AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾ! ಬಹಳ ರುಚಿಕರ ಭಟ್ರು ಹೋಟೆಲಿನ ತಿಂಡಿ ತಿನಿಸು, ತಿಂದವರಿಗೆ ಗೊತ್ತು ಅದರ ಗತ್ತು ಗಮ್ಮತ್ತು

ಆಹಾರ ಪ್ರಿಯರಿಗಂತೂ ತಿನ್ನುವುದೆಂದರೆ ಬಲು ಇಷ್ಟನೇ. ಅದರಲ್ಲಿಯೂ ವೈರಂಟಿ ತಿಂಡಿ ತಿನಿಸುಗಳನ್ನು ತಂದು ಮುಂದೆ ಇಟ್ಟರೆ ಬೇಡ ಎನ್ನಲು ಮನಸ್ಸು ಬರುವುದಿಲ್ಲ. ಕೆಲವು ಹೋಟೆಲ್ ನಲ್ಲಿ ಸಿಗುವ ತಿಂಡಿ ತಿನಿಸುಗಳ ರುಚಿಯನ್ನು ನಾಲಿಗೆ ಹತ್ತಿಸಿಕೊಂಡರೆ ಮತ್ತೆ ಮತ್ತೆ ಭೇಟಿ ನೀಡುವ ಎಂದೆನಿಸದೇ ಇರದು. ಅಂತಹ ಹೋಟೆಲ್ ಉಡುಪಿಯ ಜಿಲ್ಲೆಯಲ್ಲಿದೆ. ಹಾಗಾದ್ರೆ ಈ ಭಟ್ರು ಹೋಟೆಲಿನ ವಿಶೇಷತೆಗಳೇನು? ಇಲ್ಲಿ ಏನೆಲ್ಲಾ ಖಾದ್ಯಗಳು ಸಿಗುತ್ತವೆ? ಎನ್ನುವ ಮಾಹಿತಿ ಇಲ್ಲಿದೆ.

ಸಾಯಿನಂದಾ
| Edited By: |

Updated on: Mar 06, 2025 | 5:13 PM

Share
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಆಸುಪಾಸಿನ ಸ್ಥಳಗಳನ್ನು ನೋಡಲು ನೀವೇನಾದ್ರು ಆ ಊರಿಗೆ ಭೇಟಿ ಕೊಟ್ಟರೆ ಅಲ್ಲಿರುವ ಭಟ್ರು ಹೋಟೆಲ್ ಗೆ ಹೋಗಿ ಅಲ್ಲಿನ ತಿಂಡಿ ತಿನಿಸುಗಳ ರುಚಿಯನ್ನು ಸವಿಯದೆ ಬರದೇ ಇದ್ದರೆ ಒಳ್ಳೆಯ ಖಾದ್ಯಗಳನ್ನು ಮಿಸ್ ಮಾಡಿಕೊಂಡಾಗುತ್ತದೆ.

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಆಸುಪಾಸಿನ ಸ್ಥಳಗಳನ್ನು ನೋಡಲು ನೀವೇನಾದ್ರು ಆ ಊರಿಗೆ ಭೇಟಿ ಕೊಟ್ಟರೆ ಅಲ್ಲಿರುವ ಭಟ್ರು ಹೋಟೆಲ್ ಗೆ ಹೋಗಿ ಅಲ್ಲಿನ ತಿಂಡಿ ತಿನಿಸುಗಳ ರುಚಿಯನ್ನು ಸವಿಯದೆ ಬರದೇ ಇದ್ದರೆ ಒಳ್ಳೆಯ ಖಾದ್ಯಗಳನ್ನು ಮಿಸ್ ಮಾಡಿಕೊಂಡಾಗುತ್ತದೆ.

1 / 5
ಉಡುಪಿ ಜಿಲ್ಲೆಯ ಹೆಬ್ರಿಯ ತಾಲೂಕಿನಲ್ಲಿರುವ ಈ ಭಟ್ರು ಹೋಟ್ಲು ಹೆಬ್ರಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸರಿಸುಮಾರು 80 ವರ್ಷಗಳ ಹಳೆಯ ಹೋಟೆಲ್ ಇದಾಗಿದ್ದು, ಇವತ್ತಿಗೂ ಕಡಿಮೆ ಬೆಲೆಯಲ್ಲಿ ಅಷ್ಟೇ ರುಚಿಕರವಾದ ತಿಂಡಿ ತಿನಿಸು ಹಾಗೂ ಊಟವನ್ನು ಗ್ರಾಹರಿಗೆ ಪೂರೈಸುತ್ತ ಬರುತ್ತಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯ ತಾಲೂಕಿನಲ್ಲಿರುವ ಈ ಭಟ್ರು ಹೋಟ್ಲು ಹೆಬ್ರಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸರಿಸುಮಾರು 80 ವರ್ಷಗಳ ಹಳೆಯ ಹೋಟೆಲ್ ಇದಾಗಿದ್ದು, ಇವತ್ತಿಗೂ ಕಡಿಮೆ ಬೆಲೆಯಲ್ಲಿ ಅಷ್ಟೇ ರುಚಿಕರವಾದ ತಿಂಡಿ ತಿನಿಸು ಹಾಗೂ ಊಟವನ್ನು ಗ್ರಾಹರಿಗೆ ಪೂರೈಸುತ್ತ ಬರುತ್ತಿದ್ದಾರೆ.

2 / 5
ಭಟ್ರು ಹೋಟೆಲ್ ಎಂದು ಫೇಮಸ್ ಆಗಿರುವ ಇದನ್ನು  ಮುಂಚೆ ಬಡ್ಕಿಲಾಯ ಹೋಟೆಲ್ ಎಂದು ಕರೆಯಲಾಗುತ್ತಿತ್ತು. ಹಳೆಯದಾದ ಹೋಟೆಲ್ ಇಲ್ಲಿ ಐಷಾರಾಮಿ ವ್ಯವಸ್ಥೆಯಿಲ್ಲದಿದ್ದವರು ಕುಳಿತುಕೊಂಡು ತಿನ್ನಲು ಆರಾಮದಾಯಕ ವ್ಯವಸ್ಥೆಯಿದೆ..ರುಚಿಯಲ್ಲಿಯಂತೂ ಗ್ರಾಹಕರಿಗೆ ಯಾವುದೇ ಮೋಸವಾಗುವುದಿಲ್ಲ.

ಭಟ್ರು ಹೋಟೆಲ್ ಎಂದು ಫೇಮಸ್ ಆಗಿರುವ ಇದನ್ನು ಮುಂಚೆ ಬಡ್ಕಿಲಾಯ ಹೋಟೆಲ್ ಎಂದು ಕರೆಯಲಾಗುತ್ತಿತ್ತು. ಹಳೆಯದಾದ ಹೋಟೆಲ್ ಇಲ್ಲಿ ಐಷಾರಾಮಿ ವ್ಯವಸ್ಥೆಯಿಲ್ಲದಿದ್ದವರು ಕುಳಿತುಕೊಂಡು ತಿನ್ನಲು ಆರಾಮದಾಯಕ ವ್ಯವಸ್ಥೆಯಿದೆ..ರುಚಿಯಲ್ಲಿಯಂತೂ ಗ್ರಾಹಕರಿಗೆ ಯಾವುದೇ ಮೋಸವಾಗುವುದಿಲ್ಲ.

3 / 5
ಇಲ್ಲಿ ಊಟಕ್ಕಷ್ಟೇ ಬಾಳೆಎಲೆಯಲ್ಲ. ರುಚಿಕರವಾದ ತಿಂಡಿಯನ್ನು ಸಾಂಬಾರು ಚಟ್ನಿಯೊಂದಿಗೆ ಬಾಳೆ ಎಲೆಯಲ್ಲಿಯೇ ಬಡಿಸಲಾಗುತ್ತದೆ. ಒಮ್ಮೆ ಇಲ್ಲಿನ ಊಟ ತಿಂಡಿ ತಿನಿಸುಗಳ ರುಚಿ ಸವಿದರೆ ಕೈ ರುಚಿಯನ್ನಂತೂ ಮರೆಯಲು ಸಾಧ್ಯವೇ ಇಲ್ಲ.

ಇಲ್ಲಿ ಊಟಕ್ಕಷ್ಟೇ ಬಾಳೆಎಲೆಯಲ್ಲ. ರುಚಿಕರವಾದ ತಿಂಡಿಯನ್ನು ಸಾಂಬಾರು ಚಟ್ನಿಯೊಂದಿಗೆ ಬಾಳೆ ಎಲೆಯಲ್ಲಿಯೇ ಬಡಿಸಲಾಗುತ್ತದೆ. ಒಮ್ಮೆ ಇಲ್ಲಿನ ಊಟ ತಿಂಡಿ ತಿನಿಸುಗಳ ರುಚಿ ಸವಿದರೆ ಕೈ ರುಚಿಯನ್ನಂತೂ ಮರೆಯಲು ಸಾಧ್ಯವೇ ಇಲ್ಲ.

4 / 5
ಭಟ್ರು ಹೋಟೆಲಿನಲ್ಲಿ ಕೊಟ್ಟೆ ಕಡುಬು, ಅಂಬಡೆ, ಮಸಾಲೆ ಅವಲಕ್ಕಿ, ಮಂಗಳೂರಿನ ಬನ್ಸ್ , ಶ್ಯಾವಿಗೆ ಅಡ್ಡೆ ಹಾಗೂ ಹಾಲು, ವಡೆ ಇತ್ಯಾದಿ ರುಚಿಕರವಾದ ತಿಂಡಿಗಳು ಸಿಗುತ್ತದೆ.  ತಿಂದವರಿಗೆ ಗೊತ್ತು ಕೈ ರುಚಿ. ಅಷ್ಟೇ ಅಲ್ಲದೇ ಹೋಳಿಗೆ ಭಟ್ರು ಅಂಗಡಿಯಲ್ಲಿ ಹೋಳಿಗೆ ಕೂಡ ಅಷ್ಟೇ ಫೇಮಸ್ ಆಗಿದ್ದು, ಹೋಳಿಗೆ ಸವಿಯುವುದರೊಂದಿಗೆ ಈ ಸಿಹಿ ತಿಂಡಿಯನ್ನು  ಖರೀದಿ ಮಾಡಬಹುದು. ಪ್ರಸಿದ್ಧ ಭಟ್ರು ಹೋಟೆಲ್ ಹಾಗೂ ಇಲ್ಲಿನ ವಿವಿಧ ಖಾದ್ಯಗಳ ಫೋಟೋಗಳನ್ನು ಸುದ್ದಿ ಚಾವಡಿ ಹೆಸರಿನ ಪೇಜ್ ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಭಟ್ರು ಹೋಟೆಲಿನಲ್ಲಿ ಕೊಟ್ಟೆ ಕಡುಬು, ಅಂಬಡೆ, ಮಸಾಲೆ ಅವಲಕ್ಕಿ, ಮಂಗಳೂರಿನ ಬನ್ಸ್ , ಶ್ಯಾವಿಗೆ ಅಡ್ಡೆ ಹಾಗೂ ಹಾಲು, ವಡೆ ಇತ್ಯಾದಿ ರುಚಿಕರವಾದ ತಿಂಡಿಗಳು ಸಿಗುತ್ತದೆ. ತಿಂದವರಿಗೆ ಗೊತ್ತು ಕೈ ರುಚಿ. ಅಷ್ಟೇ ಅಲ್ಲದೇ ಹೋಳಿಗೆ ಭಟ್ರು ಅಂಗಡಿಯಲ್ಲಿ ಹೋಳಿಗೆ ಕೂಡ ಅಷ್ಟೇ ಫೇಮಸ್ ಆಗಿದ್ದು, ಹೋಳಿಗೆ ಸವಿಯುವುದರೊಂದಿಗೆ ಈ ಸಿಹಿ ತಿಂಡಿಯನ್ನು ಖರೀದಿ ಮಾಡಬಹುದು. ಪ್ರಸಿದ್ಧ ಭಟ್ರು ಹೋಟೆಲ್ ಹಾಗೂ ಇಲ್ಲಿನ ವಿವಿಧ ಖಾದ್ಯಗಳ ಫೋಟೋಗಳನ್ನು ಸುದ್ದಿ ಚಾವಡಿ ಹೆಸರಿನ ಪೇಜ್ ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

5 / 5
Follow Us
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ