AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬಾಹ್ಯಾಕಾಶ ವೈಭವ; 10 ವರ್ಷದಲ್ಲಿ 398 ವಿದೇಶೀ ಸೆಟಿಲೈಟ್​ಗಳ ಉಡಾವಣೆ: ಮೋದಿ ಖುಷಿ

ನವದೆಹಲಿ, ಜನವರಿ 31: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ವಿಶ್ವದ ಹಲವು ರಾಷ್ಟ್ರಗಳ ಸೆಟಿಲೈಟ್​ಗಳನ್ನು ಆಕಾಶಕ್ಕೆ ಕಳುಹಿಸುವ ಕಾರ್ಯದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಹಾಗೂ ಇಸ್ರೋದ ಸೆಟಿಲೈಟ್ ಉಡಾವಣೆ ಸಾಮರ್ಥ್ಯದ ಬಗ್ಗೆ ಅಂಕಿ ಅಂಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 11:39 AM

Share
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಎನಿಸುವಷ್ಟು ಸಾಧನೆ ಮಾಡುತ್ತಿದೆ. ಚಂದ್ರಯಾನ, ಗಗನಯಾನ, ಮಂಗಳಯಾನಗಳನ್ನು ಕೈಗೊಳ್ಳುತ್ತಿದೆ. ಸ್ವಂತವಾಗಿ ರಾಕೆಟ್​ಗಳನ್ನು ತಯಾರಿಸುತ್ತಿದೆ. ಸಾಕಷ್ಟು ನೌಕೆಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುತ್ತಿದೆ. ಬೇರೆ ಬೇರೆ ದೇಶಗಳವರು ತಮ್ಮ ಸೆಟಿಲೈಟ್​ಗಳನ್ನು ಭಾರತದ ಮೂಲಕ ಆಗಸಕ್ಕೆ ಕಳುಹಿಸುತ್ತಿರುವ ಸಂಖ್ಯೆ ವರ್ಷದಿಂದೊರ್ಷಕ್ಕೆ ಹೆಚ್ಚುತ್ತಲೇ ಇದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಎನಿಸುವಷ್ಟು ಸಾಧನೆ ಮಾಡುತ್ತಿದೆ. ಚಂದ್ರಯಾನ, ಗಗನಯಾನ, ಮಂಗಳಯಾನಗಳನ್ನು ಕೈಗೊಳ್ಳುತ್ತಿದೆ. ಸ್ವಂತವಾಗಿ ರಾಕೆಟ್​ಗಳನ್ನು ತಯಾರಿಸುತ್ತಿದೆ. ಸಾಕಷ್ಟು ನೌಕೆಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುತ್ತಿದೆ. ಬೇರೆ ಬೇರೆ ದೇಶಗಳವರು ತಮ್ಮ ಸೆಟಿಲೈಟ್​ಗಳನ್ನು ಭಾರತದ ಮೂಲಕ ಆಗಸಕ್ಕೆ ಕಳುಹಿಸುತ್ತಿರುವ ಸಂಖ್ಯೆ ವರ್ಷದಿಂದೊರ್ಷಕ್ಕೆ ಹೆಚ್ಚುತ್ತಲೇ ಇದೆ.

1 / 5
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಟಿಲೈಟ್ ಉಡಾವಣೆ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬಂದಿರುವ ವಿಚಾರವನ್ನು ಹಂಚಿಒಂಡಿದ್ದಾರೆ. ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಅವರು ಒಂದಷ್ಟು ಅಂಕಿ ಅಂಶಗಳಿರುವ ಗ್ರಾಫಿಕ್​ಗಳನ್ನು ಶೇರ್ ಮಾಡಿದ್ದಾರೆ. ‘ಬಾಹ್ಯಾಕಾಶ ಕ್ಷೇತ್ರದಲ್ಲಿ ನೀವು ಭಾರತವನ್ನು ನಂಬಬಹುದು,’ ಎನ್ನುವ ಸಂದೇಶ ರವಾನಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಟಿಲೈಟ್ ಉಡಾವಣೆ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬಂದಿರುವ ವಿಚಾರವನ್ನು ಹಂಚಿಒಂಡಿದ್ದಾರೆ. ತಮ್ಮ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಅವರು ಒಂದಷ್ಟು ಅಂಕಿ ಅಂಶಗಳಿರುವ ಗ್ರಾಫಿಕ್​ಗಳನ್ನು ಶೇರ್ ಮಾಡಿದ್ದಾರೆ. ‘ಬಾಹ್ಯಾಕಾಶ ಕ್ಷೇತ್ರದಲ್ಲಿ ನೀವು ಭಾರತವನ್ನು ನಂಬಬಹುದು,’ ಎನ್ನುವ ಸಂದೇಶ ರವಾನಿಸಿದ್ದಾರೆ.

2 / 5
ಕಳೆದ 10 ವರ್ಷದಲ್ಲಿ ಭಾರತದಿಂದ ಹತ್ತಿರ ಹತ್ತಿರ 400 ವಿದೇಶೀ ಸೆಟಿಲೈಟ್​ಗಳನ್ನು ಲಾಂಚ್ ಮಾಡಲಾಗಿದೆ. 1979ರಿಂದ 2014ರವರೆಗೆ 35 ವರ್ಷದಲ್ಲಿ ಭಾರತದಿಂದ ಉಡಾವಣೆಗೊಂಡ ವಿದೇಶೀ ಸೆಟಿಲೈಟ್​ಗಳ ಸಂಖ್ಯೆ 35 ಮಾತ್ರ ಇತ್ತು. 2014ರಿಂದ ಈಚೆಗೆ 398 ವಿದೇಶೀ ಸೆಟಿಲೈಟ್​ಗಳನ್ನು ಭಾರತದಿಂದ ಲಾಂಚ್ ಮಾಡಲಾಗಿದೆ.

ಕಳೆದ 10 ವರ್ಷದಲ್ಲಿ ಭಾರತದಿಂದ ಹತ್ತಿರ ಹತ್ತಿರ 400 ವಿದೇಶೀ ಸೆಟಿಲೈಟ್​ಗಳನ್ನು ಲಾಂಚ್ ಮಾಡಲಾಗಿದೆ. 1979ರಿಂದ 2014ರವರೆಗೆ 35 ವರ್ಷದಲ್ಲಿ ಭಾರತದಿಂದ ಉಡಾವಣೆಗೊಂಡ ವಿದೇಶೀ ಸೆಟಿಲೈಟ್​ಗಳ ಸಂಖ್ಯೆ 35 ಮಾತ್ರ ಇತ್ತು. 2014ರಿಂದ ಈಚೆಗೆ 398 ವಿದೇಶೀ ಸೆಟಿಲೈಟ್​ಗಳನ್ನು ಭಾರತದಿಂದ ಲಾಂಚ್ ಮಾಡಲಾಗಿದೆ.

3 / 5
ಇದೂವರೆಗೆ ಭಾರತದಿಂದ ಉಡಾವಣೆಗೊಂಡ ಒಟ್ಟು ಸೆಟಿಲೈಟ್​ಗಳ ಸಂಖ್ಯೆ 563 ಇದೆ. ಇದರಲ್ಲಿ ವಿದೇಶೀ ಸೆಟಿಲೈಟ್​ಗಳು ಒಳಗೊಂಡಿವೆ. 2014ಕ್ಕೆ ಮುನ್ನ ಭಾರತದಿಂದ ಲಾಂಚ್ ಆದ ಒಟ್ಟು ಸೆಟಿಲೈಟ್​ಗಳ ಸಂಖ್ಯೆ 106 ಮಾತ್ರ. ಕಳೆದ 10 ವರ್ಷದಲ್ಲಿ ಉಡಾವಣೆಗೊಂಡಿರುವುದು ಬರೋಬ್ಬರಿ 457 ಸೆಟಿಲೈಟ್​ಗಳು. ಈ ಗ್ರಾಫಿಕ್ ಅನ್ನು ಪ್ರಧಾನಿಗಳು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಇದೂವರೆಗೆ ಭಾರತದಿಂದ ಉಡಾವಣೆಗೊಂಡ ಒಟ್ಟು ಸೆಟಿಲೈಟ್​ಗಳ ಸಂಖ್ಯೆ 563 ಇದೆ. ಇದರಲ್ಲಿ ವಿದೇಶೀ ಸೆಟಿಲೈಟ್​ಗಳು ಒಳಗೊಂಡಿವೆ. 2014ಕ್ಕೆ ಮುನ್ನ ಭಾರತದಿಂದ ಲಾಂಚ್ ಆದ ಒಟ್ಟು ಸೆಟಿಲೈಟ್​ಗಳ ಸಂಖ್ಯೆ 106 ಮಾತ್ರ. ಕಳೆದ 10 ವರ್ಷದಲ್ಲಿ ಉಡಾವಣೆಗೊಂಡಿರುವುದು ಬರೋಬ್ಬರಿ 457 ಸೆಟಿಲೈಟ್​ಗಳು. ಈ ಗ್ರಾಫಿಕ್ ಅನ್ನು ಪ್ರಧಾನಿಗಳು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

4 / 5
1979ರಿಂದ 2014ರವರೆಗೆ ಸರಾಸರಿಯಾಗಿ ಒಂದು ವರ್ಷದಲ್ಲಿ 1.2 ಸೆಟಿಲೈಟ್​ಗಳ ಉಡಾವಣೆ ಭಾರತದಿಂದ ಆಗಿದೆ. 2014ರಿಂದ ಈಚೆಗಿನ ಅಂಕಿ ಅಂಶದ ಪ್ರಕಾರ ಉಡಾವಣೆಗೊಳ್ಳುತ್ತಿರುವ ಸೆಟಿಲೈಟ್​ಗಳು ಪ್ರತೀ ವರ್ಷ ಸರಾಸರಿ 5.2 ಇದೆ. ಭಾರತದಲ್ಲಿ ವಿಶ್ವಾಸಾರ್ಹ ಎನಿಸಿರುವ ಮತ್ತು ಪ್ರಬಲವಾಗಿರುವ ರಾಕೆಟ್​ಗಳು ತಯಾರಾಗುತ್ತಿರುವುದು ಪ್ರಮುಖ ಕಾರಣ.

1979ರಿಂದ 2014ರವರೆಗೆ ಸರಾಸರಿಯಾಗಿ ಒಂದು ವರ್ಷದಲ್ಲಿ 1.2 ಸೆಟಿಲೈಟ್​ಗಳ ಉಡಾವಣೆ ಭಾರತದಿಂದ ಆಗಿದೆ. 2014ರಿಂದ ಈಚೆಗಿನ ಅಂಕಿ ಅಂಶದ ಪ್ರಕಾರ ಉಡಾವಣೆಗೊಳ್ಳುತ್ತಿರುವ ಸೆಟಿಲೈಟ್​ಗಳು ಪ್ರತೀ ವರ್ಷ ಸರಾಸರಿ 5.2 ಇದೆ. ಭಾರತದಲ್ಲಿ ವಿಶ್ವಾಸಾರ್ಹ ಎನಿಸಿರುವ ಮತ್ತು ಪ್ರಬಲವಾಗಿರುವ ರಾಕೆಟ್​ಗಳು ತಯಾರಾಗುತ್ತಿರುವುದು ಪ್ರಮುಖ ಕಾರಣ.

5 / 5
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ