AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Handloom Day 2024 : ನಾರಿಯರ ಮನಸ್ಸು ಗೆದ್ದಿರುವ ಕೈಮಗ್ಗದ ಸೀರೆಗಳಿವು

ಕೈಮಗ್ಗ ಉದ್ಯಮವು ದೇಶದ ಪರಂಪರೆಯಾಗಿದ್ದು ಇದನ್ನು ಉಳಿಸಲು ಮತ್ತು ಕೈಮಗ್ಗದ ಪ್ರಾಮುಖ್ಯತೆಯನ್ನು ತಿಳಿಸಲು ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯ 100 ನೇ ವಾರ್ಷಿಕೋತ್ಸವವನ್ನು ಭಾರತ ಸರ್ಕಾರವು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲು ಮುಂದಾಯಿತು. ಈಗಾಗಲೇ ಮಾರುಕಟ್ಟೆಯಲ್ಲಿ ಕೈಮಗ್ಗದಿಂದ ತಯಾರಾದ ಸೀರೆಗಳು ಸೇರಿದಂತೆ ವಿವಿಧ ಉಡುಗೆಗಳು ಇವೆ. ಭಾರತೀಯ ಶ್ರೀಮಂತ ಪರಂಪರೆಯಾದ ಕೈಮಗ್ಗದಿಂದಲೇ ನಾರಿಯರ ಮನಸ್ಸು ಗೆದ್ದ ಸೀರೆಗಳ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 06, 2024 | 5:49 PM

ಪೈಠಣೀ ಸೀರೆ  : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ‘ಪೈಠಣ’ ಊರಿನಲ್ಲಿ ತಯಾರಾಗುವ ಒಂದು ವಿಶಿಷ್ಠವಾದ ಸೀರೆಯಿದು. ‘ಪೈಠಣಿ’ ಕೈಮಗ್ಗ ಸೀರೆಗಳ ಬಹುದೊಡ್ಡ ಕೇಂದ್ರವಾಗಿದೆ   ಈ ಪೈಠಣಿ ಸೀರೆಗಳಲ್ಲಿ ಓರೆ ಮತ್ತು ಚೌಕುಳಿ ವಿನ್ಯಾಸ ಹಾಗೂ 40 ಅಂಗುಲಗಳ ಸೆರಗಿನ ಮೇಲೆ ಬಿಡಿಸಿದ ನವಿಲಿನ ಚಿತ್ರವಿದ್ದು, ಆದರೆ ಕಾಲ ಬದಲಾದಂತೆ ಇದರ ಬಣ್ಣ, ವಿನ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

ಪೈಠಣೀ ಸೀರೆ : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ‘ಪೈಠಣ’ ಊರಿನಲ್ಲಿ ತಯಾರಾಗುವ ಒಂದು ವಿಶಿಷ್ಠವಾದ ಸೀರೆಯಿದು. ‘ಪೈಠಣಿ’ ಕೈಮಗ್ಗ ಸೀರೆಗಳ ಬಹುದೊಡ್ಡ ಕೇಂದ್ರವಾಗಿದೆ ಈ ಪೈಠಣಿ ಸೀರೆಗಳಲ್ಲಿ ಓರೆ ಮತ್ತು ಚೌಕುಳಿ ವಿನ್ಯಾಸ ಹಾಗೂ 40 ಅಂಗುಲಗಳ ಸೆರಗಿನ ಮೇಲೆ ಬಿಡಿಸಿದ ನವಿಲಿನ ಚಿತ್ರವಿದ್ದು, ಆದರೆ ಕಾಲ ಬದಲಾದಂತೆ ಇದರ ಬಣ್ಣ, ವಿನ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

1 / 5
ಕಾಂಜೀವರಂ ಸೀರೆ : ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಾಗುವ ಕೈಮಗ್ಗದ ರೇಷ್ಮೆ ಸೀರೆಗಳು ಶುದ್ಧ ರೇಷ್ಮೆಯ ಎಳೆಗಳಿಂದ ಸಿದ್ಧಗೊಳ್ಳುವುದೇ ವಿಶೇಷ. ಕಾಂಚೀಪುರ ಹಳ್ಳಿಯಲ್ಲಿಯೇ ಹುಟ್ಟಿಕೊಂಡ ಈ ಸೀರೆಯನ್ನು  ನೇಯುವುದನ್ನೆ ಇಲ್ಲಿನವರು ಕಸುಬಾಗಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ದೇವಸ್ಥಾನ ವಿನ್ಯಾಸ, ದೈವಿಕ ಪ್ರಾಣಿ 'ಯಾಳಿ'ಯ ಚಿತ್ರ ಹಾಗೂ ನವಿಲಿನ ವಿನ್ಯಾಸಗಳು  ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಾಂಜೀವರಂ ಸೀರೆ : ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಾಗುವ ಕೈಮಗ್ಗದ ರೇಷ್ಮೆ ಸೀರೆಗಳು ಶುದ್ಧ ರೇಷ್ಮೆಯ ಎಳೆಗಳಿಂದ ಸಿದ್ಧಗೊಳ್ಳುವುದೇ ವಿಶೇಷ. ಕಾಂಚೀಪುರ ಹಳ್ಳಿಯಲ್ಲಿಯೇ ಹುಟ್ಟಿಕೊಂಡ ಈ ಸೀರೆಯನ್ನು ನೇಯುವುದನ್ನೆ ಇಲ್ಲಿನವರು ಕಸುಬಾಗಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ದೇವಸ್ಥಾನ ವಿನ್ಯಾಸ, ದೈವಿಕ ಪ್ರಾಣಿ 'ಯಾಳಿ'ಯ ಚಿತ್ರ ಹಾಗೂ ನವಿಲಿನ ವಿನ್ಯಾಸಗಳು ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

2 / 5
ಸೂತಿ ಸೀರೆ : ಕೈಮಗ್ಗದಿಂದ ಮಾಡಲ್ಪಡುವಂತಹ ಕಸೂತಿ ಸೀರೆಯು ಆಕರ್ಷಕವಾಗಿದ್ದು, ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಅದರೊಂದಿಗೆ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಹತ್ತಿ ಹಾಗೂ ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಸೂತಿ ಸೀರೆ : ಕೈಮಗ್ಗದಿಂದ ಮಾಡಲ್ಪಡುವಂತಹ ಕಸೂತಿ ಸೀರೆಯು ಆಕರ್ಷಕವಾಗಿದ್ದು, ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಅದರೊಂದಿಗೆ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಹತ್ತಿ ಹಾಗೂ ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

3 / 5
ಷಾಪುರಿ ಸೀರೆ : ನೂರು ವರ್ಷಗಳ ಇತಿಹಾಸವಿರುವ ಸೀರೆಗಳ ಸಾಲಿನಲ್ಲಿ ಷಾಪುರಿ ಸೀರೆ ಕೂಡ ಸೇರಿದೆ. ಈ ಸೀರೆಯಲ್ಲಿ ಪಾಲಿಸ್ಟರ್‌ ದಾರವೇ ಮೂಲ ವಸ್ತುವಾಗಿದ್ದು, ಅಲ್ಲಲ್ಲಿ ಜರಿಯನ್ನು ಹಾಗೂ ನೂಲನ್ನೂ ಬಳಸಲಾಗುತ್ತದೆ. ಕೈ ಮಗ್ಗದಿಂದ ತಯಾರಿಸಲಾಗುವ ಈ ಸೀರೆಯಲ್ಲಿ ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ ಎಲ್ಲ ಬಗೆಯ ಅಂಚುಗಳು ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ.  ಆದರೆ ಈ ಷಾಪುರಿ ಸೀರೆಗೆ ಇಂತಹದ್ದೇ ವಿನ್ಯಾಸವಿಲ್ಲ.

ಷಾಪುರಿ ಸೀರೆ : ನೂರು ವರ್ಷಗಳ ಇತಿಹಾಸವಿರುವ ಸೀರೆಗಳ ಸಾಲಿನಲ್ಲಿ ಷಾಪುರಿ ಸೀರೆ ಕೂಡ ಸೇರಿದೆ. ಈ ಸೀರೆಯಲ್ಲಿ ಪಾಲಿಸ್ಟರ್‌ ದಾರವೇ ಮೂಲ ವಸ್ತುವಾಗಿದ್ದು, ಅಲ್ಲಲ್ಲಿ ಜರಿಯನ್ನು ಹಾಗೂ ನೂಲನ್ನೂ ಬಳಸಲಾಗುತ್ತದೆ. ಕೈ ಮಗ್ಗದಿಂದ ತಯಾರಿಸಲಾಗುವ ಈ ಸೀರೆಯಲ್ಲಿ ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ ಎಲ್ಲ ಬಗೆಯ ಅಂಚುಗಳು ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಈ ಷಾಪುರಿ ಸೀರೆಗೆ ಇಂತಹದ್ದೇ ವಿನ್ಯಾಸವಿಲ್ಲ.

4 / 5
ಇಳಕಲ್‌ ಸೀರೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕೈಮಗ್ಗಗಳಿಂದ ತಯಾರಾಗುವ ಕಾಟನ್ ಸೀರೆಯೇ  ಈ ಇಳಕಲ್ ಸೀರೆ. ಎಂಟನೆಯ ಶತಮಾನದಿಂದ ಆರಂಭವಾದ ಇಳಕಲ್‌ ಸೀರೆಯು ಇಂದಿಗೂ ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಈ ಸೀರೆಯ ಮೈ ಹತ್ತಿಯ ಹೊದಿಕೆಯಿಂದ ಮಾಡಲಾಗಿದ್ದು, ಸೀರೆಯ ಅಂಚಿನ ಅಂದವನ್ನು ರೇಶಿಮೆಯ ನೂಲು ಹೆಚ್ಚಿಸುತ್ತದೆ.

ಇಳಕಲ್‌ ಸೀರೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕೈಮಗ್ಗಗಳಿಂದ ತಯಾರಾಗುವ ಕಾಟನ್ ಸೀರೆಯೇ ಈ ಇಳಕಲ್ ಸೀರೆ. ಎಂಟನೆಯ ಶತಮಾನದಿಂದ ಆರಂಭವಾದ ಇಳಕಲ್‌ ಸೀರೆಯು ಇಂದಿಗೂ ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಈ ಸೀರೆಯ ಮೈ ಹತ್ತಿಯ ಹೊದಿಕೆಯಿಂದ ಮಾಡಲಾಗಿದ್ದು, ಸೀರೆಯ ಅಂಚಿನ ಅಂದವನ್ನು ರೇಶಿಮೆಯ ನೂಲು ಹೆಚ್ಚಿಸುತ್ತದೆ.

5 / 5

Published On - 5:48 pm, Tue, 6 August 24

Follow us
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್