AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಕ್ತರಿಂದ ಸ್ವಾಮೀಜಿಗೆ ಮೆಣಸಿನ ಪುಡಿ ಅಭಿಷೇಕ

ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆಯುವ ವಿಶಿಷ್ಟವಾದ ಮೆಣಸಿನಕಾಯಿ ಅಭಿಷೇಕದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ನಡೆಯುವ ಈ ಅಭಿಷೇಕದಲ್ಲಿ ಸುಮಾರು 100 ಕೆಜಿ ಮೆಣಸಿನಕಾಯಿಯನ್ನು ಬಳಸಲಾಗುತ್ತದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಬಹಳ ಪ್ರಿಯ ಎಂದು ನಂಬಲಾಗಿದೆ ಮತ್ತು ಈ ಅಭಿಷೇಕವು ಕಷ್ಟಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ.

ಅಕ್ಷತಾ ವರ್ಕಾಡಿ
|

Updated on: Nov 21, 2024 | 2:47 PM

Share
ಸಾಮಾನ್ಯವಾಗಿ ಅಭಿಷೇಕ ಎಂದರೆ ಹಾಲು, ಪಂಚಾಮೃತ, ಜೇನು ಇತ್ಯಾದಿಗಳಿಂದ ಕಲ್ಲಿನ ರೂಪದಲ್ಲಿ ವಿಗ್ರಹಗಳಿಗೆ ಅಭಿಷೇಕ ಮಾಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಸೇರಿಂದಂತೆ ರಾಜಕಾರಣಿ, ಸಿನಿಮಾ ನಟರಿಗೆ ಅಭಿಷೇಕ ಮಾಡುವುದು ಹೆಚ್ಚಾಗಿ ಬಿಟ್ಟಿದೆ.

ಸಾಮಾನ್ಯವಾಗಿ ಅಭಿಷೇಕ ಎಂದರೆ ಹಾಲು, ಪಂಚಾಮೃತ, ಜೇನು ಇತ್ಯಾದಿಗಳಿಂದ ಕಲ್ಲಿನ ರೂಪದಲ್ಲಿ ವಿಗ್ರಹಗಳಿಗೆ ಅಭಿಷೇಕ ಮಾಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಸೇರಿಂದಂತೆ ರಾಜಕಾರಣಿ, ಸಿನಿಮಾ ನಟರಿಗೆ ಅಭಿಷೇಕ ಮಾಡುವುದು ಹೆಚ್ಚಾಗಿ ಬಿಟ್ಟಿದೆ.

1 / 5
ಹಾಲು, ಪಂಚಾಮೃತದ ಅಭಿಷೇಕಗಳನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರಿ.  ಆದರೆ ಎಂದಾದರೂ ಮೆಣಸಿನ ಪುಡಿಯ ಅಭಿಷೇಕದ ಬಗ್ಗೆ ಕೇಳಿದ್ದೀರಾ? ಇದೀಗ ಆಂಧ್ರಪ್ರದೇಶದ  ಏಲೂರು ಜಿಲ್ಲೆಯಲ್ಲಿ ನಡೆದ  ಮೆಣಸಿನ ಪುಡಿಯ ಅಭಿಷೇಕ ಎಲ್ಲೆಡೆ ವೈರಲ್​​ ಆಗಿದೆ.

ಹಾಲು, ಪಂಚಾಮೃತದ ಅಭಿಷೇಕಗಳನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರಿ. ಆದರೆ ಎಂದಾದರೂ ಮೆಣಸಿನ ಪುಡಿಯ ಅಭಿಷೇಕದ ಬಗ್ಗೆ ಕೇಳಿದ್ದೀರಾ? ಇದೀಗ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದ ಮೆಣಸಿನ ಪುಡಿಯ ಅಭಿಷೇಕ ಎಲ್ಲೆಡೆ ವೈರಲ್​​ ಆಗಿದೆ.

2 / 5
ಏಲೂರು ಜಿಲ್ಲೆಯ ದೊರಸಾನಿಪಾಡುವಿನ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ನಡೆದ ಈ ಅಭಿಷೇಕವನ್ನು ಕರಂ ಅಭಿಷೇಕ ಎಂದು ಕರೆಯಲಾಗುತ್ತದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾಕಷ್ಟು ಜನರು ಪಾಲ್ಗೊಳ್ಳುತ್ತಾರೆ.

ಏಲೂರು ಜಿಲ್ಲೆಯ ದೊರಸಾನಿಪಾಡುವಿನ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ನಡೆದ ಈ ಅಭಿಷೇಕವನ್ನು ಕರಂ ಅಭಿಷೇಕ ಎಂದು ಕರೆಯಲಾಗುತ್ತದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾಕಷ್ಟು ಜನರು ಪಾಲ್ಗೊಳ್ಳುತ್ತಾರೆ.

3 / 5
ಶ್ರೀ ಶಿವದತ್ತ ಸ್ವಾಮೀಜಿಯ ಮೇಲೆ ಸುಮಾರು 100 ಕೆಜಿ ಮೆಣಸಿನಕಾಯಿಯಿಂದ ಅಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸುವುದು ವಾಡಿಕೆಯಾಗಿದ್ದು, ಕಳೆದ 14 ವರ್ಷಗಳಿಂದ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರಲಾಗುತ್ತಿದೆ.

ಶ್ರೀ ಶಿವದತ್ತ ಸ್ವಾಮೀಜಿಯ ಮೇಲೆ ಸುಮಾರು 100 ಕೆಜಿ ಮೆಣಸಿನಕಾಯಿಯಿಂದ ಅಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸುವುದು ವಾಡಿಕೆಯಾಗಿದ್ದು, ಕಳೆದ 14 ವರ್ಷಗಳಿಂದ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರಲಾಗುತ್ತಿದೆ.

4 / 5
ಇಲ್ಲಿ ಪೂಜಿಸುವ ಪ್ರತ್ಯಂಗಿರಿ ದೇವಿಗೆ ಕೆಂಪು ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ಅಲ್ಲದೆ ಪ್ರತ್ಯಂಗಿರಿ ದೇವಿಗೆ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗುತ್ತದೆ. ಅಂತಹ ಕೆಂಪು ಮೆಣಸಿನಕಾಯಿಯನ್ನು ಹುರಿದು ಪ್ರತ್ಯಂಗಿರಿ ಶಿವನಿಗೆ ಅಭಿಷೇಕ ಮಾಡಿದರೆ ಅವರ ಕಷ್ಟಗಳು ಮತ್ತು ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.

ಇಲ್ಲಿ ಪೂಜಿಸುವ ಪ್ರತ್ಯಂಗಿರಿ ದೇವಿಗೆ ಕೆಂಪು ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ಅಲ್ಲದೆ ಪ್ರತ್ಯಂಗಿರಿ ದೇವಿಗೆ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗುತ್ತದೆ. ಅಂತಹ ಕೆಂಪು ಮೆಣಸಿನಕಾಯಿಯನ್ನು ಹುರಿದು ಪ್ರತ್ಯಂಗಿರಿ ಶಿವನಿಗೆ ಅಭಿಷೇಕ ಮಾಡಿದರೆ ಅವರ ಕಷ್ಟಗಳು ಮತ್ತು ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.

5 / 5
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us