ರೈತನ ಕೈಹಿಡಿದ ಲಿಂಬೆ ಬೆಳೆ; ಮಳೆಗಾಲದಲ್ಲೂ ಉತ್ತಮ ದರಕ್ಕೆ ಮಾರಾಟ
ವಿಜಯಪುರ ಜಿಲ್ಲೆಯ ಲಿಂಬೆ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಪ್ರತಿ ಮಳೆಗಾಲದಲ್ಲಿಯೂ ಕನಿಷ್ಟ ದರ ಲಿಂಬೆಗೆ ಇರುತ್ತಿತ್ತು. ಸುಮಾರು ಒಂದು ಸಾವಿರ ಲಿಂಬೆ ಇರುತ್ತಿದ್ದ ಮೂಟೆ ಮಳೆಗಾಲದಲ್ಲಿ 1000 ರಿಂದ 1200 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಕಷ್ಟಪಟ್ಟು ಬೆಳೆದು ಕೂಲಿಯಾಳುಗಳ ಖರ್ಚು ಸಹ ಮಳೆಗಾಲದಲ್ಲಿ ಲಿಂಬೆಗೆ ಬರುತ್ತಿರಲಿಲ್ಲ. ಆದರೂ ಫಸಲು ಬಿಡಬಾರದೆಂಬ ಕಾರಣದಿಂದ ಕಡಿಮೆ ದರಕ್ಕೆ ಮಾರಾಟ ಮಾಡುವುದು ಬೆಳೆಗಾರರಿಗೆ ಅನಿವಾರ್ಯವಾಗಿತ್ತು. ಈ ಬಾರಿ ಲಿಂಬೆಗೆ ಡಿಮ್ಯಾಂಡ್ ಬಂದಿದ್ದು, ಮಳೆಗಾಲದಲ್ಲೂ ಉತ್ತಮ ದರಕ್ಕೆ ಮಾರಾಟವಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.

1 / 6

2 / 6

3 / 6

4 / 6

5 / 6

6 / 6
Follow Us



