ವೃದ್ಧಾಶ್ರಮಕ್ಕೆ ಕಟ್ಟಡ ನಿರ್ಮಿಸಿಕೊಟ್ಟ ಖಾಕಿ: ನಿರ್ಗತಿಕರ ಆಶ್ರಮಕ್ಕೆ ಹೆಗಲಾದ ರಾಯಚೂರು ಪೊಲೀಸ್ ಪಡೆ

Edited By:

Updated on: Mar 24, 2025 | 6:00 PM

ರಾಯಚೂರು ಜಿಲ್ಲೆಯ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮಕ್ಕೆ 2005ನೇ ಬ್ಯಾಚ್‌ನ ಪೊಲೀಸ್ ಸಿಬ್ಬಂದಿ ಹೊಸ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ವೃದ್ಧರು ಮತ್ತು ನಿರ್ಗತಿಕರಿಗೆ ಆಶ್ರಯ ನೀಡುವ ಈ ಆಶ್ರಮದಲ್ಲಿ ವಸತಿ ಸೌಕರ್ಯದ ಕೊರತೆಯನ್ನು ಪೊಲೀಸರು ಪರಿಹರಿಸಿದ್ದಾರೆ. ಪೊಲೀಸ್​ ಪಡೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

1 / 6
ಅವರಿಗೆಲ್ಲಾ ಕುಟುಂಬಗಳಿದ್ದರೂ ಅನಾಥರು. ವಯೋ ಸಹಜ ಖಾಯಲೆಗಳು, ಬುದ್ಧಿಮಾಂದ್ಯ ವಯಸ್ಕರರು. ಹೀಗೆ ನಾನಾ ರೀತಿಯ ನಿರ್ಗತಿಕರಿಗೆ ಆ ಆಶ್ರಮ ಆಶ್ರಯ ಕೊಡುತ್ತಿದೆ. ಆದರೆ ಇದೀಗ ಆ ಆಶ್ರಮಕ್ಕೆ ಖಾಕಿಧಾರಿಗಳ ತಂಡ ಹೆಗಲಾಗಿ ನಿಂತಿದ್ದು, ಆಶ್ರಮಕ್ಕೆ ಸೂರು ಕಲ್ಪಿಸಿದ್ದಾರೆ. 

ಅವರಿಗೆಲ್ಲಾ ಕುಟುಂಬಗಳಿದ್ದರೂ ಅನಾಥರು. ವಯೋ ಸಹಜ ಖಾಯಲೆಗಳು, ಬುದ್ಧಿಮಾಂದ್ಯ ವಯಸ್ಕರರು. ಹೀಗೆ ನಾನಾ ರೀತಿಯ ನಿರ್ಗತಿಕರಿಗೆ ಆ ಆಶ್ರಮ ಆಶ್ರಯ ಕೊಡುತ್ತಿದೆ. ಆದರೆ ಇದೀಗ ಆ ಆಶ್ರಮಕ್ಕೆ ಖಾಕಿಧಾರಿಗಳ ತಂಡ ಹೆಗಲಾಗಿ ನಿಂತಿದ್ದು, ಆಶ್ರಮಕ್ಕೆ ಸೂರು ಕಲ್ಪಿಸಿದ್ದಾರೆ. 

2 / 6

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ವೃದ್ಧಾಶ್ರಮವೊಂದರಲ್ಲಿ ಸಾಕಷ್ಟು ವೃದ್ಧ ನಿರ್ಗತಿಕರು ಬದುಕು ನಡೆಸ್ತಿದ್ದಾರೆ. ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿರುವ ಕಾರುಣ್ಯ ಅನ್ನೋ ಆಶ್ರಮ ದಶಕಗಳಿಂದ ಆಶ್ರಯ ನೀಡುತ್ತಿದ್ದು, ಪುಣ್ಯದ ಕೆಲಸ ಮಾಡುತ್ತಿದೆ.

3 / 6

ಯಾರಾದರೂ ವೃದ್ಧರನ್ನ ಬಿಟ್ಟು ಹೋಗಬಹುದು, ಪೊಲೀಸ್ ಇಲಾಖೆ ಅವರು ಸೂಚಿಸುವ ಭಿಕ್ಷುಕರು, ಅನಾಥರನ್ನ ಈ ಆಶ್ರಮದವವರು ಜೋಪಾನ ಮಾಡ್ತಾರೆ. ಆದರೆ ಹಂತಹಂತವಾಗಿ ನಿರ್ಗತಿಕರ ಸಂಖ್ಯೆ ಹೆಚ್ಚಾಗ್ತಿರೊದ್ರಿಂದ ವಸತಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಇದೀಗ ಆ ವಸತಿ ಸಮಸ್ಯೆಯನ್ನ ಪೊಲೀಸ್ ಪಡೆ ನಿಭಾಯಿಸಿದ್ದು, ಈ ಆಶ್ರಮಕ್ಕೆ ಕಟ್ಟಡ ಕಟ್ಟಿಸಿ ಕೊಟ್ಟಿದ್ದಾರೆ. 

4 / 6

ರಾಯಚೂರಿನ 2005 ನೇ ಬ್ಯಾಚ್​​ನ ಸಿವಿಲ್ ಸರ್ವಿಸ್​ನ ಪೊಲೀಸ್ ಸಿಬ್ಬಂದಿ ಇಲಾಖೆಗೆ ಸೇರಿ 20 ವರ್ಷಗಳಾಗಿವೆ. ನಿತ್ಯ ಬರೀ ಕ್ರೈಂ, ಬಂದೋಬಸ್ತ್, ಕಾನೂನು-ಸುವ್ಯಸ್ಥೆ, ವಿವಾದ ಬಗೆಹರಿಸೋದು, ಟ್ರಾಫಿಕ್ ಕಿರಿಕಿರಿ ಸರಿಪಡಿಸುವ ಕೆಲಸ ಮಾಡ್ತಿದ್ದ ಈ 2005 ನೇ ಬ್ಯಾಚ್​ನ ಸಿಬ್ಬಂದಿ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.

5 / 6

ತಮ್ಮ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳಾದ ಹಿನ್ನೆಲೆ ಸಮಾಜಕ್ಕ ಒಂದೊಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ, ಈ ಸಿಬ್ಬಂದಿ ನಿರ್ಗತಿಕರ ಲಾಲನೆ, ಪಾಲನೆ ಮಾಡುತ್ತಿರುವ ಕಾರುಣ್ಯ ಆಶ್ರಮಕ್ಕೆ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಸಂಖ್ಯೆಯನ್ನ ಹೊಂದಿರುವ ಈ ಬ್ಯಾಚ್​ನ ಪೊಲೀಸ್ ಸಿಬ್ಬಂದಿ ಪ್ರತಿ ವರ್ಷ ಒಂದಲ್ಲಾ ಒಂದು ರೀತಿ ಕಾರ್ಯಕ್ರಮಗಳನ್ನ ಮಾಡುತ್ತಾ ವಿನೂತನ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಭಾಗವಾಗಿ ಮುಗ್ಧ ಜೀವಿಗಳು ಬದಕು ನಡೆಸ್ತಿರುವ ಆಶ್ರಮಕ್ಕೆ ಆಶ್ರಮ ಧಾಮ ಹೆಸರಿನಲ್ಲಿ ಕಟ್ಟಡ ಕಟ್ಟಿಸಿ ಕೊಟ್ಟಿದ್ದು, ರಾಯಚೂರು ಎಸ್​ಪಿ ಪುಟ್ಟಮಾದಯ್ಯ ಉದ್ಘಾಟಿಸಿದರು.

6 / 6

ವಿವಿಧ ಕಾರ್ಯಕ್ರಮಗಳನ್ನ ಮಾಡ್ತಾ ಆಚರಣೆ ಹೆಸರಲ್ಲಿ ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ ಪೊಲೀಸ್​ ಪಡೆ, ಬಡತನದಲ್ಲಿ ಬಡವರ ಸೇವೆ ಮಾಡುತ್ತಿರುವ ಈ ಆಶ್ರಮಕ್ಕೆ ಹೆಗಲು ಕೊಟ್ಟಿದ್ದು, ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ. 

Published On - 5:33 pm, Mon, 24 March 25

Loading...
Unable to load recommendations.
Follow Us