AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!

ಮಾತು ಬಲ್ಲವರಿಗೆ ಜಗಳವಿಲ್ಲ.. ಊಟಬಲ್ಲವರಿಗೆ ರೋಗವಿಲ್ಲ ಎಂಬ ಮಾತಿದೆ.. ಅದರಂತೆ ದಿನವೂ ಹೊಸ ಹೊಸ ಮಾದರಿಯ ಭೋಜನಗಳನ್ನು ಸವಿದು ಸಂತೋಷದಿಂದ ಬಾಳಬೇಕು. ಹಾಗಾಗೆ ನಾವು ನಿಮಗೆ ಇಂದು ಒಂದು ಹೊಸ ರೆಸಿಪಿಯನ್ನು ತೋರಿಸಿಕೊಡುತ್ತಿದ್ದೇವೆ.

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!
ಕೊಂಕಣಿ ಶೈಲಿಯ ವಡಾ ಕೊಂಬ್ಡಾ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Mar 13, 2021 | 8:15 AM

Share

ಭಾರತದಲ್ಲಿ ಸಿಗುವ ಸಾಂಬಾರು ಪದಾರ್ಥಗಳಿಗೆ ಅದರದೇ ಆದ ಸ್ವಾದ, ವೈಶಿಷ್ಟ್ಯವಿದೆ. ಅದರಲ್ಲೂ ವಿವಿಧ ಶೈಲಿಯ ಭಕ್ಷ್ಯ ಭೋಜನ, ತಿಂಡಿ, ಚಾಟ್​ಗಳಿಗೆ ಭಾರತ ತುಂಬಾ ಫೇಮಸ್. ಇಲ್ಲಿ ಸಿಗುವ ಡಿಫೆರಂಟ್ ಕಾಂಬಿನೇಷನ್ ತಿನಿಸುಗಳು ಜನರ ಬಾಯಲ್ಲಿ ನೀರೂರಿಸದೇ ಇರದು. ದಕ್ಷಿಣ ಭಾರತದ ಕರಾವಳಿ ಶೈಲಿಯ ತಿನಿಸಿನಿಂದ ಹಿಡಿದು ಮಹಾರಾಷ್ಟ್ರದ ಕೊಂಕಣಿ ಪ್ರದೇಶಗಳ ಸುವಾಸನೆ ಭರಿತ ತಿನಿಸಿನವೆರೆಗೂ ಅಡುಗೆಯಲ್ಲಿ ಅನ್ವೇಷಣೆಗಳು ತುಂಬಾ ಇವೆ.

ಕೊಂಕಣಿ ಶೈಲಿಯ ವಡಾ ಕೊಂಬ್ಡಾವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ. ಮನೆಯಲ್ಲಿ ಮಾಡಿ ಇದರ ರುಚಿ ನೋಡಿ. ಕೊಂಕಣಿಯ ವಡಾ ಮತ್ತು ಚಿಕನ್ ಕರಿಯ ವಿಶಿಷ್ಟ ಸಂಯೋಜನೆಯೇ ವಡಾ ಕೊಂಬ್ಡಾ. ಟೇಸ್ಟಿ ಅಂಡ್ ಸ್ಪೈಸಿ ಬಾಯಲ್ಲಿ ನೀರು ತರಿಸುವ ಚಿಕನ್ ಕರಿಯ ಜೊತೆ ವಡಾಗಳನ್ನು ಅದ್ದಿ ತಿನ್ನುವುದೇ ಒಂದು ರೀತಿಯ ಆನಂದ. ನಾನ್​ವೆಜ್ ಪ್ರಿಯರಿಗೆ ಇದೊಂದು ಅದ್ಭುತವಾದ ಕಾಂಬಿನೇಷನ್.

ವಡಾ ಕೊಂಬ್ಡಾವನ್ನು ತಯಾರಿಸುವುದು ಹೇಗೆ? ವಡಾ ಕೊಂಬ್ಡಾ ಮಾಡುವುದು ತುಂಬಾ ಸರಳವಾಗಿದೆ. ಆದರೆ ಇದು ತಯಾರಿಸಲು ಸಮಯ ಬೇಕು. ಮೊದಲಿಗೆ ಚಿಕನ್ ಕರಿಯನ್ನು ತಯಾರಿಸಿಕೊಳ್ಳಬೇಕು. ಇದರಲ್ಲಿ ಮನೆಯಲ್ಲೇ ತಯಾರಿಸಿದ ಮಸಾಲೆ ಜೊತೆಗೆ ಕಾಲಾ ಮಸಾಲ ಬೆರೆಸಬೇಕು. ಕಾಲಾ ಮಸಾಲ ಅಂದರೆ ಜೀರಿಗೆ, ಏಲಕ್ಕಿ, ಲವಂಗದಿಂದ ಹಿಡಿದು ಸೋಂಪು, ಮತ್ತು ಜಾಯಿಕಾಯಿ ಎಲ್ಲದರ ಸಮೃದ್ಧ ಮಿಶ್ರಣವಾಗಿದೆ. ಕರಿ ಮಸಾಲಾ, ಗಸಗಸೆ-ಎಳ್ಳು, ಉಪ್ಪು, ಈರುಳ್ಳಿ-ಟೊಮೆಟೊ ಪೇಸ್ಟ್ ಜೊತೆಗೆ ತುರಿದ ತೆಂಗಿನಕಾಯಿಯ ಹಾಲಿನೊಂದಿಗೆ ಚಿಕನ್  ಬೇಯಿಸಬೇಕು. ಬಳಿಕ ಇದನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ.

ಇನ್ನು ಉದ್ದಿನ ಬೇಳೆ, ಜೀರಿಗೆ ಮತ್ತು ಮೆಂತ್ಯೆ ಕಾಳುಗಳನ್ನು ನೆನಸಿಟ್ಟು ಮಿಕ್ಸಿಯಿಂದ ರುಬ್ಬಿ ಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮತ್ತು ಗೋಧಿ ಹಿಟ್ಟು, ಸ್ವಲ್ಪ ಅರಿಶಿಣ, ಉಪ್ಪು, ಎಣ್ಣೆ ಮತ್ತು ನೀರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಚಪಾತಿ ಹಿಟ್ಟಿನಂತೆ ಮೃದುವಾಗುವವರೆಗೆ ಮಿಕ್ಸ್ ಮಾಡಿ. ಬಳಿಕ ಇದನ್ನು ಪೂರಿ ಮಾದರಿಯಲ್ಲಿ ಚಿಕ್ಕದಾಗಿ ತಟ್ಟಿ ಅದನ್ನು ಕಾದ ಎಣ್ಣೆಯಲ್ಲಿ ತೇಲಿ ಬಿಡಿ. ವಡಾ ತಯಾರಾದ ಬಳಿಕ ಅದನ್ನು ಚಿಕನ್ ಕರಿಯ ಜೊತೆ ಸೇವಿಸಿ. ಅಥವಾ ವಡಾವನ್ನು ಹಾಗೇ ಸಹ ತಿನ್ನಬಹುದು.

ಕಲಾ ಮಸಾಲ ತಯಾರಿಸುವ ವಿಧಾನ 1. ಎಲ್ಲಾ ಸಾಂಬಾರು ಪದಾರ್ಥಗಳನ್ನು ಬಣ್ಣ ಬದಲಾಯಿಸುವವರೆಗೆ ಪ್ರೈ ಮಾಡಿ ಬಳಿಕ ಅದನ್ನು ತಣ್ಣಗಾಗಿಸಿ ಚನ್ನ್ಆಗಿ ಪುಡಿಮಾಡಿ. ಚಿಕನ್ ಕರಿ ತಯಾರಿಸುವ ವಿಧಾನ 1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ 2. ಬೇಯಿಸಿದ ಈರುಳ್ಳಿ ಪೇಸ್ಟ್ ಸೇರಿಸಿ ಮತ್ತು 10 ನಿಮಿಷ ಬೇಯಿಸಿ. 3.ಈಗ ರುಬ್ಬಿದ ಟೊಮೆಟೊ ಸೇರಿಸಿ ಮತ್ತು 5 ನಿಮಿಷ ಬೇಯಿಸಿ, 4. ಗಸಗಸೆ-ಎಳ್ಳು ಪೇಸ್ಟ್ ಸೇರಿಸಿ ಮತ್ತು ಸ್ವಲ್ಪ ಸಮಯ ಬೇಯಿಸಿ. 5. ಮಸಾಲೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 6. ಈಗ ಚಿಕನ್ ಸೇರಿಸಿ ಮತ್ತು ಸ್ಪಲ್ಪ ನೀರು ಸೇರಿಸಿ ಚಿಕನ್್ ಅನ್ನು ಸರಿಯಾಗಿ ಬೇಯಿಸಿ 7. ಕಾಲಾ ಮಸಾಲ ಮತ್ತು ತುರಿದ ತೆಂಗಿನಕಾಯಿಯ ಹಾಲನ್ನು ಸೇರಿಸಿ ಮತ್ತು ಗ್ರೇವಿಯಾಗುವವರೆಗೆ ಬೇಯಿಸಿ.

ಇದನ್ನೂ ಓದಿ: ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ