- Kannada News Photo gallery new species of spider detect in the bank of jayamangali river tumkur news
Spider: ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ
ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಇದನ್ನು ಪತ್ತೆ ಮಾಡಿತ್ತು. ಸಂಶೋಧಕರು ಜೇಡಕ್ಕೆ ಸ್ಥಳೀಯ ಹೆಸರೇ ನಾಮಕರಣ ಮಾಡಿದ್ದಾರೆ. "ತೆಂಕಣ ಜಯಮಂಗಲಿ" ಜೇಡ ಎಂಬ ಹೆಸರಿಡಲಾಗಿದೆ.
Updated on:Oct 13, 2024 | 12:54 PM

ತುಮಕೂರಿನ ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಕಪ್ಪು-ಬಿಳಿ ಬಣ್ಣದಲ್ಲಿ ಕಂಡುಬರುವ ಈ ಜೇಡ ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಸಂಶೋಧನೆ ವೇಳೆ ಹೊಸ ಪ್ರಭೇದದ ಜೇಡ ಪತ್ತೆಯಾಗಿತ್ತು.

ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಇದನ್ನು ಪತ್ತೆ ಮಾಡಿತ್ತು.

ಸಂಶೋಧಕರು ಜೇಡಕ್ಕೆ ಸ್ಥಳೀಯ ಹೆಸರೇ ನಾಮಕರಣ ಮಾಡಿದ್ದಾರೆ. "ತೆಂಕಣ ಜಯಮಂಗಲಿ" ಜೇಡ ಎಂಬ ಹೆಸರಿಡಲಾಗಿದೆ. ಪ್ರಭೇದವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದು.

ದೇವರಾಯನ ದುರ್ಗ ಕೇವಲ ಪುಣ್ಯ ಕ್ಷೇತ್ರವಷ್ಟೇ ಅಲ್ಲದೆ ಜೀವವೈವಿಧ್ಯತೆಯ ತಾಣ ಎನ್ನುತ್ತಾರೆ ಸಂಶೋಧಕ ಲೋಹಿತ್. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಲಾನ ಕೇಂದ್ರ ಮತ್ತು ಯೂನಿವರ್ಸಿಟಿ ಆಪ್ ಬ್ರಿಟೀಷ್ ಕೊಲಾಂಬಿಯಾ ಲ್ಯಾಬ್ ನ ಸಹಯೊಗದೊಂದಿಗೆ ಹೊಸ ಪ್ರಭೇದ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ.

ದೇವರಾಯನದುರ್ಗ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆ ಹೊಲ ಜಾಗದಿಂದ ಜೇಡದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಂತರಾಷ್ಟ್ರೀಯ ನಿಯತಕಾಲಿಕೆ Zookeys ಈ ಸಂಶೋಧನ ಬರಹವನ್ನು 11 ಅಕ್ಟೋಬರ್ 2024 ರಂದು ಪ್ರಕಟಿಸಿದೆ.
Published On - 12:49 pm, Sun, 13 October 24



















