AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Handloom Day 2024 : ನಾರಿಯರ ಮನಸ್ಸು ಗೆದ್ದಿರುವ ಕೈಮಗ್ಗದ ಸೀರೆಗಳಿವು

ಕೈಮಗ್ಗ ಉದ್ಯಮವು ದೇಶದ ಪರಂಪರೆಯಾಗಿದ್ದು ಇದನ್ನು ಉಳಿಸಲು ಮತ್ತು ಕೈಮಗ್ಗದ ಪ್ರಾಮುಖ್ಯತೆಯನ್ನು ತಿಳಿಸಲು ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯ 100 ನೇ ವಾರ್ಷಿಕೋತ್ಸವವನ್ನು ಭಾರತ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲು ಮುಂದಾಯಿತು. ಈಗಾಗಲೇ ಮಾರುಕಟ್ಟೆಯಲ್ಲಿ ಕೈಮಗ್ಗದಿಂದ ತಯಾರಾದ ಸೀರೆಗಳು ಸೇರಿದಂತೆ ವಿವಿಧ ಉಡುಗೆಗಳು ಇವೆ. ಭಾರತೀಯ ಶ್ರೀಮಂತ ಪರಂಪರೆಯಾದ ಕೈಮಗ್ಗದಿಂದಲೇ ನಾರಿಯರ ಮನಸ್ಸು ಗೆದ್ದ ಸೀರೆಗಳ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.

TV9 Web
| Edited By: |

Updated on:Aug 06, 2024 | 5:49 PM

Share
ಪೈಠಣೀ ಸೀರೆ  : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ‘ಪೈಠಣ’ ಊರಿನಲ್ಲಿ ತಯಾರಾಗುವ ಒಂದು ವಿಶಿಷ್ಠವಾದ ಸೀರೆಯಿದು. ‘ಪೈಠಣಿ’ ಕೈಮಗ್ಗ ಸೀರೆಗಳ ಬಹುದೊಡ್ಡ ಕೇಂದ್ರವಾಗಿದೆ   ಈ ಪೈಠಣಿ ಸೀರೆಗಳಲ್ಲಿ ಓರೆ ಮತ್ತು ಚೌಕುಳಿ ವಿನ್ಯಾಸ ಹಾಗೂ 40 ಅಂಗುಲಗಳ ಸೆರಗಿನ ಮೇಲೆ ಬಿಡಿಸಿದ ನವಿಲಿನ ಚಿತ್ರವಿದ್ದು, ಆದರೆ ಕಾಲ ಬದಲಾದಂತೆ ಇದರ ಬಣ್ಣ, ವಿನ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

ಪೈಠಣೀ ಸೀರೆ : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ‘ಪೈಠಣ’ ಊರಿನಲ್ಲಿ ತಯಾರಾಗುವ ಒಂದು ವಿಶಿಷ್ಠವಾದ ಸೀರೆಯಿದು. ‘ಪೈಠಣಿ’ ಕೈಮಗ್ಗ ಸೀರೆಗಳ ಬಹುದೊಡ್ಡ ಕೇಂದ್ರವಾಗಿದೆ ಈ ಪೈಠಣಿ ಸೀರೆಗಳಲ್ಲಿ ಓರೆ ಮತ್ತು ಚೌಕುಳಿ ವಿನ್ಯಾಸ ಹಾಗೂ 40 ಅಂಗುಲಗಳ ಸೆರಗಿನ ಮೇಲೆ ಬಿಡಿಸಿದ ನವಿಲಿನ ಚಿತ್ರವಿದ್ದು, ಆದರೆ ಕಾಲ ಬದಲಾದಂತೆ ಇದರ ಬಣ್ಣ, ವಿನ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

1 / 5
ಕಾಂಜೀವರಂ ಸೀರೆ : ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಾಗುವ ಕೈಮಗ್ಗದ ರೇಷ್ಮೆ ಸೀರೆಗಳು ಶುದ್ಧ ರೇಷ್ಮೆಯ ಎಳೆಗಳಿಂದ ಸಿದ್ಧಗೊಳ್ಳುವುದೇ ವಿಶೇಷ. ಕಾಂಚೀಪುರ ಹಳ್ಳಿಯಲ್ಲಿಯೇ ಹುಟ್ಟಿಕೊಂಡ ಈ ಸೀರೆಯನ್ನು  ನೇಯುವುದನ್ನೆ ಇಲ್ಲಿನವರು ಕಸುಬಾಗಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ದೇವಸ್ಥಾನ ವಿನ್ಯಾಸ, ದೈವಿಕ ಪ್ರಾಣಿ 'ಯಾಳಿ'ಯ ಚಿತ್ರ ಹಾಗೂ ನವಿಲಿನ ವಿನ್ಯಾಸಗಳು  ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಾಂಜೀವರಂ ಸೀರೆ : ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಾಗುವ ಕೈಮಗ್ಗದ ರೇಷ್ಮೆ ಸೀರೆಗಳು ಶುದ್ಧ ರೇಷ್ಮೆಯ ಎಳೆಗಳಿಂದ ಸಿದ್ಧಗೊಳ್ಳುವುದೇ ವಿಶೇಷ. ಕಾಂಚೀಪುರ ಹಳ್ಳಿಯಲ್ಲಿಯೇ ಹುಟ್ಟಿಕೊಂಡ ಈ ಸೀರೆಯನ್ನು ನೇಯುವುದನ್ನೆ ಇಲ್ಲಿನವರು ಕಸುಬಾಗಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ದೇವಸ್ಥಾನ ವಿನ್ಯಾಸ, ದೈವಿಕ ಪ್ರಾಣಿ 'ಯಾಳಿ'ಯ ಚಿತ್ರ ಹಾಗೂ ನವಿಲಿನ ವಿನ್ಯಾಸಗಳು ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

2 / 5
ಸೂತಿ ಸೀರೆ : ಕೈಮಗ್ಗದಿಂದ ಮಾಡಲ್ಪಡುವಂತಹ ಕಸೂತಿ ಸೀರೆಯು ಆಕರ್ಷಕವಾಗಿದ್ದು, ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಅದರೊಂದಿಗೆ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಹತ್ತಿ ಹಾಗೂ ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಸೂತಿ ಸೀರೆ : ಕೈಮಗ್ಗದಿಂದ ಮಾಡಲ್ಪಡುವಂತಹ ಕಸೂತಿ ಸೀರೆಯು ಆಕರ್ಷಕವಾಗಿದ್ದು, ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಅದರೊಂದಿಗೆ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಹತ್ತಿ ಹಾಗೂ ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

3 / 5
ಷಾಪುರಿ ಸೀರೆ : ನೂರು ವರ್ಷಗಳ ಇತಿಹಾಸವಿರುವ ಸೀರೆಗಳ ಸಾಲಿನಲ್ಲಿ ಷಾಪುರಿ ಸೀರೆ ಕೂಡ ಸೇರಿದೆ. ಈ ಸೀರೆಯಲ್ಲಿ ಪಾಲಿಸ್ಟರ್‌ ದಾರವೇ ಮೂಲ ವಸ್ತುವಾಗಿದ್ದು, ಅಲ್ಲಲ್ಲಿ ಜರಿಯನ್ನು ಹಾಗೂ ನೂಲನ್ನೂ ಬಳಸಲಾಗುತ್ತದೆ. ಕೈ ಮಗ್ಗದಿಂದ ತಯಾರಿಸಲಾಗುವ ಈ ಸೀರೆಯಲ್ಲಿ ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ ಎಲ್ಲ ಬಗೆಯ ಅಂಚುಗಳು ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ.  ಆದರೆ ಈ ಷಾಪುರಿ ಸೀರೆಗೆ ಇಂತಹದ್ದೇ ವಿನ್ಯಾಸವಿಲ್ಲ.

ಷಾಪುರಿ ಸೀರೆ : ನೂರು ವರ್ಷಗಳ ಇತಿಹಾಸವಿರುವ ಸೀರೆಗಳ ಸಾಲಿನಲ್ಲಿ ಷಾಪುರಿ ಸೀರೆ ಕೂಡ ಸೇರಿದೆ. ಈ ಸೀರೆಯಲ್ಲಿ ಪಾಲಿಸ್ಟರ್‌ ದಾರವೇ ಮೂಲ ವಸ್ತುವಾಗಿದ್ದು, ಅಲ್ಲಲ್ಲಿ ಜರಿಯನ್ನು ಹಾಗೂ ನೂಲನ್ನೂ ಬಳಸಲಾಗುತ್ತದೆ. ಕೈ ಮಗ್ಗದಿಂದ ತಯಾರಿಸಲಾಗುವ ಈ ಸೀರೆಯಲ್ಲಿ ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ ಎಲ್ಲ ಬಗೆಯ ಅಂಚುಗಳು ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಈ ಷಾಪುರಿ ಸೀರೆಗೆ ಇಂತಹದ್ದೇ ವಿನ್ಯಾಸವಿಲ್ಲ.

4 / 5
ಇಳಕಲ್‌ ಸೀರೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕೈಮಗ್ಗಗಳಿಂದ ತಯಾರಾಗುವ ಕಾಟನ್ ಸೀರೆಯೇ  ಈ ಇಳಕಲ್ ಸೀರೆ. ಎಂಟನೆಯ ಶತಮಾನದಿಂದ ಆರಂಭವಾದ ಇಳಕಲ್‌ ಸೀರೆಯು ಇಂದಿಗೂ ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಈ ಸೀರೆಯ ಮೈ ಹತ್ತಿಯ ಹೊದಿಕೆಯಿಂದ ಮಾಡಲಾಗಿದ್ದು, ಸೀರೆಯ ಅಂಚಿನ ಅಂದವನ್ನು ರೇಶಿಮೆಯ ನೂಲು ಹೆಚ್ಚಿಸುತ್ತದೆ.

ಇಳಕಲ್‌ ಸೀರೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕೈಮಗ್ಗಗಳಿಂದ ತಯಾರಾಗುವ ಕಾಟನ್ ಸೀರೆಯೇ ಈ ಇಳಕಲ್ ಸೀರೆ. ಎಂಟನೆಯ ಶತಮಾನದಿಂದ ಆರಂಭವಾದ ಇಳಕಲ್‌ ಸೀರೆಯು ಇಂದಿಗೂ ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಈ ಸೀರೆಯ ಮೈ ಹತ್ತಿಯ ಹೊದಿಕೆಯಿಂದ ಮಾಡಲಾಗಿದ್ದು, ಸೀರೆಯ ಅಂಚಿನ ಅಂದವನ್ನು ರೇಶಿಮೆಯ ನೂಲು ಹೆಚ್ಚಿಸುತ್ತದೆ.

5 / 5

Published On - 5:48 pm, Tue, 6 August 24

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!