ಲೇಖಕಿ ಗೀತಾಂಜಲಿ ಶ್ರೀ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ; ಲೇಖಕಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅಮುಲ್

ಲೇಖಕಿ ಗೀತಾಂಜಲಿ ಶ್ರೀ ಅವರು ಬರೆದ ಟೂಂಬ್ ಆಫ್ ಸ್ಯಾಂಡ್ (novel Tomb of Sand) ಕಾದಂಬರಿಗಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. 

ಲೇಖಕಿ ಗೀತಾಂಜಲಿ ಶ್ರೀ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ; ಲೇಖಕಿಯ ಚಿತ್ರವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ  ಅಮುಲ್
ಲೇಖಕಿಯ ಕಾರ್ಟೂನ್ ಚಿತ್ರ Image Credit source: India Today
Follow us
| Updated By: ವಿವೇಕ ಬಿರಾದಾರ

Updated on:May 30, 2022 | 10:00 AM

ಲೇಖಕಿ ಗೀತಾಂಜಲಿ ಶ್ರೀ (Geetanjali Shree) ಅವರು ಬರೆದ ಟೂಂಬ್ ಆಫ್ ಸ್ಯಾಂಡ್ (novel Tomb of Sand) ಕಾದಂಬರಿಗಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು  (International Booker Prize) ಪಡೆದಿದ್ದಾರೆ.  ಲೇಖಕಿ ಗೀತಾಂಜಲಿ ಶ್ರೀ  ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ‘ಟಾಂಬ್ ಆಫ್ ಸ್ಯಾಂಡ್’ ಪುಸ್ತಕವನ್ನು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. ಗೀತಾಂಜಲಿ ಶ್ರೀ ಅವರ ಈ ಅದ್ಭುತ ಸಾಧನೆಯನ್ನು ಡೈರಿ ಬ್ರಾಂಡ್ ಅಮುಲ್  ತನ್ನ ಇನ್​ಸ್ಟಾಗ್ರಾಮನಲ್ಲಿ ಹಂಚಿಕೊಂಡಿದೆ.

ಅಮುಲ್ ತಮ್ಮ ಅಧಿಕೃತ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳಲ್ಲಿ ಈ ಸಾಧನೆಯ ಪೋಟೊವನ್ನು  ಹಂಚಿಕೊಂಡಿದ್ದು,  ಟಾಂಬ್ ಆಫ್ ಸ್ಯಾಂಡ್ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಹಿಂದಿ ಕಾದಂಬರಿಯಾಗಿದೆ!” ಎಂದು ಶೀರ್ಷಿಕೆಯನ್ನು  ನೀಡಿದ್ದಾರೆ.

ಇದನ್ನೂ ಓದಿ
Image
Trending: ‘ದಿ ಕಂಜ್ಯೂರಿಂಗ್‌’ ಸಿನಿಮಾದಲ್ಲಿ ಕಾಣಿಸಿಕೊಂಡ ದೆವ್ವದ ಮನೆ 1.5 ಮಿಲಿಯನ್​ಗೆ ಮಾರಾಟ!
Image
Trending: ಚಾಕೊಲೇಟ್‌ನಿಂದ ಮಾಡಿದ ಎಂಟು ಅಡಿ ಎತ್ತರದ ಜಿರಾಫೆಯ ವಿಡಿಯೋ ವೈರಲ್
Image
Viral Video: 2 ಕಿ.ಮೀ. ದೂರದ ಅಪ್ಪನ ಆಫೀಸಿಗೆ ಊಟದ ಬಾಕ್ಸ್ ತೆಗೆದುಕೊಂಡು ಹೋಗುತ್ತೆ ಈ ನಾಯಿ; ವಿಡಿಯೋ ವೈರಲ್
Image
ಒಂಟಿಕಾಲಲ್ಲಿ ಜಿಗಿಯುತ್ತ ಶಾಲೆಗೆ ಹೋಗುವ ಬಾಲಕಿ; ನೆರವಿಗೆ ಬಂದ ನಟ ಮತ್ತು ಜಿಲ್ಲಾಡಳಿತ

ಇದನ್ನು ಓದಿ: ಲೈಂಗಿಕ ವರ್ಧಕ ಕಾಫಿ ಸೇವಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು! ಏನಿದು ಕಾಫಿ? ಸೇವನೆಯ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ

ಅಮುಲ್ ಹಂಚಿಕೊಂಡಿರುವ ಚಿತ್ರದಲ್ಲಿ ಲೇಖಕಿ ಗೀತಾಂಜಲಿ ಶ್ರೀ ಅವರು ತಮ್ಮ ಪುಸ್ತಕದ ಟಾಂಬ್ ಆಫ್ ಸ್ಯಾಂಡ್​ನ ಪ್ರತಿಯನ್ನು ಹಿಡಿದುಕೊಂಡಿರುವುದನ್ನು ತೋರಿಸುತ್ತದೆ.  ಡೂಡಲ್ “ಜೀತಾಂಜಲಿ” ಎಂದು ಓದುವ ಪಠ್ಯವನ್ನು ತೋರಿಸುತ್ತದೆ. ಈ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಲೇಖಕರ ಅದ್ಭುತ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಇದನ್ನು ಓದಿ: ತಮ್ಮ ಕೆಲಸದಿಂದಲೇ ನೆಟ್ಟಿಗರ ಗಮನ ಸೆಳೆದ ಐಎಎಸ್ ಅಧಿಕಾರಿ: ಅಷ್ಟಕ್ಕೂ ಯಾರಿದು ಕೀರ್ತಿ ಜಲ್ಲಿ?

ಮೂಲತಃ ‘ರೆಟ್ ಸಮಾಧಿ’ ಎಂದು ಪ್ರಕಟವಾದ ಶ್ರೀ ಅವರ ಪುಸ್ತಕವನ್ನು ತೀರ್ಪುಗಾರರು “ಜೋರಾಗಿ ಮತ್ತು ಎದುರಿಸಲಾಗದ” ಎಂದು ವಿವರಿಸಿದ್ದಾರೆ. ‘ಮರಳಿನ ಸಮಾಧಿ’ ಪತಿಯ ಮರಣದ ನಂತರ ಖಿನ್ನತೆಗೆ ಒಳಗಾದ 80 ವರ್ಷದ ಮಹಿಳೆಯ ಕಥೆಯನ್ನು ವಿವರಿಸುತ್ತದೆ. ಅಂತಿಮವಾಗಿ, ಅವಳು ತನ್ನ ಖಿನ್ನತೆಯನ್ನು ನಿವಾರಿಸಿಕೊಳ್ಳುತ್ತಾಳೆ  ಕೊನೆಗೆ ವಿಭಜನೆಯ ಪೂರ್ವದಲ್ಲಿ ಪಾಕಿಸ್ತಾನದಲ್ಲಿ ಬಿಟ್ಟುಹೋದ ಭೂತಕಾಲವನ್ನು  ನೆಯುತ್ತಾ ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರ್ಧರಿಸುತ್ತಾಳೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Mon, 30 May 22