AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗ್ಗೇಶ್ ಹೇಳಿದ್ದನ್ನು ಸಾಬೀತು ಮಾಡಿ, ಅವರಿಂದಲೇ ಸನ್ಮಾನ ಮಾಡಿಸಿಕೊಂಡ ಗಿಲ್ಲಿ ನಟ

ಗಿಲ್ಲಿ ನಟನಿಗೆ ಎಲ್ಲರೂ ಕರೆದು ಸನ್ಮಾನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಬಿಗ್ ಬಾಸ್ ಗೆಲುವು. ಈಗ ನಟ ಜಗ್ಗೇಶ್ ಅವರು ಗಿಲ್ಲಿ ನಟನ ಕರೆದು ಸನ್ಮಾನಿಸಿದ್ದಾರೆ. ಜಗ್ಗೇಶ್ ಹೇಳಿದ ಮಾತನ್ನು ಸಾಬೀತು ಮಾಡಿದ ಬಳಿಕವೇ ಗಿಲ್ಲಿ, ಅವರ ಎದುರು ಹೋಗಿ ನಿಂತಿದ್ದಾರೆ ಎಂಬುದು ಮತ್ತೊಂದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

ರಾಜೇಶ್ ದುಗ್ಗುಮನೆ
|

Updated on: Jan 28, 2026 | 12:00 PM

Share
ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ ಆಗಿದ್ದಾರೆ. ಸೀಸನ್ 12ರಲ್ಲಿ ಅವರು ಅತ್ಯಧಿಕ ವೋಟ್​​ಗಳ ಅಂತರದಿಂದ ಗೆಲುವು ಕಂಡರು. ಅವರನ್ನು ಅನೇಕ ರಾಜಕಾರಣಿಗಳು ಕರೆದು ಸನ್ಮಾನ ಮಾಡುತ್ತಿದ್ದಾರೆ. ಜಗ್ಗೇಶ್ ಕೂಡ ಇದಕ್ಕೆ ಹೊರತಾಗಿಲ್ಲ.

ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ ಆಗಿದ್ದಾರೆ. ಸೀಸನ್ 12ರಲ್ಲಿ ಅವರು ಅತ್ಯಧಿಕ ವೋಟ್​​ಗಳ ಅಂತರದಿಂದ ಗೆಲುವು ಕಂಡರು. ಅವರನ್ನು ಅನೇಕ ರಾಜಕಾರಣಿಗಳು ಕರೆದು ಸನ್ಮಾನ ಮಾಡುತ್ತಿದ್ದಾರೆ. ಜಗ್ಗೇಶ್ ಕೂಡ ಇದಕ್ಕೆ ಹೊರತಾಗಿಲ್ಲ.

1 / 5
ಜಗ್ಗೇಶ್ ಅವರು ಗಿಲ್ಲಿ ನಟನ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ. ಶಾಲು ಹೊದಿಸಿ, ಹೂಗುಚ್ಛ ನೀಡಿದ್ದಾರೆ. ಮೇರು ಕಲಾವಿದ ಜಗ್ಗೇಶ್ ಅವರಿಂದ ಈ ಗೌರವ ಸಿಕ್ಕಿದ್ದು ಗಿಲ್ಲಿಗೆ ಖುಷಿ ಇದೆ. ಈ ಗೌರವ ಸ್ವೀಕರಿಸುವಾಗ ಜಗ್ಗೇಶ್ ಹೇಳಿದ ಮಾತನ್ನು ಸಾಬೀತು ಮಾಡಿದ್ದರು ಎಂಬುದು ವಿಶೇಷ.

ಜಗ್ಗೇಶ್ ಅವರು ಗಿಲ್ಲಿ ನಟನ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ. ಶಾಲು ಹೊದಿಸಿ, ಹೂಗುಚ್ಛ ನೀಡಿದ್ದಾರೆ. ಮೇರು ಕಲಾವಿದ ಜಗ್ಗೇಶ್ ಅವರಿಂದ ಈ ಗೌರವ ಸಿಕ್ಕಿದ್ದು ಗಿಲ್ಲಿಗೆ ಖುಷಿ ಇದೆ. ಈ ಗೌರವ ಸ್ವೀಕರಿಸುವಾಗ ಜಗ್ಗೇಶ್ ಹೇಳಿದ ಮಾತನ್ನು ಸಾಬೀತು ಮಾಡಿದ್ದರು ಎಂಬುದು ವಿಶೇಷ.

2 / 5
ರಿಯಾಲಿಟಿ ಶೋ ಒಂದರಲ್ಲಿ ಗಿಲ್ಲಿ ಸ್ಪರ್ಧಿಸಿದ್ದರು. ಆ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದು ಜಗ್ಗೇಶ್. ‘ಈ ವ್ಯಕ್ತಿ ಇನ್ನೊಂದು ವರ್ಷದಲ್ಲಿ ನಾಲ್ಕು ಬಾಡಿಗಾರ್ಡ್​​ಗಳನ್ನು ಇಟ್ಟುಕೊಂಡು, ಚತ್ರಿ ಹಿಡಿಯೋಕೆ ಒಬ್ಬನ ಇಟ್ಟುಕೊಂಡು ಓಡಾಡ್ತಾನೆ’ ಎಂದು ಭವಿಷ್ಯ ನುಡಿದಿದ್ದರು.

ರಿಯಾಲಿಟಿ ಶೋ ಒಂದರಲ್ಲಿ ಗಿಲ್ಲಿ ಸ್ಪರ್ಧಿಸಿದ್ದರು. ಆ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದು ಜಗ್ಗೇಶ್. ‘ಈ ವ್ಯಕ್ತಿ ಇನ್ನೊಂದು ವರ್ಷದಲ್ಲಿ ನಾಲ್ಕು ಬಾಡಿಗಾರ್ಡ್​​ಗಳನ್ನು ಇಟ್ಟುಕೊಂಡು, ಚತ್ರಿ ಹಿಡಿಯೋಕೆ ಒಬ್ಬನ ಇಟ್ಟುಕೊಂಡು ಓಡಾಡ್ತಾನೆ’ ಎಂದು ಭವಿಷ್ಯ ನುಡಿದಿದ್ದರು.

3 / 5
ಆ ಭವಿಷ್ಯ ನಿಜವಾಗಿದೆ. ಗಿಲ್ಲಿ ಹೋದಲ್ಲಿ ಬಂದಲ್ಲಿ, ಬೌನ್ಸರ್​​ಗಳು, ಪೊಲೀಸರು ಸುತ್ತುವರಿಯುತ್ತಿದ್ದಾರೆ. ಗಿಲ್ಲಿಗೆ ಇಷ್ಟು ಜನಪ್ರಿಯತೆ ಸಿಗುತ್ತದೆ ಎಂದು ಅಂದೇ ಜಗ್ಗೇಶ್ ಊಹಿಸಿದ್ದರು. ಆ ಮಾತು ನಿಜವಾಗಿದೆ. ಈ ವಿಷಯದಲ್ಲಿ ಜಗ್ಗೇಶ್​​ಗೂ ಖುಷಿಯಾಗಿದೆ. ಜಗ್ಗೇಶ್  ಒಬ್ಬರನ್ನು ಎಷ್ಟು ಆಳವಾಗಿ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಆ ಭವಿಷ್ಯ ನಿಜವಾಗಿದೆ. ಗಿಲ್ಲಿ ಹೋದಲ್ಲಿ ಬಂದಲ್ಲಿ, ಬೌನ್ಸರ್​​ಗಳು, ಪೊಲೀಸರು ಸುತ್ತುವರಿಯುತ್ತಿದ್ದಾರೆ. ಗಿಲ್ಲಿಗೆ ಇಷ್ಟು ಜನಪ್ರಿಯತೆ ಸಿಗುತ್ತದೆ ಎಂದು ಅಂದೇ ಜಗ್ಗೇಶ್ ಊಹಿಸಿದ್ದರು. ಆ ಮಾತು ನಿಜವಾಗಿದೆ. ಈ ವಿಷಯದಲ್ಲಿ ಜಗ್ಗೇಶ್​​ಗೂ ಖುಷಿಯಾಗಿದೆ. ಜಗ್ಗೇಶ್ ಒಬ್ಬರನ್ನು ಎಷ್ಟು ಆಳವಾಗಿ ಅಧ್ಯಯನ ಮಾಡುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

4 / 5
ಜಗ್ಗೇಶ್ ಅಂದು ಹೇಳಿದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗಿಲ್ಲಿ, ‘ಜಗ್ಗೇಶ್ ಅವರ ಅನುಭವ ಎಷ್ಟು ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದಿದ್ದರು. ಯಾರು ಯಶಸ್ಸು ಕಾಣುತ್ತಾರೆ, ಕಾಣುವುದಿಲ್ಲ ಎಂಬುದನ್ನು ಕಣ್ಣಿನಿಂದ ಅಳೆದೇ ಹೇಳಿದ್ದಾರೆ.

ಜಗ್ಗೇಶ್ ಅಂದು ಹೇಳಿದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗಿಲ್ಲಿ, ‘ಜಗ್ಗೇಶ್ ಅವರ ಅನುಭವ ಎಷ್ಟು ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದಿದ್ದರು. ಯಾರು ಯಶಸ್ಸು ಕಾಣುತ್ತಾರೆ, ಕಾಣುವುದಿಲ್ಲ ಎಂಬುದನ್ನು ಕಣ್ಣಿನಿಂದ ಅಳೆದೇ ಹೇಳಿದ್ದಾರೆ.

5 / 5
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us