AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ 9ರಿಂದ ‘ಕಲರ್ಸ್ ಕನ್ನಡ’ದಲ್ಲಿ ಬರಲಿದೆ ಹೊಸ ಸೀರಿಯಲ್​ ‘ದೃಷ್ಟಿಬೊಟ್ಟು’

‘ದೃಷ್ಟಿಬೊಟ್ಟು’ ಸೀರಿಯಲ್​ನಲ್ಲಿ ವಿಜಯ್ ಸೂರ್ಯ, ಅರ್ಪಿತಾ ಮೋಹಿತೆ, ಅಂಬಿಕಾ ಮುಂತಾದವರು ನಟಿಸುತ್ತಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಮಾತ್ರವಲ್ಲದೇ ‘ಜಿಯೋ ಸಿನಿಮಾ’ ಆ್ಯಪ್ ಮೂಲಕವೂ ಈ ಧಾರಾವಾಹಿಯನ್ನು ವೀಕ್ಷಿಸಬಹುದು. ಇತ್ತೀಚೆಗೆ ಧಾರಾವಾಹಿ ತಂಡದವರು ಸುದ್ದಿಗೋಷ್ಠಿ ನಡೆಸಿದರು. ಕಥೆ ಮತ್ತು ಪಾತ್ರವರ್ಗದ ಬಗ್ಗೆ ಇಲ್ಲಿದೆ ಮಾಹಿತಿ..

ಮದನ್​ ಕುಮಾರ್​
|

Updated on: Sep 06, 2024 | 7:13 PM

Share
‘ಕಲರ್ಸ್ ಕನ್ನಡ’ ಚಾನೆಲ್​ನಲ್ಲಿ ಹೊಸ ಧಾರಾವಾಹಿಯ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ರೂಪವೇ ಶಾಪವಾದ ಹುಡುಗಿಯ ಕಹಾನಿ ಈ ಸೀರಿಯಲ್​ನಲ್ಲಿ ಇರಲಿದೆ. ಈ ಹೊಸ ಸೀರಿಯಲ್​ ಹೆಸರು ‘ದೃಷ್ಟಿಬೊಟ್ಟು’. ಸೆ.9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರ ಆಗಲಿದೆ. ವಿಜಯ್ ಸೂರ್ಯ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

‘ಕಲರ್ಸ್ ಕನ್ನಡ’ ಚಾನೆಲ್​ನಲ್ಲಿ ಹೊಸ ಧಾರಾವಾಹಿಯ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ರೂಪವೇ ಶಾಪವಾದ ಹುಡುಗಿಯ ಕಹಾನಿ ಈ ಸೀರಿಯಲ್​ನಲ್ಲಿ ಇರಲಿದೆ. ಈ ಹೊಸ ಸೀರಿಯಲ್​ ಹೆಸರು ‘ದೃಷ್ಟಿಬೊಟ್ಟು’. ಸೆ.9ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ 6.30ಕ್ಕೆ ಈ ಧಾರಾವಾಹಿ ಪ್ರಸಾರ ಆಗಲಿದೆ. ವಿಜಯ್ ಸೂರ್ಯ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

1 / 5
‘ದೃಷ್ಟಿಬೊಟ್ಟು’ ಸೀರಿಯಲ್​ನ ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಅಂಬಿಕಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಮುಂತಾದವರು ಈ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ‘ಈ ಸೀರಿಯಲ್​ನ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನ ಗೆಲ್ಲುತ್ತದೆ’ ಎಂದು ವಾಹಿನಿಯ ಬಿಸ್ನೆಸ್​ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದಾರೆ.

‘ದೃಷ್ಟಿಬೊಟ್ಟು’ ಸೀರಿಯಲ್​ನ ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಅಂಬಿಕಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗ್ಡೆ ಮುಂತಾದವರು ಈ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ‘ಈ ಸೀರಿಯಲ್​ನ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನ ಗೆಲ್ಲುತ್ತದೆ’ ಎಂದು ವಾಹಿನಿಯ ಬಿಸ್ನೆಸ್​ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದಾರೆ.

2 / 5
ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಚಿತ್ರೀಕರಣ ಮಾಡಿರುವುದು ಹೆಗ್ಗಳಿಕೆ. ಸ್ಪರ್ಶ್ ಮಸಾಲಾ ಈ ಧಾರಾವಾಹಿಯ ಸ್ಪೆಷಲ್ ಪಾರ್ಟ್ನರ್​ ಆಗಿದ್ದಾರೆ. 2 ವಿಭಿನ್ನ ಕೌಟುಂಬಿಕ ಹಿನ್ನೆಲೆಯಿಂದ ಬಂದ ದೃಷ್ಟಿ ಎಂಬ ಹುಡುಗಿ ಮತ್ತು ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಒಂದೆಡೆ ಸಂಧಿಸಿದಾಗ ನಡೆಯುವ ಕೌತುಕದ ಕಥೆ ಈ ಸೀರಿಯಲ್​ನಲ್ಲಿ ಇದೆ.

ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಚಿತ್ರೀಕರಣ ಮಾಡಿರುವುದು ಹೆಗ್ಗಳಿಕೆ. ಸ್ಪರ್ಶ್ ಮಸಾಲಾ ಈ ಧಾರಾವಾಹಿಯ ಸ್ಪೆಷಲ್ ಪಾರ್ಟ್ನರ್​ ಆಗಿದ್ದಾರೆ. 2 ವಿಭಿನ್ನ ಕೌಟುಂಬಿಕ ಹಿನ್ನೆಲೆಯಿಂದ ಬಂದ ದೃಷ್ಟಿ ಎಂಬ ಹುಡುಗಿ ಮತ್ತು ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಒಂದೆಡೆ ಸಂಧಿಸಿದಾಗ ನಡೆಯುವ ಕೌತುಕದ ಕಥೆ ಈ ಸೀರಿಯಲ್​ನಲ್ಲಿ ಇದೆ.

3 / 5
ದೃಷ್ಟಿಯ ಪಾಲಿಗೆ ರೂಪ ಎನ್ನುವುದೇ ಶಾಪವಾಗಿರುತ್ತದೆ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುವ ಅವಳಿಗೆ ತನ್ನ ಸೋದರಿಯನ್ನು ಮತ್ತೆ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಆಸೆ. ಮೊದಲು ಮೆಕ್ಯಾನಿಕ್ ಆಗಿ ಈಗ ರೌಡಿಯಾಗಿರುವ ಹೀರೋ ದತ್ತನಿಗೆ ಸುಂದರವಾದ ಹೆಣ್ಣುಗಳನ್ನ ಕಂಡರೆ ಕೋಪ. ಇಂಥ ಡಿಫರೆಂಟ್​ ಆದ ಕಥಾಹಂದರದಲ್ಲಿ ಈ ಸೀರಿಯಲ್​ ಮೂಡಿಬರಲಿದೆ.

ದೃಷ್ಟಿಯ ಪಾಲಿಗೆ ರೂಪ ಎನ್ನುವುದೇ ಶಾಪವಾಗಿರುತ್ತದೆ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುವ ಅವಳಿಗೆ ತನ್ನ ಸೋದರಿಯನ್ನು ಮತ್ತೆ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಆಸೆ. ಮೊದಲು ಮೆಕ್ಯಾನಿಕ್ ಆಗಿ ಈಗ ರೌಡಿಯಾಗಿರುವ ಹೀರೋ ದತ್ತನಿಗೆ ಸುಂದರವಾದ ಹೆಣ್ಣುಗಳನ್ನ ಕಂಡರೆ ಕೋಪ. ಇಂಥ ಡಿಫರೆಂಟ್​ ಆದ ಕಥಾಹಂದರದಲ್ಲಿ ಈ ಸೀರಿಯಲ್​ ಮೂಡಿಬರಲಿದೆ.

4 / 5
ಕಥೆಯು ಹಲವು ಊಹಿಸಲಾಗದ ಟ್ವಿಸ್ಟ್​ಗಳನ್ನು ಪಡೆಯುತ್ತಾ ಸಾಗುತ್ತದೆ. ದೃಷ್ಟಿಗೆ ತನ್ನ ಸಹೋದರಿ ಸಿಕ್ಕುತ್ತಾಳಾ? ದತ್ತ ಮತ್ತು ದೃಷ್ಟಿಯನ್ನು ವಿಧಿ ಒಂದಾಗಿಸುತ್ತಾ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಲು ಸಾಧ್ಯವಾಗುತ್ತಾ? ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲು ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ವೀಕ್ಷಿಸಬೇಕು.

ಕಥೆಯು ಹಲವು ಊಹಿಸಲಾಗದ ಟ್ವಿಸ್ಟ್​ಗಳನ್ನು ಪಡೆಯುತ್ತಾ ಸಾಗುತ್ತದೆ. ದೃಷ್ಟಿಗೆ ತನ್ನ ಸಹೋದರಿ ಸಿಕ್ಕುತ್ತಾಳಾ? ದತ್ತ ಮತ್ತು ದೃಷ್ಟಿಯನ್ನು ವಿಧಿ ಒಂದಾಗಿಸುತ್ತಾ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡಲು ಸಾಧ್ಯವಾಗುತ್ತಾ? ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲು ‘ದೃಷ್ಟಿಬೊಟ್ಟು’ ಧಾರಾವಾಹಿಯನ್ನು ವೀಕ್ಷಿಸಬೇಕು.

5 / 5
Follow Us
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ