AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಕಾಂಗ್ರೆಸ್ ಪಕ್ಷ ತೊರೆಯುವಂತೆ ಬಲವಂತ ಮಾಡಿದ್ದಾರೆ; ಕಾಂಗ್ರೆಸ್, ರಾಹುಲ್ ಗಾಂಧಿಗೆ ಗುಲಾಂ ನಬಿ ಆಜಾದ್ ತಿರುಗೇಟು

ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಹೆಚ್ಚಿನ ಮಟ್ಟಿಗೆ ಸಮಾಲೋಚನಾ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರು ಆದರೆ ಅದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಇದು ನಾಶವಾಯಿತು ಎಂದರು.

ನಾನು ಕಾಂಗ್ರೆಸ್ ಪಕ್ಷ ತೊರೆಯುವಂತೆ ಬಲವಂತ ಮಾಡಿದ್ದಾರೆ; ಕಾಂಗ್ರೆಸ್, ರಾಹುಲ್ ಗಾಂಧಿಗೆ ಗುಲಾಂ ನಬಿ ಆಜಾದ್ ತಿರುಗೇಟು
ಗುಲಾಂ ನಬಿ ಆಜಾದ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 29, 2022 | 4:41 PM

Share

ಕಾಂಗ್ರೆಸ್‌ಗೆ (Congress) ರಾಜೀನಾಮೆ ನೀಡಿದ ಬೆನ್ನಲ್ಲೇ, ಗುಲಾಂ ನಬಿ ಆಜಾದ್ (Ghulam Nabi Azad) ಸೋಮವಾರ ಗಾಂಧಿ ನಾಯಕತ್ವದ ಮೇಲೆ ವಾಗ್ದಾಳಿ ಮಾಡಿದ್ದಾರೆ. G-23 ಪತ್ರವನ್ನು ಬರೆದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ನನ್ನೊಂದಿಗೆ ಸಮಸ್ಯೆ ಉದ್ಭವವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೆಪ ಎಂದು ಹೇಳಿದ ಆಜಾದ್ ನನ್ನನ್ನು ಬಲವಂತವಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುವಂತೆ ಮಾಡಲಾಯಿತು ಎಂದಿದ್ದಾರೆ.  ಮೋದಿ ಒಂದು ನೆಪ, ಜಿ 23 ಪತ್ರ ಬರೆದಾಗಿನಿಂದ ಅವರಿಗೆ ನನ್ನೊಂದಿಗೆ ಸಮಸ್ಯೆ ಇದೆ. ಅವರ ಬಗ್ಗೆ ಬರೆಯುವುದಾಗಲೀ ಅವರನ್ನು ಪ್ರಶ್ನಿಸುವುದಾಗಲೀ ಅವರಿಗೆ ಇಷ್ಟವಿಲ್ಲ ಹಲವಾರು (ಕಾಂಗ್ರೆಸ್) ಸಭೆಗಳು ನಡೆದಿವೆ, ಆದರೆ ಒಂದೇ ಒಂದು ಸಲಹೆಯನ್ನು ಸಹ ತೆಗೆದುಕೊಳ್ಳಲಾಗಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.ಸಂಸತ್ತಿನಲ್ಲಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಅಪ್ಪುಗೆಯ ಬಗ್ಗೆ ವ್ಯಂಗ್ಯವಾಡಿದ ಗುಲಾಂ ನಬಿ ಆಜಾದ್, “ಮೋದಿಯೊಂದಿಗೆ ಸಿಕ್ಕಿಹಾಕಿಕೊಂಡಿರುವುದು ನಾನಲ್ಲ, ಅವರೇ” ಎಂದು ಹೇಳಿದರು. ಪ್ರಧಾನಿ ಮೋದಿಯವರ ಎಡ, ಬಲ ಮತ್ತು ಮಧ್ಯೆ ದಾಳಿ ಮಾಡುವ ರಾಹುಲ್ ಗಾಂಧಿಯವರ ನೀತಿಯನ್ನು ಆಜಾದ್ ಟೀಕಿಸಿದ್ದಾರೆ.

ಈಗಿನ ಸಿಡಬ್ಲ್ಯುಸಿ ಅರ್ಥಹೀನವಾಗಿದೆ. ಸೋನಿಯಾ ನೇತೃತ್ವದಲ್ಲಿ ಒಂದೇ ಒಂದು ಸಿಡಬ್ಲ್ಯುಸಿ ಮಾತ್ರ ಇತ್ತು. ಆದರೆ ಕಳೆದ 10 ವರ್ಷಗಳಲ್ಲಿ, 25 ಸಿಡಬ್ಲ್ಯುಸಿ ಸದಸ್ಯರು ಮತ್ತು 50 ವಿಶೇಷ ಆಹ್ವಾನಿತರು ಇದ್ದಾರೆ ಎಂದು ಎನ್ ಡಿಟಿವಿ ಜತೆ ಮಾತನಾಡಿದ ಆಜಾದ್ ಹೇಳಿದ್ದಾರೆ .

ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಹೆಚ್ಚಿನ ಮಟ್ಟಿಗೆ ಸಮಾಲೋಚನಾ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಅದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಇದು ನಾಶವಾಯಿತು.

30 ವರ್ಷಗಳ ಹಿಂದೆ ಹೇಗಿತ್ತೋ ಅದೇ ಗೌರವವನ್ನು ನಾನು “ಸೋನಿಯಾ ಗಾಂಧಿಯವರಿಗೆ ಕೊಡುತ್ತೇನೆ. ಇಂದಿರಾಗಾಂಧಿ ಕುಟುಂಬ, ರಾಜೀವ್-ಸೋನಿಯಾ ಗಾಂಧಿ ಅವರ ಮಗ ರಾಹುಲ್ ಗಾಂಧಿಯ ಮೇಲಿನ ಗೌರವವೂ ಹಾಗೇ ಇದೆ. ವೈಯಕ್ತಿಕವಾಗಿ, ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ನಾವು ಅವರನ್ನು ಯಶಸ್ವಿ ನಾಯಕನನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ ಆದರೆ ಅವರು ಆಸಕ್ತಿ ಹೊಂದಿಲ್ಲ..,” ಆಜಾದ್ ಹೇಳಿದರು.

ರಾಹಲ್ ಅವರ ಅವರ “ಬಾಲಿಶ ವರ್ತನೆ”, “ಅಪ್ರಬುದ್ಧತೆ” ಮತ್ತು ಅನುಭವ ಇಲ್ಲದವರಿಗೆ ಪಕ್ಷದ ಹೊಣೆ ನೀಡಿದ್ದನ್ನು ಟೀಕಿಸಿ ಆಜಾದ್ ಕಾಂಗ್ರೆಸ್ ತೊರೆದಿದ್ದರು.ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ಅವರು 2014 ರ ರಾಷ್ಟ್ರೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರಾಹುಲ್ ಕಾರಣ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ತನ್ನ ಉನ್ನತ ನಾಯಕತ್ವದ ಮೇಲಿನ ಇತ್ತೀಚಿನ ದಾಳಿಗೆ ಗುಲಾಂ ನಬಿ ಆಜಾದ್ ಅವರನ್ನು ಟೀಕಿಸಿದೆ, ಅವರು ಪಕ್ಷವನ್ನು “ನಿಂದೆ” ಮಾಡಲು ಕೆಲಸ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಅವರು ತಮ್ಮನ್ನು ತಾವು ಕೀಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಆಜಾದ್‌ಗೆ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನದ ಉಸ್ತುವಾರಿ ಜೈರಾಮ್ ರಮೇಶ್, “ಇಷ್ಟು ಸುದೀರ್ಘ ವೃತ್ತಿಜೀವನದ ನಂತರ, ಸೌಜನ್ಯದಿಂದ ಸಂಪೂರ್ಣವಾಗಿ ಪಕ್ಷವನ್ನು ನಿಂದಿಸಲು, ಮನಬಂದಂತೆ ಸಂದರ್ಶನಗಳನ್ನು ನೀಡುವ ಮೂಲಕ, ಆಜಾದ್ ಅವರು ತಮ್ಮನ್ನು ಮತ್ತಷ್ಟು ಕೆಳಗಿನ ಮಟ್ಟಕ್ಕೆ ಇಳಿಸಿದ್ದಾರೆ . ಪ್ರತಿ ನಿಮಿಷವೂ ತನ್ನ ವಿಶ್ವಾಸಘಾತುಕತನವನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಅವರು ಯಾಕೆ ಹೆದರುತ್ತಾರೆ? ಅವರನ್ನು ಸುಲಭವಾಗಿ ಬಯಲುಗೊಳಿಸಬಹುದು. ಹೀಗೆ ಮಾಡುವ ಮೂಲಕ ನಾವೇಕೆ ಅವರ ಮಟ್ಟಕ್ಕೆ ಇಳಿಯಬೇಕು ಎಂದು ಕೇಳಿದ್ದಾರೆ .

ಕಪಿಲ್ ಸಿಬಲ್ ಮತ್ತು ಅಶ್ವನಿ ಕುಮಾರ್ ಸೇರಿದಂತೆ ಉನ್ನತ ಮಟ್ಟದ ನಾಯಕರ ನಿರ್ಗಮನದಿಂದಾಗಿ ಪತನ ಎದುರಿಸುತ್ತಿರುವ ಕಾಂಗ್ರೆಸ್, ಆಜಾದ್ ಅವರ ಡಿಎನ್‌ಎಯನ್ನು “ಮೋದಿ ಫೈಡ್” ಎಂದು ಆಗಿದೆ ಎಂದಿದ್ದು ರಾಜ್ಯಸಭಾ ಅಧಿಕಾರಾವಧಿಯ ಅಂತ್ಯಕ್ಕೆ ಈ ರಾಜೀನಾಮೆ ಬೆಸೆದಿರುವುದಾಗಿ ಹೇಳಿದೆ.

Published On - 4:31 pm, Mon, 29 August 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!