ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!

ಮಾತು ಬಲ್ಲವರಿಗೆ ಜಗಳವಿಲ್ಲ.. ಊಟಬಲ್ಲವರಿಗೆ ರೋಗವಿಲ್ಲ ಎಂಬ ಮಾತಿದೆ.. ಅದರಂತೆ ದಿನವೂ ಹೊಸ ಹೊಸ ಮಾದರಿಯ ಭೋಜನಗಳನ್ನು ಸವಿದು ಸಂತೋಷದಿಂದ ಬಾಳಬೇಕು. ಹಾಗಾಗೆ ನಾವು ನಿಮಗೆ ಇಂದು ಒಂದು ಹೊಸ ರೆಸಿಪಿಯನ್ನು ತೋರಿಸಿಕೊಡುತ್ತಿದ್ದೇವೆ.

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!
ಕೊಂಕಣಿ ಶೈಲಿಯ ವಡಾ ಕೊಂಬ್ಡಾ
Follow us
| Updated By: Skanda

Updated on: Mar 13, 2021 | 8:15 AM

ಭಾರತದಲ್ಲಿ ಸಿಗುವ ಸಾಂಬಾರು ಪದಾರ್ಥಗಳಿಗೆ ಅದರದೇ ಆದ ಸ್ವಾದ, ವೈಶಿಷ್ಟ್ಯವಿದೆ. ಅದರಲ್ಲೂ ವಿವಿಧ ಶೈಲಿಯ ಭಕ್ಷ್ಯ ಭೋಜನ, ತಿಂಡಿ, ಚಾಟ್​ಗಳಿಗೆ ಭಾರತ ತುಂಬಾ ಫೇಮಸ್. ಇಲ್ಲಿ ಸಿಗುವ ಡಿಫೆರಂಟ್ ಕಾಂಬಿನೇಷನ್ ತಿನಿಸುಗಳು ಜನರ ಬಾಯಲ್ಲಿ ನೀರೂರಿಸದೇ ಇರದು. ದಕ್ಷಿಣ ಭಾರತದ ಕರಾವಳಿ ಶೈಲಿಯ ತಿನಿಸಿನಿಂದ ಹಿಡಿದು ಮಹಾರಾಷ್ಟ್ರದ ಕೊಂಕಣಿ ಪ್ರದೇಶಗಳ ಸುವಾಸನೆ ಭರಿತ ತಿನಿಸಿನವೆರೆಗೂ ಅಡುಗೆಯಲ್ಲಿ ಅನ್ವೇಷಣೆಗಳು ತುಂಬಾ ಇವೆ.

ಕೊಂಕಣಿ ಶೈಲಿಯ ವಡಾ ಕೊಂಬ್ಡಾವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ. ಮನೆಯಲ್ಲಿ ಮಾಡಿ ಇದರ ರುಚಿ ನೋಡಿ. ಕೊಂಕಣಿಯ ವಡಾ ಮತ್ತು ಚಿಕನ್ ಕರಿಯ ವಿಶಿಷ್ಟ ಸಂಯೋಜನೆಯೇ ವಡಾ ಕೊಂಬ್ಡಾ. ಟೇಸ್ಟಿ ಅಂಡ್ ಸ್ಪೈಸಿ ಬಾಯಲ್ಲಿ ನೀರು ತರಿಸುವ ಚಿಕನ್ ಕರಿಯ ಜೊತೆ ವಡಾಗಳನ್ನು ಅದ್ದಿ ತಿನ್ನುವುದೇ ಒಂದು ರೀತಿಯ ಆನಂದ. ನಾನ್​ವೆಜ್ ಪ್ರಿಯರಿಗೆ ಇದೊಂದು ಅದ್ಭುತವಾದ ಕಾಂಬಿನೇಷನ್.

ವಡಾ ಕೊಂಬ್ಡಾವನ್ನು ತಯಾರಿಸುವುದು ಹೇಗೆ? ವಡಾ ಕೊಂಬ್ಡಾ ಮಾಡುವುದು ತುಂಬಾ ಸರಳವಾಗಿದೆ. ಆದರೆ ಇದು ತಯಾರಿಸಲು ಸಮಯ ಬೇಕು. ಮೊದಲಿಗೆ ಚಿಕನ್ ಕರಿಯನ್ನು ತಯಾರಿಸಿಕೊಳ್ಳಬೇಕು. ಇದರಲ್ಲಿ ಮನೆಯಲ್ಲೇ ತಯಾರಿಸಿದ ಮಸಾಲೆ ಜೊತೆಗೆ ಕಾಲಾ ಮಸಾಲ ಬೆರೆಸಬೇಕು. ಕಾಲಾ ಮಸಾಲ ಅಂದರೆ ಜೀರಿಗೆ, ಏಲಕ್ಕಿ, ಲವಂಗದಿಂದ ಹಿಡಿದು ಸೋಂಪು, ಮತ್ತು ಜಾಯಿಕಾಯಿ ಎಲ್ಲದರ ಸಮೃದ್ಧ ಮಿಶ್ರಣವಾಗಿದೆ. ಕರಿ ಮಸಾಲಾ, ಗಸಗಸೆ-ಎಳ್ಳು, ಉಪ್ಪು, ಈರುಳ್ಳಿ-ಟೊಮೆಟೊ ಪೇಸ್ಟ್ ಜೊತೆಗೆ ತುರಿದ ತೆಂಗಿನಕಾಯಿಯ ಹಾಲಿನೊಂದಿಗೆ ಚಿಕನ್  ಬೇಯಿಸಬೇಕು. ಬಳಿಕ ಇದನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ.

ಇನ್ನು ಉದ್ದಿನ ಬೇಳೆ, ಜೀರಿಗೆ ಮತ್ತು ಮೆಂತ್ಯೆ ಕಾಳುಗಳನ್ನು ನೆನಸಿಟ್ಟು ಮಿಕ್ಸಿಯಿಂದ ರುಬ್ಬಿ ಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮತ್ತು ಗೋಧಿ ಹಿಟ್ಟು, ಸ್ವಲ್ಪ ಅರಿಶಿಣ, ಉಪ್ಪು, ಎಣ್ಣೆ ಮತ್ತು ನೀರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಚಪಾತಿ ಹಿಟ್ಟಿನಂತೆ ಮೃದುವಾಗುವವರೆಗೆ ಮಿಕ್ಸ್ ಮಾಡಿ. ಬಳಿಕ ಇದನ್ನು ಪೂರಿ ಮಾದರಿಯಲ್ಲಿ ಚಿಕ್ಕದಾಗಿ ತಟ್ಟಿ ಅದನ್ನು ಕಾದ ಎಣ್ಣೆಯಲ್ಲಿ ತೇಲಿ ಬಿಡಿ. ವಡಾ ತಯಾರಾದ ಬಳಿಕ ಅದನ್ನು ಚಿಕನ್ ಕರಿಯ ಜೊತೆ ಸೇವಿಸಿ. ಅಥವಾ ವಡಾವನ್ನು ಹಾಗೇ ಸಹ ತಿನ್ನಬಹುದು.

ಕಲಾ ಮಸಾಲ ತಯಾರಿಸುವ ವಿಧಾನ 1. ಎಲ್ಲಾ ಸಾಂಬಾರು ಪದಾರ್ಥಗಳನ್ನು ಬಣ್ಣ ಬದಲಾಯಿಸುವವರೆಗೆ ಪ್ರೈ ಮಾಡಿ ಬಳಿಕ ಅದನ್ನು ತಣ್ಣಗಾಗಿಸಿ ಚನ್ನ್ಆಗಿ ಪುಡಿಮಾಡಿ. ಚಿಕನ್ ಕರಿ ತಯಾರಿಸುವ ವಿಧಾನ 1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ 2. ಬೇಯಿಸಿದ ಈರುಳ್ಳಿ ಪೇಸ್ಟ್ ಸೇರಿಸಿ ಮತ್ತು 10 ನಿಮಿಷ ಬೇಯಿಸಿ. 3.ಈಗ ರುಬ್ಬಿದ ಟೊಮೆಟೊ ಸೇರಿಸಿ ಮತ್ತು 5 ನಿಮಿಷ ಬೇಯಿಸಿ, 4. ಗಸಗಸೆ-ಎಳ್ಳು ಪೇಸ್ಟ್ ಸೇರಿಸಿ ಮತ್ತು ಸ್ವಲ್ಪ ಸಮಯ ಬೇಯಿಸಿ. 5. ಮಸಾಲೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 6. ಈಗ ಚಿಕನ್ ಸೇರಿಸಿ ಮತ್ತು ಸ್ಪಲ್ಪ ನೀರು ಸೇರಿಸಿ ಚಿಕನ್್ ಅನ್ನು ಸರಿಯಾಗಿ ಬೇಯಿಸಿ 7. ಕಾಲಾ ಮಸಾಲ ಮತ್ತು ತುರಿದ ತೆಂಗಿನಕಾಯಿಯ ಹಾಲನ್ನು ಸೇರಿಸಿ ಮತ್ತು ಗ್ರೇವಿಯಾಗುವವರೆಗೆ ಬೇಯಿಸಿ.

ಇದನ್ನೂ ಓದಿ: ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು