AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಇನ್ನು ‘ಲಾಕ್​ ಅಪ್’ನಲ್ಲಿರುವ 16 ಖೈದಿಗಳ ಉಸ್ತುವಾರಿ ಕಂಗನಾ ಹೆಗಲಿಗೆ; ಏನಿದು ಹೊಸ ಸಮಾಚಾರ?

ಬಾಲಿವುಡ್ ನಟಿ ಕಂಗನಾ ರಣಾವತ್ ‘ಲಾಕ್ ಅಪ್’ ಶೋ ಮೂಲಕ ನಿರೂಪಕಿಯಾಗುತ್ತಿದ್ದಾರೆ. ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್​ನಲ್ಲಿ ಪ್ರಸಾರವಾಗಲಿರುವ ಇದನ್ನು ಏಕ್ತಾ ಕಪೂರ್ ನಿರ್ಮಿಸುತ್ತಿದ್ದಾರೆ. 16 ಸ್ಪರ್ಧಿಗಳು ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರು ವಿವಿಧ ಟಾಸ್ಕ್​ಗಳಲ್ಲಿ ಭಾಗಿಯಾಗುತ್ತಾರೆ. ಇದನ್ನು ನಡೆಸಿಕೊಡುವುದು ಹಾಗೂ ನಿರ್ಣಯ ಮಾಡುವ ಕೆಲಸವನ್ನು ಕಂಗನಾ ಮಾಡಲಿದ್ದಾರೆ.

TV9 Web
| Updated By: shivaprasad.hs|

Updated on: Feb 04, 2022 | 1:03 PM

Share
ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ನಿರೂಪಕಿಯಾಗಿದ್ದಾರೆ. ಹೌದು. ಅವರು ‘ಲಾಕ್ ಅಪ್’ ಎಂಬ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ಣಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ನಿರೂಪಕಿಯಾಗಿದ್ದಾರೆ. ಹೌದು. ಅವರು ‘ಲಾಕ್ ಅಪ್’ ಎಂಬ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ಣಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

1 / 7
ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಅನ್ನು ನಿರ್ಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಈ ಶೋ ಫೆಬ್ರವರಿ ಅಂತ್ಯದಿಂದ ಪ್ರಸಾರವಾಗಲಿದೆ.

ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಅನ್ನು ನಿರ್ಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಈ ಶೋ ಫೆಬ್ರವರಿ ಅಂತ್ಯದಿಂದ ಪ್ರಸಾರವಾಗಲಿದೆ.

2 / 7
ಗುರುವಾರದಂದು ಮುಂಬೈನಲ್ಲಿ ‘ಲಾಕ್ ಅಪ್’ ಶೋವನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಈ ಶೋ ವಿವಾದಗಳಿಂದ ಕೂಡಿರಲಿದೆ ಎಂದು ಮೊದಲೇ ಘೋಷಿಸಿದ್ದಾರೆ ಏಕ್ತಾ ಕಪೂರ್.

ಗುರುವಾರದಂದು ಮುಂಬೈನಲ್ಲಿ ‘ಲಾಕ್ ಅಪ್’ ಶೋವನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಈ ಶೋ ವಿವಾದಗಳಿಂದ ಕೂಡಿರಲಿದೆ ಎಂದು ಮೊದಲೇ ಘೋಷಿಸಿದ್ದಾರೆ ಏಕ್ತಾ ಕಪೂರ್.

3 / 7
‘ಲಾಕ್ ಅಪ್’ನಲ್ಲಿ 16 ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ಟಾಸ್ಕ್ ನೀಡಲಾಗುತ್ತದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ.

‘ಲಾಕ್ ಅಪ್’ನಲ್ಲಿ 16 ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ಟಾಸ್ಕ್ ನೀಡಲಾಗುತ್ತದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ.

4 / 7
ಕಂಗನಾ ಇದರಲ್ಲಿ ಪೊಲೀಸ್ ಅಧಿಕಾರಿ ರೂಪದಲ್ಲೂ ಇರಲಿದ್ದಾರೆ. ಅರ್ಥಾತ್ ಅವರು ಸ್ಪರ್ಧಿಗಳು ತಪ್ಪು ಮಾಡಿದಾಗ ಎಫ್​ಐಆರ್ ನೀಡಲಿದ್ದಾರೆ.

ಕಂಗನಾ ಇದರಲ್ಲಿ ಪೊಲೀಸ್ ಅಧಿಕಾರಿ ರೂಪದಲ್ಲೂ ಇರಲಿದ್ದಾರೆ. ಅರ್ಥಾತ್ ಅವರು ಸ್ಪರ್ಧಿಗಳು ತಪ್ಪು ಮಾಡಿದಾಗ ಎಫ್​ಐಆರ್ ನೀಡಲಿದ್ದಾರೆ.

5 / 7
‘ಲಾಕ್ ಅಪ್’ ಶೋನಲ್ಲಿ ಸ್ಪರ್ಧಿಗಳಿಗೆ ಮುಖ್ಯವಾಗಿ ಇರಬೇಕಾದ್ದೇ ಪ್ರಾಮಾಣಿಕತೆ. ಸೋಲು ಗೆಲುವಿಗಿಂತ ಪ್ರಾಮಾಣಿಕತೆ ಮುಖ್ಯ. ಅದೇ ಆಧಾರದಲ್ಲಿ ವಿಜೇತರು ನಿರ್ಧಾರವಾಗಲಿದ್ದಾರೆ ಎಂದಿದ್ದಾರೆ ಕಂಗನಾ.

‘ಲಾಕ್ ಅಪ್’ ಶೋನಲ್ಲಿ ಸ್ಪರ್ಧಿಗಳಿಗೆ ಮುಖ್ಯವಾಗಿ ಇರಬೇಕಾದ್ದೇ ಪ್ರಾಮಾಣಿಕತೆ. ಸೋಲು ಗೆಲುವಿಗಿಂತ ಪ್ರಾಮಾಣಿಕತೆ ಮುಖ್ಯ. ಅದೇ ಆಧಾರದಲ್ಲಿ ವಿಜೇತರು ನಿರ್ಧಾರವಾಗಲಿದ್ದಾರೆ ಎಂದಿದ್ದಾರೆ ಕಂಗನಾ.

6 / 7
ಇದುವರೆಗೆ ಕಂಗನಾ ಮೇಲೆ ಎಫ್​ಐಆರ್ ದಾಖಲಾಗುತ್ತಿತ್ತು. ಇನ್ನು ಅವರೇ ನೀಡಲಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ಏಖ್ತಾ ಕಪೂರ್. ‘ಲಾಕ್ ಅಪ್’ ಶೋ ಕುರಿತು ಹಾಗೂ ಸ್ಪರ್ಧಿಗಳ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಇದುವರೆಗೆ ಕಂಗನಾ ಮೇಲೆ ಎಫ್​ಐಆರ್ ದಾಖಲಾಗುತ್ತಿತ್ತು. ಇನ್ನು ಅವರೇ ನೀಡಲಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ಏಖ್ತಾ ಕಪೂರ್. ‘ಲಾಕ್ ಅಪ್’ ಶೋ ಕುರಿತು ಹಾಗೂ ಸ್ಪರ್ಧಿಗಳ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

7 / 7
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ