ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಆರ್​ಎಸ್​ಎಸ್​ನವರು; ಸಿದ್ದರಾಮಯ್ಯ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ದೇಶದಲ್ಲಿ ಬೇರೆ ವಿಚಾರವಿಲ್ಲ. ಈ ಬಾರಿ ಅವರು ಗೆಲ್ಲಲ್ಲ. ಮುಖ್ಯಮಂತ್ರಿ ಆಗಲ್ಲ. ಅವರ ಸಂಘಟನೆಯ, ಅಧಿಕಾರದ ಅಂತಿಮ ದಿನಗಳು ಬಂದಿದೆ. ಇದರಿಂದ ವಿಚಲಿತರಾಗಿ ಈ ರೀತಿ ಹೇಳುತ್ತಿದ್ದಾರೆ.

ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಆರ್​ಎಸ್​ಎಸ್​ನವರು; ಸಿದ್ದರಾಮಯ್ಯ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ
ಗೃಹ ಸಚಿವ ಆರಗ ಜ್ಞಾನೇಂದ್ರ
Edited By:

Updated on: May 30, 2022 | 11:17 AM

ಮಂಗಳೂರು: ಆರ್​ಎಸ್​ಎಸ್​ (RSS) ಮೂಲ ಕೆದಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಈ ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಆರ್​ಎಸ್​ಎಸ್​ನವರು. ಅನೇಕ ರಾಜ್ಯಗಳ ಸಿಎಂಗಳು, ನಾನು ಆರ್​ಎಸ್​ಎಸ್​ನಿಮದ ಬಂದವನು. ಈ ದೇಶದಲ್ಲಿ ನನ್ನಂತವರು ಲಕ್ಷ ಲಕ್ಷ ಜನ ಇದ್ದಾರೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ದೇಶದಲ್ಲಿ ಬೇರೆ ವಿಚಾರವಿಲ್ಲ. ಈ ಬಾರಿ ಅವರು ಗೆಲ್ಲಲ್ಲ. ಮುಖ್ಯಮಂತ್ರಿ ಆಗಲ್ಲ. ಅವರ ಸಂಘಟನೆಯ, ಅಧಿಕಾರದ ಅಂತಿಮ ದಿನಗಳು ಬಂದಿದೆ. ಇದರಿಂದ ವಿಚಲಿತರಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕ ನಡುವೆ ವಾಕ್ಸಮರ, ಟ್ವೀಟ್ ವಾರ್ ನಡೆಯುತ್ತಿದೆ. ಸಿದ್ದರಾಮಯ್ಯ ಆರೋಪದ ಬೆನ್ನಲ್ಲೆ ಕಾಂಗ್ರೆಸ್ ಘಟಕ ಆರ್​ಎಸ್​ಎಸ್ ನಪುಂಸಕ ಸಂಘಟನೆ ಟ್ವೀಟ್ ಮಾಡಿತ್ತು. ಈ ಟ್ವೀಟ್​​ಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪ್ರತಾಪ್ ಸಿಂಹ ಹೇಳಿದ್ದೇನು?
ಯುದ್ಧ ಸಂದರ್ಭದಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದ್ದು ಯಾರು? ಸೈನಿಕರು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದ ನಂಪುಸಕರು ಯಾರು? ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. 1962ರ ಚೀನಾ ಯುದ್ಧದ ವೇಳೆ ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದ್ದರು. ಚೀನಾ ಲಡಾಖ್​ ಅಕ್ರಮಿಸಿಕೊಂಡಾಗ ಬಿಟ್ಟುಕೊಟ್ಟ ನಪುಂಸಕ ಯಾರು? ಪಾಕ್ ಆಕ್ರಮಿತ ಕಾಶ್ಮೀರ ವಾಪಾಸ್ ಪಡೆಯದ ಷಂಡ ಸರ್ಕಾರ ಯಾರದು? ಉಗ್ರ ವಾಸೀಂ ಮಲಿಕ್​ನನ್ನು ಪಿಎಂಒಗೆ ಕರೆಸಿಕೊಂಡ ಸರ್ಕಾರ ಯಾರದು? ಮುಂಬೈ ಮೇಲೆ ದಾಳಿಯಾದಾಗ ಸುಮ್ಮನಿದ್ದ ನಪುಂಸಕರು ಯಾರು? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಲಾಲ್​ಚೌಕ್​ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಲು ಬಿಟ್ಟವರು ನಪುಂಸಕರು. ಅದನ್ನು ಇಳಿಸಿ ರಾಷ್ಟ್ರಧ್ವಜ ಹಾರಿಸಿದವರು ಮೋದಿ, ಎಂ.ಎಂ.ಜೋಶಿ ಎಂದರು.

ಇದನ್ನೂ ಓದಿ
Petrol bunk Owners Strike: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರಿಂದ ನಾಳೆ ಮುಷ್ಕರಕ್ಕೆ ಕರೆ
Pregnancy: ಗರ್ಭಾವಸ್ಥೆಯಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಲೇಖಕಿ ಗೀತಾಂಜಲಿ ಶ್ರೀ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ; ಲೇಖಕಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅಮುಲ್
Petrol Price Today: ಇಂದು ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ಇದನ್ನೂ ಓದಿ: ಲೇಖಕಿ ಗೀತಾಂಜಲಿ ಶ್ರೀ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ; ಲೇಖಕಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅಮುಲ್

ಕಾಂಗ್ರೆಸ್ ಟ್ವೀಟ್​ಗೆ ಸುನೀಲ್ ಕುಮಾರ್ ಕಿಡಿ:
ಕಾಂಗ್ರೆಸ್​ ಟ್ವೀಟ್​ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ. ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನದಲ್ಲಿ ಕಾಂಗ್ರೆಸ್ ಏನ್ಮಾಡಿತ್ತು? ಅವತ್ತು ರಾಷ್ಟ್ರಧ್ವಜದ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ? ಕಾಂಗ್ರೆಸ್​ ಹೇಗೆ ನಡೆದುಕೊಂಡಿದೆ ಅನ್ನೋದು ದೇಶವೇ ನೋಡಿದೆ. ಹುಬ್ಬಳ್ಳಿಯಲ್ಲಿ ನಪುಂಸಕನಂತೆ ನಡೆದುಕೊಂಡಿದ್ದು ಕಾಂಗ್ರೆಸ್. ರಾಷ್ಟ್ರಧ್ವಜದ ವಿಚಾರದಲ್ಲಿ ಕಾಂಗ್ರೆಸ್ ನಪುಂಸಕನಂತೆ ನಡೆದುಕೊಂಡಿತ್ತು. ಮೋದಿ ಸರ್ಕಾರ ಬರುವ ತನಕವೂ ಕಾಶ್ಮೀರದ ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಬಿಡಲಿಲ್ಲ. ಅವತ್ತಿನ ಕಾಂಗ್ರೆಸ್ ಸರ್ಕಾರ ನಪುಂಸಕತ್ವ ತೋರಿಸಿತ್ತು. ಉಗ್ರರ ಮುಂದೆ ಕಾಂಗ್ರೆಸ್ ನಪುಂಸಕರಂತೆ ಮಂಡಿಯೂರಿತ್ತು. 60 ವರ್ಷದ ಆಡಳಿತದಲ್ಲಿ ಭಯೋತ್ಪಾದನೆ ನಿಗ್ರಹ ವಿಚಾರವಾಗಿ, ಗಡಿ ವಿಚಾರದಲ್ಲಿ ಕಾಂಗ್ರೆಸ್ ನಪುಂಸಕನಂತೆ ನಡೆದುಕೊಂಡಿತ್ತು ಎಂದು ಟ್ವೀಟ್​ ಮೂಲಕ ಕಾಂಗ್ರೆಸ್ ವಿರುದ್ಧ ಸುನಿಲ್​ ಕುಮಾರ್ ಕಿಡಿ ಕಾರಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:17 am, Mon, 30 May 22