AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನಿಂದ ಬಳಲುವ ಪ್ರಯಾಣಿಕರ ಬಾಯಾರಿಕೆ ನೀಗಿಸಿ, ಮನಸ್ಸಿಗೆ ಮುದ ನೀಡುವ ಬಿಎಂಟಿಸಿ ಗ್ರೀನ್​ ಬಸ್

ಬೆಂಗಳೂರಿನಲ್ಲಿ ಉರಿ ಬಿಸಿಲು ಜನರ ತಲೆ ಸುಡುತ್ತಿದ್ದು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಇನ್ನೂ ಈ ರಣ ಬಿಸಿಲಿನಲ್ಲಿ ಬಸ್​ನಲ್ಲಿ ಪ್ರಯಾಣಿಸುವವರ ಸ್ಥಿತಿಯತ್ತು ಸ್ವಲ್ಪ ಕಷ್ಟವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದರೆ ನಿಮ್ಮ ಬಾಯಾರಿಕೆ ನೀಗುತ್ತದೆ. ಮತ್ತು ಬಸ್​ನಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ನವೀನ್ ಕುಮಾರ್ ಟಿ
| Edited By: |

Updated on: Apr 13, 2024 | 8:44 AM

Share
Karnataka News in Kannada: Green BMTC Bus in Benagluru Rural Devanahalli

ಬೆಂಗಳೂರಿನಲ್ಲಿ ಉರಿ ಬಿಸಿಲು ಜನರ ತಲೆ ಸುಡುತ್ತಿದ್ದು ಹೊರಗಡೆ ಓಡಾಡಲು ಹೆದರುತ್ತಿದ್ದಾರೆ. ಇನ್ನೂ ಈ ರಣ ಬಿಸಿಲಿನಲ್ಲಿ ಬಸ್​ನಲ್ಲಿ ಪ್ರಯಾಣಿಸುವವರ ಸ್ಥಿತಿಯತ್ತು ಸ್ವಲ್ಪ ಕಷ್ಟವೆ. ಆದರೆ ಈ ಬಸ್​ನಲ್ಲಿ ಹತ್ತಿದರೆ ನಿಮ್ಮ ಬಾಯಾರಿಕೆ ನೀಗುತ್ತದೆ. ಮತ್ತು ಬಸ್​ನಲ್ಲಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

1 / 6
Karnataka News in Kannada: Green BMTC Bus in Benagluru Rural Devanahalli

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿಎಂಟಿಸಿ ಬಸ್ ಡಿಪೋದಿಂದ ಸೂಲಿಬೆಲೆ ಮೂಲಕ ಹೊಸಕೋಟೆಗೆ ತೆರಳುವ ಬಿಎಂಟಿಸಿ ಬಸ್​ನಲ್ಲಿ ಚಾಲಕ ಲೋಕೇಶ್ Potನಲ್ಲಿ ಹತ್ತಾರು ಗಿಡಗಳನ್ನು ಬೆಳಸಿದ್ದಾರೆ. ನಿತ್ಯ ಗಿಡಗಳಿಗೆ ನೀರನ್ನು ಸ್ಪ್ರೇ ಮಾಡುವ ಮೂಲಕ ಪೋಷಣೆ ಮಾಡುತ್ತಿದ್ದಾರೆ.

2 / 6
Karnataka News in Kannada: Green BMTC Bus in Benagluru Rural Devanahalli

ಬಸ್​ನ ಗ್ಲಾಸ್ ಮುಂಭಾಗದಲ್ಲಿ ಗಿಡಗಳ ಜೊತೆಗೆ ಬಳ್ಳಿಯನ್ನು ಸಹ ಬೆಳೆಸಿದ್ದು ಬಸ್ ಹತ್ತುವ ಪ್ರಯಾಣಿಕರು ಗಿಡ ಹಾಗೂ ಬಳ್ಳಿಯನ್ನ ಕಂಡು ಪುಲ್ ಖುಷ್ ಆಗುತ್ತಿದ್ದಾರೆ.

3 / 6
Karnataka News in Kannada: Green BMTC Bus in Benagluru Rural Devanahalli

ಕಳೆದ ಎರಡು ವರ್ಷಗಳಿಂದ ಬಸ್ಸಿನಲ್ಲಿ ಈ ರೀತಿ ಚಾಲಕ ಲೋಕೇಶ್ ಗಿಡಗಳನ್ನು ಬೆಳೆಸಿದ್ದು ನಿಲ್ದಾಣದಲ್ಲಿ ಬಸ್​ನಿಂತ ಸಮಯದಲ್ಲಿ ಗಿಡಗಳ ಪೋಷಣೆ ಮಾಡುತ್ತಿದ್ದಾರೆ. ಇದೀಗ ರಣ ಬಿಸಿಲಿನಲ್ಲೂ ಗಿಡಗಳು ಬಾಡದಂತೆ ಎಚ್ಚರಿಕೆ ವಹಿಸಿ ಪೋಷಣೆ ಮಾಡುತ್ತಿದ್ದು ಪ್ರಯಾಣದ ವೇಳೆ ಗಿಡಗಳನ್ನು ಕಂಡು ಪ್ರಯಾಣಿಕರು ಖುಷಿ ಪಡುತ್ತಿದ್ದಾರೆ.

4 / 6
Karnataka News in Kannada: Green BMTC Bus in Benagluru Rural Devanahalli

ಬಸ್​​​ ಹತ್ತುವ ಪ್ರಯಾಣಿಕರು ಬಿಸಿಲಿನಿಂದ ಬಳಲಿ ಬಯಾರಿರುತ್ತಾರೆ. ರಣ ಬಿಸಿಲಿಗೆ ತಂಪಾದ ನೀರನ್ನು ಬಯಸುತ್ತಿರುತ್ತಾರೆ. ಹೀಗಾಗಿ ಚಾಲಕ ಹಾಗೂ ನಿರ್ವಾಹಕ 40 ಲೀಟರ್​ನ ಕುಡಿಯುವ ನೀರಿನ ಕ್ಯಾನ್ ಅನ್ನು ಬಸ್​ನಲ್ಲಿಟ್ಟಿದ್ದಾರೆ. ಈಮೂಲಕ ಬಿಸಿಲಿನಲ್ಲಿ ಬರುವ ಪ್ರಯಾಣಿಕರಿಗೆ ನೀರು ನೀಡಿ ದಾಹ ನೀಗಿಸುತ್ತಿದ್ದಾರೆ.

5 / 6
Karnataka News in Kannada: Green BMTC Bus in Benagluru Rural Devanahalli

ಒಟ್ಟಾರೆಯಾಗಿ ಬಿಎಂಟಿಸಿ ಬಸ್​ನಲ್ಲಿ ಗಿಡ-ಬಳ್ಳಿಯನ್ನು ಬೆಳೆಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಚಾಲಕ-ನಿರ್ವಾಹಕ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

6 / 6
Follow Us
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!