ಹಳಿ ತಪ್ಪಿದ ಮನಸನ್ನು ನಿಯಂತ್ರಣಕ್ಕೆ ತರುವುದು ಹೇಗೆ?

ಆಗಿ ಹೋದ ದಿನಗಳ ಬಗ್ಗೆ ಮೆಲುಕು ಹಾಕುವಾಗ, ಭವಿಷ್ಯದ ಬಗ್ಗೆ ಚಿಂತಿಸುತ್ತಿರುವಾಗ ಮಾನಸಿಕವಾಗಿ ಗಮನಹರಿಸುವುದು ಕಷ್ಟ. ಹೀಗಾಗಿ, ನಿಮ್ಮ ಬಳಿ ಏನಿದೆಯೋ ಅದರ ಬಗ್ಗೆ ಖುಷಿಪಡಿ. ಅಂತಹ ಸಮಯದಲ್ಲಿ ನಿಮಗೆ ಆಪ್ತರಾದವರ ಜೊತೆ ಮೊಬೈಲ್​ನಲ್ಲಿ ಮಾತನಾಡಿ, ನಿಮಗಿಷ್ಟವಾದ ಕೆಲಸ ಮಾಡಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು.

|

Updated on: Sep 19, 2023 | 7:39 PM

ನಮ್ಮ ದೇಹದ ಆರೋಗ್ಯದಷ್ಟೇ ಮನಸಿನ ಆರೋಗ್ಯವೂ ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ಮಾನಸಿಕ ದೌರ್ಬಲ್ಯವೇ ಅನೇಕ ಅನಾರೋಗ್ಯಗಳಿಗೆ, ದೈಹಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾದರೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಮನಸಿನ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು 7 ಸುಲಭ ಮಾರ್ಗಗಳು ಇಲ್ಲಿವೆ...

ನಮ್ಮ ದೇಹದ ಆರೋಗ್ಯದಷ್ಟೇ ಮನಸಿನ ಆರೋಗ್ಯವೂ ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ಮಾನಸಿಕ ದೌರ್ಬಲ್ಯವೇ ಅನೇಕ ಅನಾರೋಗ್ಯಗಳಿಗೆ, ದೈಹಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾದರೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಮನಸಿನ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು 7 ಸುಲಭ ಮಾರ್ಗಗಳು ಇಲ್ಲಿವೆ...

1 / 8
1. ನಿಮ್ಮ ಮಾನಸಿಕ ಗಮನಕ್ಕೆ ಆದ್ಯತೆ ನೀಡಿ:
ಜ್ವರ, ಕೆಮ್ಮು, ಮುಂತಾದ ದೈಹಿಕ ಸಮಸ್ಯೆಗಳು ಬಂದಾಗ ಹೇಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತೀರೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಗಮನ ನೀಡಿ. ಯಾವುದೇ ಕೆಲಸ ಆರಂಭಿಸುವ ಮೊದಲು ಆ ಕ್ಷಣದಲ್ಲಿ ನಿಮ್ಮ ಮಾನಸಿಕ ಗಮನ ಎಷ್ಟು ಪ್ರಬಲವಾಗಿದೆ ಎಂಬುದನ್ನು ನಿರ್ಣಯಿಸಿ. ನಿಮ್ಮಲ್ಲಿ ಇರುವ ಸಾಮರ್ಥ್ಯ, ಏಕಾಗ್ರತೆಯನ್ನೇ ಮತ್ತಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸಿ.

1. ನಿಮ್ಮ ಮಾನಸಿಕ ಗಮನಕ್ಕೆ ಆದ್ಯತೆ ನೀಡಿ: ಜ್ವರ, ಕೆಮ್ಮು, ಮುಂತಾದ ದೈಹಿಕ ಸಮಸ್ಯೆಗಳು ಬಂದಾಗ ಹೇಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತೀರೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಗಮನ ನೀಡಿ. ಯಾವುದೇ ಕೆಲಸ ಆರಂಭಿಸುವ ಮೊದಲು ಆ ಕ್ಷಣದಲ್ಲಿ ನಿಮ್ಮ ಮಾನಸಿಕ ಗಮನ ಎಷ್ಟು ಪ್ರಬಲವಾಗಿದೆ ಎಂಬುದನ್ನು ನಿರ್ಣಯಿಸಿ. ನಿಮ್ಮಲ್ಲಿ ಇರುವ ಸಾಮರ್ಥ್ಯ, ಏಕಾಗ್ರತೆಯನ್ನೇ ಮತ್ತಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸಿ.

2 / 8
2. ಅಡೆತಡೆಗಳನ್ನು ನಿವಾರಿಸಿಕೊಳ್ಳಿ:
ಏನಾದರೂ ಕೆಲಸ ಮಾಡುವಾಗ ಅಡೆತಡೆಗಳು ಸಾಮಾನ್ಯ. ಮೂಡ್ ಎನ್ನುವುದು ಟಿವಿ, ರೇಡಿಯೋ ಆನ್-ಆಫ್ ಮಾಡಿದಷ್ಟು ಸುಲಭವಲ್ಲ. ಕೆಲವರ ಮೂಡ್ ಬಹಳ ಬೇಗ ಸರಿಹೋಗುವುದಾದರೂ ಯಾವುದಾದರೂ ಕೆಲಸ ಮಾಡುವಾಗ ಡಿಸ್ಟರ್ಬೆನ್ಸ್​ ಇರದಂತೆ ಮುನ್ನೆಚ್ಚರಿಕೆ ವಹಿಸಿ. ಇದರಿಂದ ನೆಮ್ಮದಿಯಿಂದ ನಿಮ್ಮ ಗುರಿಯನ್ನು ಮುಟ್ಟಬಹುದು. ಸಹೋದ್ಯೋಗಿ, ಸಂಗಾತಿ, ಮಗು ಅಥವಾ ರೂಮ್‌ಮೇಟ್‌ನೊಂದಿಗೆ ವ್ಯವಹರಿಸುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ. ಎಲ್ಲಾ ಗೊಂದಲಗಳು ಹೊರಗಿನ ಮೂಲಗಳಿಂದ ಬರುವುದಿಲ್ಲ. ಆಯಾಸ, ಚಿಂತೆ, ಆತಂಕ ಮತ್ತು ಇತರ ಆಂತರಿಕ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದು.

2. ಅಡೆತಡೆಗಳನ್ನು ನಿವಾರಿಸಿಕೊಳ್ಳಿ: ಏನಾದರೂ ಕೆಲಸ ಮಾಡುವಾಗ ಅಡೆತಡೆಗಳು ಸಾಮಾನ್ಯ. ಮೂಡ್ ಎನ್ನುವುದು ಟಿವಿ, ರೇಡಿಯೋ ಆನ್-ಆಫ್ ಮಾಡಿದಷ್ಟು ಸುಲಭವಲ್ಲ. ಕೆಲವರ ಮೂಡ್ ಬಹಳ ಬೇಗ ಸರಿಹೋಗುವುದಾದರೂ ಯಾವುದಾದರೂ ಕೆಲಸ ಮಾಡುವಾಗ ಡಿಸ್ಟರ್ಬೆನ್ಸ್​ ಇರದಂತೆ ಮುನ್ನೆಚ್ಚರಿಕೆ ವಹಿಸಿ. ಇದರಿಂದ ನೆಮ್ಮದಿಯಿಂದ ನಿಮ್ಮ ಗುರಿಯನ್ನು ಮುಟ್ಟಬಹುದು. ಸಹೋದ್ಯೋಗಿ, ಸಂಗಾತಿ, ಮಗು ಅಥವಾ ರೂಮ್‌ಮೇಟ್‌ನೊಂದಿಗೆ ವ್ಯವಹರಿಸುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ. ಎಲ್ಲಾ ಗೊಂದಲಗಳು ಹೊರಗಿನ ಮೂಲಗಳಿಂದ ಬರುವುದಿಲ್ಲ. ಆಯಾಸ, ಚಿಂತೆ, ಆತಂಕ ಮತ್ತು ಇತರ ಆಂತರಿಕ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದು.

3 / 8
3. ನಿಮ್ಮ ಗಮನವನ್ನು ಮಿತಿಗೊಳಿಸಿಕೊಳ್ಳಿ:
ಒಂದೇ ಬಾರಿ ಹಲವು ಕೆಲಸ ಮಾಡುತ್ತೇನೆ ಎಂದು ಹುಂಬತನದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಫೋಕಸ್ ಚೆನ್ನಾಗಿರಬೇಕೆಂದರೆ ಒಂದೇ ಕೆಲಸದ ಮೇಲೆ ಗಮನಹರಿಸುವುದು ಉತ್ತಮ. ನಿಮ್ಮ ಗಮನವನ್ನು ಸ್ಪಾಟ್​ಲೈಟ್ ಎಂದು ಪರಿಗಣಿಸಿ. ನೀವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಆ ಸ್ಪಾಟ್‌ಲೈಟ್ ಅನ್ನು ಬೆಳಗಿಸಿದರೆ ಮಾತ್ರ ನೀವು ವಿಷಯಗಳನ್ನು ಬಹಳ ಸ್ಪಷ್ಟವಾಗಿ ನೋಡಬಹುದು. ಹೀಗಾಗಿ, ಏಕಾಗ್ರತೆ ಬಹಳ ಮುಖ್ಯ.

3. ನಿಮ್ಮ ಗಮನವನ್ನು ಮಿತಿಗೊಳಿಸಿಕೊಳ್ಳಿ: ಒಂದೇ ಬಾರಿ ಹಲವು ಕೆಲಸ ಮಾಡುತ್ತೇನೆ ಎಂದು ಹುಂಬತನದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಫೋಕಸ್ ಚೆನ್ನಾಗಿರಬೇಕೆಂದರೆ ಒಂದೇ ಕೆಲಸದ ಮೇಲೆ ಗಮನಹರಿಸುವುದು ಉತ್ತಮ. ನಿಮ್ಮ ಗಮನವನ್ನು ಸ್ಪಾಟ್​ಲೈಟ್ ಎಂದು ಪರಿಗಣಿಸಿ. ನೀವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಆ ಸ್ಪಾಟ್‌ಲೈಟ್ ಅನ್ನು ಬೆಳಗಿಸಿದರೆ ಮಾತ್ರ ನೀವು ವಿಷಯಗಳನ್ನು ಬಹಳ ಸ್ಪಷ್ಟವಾಗಿ ನೋಡಬಹುದು. ಹೀಗಾಗಿ, ಏಕಾಗ್ರತೆ ಬಹಳ ಮುಖ್ಯ.

4 / 8
4. ಪ್ರತಿಕ್ಷಣವನ್ನೂ ಅನುಭವಿಸಿ:
ನೀವು ಈಗಾಗಲೇ ಆಗಿ ಹೋದ ದಿನಗಳ ಬಗ್ಗೆ ಮೆಲುಕು ಹಾಕುವಾಗ, ಭವಿಷ್ಯದ ಬಗ್ಗೆ ಚಿಂತಿಸುತ್ತಿರುವಾಗ ಮಾನಸಿಕವಾಗಿ ಗಮನಹರಿಸುವುದು ಕಷ್ಟ. ಹೀಗಾಗಿ, ನಿಮ್ಮ ಬಳಿ ಏನಿದೆಯೋ ಅದರ ಬಗ್ಗೆ ಖುಷಿಪಡಿ. ಅಂತಹ ಸಮಯದಲ್ಲಿ ನಿಮಗೆ ಆಪ್ತರಾದವರ ಜೊತೆ ಮೊಬೈಲ್​ನಲ್ಲಿ ಮಾತನಾಡಿ, ನಿಮಗಿಷ್ಟವಾದ ಕೆಲಸ ಮಾಡಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಈ ಕ್ಷಣವಷ್ಟೇ ನನ್ನದು ಎಂದು ಖುಷಿಯಿಂದ ಜೀವಿಸಿದರೆ ಹಲವು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

4. ಪ್ರತಿಕ್ಷಣವನ್ನೂ ಅನುಭವಿಸಿ: ನೀವು ಈಗಾಗಲೇ ಆಗಿ ಹೋದ ದಿನಗಳ ಬಗ್ಗೆ ಮೆಲುಕು ಹಾಕುವಾಗ, ಭವಿಷ್ಯದ ಬಗ್ಗೆ ಚಿಂತಿಸುತ್ತಿರುವಾಗ ಮಾನಸಿಕವಾಗಿ ಗಮನಹರಿಸುವುದು ಕಷ್ಟ. ಹೀಗಾಗಿ, ನಿಮ್ಮ ಬಳಿ ಏನಿದೆಯೋ ಅದರ ಬಗ್ಗೆ ಖುಷಿಪಡಿ. ಅಂತಹ ಸಮಯದಲ್ಲಿ ನಿಮಗೆ ಆಪ್ತರಾದವರ ಜೊತೆ ಮೊಬೈಲ್​ನಲ್ಲಿ ಮಾತನಾಡಿ, ನಿಮಗಿಷ್ಟವಾದ ಕೆಲಸ ಮಾಡಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಈ ಕ್ಷಣವಷ್ಟೇ ನನ್ನದು ಎಂದು ಖುಷಿಯಿಂದ ಜೀವಿಸಿದರೆ ಹಲವು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

5 / 8
5. ಸಮಾಧಾನದಿಂದ ಇರಲು ಅಭ್ಯಾಸ ಮಾಡಿ:
ಸಮಾಧಾನದಿಂದ ಇದ್ದರೆ ಮನಸಿಗೂ ನೆಮ್ಮದಿ ಇರುತ್ತದೆ. ಅದಕ್ಕಾಗಿ ಧ್ಯಾನ, ಯೋಗದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮೊಬೈಲ್, ಕಂಪ್ಯೂಟರ್, ವೇಗದ ಜೀವನಶೈಲಿ ಮುಂತಾದವುಗಳಿಂದ ಮನಸು ಚಂಚಲವಾಗುತ್ತಿರುತ್ತದೆ. ಆದರೆ, ಧ್ಯಾನ, ಯೋಗಾಭ್ಯಾಸದಿಂದ ಆ ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಸಮಾಧಾನವಾಗಿದ್ದರೆ ನಿಮ್ಮ ಮನಸಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲದೆ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ.

5. ಸಮಾಧಾನದಿಂದ ಇರಲು ಅಭ್ಯಾಸ ಮಾಡಿ: ಸಮಾಧಾನದಿಂದ ಇದ್ದರೆ ಮನಸಿಗೂ ನೆಮ್ಮದಿ ಇರುತ್ತದೆ. ಅದಕ್ಕಾಗಿ ಧ್ಯಾನ, ಯೋಗದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮೊಬೈಲ್, ಕಂಪ್ಯೂಟರ್, ವೇಗದ ಜೀವನಶೈಲಿ ಮುಂತಾದವುಗಳಿಂದ ಮನಸು ಚಂಚಲವಾಗುತ್ತಿರುತ್ತದೆ. ಆದರೆ, ಧ್ಯಾನ, ಯೋಗಾಭ್ಯಾಸದಿಂದ ಆ ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಸಮಾಧಾನವಾಗಿದ್ದರೆ ನಿಮ್ಮ ಮನಸಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲದೆ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ.

6 / 8
6. ಸ್ವಲ್ಪ ವಿರಾಮ ತೆಗೆದುಕೊಳ್ಳಿ:
ನೀವು ದೀರ್ಘಕಾಲದವರೆಗೆ ಒಂದೇ ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿದ್ದೀರಾ? ಹಾಗಾದರೆ ಸ್ವಲ್ಪ ಸಮಯದ ನಂತರ ನಿಮ್ಮ ಗಮನವು ಬೇರೆಡೆ ಹರಿಯಲು ಪ್ರಾರಂಭವಾಗುತ್ತದೆ. ಹೀಗಾಗಿ, ಆಗಾಗ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಿದ್ದರೆ ಗಮನವನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಒಂದೇ ವಿಷಯದ ಮೇಲೆ ದೀರ್ಘ ಕಾಲ ಗಮನ ಹರಿಸುವುದು ಅಸಾಧ್ಯ. ಹೀಗಾಗಿ, ನೀವೇ ಆಗಾಗ ಗಮನವನ್ನು ಬೇರೆಡೆ ತಿರುಗಿಸಿ ಮನಸಿಗೆ ಬ್ರೇಕ್ ನೀಡಿ.

6. ಸ್ವಲ್ಪ ವಿರಾಮ ತೆಗೆದುಕೊಳ್ಳಿ: ನೀವು ದೀರ್ಘಕಾಲದವರೆಗೆ ಒಂದೇ ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿದ್ದೀರಾ? ಹಾಗಾದರೆ ಸ್ವಲ್ಪ ಸಮಯದ ನಂತರ ನಿಮ್ಮ ಗಮನವು ಬೇರೆಡೆ ಹರಿಯಲು ಪ್ರಾರಂಭವಾಗುತ್ತದೆ. ಹೀಗಾಗಿ, ಆಗಾಗ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಿದ್ದರೆ ಗಮನವನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಒಂದೇ ವಿಷಯದ ಮೇಲೆ ದೀರ್ಘ ಕಾಲ ಗಮನ ಹರಿಸುವುದು ಅಸಾಧ್ಯ. ಹೀಗಾಗಿ, ನೀವೇ ಆಗಾಗ ಗಮನವನ್ನು ಬೇರೆಡೆ ತಿರುಗಿಸಿ ಮನಸಿಗೆ ಬ್ರೇಕ್ ನೀಡಿ.

7 / 8
7. ಅಭ್ಯಾಸವನ್ನು ಮುಂದುವರಿಸಿ:
ನಿಮ್ಮ ಮಾನಸಿಕ ಗಮನವನ್ನು ಕೇಂದ್ರೀಕರಿಸುವುದು ರಾತ್ರೋರಾತ್ರಿ ಆಗುವ ಸಂಗತಿಯಲ್ಲ. ವೃತ್ತಿಪರ ಕ್ರೀಡಾಪಟುಗಳು ತಮ್ಮ ಏಕಾಗ್ರತೆಯ ಕೌಶಲ್ಯಗಳನ್ನು ಬಲಪಡಿಸಲು ಸಾಕಷ್ಟು ಸಮಯ ಮತ್ತು ಅಭ್ಯಾಸವನ್ನು ಮಾಡುತ್ತಾರೆ. ಏಕಾಗ್ರತೆಯೆನ್ನುವುದು ಸಾಕಷ್ಟು ಅಭ್ಯಾಸದಿಂದ ಉಂಟಾಗುವಂಥದ್ದು. ಹೀಗಾಗಿ, ನಿಮ್ಮ ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಅಭ್ಯಾಸ ಮಾಡುತ್ತಲೇ ಇರಬೇಕು. ನಿಮ್ಮ ಮಾನಸಿಕ ಗಮನ ಸರಿಯಾದರೆ ಹೆಚ್ಚು ಯಶಸ್ಸು, ಸಂತೋಷ, ತೃಪ್ತಿಯನ್ನು ಸಾಧಿಸಬಹುದು.

7. ಅಭ್ಯಾಸವನ್ನು ಮುಂದುವರಿಸಿ: ನಿಮ್ಮ ಮಾನಸಿಕ ಗಮನವನ್ನು ಕೇಂದ್ರೀಕರಿಸುವುದು ರಾತ್ರೋರಾತ್ರಿ ಆಗುವ ಸಂಗತಿಯಲ್ಲ. ವೃತ್ತಿಪರ ಕ್ರೀಡಾಪಟುಗಳು ತಮ್ಮ ಏಕಾಗ್ರತೆಯ ಕೌಶಲ್ಯಗಳನ್ನು ಬಲಪಡಿಸಲು ಸಾಕಷ್ಟು ಸಮಯ ಮತ್ತು ಅಭ್ಯಾಸವನ್ನು ಮಾಡುತ್ತಾರೆ. ಏಕಾಗ್ರತೆಯೆನ್ನುವುದು ಸಾಕಷ್ಟು ಅಭ್ಯಾಸದಿಂದ ಉಂಟಾಗುವಂಥದ್ದು. ಹೀಗಾಗಿ, ನಿಮ್ಮ ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಅಭ್ಯಾಸ ಮಾಡುತ್ತಲೇ ಇರಬೇಕು. ನಿಮ್ಮ ಮಾನಸಿಕ ಗಮನ ಸರಿಯಾದರೆ ಹೆಚ್ಚು ಯಶಸ್ಸು, ಸಂತೋಷ, ತೃಪ್ತಿಯನ್ನು ಸಾಧಿಸಬಹುದು.

8 / 8
Follow us
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್