AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ: ಮಾಜಿ ಸಿಎಂ ಕುಮಾರಸ್ವಾಮಿ

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಆಕಸ್ಮಿಕವಾಗಿ ಮುಖ್ಯಮಂತ್ರಿಯೂ ಆದೆ. ಸಿಎಂ ಆಗಿ ಕೆಲಸ ಮಾಡಿದ್ದೇನೆ. ಬೇರೆಯವರ ರೀತಿ ದುರಂಹಕಾರ ತೋರಿಸಲಿಲ್ಲ. ಅದೆಂತಹುದೋ ಪುಕ್ಕಟ್ಟೆ ಅಕ್ಕಿ ಅಂತೆ! ಐದು ಕೆಜಿ ಅಕ್ಕಿಯನ್ನು ಹತ್ತು ಕೆಜಿ ಅಂತೆಲ್ಲ ನಾನು ಹೇಳೋದಿಲ್ಲ - ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ:  ಮಾಜಿ ಸಿಎಂ  ಕುಮಾರಸ್ವಾಮಿ
ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ: ಮಾಜಿ ಸಿಎಂ ಕುಮಾರಸ್ವಾಮಿ
TV9 Web
| Edited By: |

Updated on:Jun 04, 2022 | 4:12 PM

Share

ಧಾರವಾಡ: ಧಾರವಾಡದಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಪ್ರಚಾರ ಸಭೆಯಲ್ಲಿ (Legislative Council Election) ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (Ex CM HD Kumaraswamy) ಅವರು ಸಿದ್ದರಾಮಯ್ಯ (Siddaramaiah) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಹೆಸರು ಹೇಳದೇ ಅಕ್ಕಿ ಯೋಜನೆ ಪ್ರಸ್ತಾಪಿಸಿ, ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ ಎಂದಿದ್ದಾರೆ.

2023ಕ್ಕೆ ಯಾರು ಏನೇ ಹೇಳಲಿ ಜೆಡಿಎಸ್ ಪಕ್ಷ ಮತ್ತೆ ಬರುತ್ತೆ. 2023ರಲ್ಲಿ ನಾಡಿನ ಜನರ ಜೀವನ ಸರಿಪಡಿಸುವ ಸರ್ಕಾರ ಬರುತ್ತೆ. ಅಂತಹ ಒಂದು ಆತ್ಮವಿಶ್ವಾಸ ಇದೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಆಕಸ್ಮಿಕವಾಗಿ ಮುಖ್ಯಮಂತ್ರಿಯೂ ಆದೆ. ಸಿಎಂ ಆಗಿ ಕೆಲಸ ಮಾಡಿದ್ದೇನೆ. ಬೇರೆಯವರ ರೀತಿ ದುರಂಹಕಾರ ತೋರಿಸಲಿಲ್ಲ. ಅದೆಂತಹುದೋ ಪುಕ್ಕಟ್ಟೆ ಅಕ್ಕಿ ಅಂತೆ! ಐದು ಕೆಜಿ ಅಕ್ಕಿಯನ್ನು ಹತ್ತು ಕೆಜಿ ಅಂತೆಲ್ಲ ನಾನು ಹೇಳೋದಿಲ್ಲ. ಈ ನಾಡಿನ ಜನತೆಯನ್ನು ಭಿಕಾರಿ ಮಾಡುವುದು ನಿಲ್ಲಿಸಿ, ನಾಡಿನ ಜನರಿಗೆ ಸ್ವಂತ ದುಡಿಮೆ ಕೊಡಬೇಕಿದೆ. ಮತ್ತೊಬ್ಬರಿಗೆ ಸಹಾಯ ಮಾಡೋ ಶಕ್ತಿ ಕೊಡುವುದು ನನ್ನ ಕಾರ್ಯಕ್ರಮ. ಎಷ್ಟು ದಿನ ಪುಕ್ಕಟ್ಟೆ ಅಕ್ಕಿ ಕೊಟ್ಟು ಅದೇ ಜಾಗದಲ್ಲಿ ಇಡ್ತೀರಿ? ಅವರನ್ನು ಆರ್ಥಿಕವಾಗಿ, ಶಕ್ತಿಯುತವಾಗಿ ಬೆಳೆಸಲು ಸಾಧ್ಯವಿಲ್ಲವಾ? ಜನರಿಗೆ ಶಕ್ತಿ ತುಂಬಿಸುವುದು ನನ್ನ ಕಾರ್ಯಕ್ರಮ. ಅವರನ್ನು ಆರ್ಥಿಕವಾಗಿ ಬೆಳೆಸಲು ಸಾಧ್ಯ ಇಲ್ಲವಾ? ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರಶ್ನಿಸಿದರು.

ಹೊರಟ್ಟಿಗೆ ಬೇರೆ ಕಡೆ ಹೋದರೆ ಅನುಕೂಲ ಎನ್ನುವ ಭಾವನೆ ಇತ್ತೇನೋ…

ಹೊರಟ್ಟಿ ಪಕ್ಷ ಬಿಟ್ಟ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಪಕ್ಷ ಬಿಡುತ್ತೇನೆ ಅಂದವರಿಗೆ ಏನು ಹೇಳಬೇಕು? ಹೋಗುತ್ತೇನೆ ಅನ್ನೋರನ್ನು ತಡೆಯಲು ಆಗುತ್ತಾ? ಒಳ್ಳೆ ಭವಿಷ್ಯಕ್ಕೆ ಹೋಗಿರಬಹುದು. ವೈಯಕ್ತಿಕವಾಗಿ ಯಾರ ಭವಿಷ್ಯ ಹಾಳಾಗಲಿ ಎಂದು ಬಯಸೋಲ್ಲ. ಬೇರೆ ಕಡೆ ಹೋದರೆ ಅನುಕೂಲ ಎನ್ನುವ ಭಾವನೆ ಇತ್ತು. ಹಾಗಿದ್ದಾಗ ಅವರ ಭವಿಷ್ಯ ನಾನೇಕೆ ಹಾಳು ಮಾಡಲಿ? ಎಂದು ಭಾಷಣದಲ್ಲಿ ಕುಮಾರಸ್ವಾಮಿ ಹೇಳಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sat, 4 June 22

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ