AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಘಟನೆಯಿಂದ.. ಕೊರೊನಾ ‘ಆಪದ್ಬಾಂಧವ’ ತನ್ನ ಕಾರು ಮಾರಿ ಏನು ಮಾಡ್ತಿದ್ದಾನೆ ನೋಡಿ!

ಮುಂಬೈ: ಕೊರೊನಾ ಮಹಾಮಾರಿಯ ಈ ನೋವು ಮತ್ತು ಆತಂಕ ತುಂಬಿರುವ ವೇಳೆಯಲ್ಲಿ ಕೆಲವು ಸಹೃದಯಿಗಳು ಸೋಂಕಿತರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅನೇಕ ಆಪದ್ಬಾಂಧವರು ಸಕಾಲಕ್ಕೆ ಉದಯಿಸಿದ್ದಾರೆ. Super Hero ಗಳೂ ಅನೇಕ ಮಂದಿ ಬೆಳಕಿಗೆ ಬಂದಿದ್ದಾರೆ. ಅಂಥದ್ದೇ ಒಬ್ಬ ಹೃದಯವಂತ 31 ವರ್ಷದ ಶಹನವಾಜ್​ ಶೇಖ್​. ದೇಶದಲ್ಲಿ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಿದ್ದಂತೆ ಸೋಂಕಿತರ ನೆರವಿಗೆ ಮುಂದಾದ ಶಹನವಾಜ್​ ತಮ್ಮ ಕಾರ್​ ಅನ್ನೇ ಌಂಬುಲೆನ್ಸ್​ ಆಗಿ ಪರಿವರ್ತಿಸಿ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಪ್ರಾರಂಭಿಸಿದರು. ಆದರೆ, […]

ಆ ಘಟನೆಯಿಂದ.. ಕೊರೊನಾ ‘ಆಪದ್ಬಾಂಧವ’ ತನ್ನ ಕಾರು ಮಾರಿ ಏನು ಮಾಡ್ತಿದ್ದಾನೆ ನೋಡಿ!
KUSHAL V
| Edited By: |

Updated on:Jul 28, 2020 | 12:41 AM

Share

ಮುಂಬೈ: ಕೊರೊನಾ ಮಹಾಮಾರಿಯ ಈ ನೋವು ಮತ್ತು ಆತಂಕ ತುಂಬಿರುವ ವೇಳೆಯಲ್ಲಿ ಕೆಲವು ಸಹೃದಯಿಗಳು ಸೋಂಕಿತರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅನೇಕ ಆಪದ್ಬಾಂಧವರು ಸಕಾಲಕ್ಕೆ ಉದಯಿಸಿದ್ದಾರೆ. Super Hero ಗಳೂ ಅನೇಕ ಮಂದಿ ಬೆಳಕಿಗೆ ಬಂದಿದ್ದಾರೆ. ಅಂಥದ್ದೇ ಒಬ್ಬ ಹೃದಯವಂತ 31 ವರ್ಷದ ಶಹನವಾಜ್​ ಶೇಖ್​. ದೇಶದಲ್ಲಿ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಿದ್ದಂತೆ ಸೋಂಕಿತರ ನೆರವಿಗೆ ಮುಂದಾದ ಶಹನವಾಜ್​ ತಮ್ಮ ಕಾರ್​ ಅನ್ನೇ ಌಂಬುಲೆನ್ಸ್​ ಆಗಿ ಪರಿವರ್ತಿಸಿ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಪ್ರಾರಂಭಿಸಿದರು. ಆದರೆ, ಈ ಮಧ್ಯೆ ಘಟಿಸಿದ ಒಂದು ಪ್ರಸಂಗದಿಂದ ಶಹನವಾಜ್​ ತಮ್ಮ ಪ್ರೀತಿಯ ಕಾರ್​ ಮಾರೋಕೆ ಮುಂದಾದರು. ಆ ಪ್ರಸಂಗವೇ ತನ್ನ ಸ್ನೇಹಿತನ ಗರ್ಭಿಣಿ ತಂಗಿಯ ಹಠಾತ್ ನಿಧನ.

ಶಹನವಾಜ್​ ಕಾರ್​ ಮಾರಲು ಕಾರಣವೇನು ಗೊತ್ತಾ? ಸೋಂಕಿಗೆ ತುತ್ತಾಗಿದ್ದ ಸ್ನೇಹಿತೆಯ ಗರ್ಭಿಣಿ ತಂಗಿಯನ್ನ ಯಾವ ಆಸ್ಪತ್ರೆಯೂ ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ವೆಂಟಿಲೇಟರ್​ ಇಲ್ಲ ಎಂಬ ಸಬೂಬು ಹೇಳಿ ಕಳಿಸಿ ಬಿಟ್ಟಿದ್ದರು. ಹಾಗಾಗಿ, ಸೂಕ್ತ ಚಿಕಿತ್ಸೆ ಸಿಗದೆ ಆಕೆ ಕೊನೆಯುಸಿರೆಳೆದಿದ್ದಳು. ಗರ್ಭಿಣಿಗೆ ಸಮಯಕ್ಕೆ ಆಕ್ಸಿಜನ್​ ದೊರಕಿದ್ದರೆ ಅವಳು ಮತ್ತು ಮಗು ಇಬ್ಬರೂ ಬದುಕುತ್ತಿದ್ದರೂ ಎಂಬುದು ಶಹನವಾಜ್​ಗೆ ಅರಿವಾಯಿತು.

ಹೀಗಾಗಿ, ಅವರು ಸೋಂಕಿತರಿಗೆ ಉಚಿತವಾಗಿ ಆಕ್ಸಿಜನ್​ ಸಿಲಿಂಡರ್​ ಪೂರೈಸಲು ಮುಂದಾದರು. ಇದಕ್ಕೆ ತಗಲುವ ವೆಚ್ಚವನ್ನ ಭರಿಸಲು ಕೊನೆಗೆ ತಮ್ಮ ನೆಚ್ಚಿನ ಕಾರ್​ ಮಾರಿಬಿಟ್ಟರು. ಅದರಿಂದ ಬಂದ ಹಣದಿಂದ ಸುಮಾರು 250 ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತರಿಗೆ ಆಕ್ಸಿಜನ್​ ಸಿಲಿಂಡರ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ಸೋಷಿಯಲ್​ ಮೀಡಿಯಾ ಮೂಲಕ ಸೋಂಕಿತರ ಕುಟುಂಬಗಳನ್ನ ಸಂಪರ್ಕಿಸಿ ಸಹಾಯ ಮಾಡುತ್ತಿದ್ದಾರೆ. ಇದಲ್ಲದೆ, ಸೋಂಕಿತರ ಕುಟುಂಬಸ್ಥರಿಗೆ ಸ್ವಸಹಾಯಕರ ಮೂಲಕ ತರಬೇತಿ ನೀಡಿ ಅದರ ಬಳಕೆಯ ವಿಧಾನವನ್ನು ತಿಳಿಸಿಕೊಡುತ್ತಿದ್ದಾರೆ.

ಅಂದ ಹಾಗೆ, ಕಾರ್​ ಕಳೆದುಕೊಂಡ ಬೇಜಾರು ಶಹನವಾಜ್​ಗೆ ಈಗಲೂ ಕಾಡುತ್ತಿದೆಯಂತೆ. ಆದರೆ, ಸೋಂಕಿತನೊಬ್ಬನ ಜೀವ ಉಳಿಸಿ ಆತನ ಕುಟುಂಬ ನನ್ನನ್ನು ಹರಸಿದರೆ ಮುಂದೆ ನಾನು ಇಂಥದ್ದೇ ನಾಲ್ಕು ಕಾರುಗಳನ್ನ ಖರೀದಿಸುವೆ ಎಂದು ಈ ಸಹೃದಯಿ ಶಹನವಾಜ್​ ಹಂಚಿಕೊಂಡಿದ್ದಾರೆ.

Published On - 4:23 pm, Mon, 27 July 20

ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ