AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುವುದಿಲ್ಲವಂತೆ! ಪುರಾಣ ಕಥೆಗಳು ಹೇಳುವುದೇನು?

ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯ ಬಳಿ ಹರಿಯುವ ಸರಯೂ ನದಿಯನ್ನು ಶಾಪಗ್ರಸ್ತ ನದಿ ಎಂದು ಪರಿಗಣಿಸಲಾಗಿದೆ. ಈ ನದಿಗೆ ಯಾಕೆ ಶಾಪವಿದೆ? ಇದಕ್ಕೆ ಪುರಾಣ ಕಥೆಗಳಲ್ಲಿರುವ ಕಾರಣ ಏನು? ಇಲ್ಲಿದೆ ವಿವರ

ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುವುದಿಲ್ಲವಂತೆ! ಪುರಾಣ ಕಥೆಗಳು ಹೇಳುವುದೇನು?
ಅಯೋಧ್ಯೆಯ ಸರಯೂ ನದಿ
Ganapathi Sharma
|

Updated on:Jan 06, 2024 | 4:30 PM

Share

ಅಯೋಧ್ಯೆಯ (Ayodhya) ಸರಯೂ ನದಿಯ (Sarayu River) ಬಗ್ಗೆ ಮಾಹಿತಿ ಇಲ್ಲದವರು ವಿರಳ. ಉತ್ತರ ಪ್ರದೇಶದ ಅಯೋಧ್ಯೆಯ ಮೂಲಕ ಸರಯೂ ನದಿ ಹರಿಯುತ್ತದೆ. ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ. ಅಯೋಧ್ಯೆಯ ಭೂಮಿಯನ್ನು ಫಲವತ್ತಾಗಿಸುವಲ್ಲಿ ಸರಯೂ ನದಿಯ ಕೊಡುಗೆ ವಿಶೇಷವಾದದ್ದಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ (Ayodhya Ram Mandir) ದಿನಗಣನೆ ಆರಂಭವಾಗಿದ್ದು, ವರ್ತಮಾನ ಕಾಲದಲ್ಲಿ ಅಯೋಧ್ಯೆ ಹಾಗೂ ಸರಯೂ ನದಿ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿವೆ ಮತ್ತು ಪವಿತ್ರ ಭೂಮಿ ಎಂದು ಗುರುತಿಸಲ್ಪಟ್ಟಿದೆ. ಈ ನದಿಯು ಹಿಮಾಲಯದಿಂದ ಹುಟ್ಟಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮೂಲಕ ಹರಿಯುತ್ತದೆ. ಆದರೆ ಉಳಿದೆಲ್ಲ ತೀರ್ಥಕ್ಷೇತ್ರಗಳ ನದಿಗಳಲ್ಲಿ ಮಿಂದಂತೆ ಈ ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ದೊರೆಯುವುದಿಲ್ಲವಂತೆ! ಆದರೆ ಪಾಪಗಳೆಲ್ಲ ವಿಮೋಚನೆಯಾಗುತ್ತವೆ. ಇದಕ್ಕೆ ಪುರಾಣ ಕಥೆಗಳಲ್ಲಿರುವ ಕಾರಣ ‘ಶಾಪ’.

ಸರಯೂ ನದಿಯು ಶಾಪಗ್ರಸ್ತವಾಗಿದೆ ಮತ್ತು ಇಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ನಾಶವಾಗುತ್ತವೆ. ಆದರೆ ಅವರಿಗೆ ಯಾವುದೇ ಪುಣ್ಯವೂ ಸಿಗುವುದಿಲ್ಲ ಎನ್ನುತ್ತವೆ ಪುರಾಣ ಕಥೆಗಳು.

ಸರಯೂ ನದಿಗೆ ಇರುವ ಶಾಪ ಏನು ಮತ್ತು ಯಾಕೆ?

ಪುರಾಣಗಳ ಪ್ರಕಾರ, ಭಗವಾನ್ ಶ್ರೀರಾಮನು ಸರಯೂ ನದಿಯಲ್ಲಿ ನಿರ್ಯಾಣ ಹೊಂದುವ ಮೂಲಕ ಜೀವನವನ್ನು ಕೊನೆಗೊಳಿಸಿದನು. ಇದರಿಂದ ರಾಮ ಇಲ್ಲವಾಗಲು ಕಾರಣವಾದ ಸರಯೂ ನದಿಯ ಮೇಲೆ ಭಗವಾನ್ ಭೋಲೆನಾಥರು ಬಹಳ ಕೋಪಗೊಂಡರು. ಸರಯೂ ನದಿಯ ನೀರನ್ನು ದೇವಾಲಯದಲ್ಲಿ ನೈವೇದ್ಯಕ್ಕೆ ಬಳಸಬಾರದು ಮತ್ತು ಅದರ ನೀರನ್ನು ಪೂಜೆಗೆ ಬಳಸಬಾರದು ಎಂದು ಶಪಿಸಿದರು.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 5 ಕೆಟ್ಟ ಅಭ್ಯಾಸಗಳನ್ನು ಎಂದಿಗೂ ಮಾಡಬೇಡಿ

ಇದಾದ ನಂತರ ತಾಯಿ ಸರಯೂ, ಭಗವಾನ್ ಭೋಲೆನಾಥರ ಪಾದಕ್ಕೆ ಬಿದ್ದು, ‘ಸ್ವಾಮಿ, ರಾಮ ನಿರ್ಯಾಣದಲ್ಲಿ ನನ್ನ ತಪ್ಪೇನು? ಅದು ಈ ಹಿಂದೆಯೇ ನಿರ್ಧರಿಸಿದಂತೆ ನಡೆದಿತ್ತು. ಇದರಲ್ಲಿ ನನ್ನ ತಪ್ಪೇನು ಎಂದು ಶಾಪ ವಿಮೋಚನೆಗೆ ಪರಿಪರಿಯಾಗಿ ಬೇಡಿಕೊಂಡರು. ಆಗ, ಭಗವಾನ್ ಭೋಲೆನಾಥತು, ‘ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಸರಯೂ ನೀರಿನಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ತೊಳೆದುಹೋಗಲಿ. ಆದರೆ ಅದರ ನೀರನ್ನು ಪೂಜೆ ಮತ್ತು ದೇವಾಲಯಗಳಲ್ಲಿ ಬಳಸಲಾಗದು. ಹಾಗೆ ಮಾಡಿದರೂ ಯಾರಿಗೂ ಯಾವುದೇ ಪ್ರತಿಫಲ ಸಿಗದು’ ಎಂದರಂತೆ.

ಸದ್ಯ ಅಯೋಧ್ಯೆಯಲ್ಲಿ ಏನೇ ಪುಣ್ಯ ಕಾರ್ಯ ನಡೆಸುವುದಿದ್ದರೂ ಅದಕ್ಕೆ ಏಳು ನದಿಗಳ ನೀರನ್ನು ತರಲಾಗುತ್ತದೆ. ನೀರು ತರುವ ಏಳು ನದಿಗಳಲ್ಲಿ ಸರಯೂ ಮಾತ್ರ ಸೇರಿಲ್ಲ. ಶಾಪಗ್ರಸ್ತವಾಗಿರುವುದರಿಂದ ಸರಯೂ ನದಿಯ ದಡದಲ್ಲಿ ಕುಂಭ ಅಥವಾ ಅರ್ಧಕುಂಭದಂತಹ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ.

(ಮಾಹಿತಿ ಟಿವಿ9 ಭಾರತ್​ವರ್ಷ್)

ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Sat, 6 January 24

ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ