AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2021: ಸುಖ-ದುಃಖದ ಸಂಕೇತ ಬೇವು-ಬೆಲ್ಲ.. ಇದರ ಹಿಂದಿದೆ ಆರೋಗ್ಯಕಾರಿ ವಿಚಾರ

Ugadi Festival 2021 ಬೇವು-ಬೆಲ್ಲದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇಂತಹ ಗುಣಗಳನ್ನು ಹೊಂದಿರುವ ಬೇವು-ಬೆಲ್ಲವನ್ನು ಯುಗಾದಿ ಹಬ್ಬದ ಸಮಯದಲ್ಲಿ ಹಂಚೋ ಸಂಪ್ರದಾಯ ಅನಾದಿಕಾಲದಿಂದಲೂ ಇದೆ. ಹೀಗೆ ಬೇವು-ಬೆಲ್ಲವನ್ನು ಹಂಚುವುದರ ಹಿಂದಿರೋ ತಾತ್ಪರ್ಯವೇ ಆರೋಗ್ಯ ವೃದ್ಧಿಸಲಿ ಅನ್ನೋದು.

Ugadi 2021: ಸುಖ-ದುಃಖದ ಸಂಕೇತ ಬೇವು-ಬೆಲ್ಲ.. ಇದರ ಹಿಂದಿದೆ ಆರೋಗ್ಯಕಾರಿ ವಿಚಾರ
ಸುಖ-ದುಃಖದ ಸಂಕೇತ ಬೇವು-ಬೆಲ್ಲ
ಆಯೇಷಾ ಬಾನು
| Edited By: |

Updated on: Apr 13, 2021 | 7:30 PM

Share

ಬೇವು ಬೆಲ್ಲದ ಹಬ್ಬ ಯುಗಾದಿ ಹಬ್ಬಕ್ಕೆ ಒಂದೇ ದಿನ ಬಾಕಿ ಇದೆ. ನಾಳೆ ಹಿಂದೂಗಳು ಹೊಸ ಬಟ್ಟೆ ತೊಟ್ಟು ಸಂಭ್ರಮ ಸಡಗರದಿಂದ ಹೊಸ ವರ್ಷದ ಆಗಮನ ಮಾಡ್ತಾರೆ. ಈ ಯುಗಾದಿ ಹಬ್ಬಕ್ಕೆ ವಿಶೇಷ ಅಂದ್ರೆ ಬೇವು ಬೆಲ್ಲ ಹಂಚುವುದು. ಸಿಹಿ ಕಹಿಗಳ ಬೆಸುಗೆ. ನಮ್ಮ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿ ಆಚರಣೆಗೂ ಅದರದ್ದೇ ಆದ ಹಿನ್ನೆಲೆ ಇದೆ. ಯುಗಾದಿ ಹಬ್ಬ ಹೊಸ ವಸಂತದ ಆಗಮನದ ಸಂಕೇತ ಹಾಗೂ ಅತಿ ಪವಿತ್ರ ದಿನ ಅಂತಾ ಪರಿಗಣಿಸಲಾಗುತ್ತೆ.

ಕರ್ನಾಟಕದಲ್ಲಿ ಯುಗಾದಿ ಅಂತಾ ಆಚರಿಸಿದ್ರೆ ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಡಿ ಪಾವ್ಡಾ ಅನ್ನೋ ಹೆಸರಿನಿಂದ ಆಚರಿಸಲಾಗುತ್ತೆ. ಇನ್ನು ಪಂಜಾಬ್​ನಲ್ಲಿ ವೈಶಾಖ, ಅಸ್ಸಾಂನಲ್ಲಿ ಬೀರು, ಕೇರಳದಲ್ಲಿ ಕೊಲ್ಲ ವರ್ಷ ಅಂತಾ ಆಚರಿಸೋ ಸಂಪ್ರದಾಯವಿದೆ. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ಹಂಚೋದು ಬಹಳ ವಿಶೇಷ. ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಸುಖ-ದುಃಖದ ಸಂಕೇತವಾಗಿ ಬೇವು-ಬೆಲ್ಲವನ್ನು ಹಂಚಲಾಗುತ್ತೆ. ನಮಗೆಲ್ಲಾ ತಿಳಿದಿರುವ ಹಾಗೆ ಬೇವು ರುಚಿಯಲ್ಲಿ ಕಹಿ ಹಾಗೂ ಬೆಲ್ಲ ಸಿಹಿಯನ್ನು ಹೊಂದಿರುತ್ತೆ. ಕಹಿ ಹಾಗೂ ಸಿಹಿ ರುಚಿಗಳನ್ನು ಹೊಂದಿರುವ ಬೇವು-ಬೆಲ್ಲ ಆರೋಗ್ಯ ಹಾಗೂ ಸೌಂದರ್ಯವನ್ನು ವೃದ್ಧಿಸುವ ಗುಣಗಳನ್ನು ಹೊಂದಿವೆ. ಅಷ್ಟಕ್ಕೂ, ಬೇವಿನಲ್ಲಿರುವ ಆರೋಗ್ಯಕಾರಿ ಗುಣಗಳೇನು? ಇಲ್ಲಿ ತಿಳಿಯಿರಿ.

ಬೇವಿನಲ್ಲಿರುವ ಆರೋಗ್ಯಕಾರಿ ಗುಣಗಳು 1)ಮೊಡವೆಗಳು, ಕಪ್ಪುಕಲೆ, ಬ್ಲಾಕ್‌ಹೆಡ್, ಸೂಕ್ಷ್ಮ ಗೆರೆಗಳು, ತಲೆಹೊಟ್ಟು, ತಲೆಗೂದಲು ಉದುರುವಿಕೆ ತಡೆಗೆ ಸಹಕಾರಿಯಾಗುತ್ತೆ 2)ಚಿಕ್ಕ ಮಕ್ಕಳಿಗೆ ಕಾಡುವ ಸಿಡುಬು ಹಾಗೂ ಸ್ಮಾಲ್ ಪಾಕ್ಸ್ ಸಮಸ್ಯೆಗೆ ಕಹಿಬೇವನ್ನು ನೀರಲ್ಲಿ ಕುದಿಸಿ ಅದರಿಂದ ಸ್ನಾನ ಮಾಡಿಸಲಾಗುತ್ತೆ 3)ಇದು ಌಂಟಿ ಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತೆ 4)ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತೆ 5)ಕರುಳಿನಲ್ಲಿ ಪರಾವಲಂಬಿ ಜೀವಿಗಳನ್ನು ನಿಯಂತ್ರಿಸುತ್ತೆ 6)ಜೀರ್ಣಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತೆ 7)ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತೆ 8)ವಾಯು ಪ್ರಕೋಪತೆ ಹಾಗೂ ಅತಿ ಆಮ್ಲೀಯತೆಯ ಸಮಸ್ಯೆಯನ್ನು ಶಮನಗೊಳಿಸುತ್ತೆ

Ugadi

ಬೇವು

ಬೆಲ್ಲದಲ್ಲಿರುವ ಆರೋಗ್ಯಕಾರಿ ಗುಣಗಳು 1)ಬೆಲ್ಲ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುವುದಿಲ್ಲ 2)ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತೆ 3)ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತೆ 4)ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತೆ 5)ಬೆಲ್ಲದಲ್ಲಿ ನೈಸರ್ಗಿಕ ಪೋಷಕಾಂಶಗಳು ಮತ್ತು ಖನಿಜಗಳು ಹೆಚ್ಚಾಗಿರುತ್ತೆ 6)ಬೆಲ್ಲದಲ್ಲಿ ನೈಸರ್ಗಿಕ ಲವಣಗಳು ಉಳಿದುಕೊಂಡಿರುತ್ತೆ 7)ಶ್ವಾಸಕೋಶ, ಶ್ವಾಸನಾಳ, ಅನ್ನನಾಳ, ಹೊಟ್ಟೆ ಮತ್ತು ಕರುಳುಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತೆ

ಹೀಗೆ ಬೇವು-ಬೆಲ್ಲದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇಂತಹ ಗುಣಗಳನ್ನು ಹೊಂದಿರುವ ಬೇವು-ಬೆಲ್ಲವನ್ನು ಯುಗಾದಿ ಹಬ್ಬದ ಸಮಯದಲ್ಲಿ ಹಂಚೋ ಸಂಪ್ರದಾಯ ಅನಾದಿಕಾಲದಿಂದಲೂ ಇದೆ. ಹೀಗೆ ಬೇವು-ಬೆಲ್ಲವನ್ನು ಹಂಚುವುದರ ಹಿಂದಿರೋ ತಾತ್ಪರ್ಯವೇ ಆರೋಗ್ಯ ವೃದ್ಧಿಸಲಿ ಅನ್ನೋದು. ನಮ್ಮ ಪೂರ್ವಿಕರು ಏನೇ ಮಾಡಿದ್ರೂ ಅದರ ಹಿಂದೆ ಒಂದೊಳ್ಳೆ ಸದುದ್ದೇಶವಂತೂ ಇದ್ದೇ ಇರುತ್ತೆ. ಇದನ್ನು ಹಾಗೇ ಹೇಳಿದ್ರೆ ಯಾರೂ ಕೇಳಲ್ಲ ಅಂತಾ ಆಚರಣೆಯ ನೆಪದಲ್ಲಿ ಹೇಳಿದ್ದಾರೆ.

Ugadi

ಯುಗಾದಿ ಬೇವು ಬೆಲ್ಲ

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬದ ಮೆರಗು ಹೆಚ್ಚಿಸುವ ಸಾಂಪ್ರದಾಯಿಕ ಅಡುಗೆಗಳು

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್