವು ಕಡಿಮೆಯಾಗುತ್ತದೆ.

ಹಿಮ್ಮಡಿ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಹಾಟ್‌ ವಾಟರ್‌ ಬ್ಯಾಗ್​ನಿಂದ ಮಸಾಜ್‌ ಮಾಡಿಕೊಳ್ಳಿ. ಇದು ನೋವನ್ನು ನಿವಾರಿಸುವುದು ಮಾತ್ರವಲ್ಲದೆ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಅಥವಾ ಬಾಟಲಿಯಲ್ಲಿ ನೀರು ತುಂಬಿಸಿ ಫ್ರಿಜ್‌ನಲ್ಲಿಡಿ. ಅದು ಗಟ್ಟಿಯಾದಾಗ ಆ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ ಪಾದಗಳ ಅಡಿಭಾಗಕ್ಕೆ ಮಸಾಜ್ ಮಾಡಿ. ಅಥವಾ ರೆಡಿಮೇಡ್ ಐಸ್ ಪ್ಯಾಕ್​ ಕೂಡ ಬಳಸಬಹುದು. ಅಥವಾ ಒಂದು ಬಕೆಟ್ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಹಾಕಿ. ನಿಮ್ಮ ಪಾದಗಳನ್ನು ಸ್ವಲ್ಪ ಸಮಯದವರೆಗೆ ಅದರಲ್ಲಿ ಮುಳುಗಿಸಿಟ್ಟುಕೊಳ್ಳಿ. ಇದರಿಂದಲೂ ಹಿಮ್ಮಡಿ ನೋವು ಕಡಿಮೆಯಾಗುತ್ತದೆ.

7 / 7
Follow us
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ