AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗಮನ ಸೆಳೆದ ಸಿರಿ ಧಾನ್ಯ ಆಹಾರ ಮೇಳ

ಕೋಲಾರ, ನವೆಂಬರ್ 23: ಅದು ಪಿಜ್ಜಾ ಬರ್ಗರ್​ ಯುಗದಲ್ಲಿ ಕಾಣೆಯಾಗಿರುವ, ರುಚಿ ರುಚಿಯಾದ ಹಾಗೂ ಮಕ್ಕಳಿಗೆ ಇಷ್ಟಪಡುವ ಆರೋಗ್ಯಕರವಾದ ಖಾದ್ಯಗಳು. ನಮ್ಮ ಅಜ್ಜಿ ತಾತನ ಕಾಲದಲ್ಲಿ ಮಕ್ಕಳಿಗಾಗಿ ಸಿರಿಧಾನ್ಯಗಳಿಂದ ಮಾಡಲಾಗುತ್ತಿದ್ದ ಬಾಯಲ್ಲಿ ನೀರು ತರಿಸುವಂತ ಖಾದ್ಯಗಳು. ಈಗಿನ ಜನರು ಮರೆತೇ ಹೋಗಿರುವ ವಿಶೇಷ ಖಾದ್ಯಗಳು ಅಲ್ಲಿ ನೂರಾರು ಜನರ ಬಾಯಿಯಲ್ಲಿ ನೀರು ತರಿಸಿತ್ತು!

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Nov 23, 2024 | 11:09 AM

Share
ಸಿರಿಧಾನ್ಯಗಳಿಂದ ಮಾಡಲಾಗಿರುವ ಚಕ್ಕುಲಿ, ನಿಪ್ಪಟ್ಟು, ಸಿರಿಧಾನ್ಯದ ಉಂಡೆ, ಬಿಸಿಬೇಳೆ ಒಂದಲ್ಲಾ ಎರಡಲ್ಲಾ ಹತ್ತಾರು ಬಗೆ ಬಗೆಯ ತಿಂಡಿಗಳು ಒಂದೊಂದಾಗಿ ತಿಂಡಿಗಳನ್ನು ಸವಿಯುತ್ತಿರುವ ಅಧಿಕಾರಿಗಳು ಹಾಗೂ ಮಹಿಳೆಯರು. ಇಂಥದ್ದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ. ಕೋಲಾರದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯಗಳ ಮೇಳ ಹಾಗೂ ಮರೆತು ಹೋಗಿರುವ ಖಾದ್ಯಗಳ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಸಿರಿಧಾನ್ಯಗಳಿಂದ ಮಾಡಲಾಗಿರುವ ಚಕ್ಕುಲಿ, ನಿಪ್ಪಟ್ಟು, ಸಿರಿಧಾನ್ಯದ ಉಂಡೆ, ಬಿಸಿಬೇಳೆ ಒಂದಲ್ಲಾ ಎರಡಲ್ಲಾ ಹತ್ತಾರು ಬಗೆ ಬಗೆಯ ತಿಂಡಿಗಳು ಒಂದೊಂದಾಗಿ ತಿಂಡಿಗಳನ್ನು ಸವಿಯುತ್ತಿರುವ ಅಧಿಕಾರಿಗಳು ಹಾಗೂ ಮಹಿಳೆಯರು. ಇಂಥದ್ದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ. ಕೋಲಾರದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯಗಳ ಮೇಳ ಹಾಗೂ ಮರೆತು ಹೋಗಿರುವ ಖಾದ್ಯಗಳ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

1 / 6
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದ ತಾಲ್ಲೂಕುಗಳಿಂದ ಸುಮಾರು 50ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ವಿಧ ವಿಧವಾದ ಸಿರಿಧಾನ್ಯಗಳಿಂದ ಮಾಡಲಾಗಿದ್ದ ಖಾದ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಸಜ್ಜೆ, ಸಾಮೆ, ಆರ್ಕ, ಉದುಲು, ರಾಗಿ, ನವಣೆ ಸೇರಿದಂತೆ ವಿವಿದ ಸಿರಿಧಾನ್ಯಗಳನ್ನು ಬಳಸಿಕೊಂಡು ನಿಪ್ಪಟ್ಟು, ಚಕ್ಕುಲಿ, ಸಿರಿಧಾನ್ಯದ ಉಂಡೆ, ಬಿಸಿ ಬೇಳೆ ಬಾತ್​, ಸಿರಿಧಾನ್ಯದ ರೊಟ್ಟಿ, ಸಿರಿಧಾನ್ಯದ ಹುರಿಹಿಟ್ಟು ಉಂಡೆ, ಮ್ಯಾಂಗೋ ಸೀಕರಣೆ, ಸಿರಿಧಾನ್ಯ ಕಜ್ಜಾಯ, ಮಶ್ರೂಮ್​ ಕಬಾಬ್​ ಸೇರಿದಂತೆ ಹಲವು ತಿಂಡಿಗಳನ್ನು ವಿವಿದ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಇಂದು ಪ್ರದರ್ಶನಕ್ಕೆ ಇಟ್ಟಿದ್ದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದ ತಾಲ್ಲೂಕುಗಳಿಂದ ಸುಮಾರು 50ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ವಿಧ ವಿಧವಾದ ಸಿರಿಧಾನ್ಯಗಳಿಂದ ಮಾಡಲಾಗಿದ್ದ ಖಾದ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಸಜ್ಜೆ, ಸಾಮೆ, ಆರ್ಕ, ಉದುಲು, ರಾಗಿ, ನವಣೆ ಸೇರಿದಂತೆ ವಿವಿದ ಸಿರಿಧಾನ್ಯಗಳನ್ನು ಬಳಸಿಕೊಂಡು ನಿಪ್ಪಟ್ಟು, ಚಕ್ಕುಲಿ, ಸಿರಿಧಾನ್ಯದ ಉಂಡೆ, ಬಿಸಿ ಬೇಳೆ ಬಾತ್​, ಸಿರಿಧಾನ್ಯದ ರೊಟ್ಟಿ, ಸಿರಿಧಾನ್ಯದ ಹುರಿಹಿಟ್ಟು ಉಂಡೆ, ಮ್ಯಾಂಗೋ ಸೀಕರಣೆ, ಸಿರಿಧಾನ್ಯ ಕಜ್ಜಾಯ, ಮಶ್ರೂಮ್​ ಕಬಾಬ್​ ಸೇರಿದಂತೆ ಹಲವು ತಿಂಡಿಗಳನ್ನು ವಿವಿದ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಇಂದು ಪ್ರದರ್ಶನಕ್ಕೆ ಇಟ್ಟಿದ್ದರು.

2 / 6
ಸಿರಿಧಾನ್ಯಗಳ ಖಾದ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಸಿರಿಧಾನ್ಯ ಗಳಿಂದ ವಿವಿದ ಖಾದ್ಯಗಳನ್ನು ಬಳಸಿಕೊಂಡು ವಿವಿದ ಆರೋಗ್ಯಕರ ತಿಂಡಿ ತಿನಿಸುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಇವತ್ತಿನ ಕಾಲದ ಪಿಜ್ಜಾ, ಬರ್ಗರ್​ಗಳಿಗೆ ಸಿರಿಧಾನ್ಯಗಳಿಂದ ಮಾಡಿದ ತಿಂಡಿ ತಿನಿಸುಗಳು ಹೇಗೆ ಪೈಪೋಟಿ ನೀಡಬಲ್ಲವು ಎಂಬುದನ್ನು ತೋರಿಸಲು ಇಂಥದ್ದೊಂದು ಸ್ಪರ್ಧೆ ಬಹಳ ಉಪಯುಕ್ತ.

ಸಿರಿಧಾನ್ಯಗಳ ಖಾದ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಸಿರಿಧಾನ್ಯ ಗಳಿಂದ ವಿವಿದ ಖಾದ್ಯಗಳನ್ನು ಬಳಸಿಕೊಂಡು ವಿವಿದ ಆರೋಗ್ಯಕರ ತಿಂಡಿ ತಿನಿಸುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಇವತ್ತಿನ ಕಾಲದ ಪಿಜ್ಜಾ, ಬರ್ಗರ್​ಗಳಿಗೆ ಸಿರಿಧಾನ್ಯಗಳಿಂದ ಮಾಡಿದ ತಿಂಡಿ ತಿನಿಸುಗಳು ಹೇಗೆ ಪೈಪೋಟಿ ನೀಡಬಲ್ಲವು ಎಂಬುದನ್ನು ತೋರಿಸಲು ಇಂಥದ್ದೊಂದು ಸ್ಪರ್ಧೆ ಬಹಳ ಉಪಯುಕ್ತ.

3 / 6
ಇನ್ನು ಮಕ್ಕಳು ಹಾಗೂ ಯುವ ಜನತೆಗೆ ಆರೋಗ್ಯ ಹಾಗೂ ಸದೃಡ ಆರೋಗ್ಯ ನೀಡುವಲ್ಲಿ ಇದು ಬಹಳ ಉಪಯುಕ್ತ ಎಂಬುದು ಸಿರಿಧಾನ್ಯ ಸವಿದವರ ಮಾತು. ಸಿರಿಧಾನ್ಯ ಮೇಳ ಹಾಗೂ ಮರೆತು ಹೋದ ಖಾದ್ಯಗಳ ಸ್ಪರ್ಧೆ ಅನ್ನೋ ಅಪರೂಪದ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನು ಮಕ್ಕಳು ಹಾಗೂ ಯುವ ಜನತೆಗೆ ಆರೋಗ್ಯ ಹಾಗೂ ಸದೃಡ ಆರೋಗ್ಯ ನೀಡುವಲ್ಲಿ ಇದು ಬಹಳ ಉಪಯುಕ್ತ ಎಂಬುದು ಸಿರಿಧಾನ್ಯ ಸವಿದವರ ಮಾತು. ಸಿರಿಧಾನ್ಯ ಮೇಳ ಹಾಗೂ ಮರೆತು ಹೋದ ಖಾದ್ಯಗಳ ಸ್ಪರ್ಧೆ ಅನ್ನೋ ಅಪರೂಪದ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

4 / 6
ಅದರ ಜೊತೆಗೆ ಅಧಿಕಾರಿಗಳು ಸಿರಿಧಾನ್ಯಗಳಿಂದ ಮಾಡಿದ್ದ ಹಾಗೂ ಅಪರೂಪದ ಖಾದ್ಯಗಳನ್ನು ಸವಿದರು, ಒಂದೊಂದಾಗಿ ಸವಿಯುತ್ತಾ ಅದರ ರುಚಿಗೆ ಮಾರು ಹೋದರು. ಇನ್ನು ಆಹಾರ ಇಲಾಖೆ ಜಂಟಿ ನಿರ್ದೇಶಕಿ ಲತಾ ಹಾಗೂ ಕೃಷಿ ವಿಜ್ನಾನ ಕೇಂದ್ರದ ಅಧಿಕಾರಿಗಳ ತಂಡ ಸಿರಿಧಾನ್ಯ ಮೇಳ ಹಾಗೂ ಮರೆತು ಹೋದ ಖಾದ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿದ ಮಹಿಳಾ ಸಂಘಟನೆ ಮಹಿಳೆಯರು ಸಿರಿಧಾನ್ಯಗಳನ್ನು ಬಳಸಿಕೊಂಡು ಹಳೆಯ ಕಾಲದಲ್ಲಿ ಮಾಡುತ್ತಿದ್ದ ಈಗ ಜನರು ಮರೆತು ಹೋಗಿರುವ ಹತ್ತಾರು ತಿಂಡಿಗಳನ್ನು ಮಾಡಿ ತಂದಿದ್ದರು, ಈ ತಿಂಡಿಗಳನ್ನು ಸವಿದು ಅದಕ್ಕೆ ತಕ್ಕ ಅಂಕಗಳನ್ನು ನೀಡಿದರು.

ಅದರ ಜೊತೆಗೆ ಅಧಿಕಾರಿಗಳು ಸಿರಿಧಾನ್ಯಗಳಿಂದ ಮಾಡಿದ್ದ ಹಾಗೂ ಅಪರೂಪದ ಖಾದ್ಯಗಳನ್ನು ಸವಿದರು, ಒಂದೊಂದಾಗಿ ಸವಿಯುತ್ತಾ ಅದರ ರುಚಿಗೆ ಮಾರು ಹೋದರು. ಇನ್ನು ಆಹಾರ ಇಲಾಖೆ ಜಂಟಿ ನಿರ್ದೇಶಕಿ ಲತಾ ಹಾಗೂ ಕೃಷಿ ವಿಜ್ನಾನ ಕೇಂದ್ರದ ಅಧಿಕಾರಿಗಳ ತಂಡ ಸಿರಿಧಾನ್ಯ ಮೇಳ ಹಾಗೂ ಮರೆತು ಹೋದ ಖಾದ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿದ ಮಹಿಳಾ ಸಂಘಟನೆ ಮಹಿಳೆಯರು ಸಿರಿಧಾನ್ಯಗಳನ್ನು ಬಳಸಿಕೊಂಡು ಹಳೆಯ ಕಾಲದಲ್ಲಿ ಮಾಡುತ್ತಿದ್ದ ಈಗ ಜನರು ಮರೆತು ಹೋಗಿರುವ ಹತ್ತಾರು ತಿಂಡಿಗಳನ್ನು ಮಾಡಿ ತಂದಿದ್ದರು, ಈ ತಿಂಡಿಗಳನ್ನು ಸವಿದು ಅದಕ್ಕೆ ತಕ್ಕ ಅಂಕಗಳನ್ನು ನೀಡಿದರು.

5 / 6
ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಂತು ಇವತ್ತಿನ ಪೀಜ್ಜಾ ಬರ್ಗರ್​ ಯುಗದಲ್ಲಿ ನಮ್ಮ ಸಿರಿಧಾನ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ, ದೇಶ ವಿದೇಶಗಳಲ್ಲೂ ಸಿರಿ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದೆ ಮಕ್ಕಳಿಗೆ ಉತ್ತಮ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸೋದಕ್ಕೆ ಮಕ್ಕಳು ಇಷ್ಟ ಪಡುವ ರೀತಿಯಲ್ಲಿ ಸಿರಿಧಾನ್ಯಗಳನ್ನು ಬಳಸಿ ಮಾಡಿದ ವಿವಿಧ ರೀತಿಯ ಖಾಧ್ಯಗಳು ಬಹುಮುಖ್ಯ ಎಂದು ಅಭಿಪ್ರಾಯ ಪಟ್ಟರು.

ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಂತು ಇವತ್ತಿನ ಪೀಜ್ಜಾ ಬರ್ಗರ್​ ಯುಗದಲ್ಲಿ ನಮ್ಮ ಸಿರಿಧಾನ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ, ದೇಶ ವಿದೇಶಗಳಲ್ಲೂ ಸಿರಿ ಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದೆ ಮಕ್ಕಳಿಗೆ ಉತ್ತಮ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸೋದಕ್ಕೆ ಮಕ್ಕಳು ಇಷ್ಟ ಪಡುವ ರೀತಿಯಲ್ಲಿ ಸಿರಿಧಾನ್ಯಗಳನ್ನು ಬಳಸಿ ಮಾಡಿದ ವಿವಿಧ ರೀತಿಯ ಖಾಧ್ಯಗಳು ಬಹುಮುಖ್ಯ ಎಂದು ಅಭಿಪ್ರಾಯ ಪಟ್ಟರು.

6 / 6
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ