ಅಣ್ಣ ತಂಗಿಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ. ನಾಳೆ ಅಂದರೆ ಸೋಮವಾರದಂದು ಎಲ್ಲೆಡೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ರಕ್ಷಾ ಬಂಧನ ಹಬ್ಬಕ್ಕೆ ಬಾಗಲಕೋಟೆಯಲ್ಲಿ 25 ಅಂಚೆ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ.
ಹೌದು. ಸೋಮವಾರ ರಕ್ಷಾ ಬಂಧನ ಹಿನ್ನೆಲೆ ರವಿವಾರ ರಜೆ ದಿನವಾಗಿದ್ದರೂ ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ರಾಖಿಗಳನ್ನು ವಿಳಾಸಕ್ಕೆ ತಲುಪಿಸುತ್ತಿದ್ದಾರೆ.
ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಸಹೋದರಿಯರ ರಾಖಿಯನ್ನು ಸಹೋದರರಿಗೆ ತಲುಪಿಸಿದ್ದಾರೆ.
ರಜೆ ದಿನವೂ ಕೆಲಸ ಮಾಡುವ ಮೂಲಕ ಸಹೋದರ ಸಹೋದರಿಯರ ಬಾಂಧವ್ಯವನ್ನು ಸಿಬ್ಬಂದಿಗಳು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.
ಬಾಗಲಕೋಟೆಯಲ್ಲಿ 25 ಜನ ಅಂಚೆ ಸಿಬ್ಬಂದಿಗಳು ಬಂದ ರಾಖಿಗಳನ್ನು ವಿಳಾಸಕ್ಕೆ ತಲುಪಿಸಿದ್ದಾರೆ. ಆ ಮೂಲಕ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.