AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನಿಂದ ಬಳಲುವ ಪ್ರಯಾಣಿಕರ ಬಾಯಾರಿಕೆ ನೀಗಿಸಿ, ಮನಸ್ಸಿಗೆ ಮುದ ನೀಡುವ ಬಿಎಂಟಿಸಿ ಗ್ರೀನ್​ ಬಸ್

ಬೆಂಗಳೂರಿನಲ್ಲಿ ಉರಿ ಬಿಸಿಲು ಜನರ ತಲೆ ಸುಡುತ್ತಿದ್ದು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಇನ್ನೂ ಈ ರಣ ಬಿಸಿಲಿನಲ್ಲಿ ಬಸ್​ನಲ್ಲಿ ಪ್ರಯಾಣಿಸುವವರ ಸ್ಥಿತಿಯತ್ತು ಸ್ವಲ್ಪ ಕಷ್ಟವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದರೆ ನಿಮ್ಮ ಬಾಯಾರಿಕೆ ನೀಗುತ್ತದೆ. ಮತ್ತು ಬಸ್​ನಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ನವೀನ್ ಕುಮಾರ್ ಟಿ
| Edited By: |

Updated on: Apr 13, 2024 | 8:44 AM

Share
Karnataka News in Kannada: Green BMTC Bus in Benagluru Rural Devanahalli

ಬೆಂಗಳೂರಿನಲ್ಲಿ ಉರಿ ಬಿಸಿಲು ಜನರ ತಲೆ ಸುಡುತ್ತಿದ್ದು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಇನ್ನೂ ಈ ರಣ ಬಿಸಿಲಿನಲ್ಲಿ ಬಸ್​ನಲ್ಲಿ ಪ್ರಯಾಣಿಸುವವರ ಸ್ಥಿತಿಯತ್ತು ಸ್ವಲ್ಪ ಕಷ್ಟವೆ. ಆದರೆ ಈ ಬಸ್​ನಲ್ಲಿ ಹತ್ತಿದರೆ ನಿಮ್ಮ ಬಾಯಾರಿಕೆ ನೀಗುತ್ತದೆ. ಮತ್ತು ಬಸ್​ನಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

1 / 6
Karnataka News in Kannada: Green BMTC Bus in Benagluru Rural Devanahalli

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್​ನಲ್ಲಿ ಚಾಲಕ ಲೋಕೇಶ್ Potನಲ್ಲಿ ಹತ್ತಾರು ಗಿಡಗಳನ್ನು ಬೆಳಸಿದ್ದಾರೆ. ನಿತ್ಯ ಗಿಡಗಳಿಗೆ ನೀರನ್ನು ಸ್ಪ್ರೇ ಮಾಡುವ ಮೂಲಕ ಪೋಷಣೆ ಮಾಡುತ್ತಿದ್ದಾರೆ.

2 / 6
Karnataka News in Kannada: Green BMTC Bus in Benagluru Rural Devanahalli

ಬಸ್​ನ ಗ್ಲಾಸ್ ಮುಂಭಾಗದಲ್ಲಿ ಗಿಡಗಳ ಜೊತೆಗೆ ಬಳ್ಳಿಯನ್ನು ಸಹ ಬೆಳೆಸಿದ್ದು ಬಸ್ ಹತ್ತುವ ಪ್ರಯಾಣಿಕರು ಗಿಡ ಹಾಗೂ ಬಳ್ಳಿಯನ್ನ ಕಂಡು ಪುಲ್ ಖುಷ್ ಆಗುತ್ತಿದ್ದಾರೆ.

3 / 6
Karnataka News in Kannada: Green BMTC Bus in Benagluru Rural Devanahalli

ಕಳೆದ ಎರಡು ವರ್ಷಗಳಿಂದ ಬಸ್ಸಿನಲ್ಲಿ ಈ ರೀತಿ ಚಾಲಕ ಲೋಕೇಶ್ ಗಿಡಗಳನ್ನು ಬೆಳೆಸಿದ್ದು ನಿಲ್ದಾಣದಲ್ಲಿ ಬಸ್​ನಿಂತ ಸಮಯದಲ್ಲಿ ಗಿಡಗಳ ಪೋಷಣೆ ಮಾಡುತ್ತಿದ್ದಾರೆ. ಇದೀಗ ರಣ ಬಿಸಿಲಿನಲ್ಲೂ ಗಿಡಗಳು ಬಾಡದಂತೆ ಎಚ್ಚರಿಕೆ ವಹಿಸಿ ಪೋಷಣೆ ಮಾಡುತ್ತಿದ್ದು ಪ್ರಯಾಣದ ವೇಳೆ ಗಿಡಗಳನ್ನು ಕಂಡು ಪ್ರಯಾಣಿಕರು ಖುಷಿ ಪಡುತ್ತಿದ್ದಾರೆ.

4 / 6
Karnataka News in Kannada: Green BMTC Bus in Benagluru Rural Devanahalli

ಬಸ್​​​ ಹತ್ತುವ ಪ್ರಯಾಣಿಕರು ಬಿಸಿಲಿನಿಂದ ಬಳಲಿ ಬಯಾರಿರುತ್ತಾರೆ. ರಣ ಬಿಸಿಲಿಗೆ ತಂಪಾದ ನೀರನ್ನು ಬಯಸುತ್ತಿರುತ್ತಾರೆ. ಹೀಗಾಗಿ ಚಾಲಕ ಹಾಗೂ ನಿರ್ವಾಹಕ 40 ಲೀಟರ್​ನ ಕುಡಿಯುವ ನೀರಿನ ಕ್ಯಾನ್ ಅನ್ನು ಬಸ್​ನಲ್ಲಿಟ್ಟಿದ್ದಾರೆ. ಈಮೂಲಕ ಬಿಸಿಲಿನಲ್ಲಿ ಬರುವ ಪ್ರಯಾಣಿಕರಿಗೆ ನೀರು ನೀಡಿ ದಾಹ ನೀಗಿಸುತ್ತಿದ್ದಾರೆ.

5 / 6
Karnataka News in Kannada: Green BMTC Bus in Benagluru Rural Devanahalli

ಒಟ್ಟಾರೆಯಾಗಿ ಬಿಎಂಟಿಸಿ ಬಸ್​ನಲ್ಲಿ ಗಿಡ-ಬಳ್ಳಿಯನ್ನು ಬೆಳೆಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಚಾಲಕ-ನಿರ್ವಾಹಕ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

6 / 6
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು