AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ಈ ಘಟನೆಗಳು ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸುತ್ತವೆ! ಅಷ್ಟೇ ಅಲ್ಲ ಭವಿಷ್ಯವನ್ನೂ ಉಜ್ವಲವಾಗಿಸುತ್ತದೆ!

ಚಾಣಕ್ಯನ ಪ್ರಕಾರ, ಮೂರ್ಖರು ಮತ್ತು ದೇಶದ್ರೋಹಿಗಳನ್ನು ಗೌರವಿಸುವ ಸ್ಥಳದಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಮೂರ್ಖರ ಮಾತನ್ನು ಕೇಳುವವನು ಜೀವನದಲ್ಲಿ ಸೋಲುತ್ತಾನೆ ಎಂದು ಚಾಣಕ್ಯ ನಂಬಿದ್ದರು.

ಚಾಣಕ್ಯ ನೀತಿ: ಈ ಘಟನೆಗಳು ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸುತ್ತವೆ! ಅಷ್ಟೇ ಅಲ್ಲ ಭವಿಷ್ಯವನ್ನೂ ಉಜ್ವಲವಾಗಿಸುತ್ತದೆ!
ಈ ಘಟನೆಗಳು ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸುತ್ತವೆ -ಚಾಣಕ್ಯ ನೀತಿ
TV9 Web
| Edited By: |

Updated on: May 09, 2023 | 6:06 AM

Share

ಆಚಾರ್ಯ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ (Chanakya niti) ಮಾನವ ಜೀವನ ವಿಧಾನದ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಉಲ್ಲೇಖಿಸಿದ್ದಾನೆ. ಅವರ ಮಾತುಗಳು ಮತ್ತು ನೀತಿಗಳು ಇಂದಿನ ಸಮಾಜದಲ್ಲಿಯೂ ಪ್ರಸ್ತುತವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಕೆಲವು ಪಾಠಗಳನ್ನು (lesson) ಕಲಿಸುತ್ತದೆ ಎಂದು ಚಾಣಕ್ಯ ನಂಬಿದ್ದರು (Chanakya teachings). ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಮನುಷ್ಯರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಿಗೆ ಸಂಬಂಧಿಸಿದ ಪರಿಹಾರಗಳ ಬಗ್ಗೆಯೂ ತಿಳಿಸಿದ್ದಾರೆ. ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಯು ತಿಳಿಯದೆ ಮಾಡುವ ತಪ್ಪುಗಳಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಮನುಷ್ಯ ತನ್ನ ಕೃಪೆಗಾಗಿ ಅನುಸರಿಸಬೇಕಾದ ಕೆಲವು ವಿಷಯಗಳನ್ನು ಲಕ್ಷ್ಮಿ ದೇವಿ ತಿಳಿಸಿದ್ದಾಳೆ.

ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರಿಗೆ ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ನೀವು ಆರ್ಥಿಕವಾಗಿ ಹೆಚ್ಚು ಸಮೃದ್ಧರಾಗುತ್ತೀರಿ. ನೀವು ಜೀವನದಲ್ಲಿ ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತೀರಿ. ಹಣವು ಮನುಷ್ಯನ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಎಷ್ಟೇ ಕಲಿತರೂ, ಬುದ್ದಿವಂತರೂ ಆಗಿರಲಿ, ಹಣ ಕಳೆದುಕೊಂಡರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ಸಂಪತ್ತನ್ನು ರಕ್ಷಿಸಿಕೊಳ್ಳಬೇಕು ಎಂದು ಚಾಣಕ್ಯ ನಂಬಿದ್ದರು.

ಚಾಣಕ್ಯನ ಪ್ರಕಾರ, ಮೂರ್ಖರು ಮತ್ತು ದೇಶದ್ರೋಹಿಗಳನ್ನು ಗೌರವಿಸುವ ಸ್ಥಳದಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಮೂರ್ಖರ ಮಾತನ್ನು ಕೇಳುವವನು ಜೀವನದಲ್ಲಿ ಸೋಲುತ್ತಾನೆ ಎಂದು ಚಾಣಕ್ಯ ನಂಬಿದ್ದರು. ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ ನಿಮ್ಮ ನಿರ್ಧಾರವನ್ನು ಗೌರವಿಸಿ ನಂಬಿರಿ.

ಅದೃಷ್ಟವನ್ನು ಅವಲಂಬಿಸದೆ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವಿದೆ. ಅಂತಹವರ ಜೀವನದಲ್ಲಿ ಹಣದ ಕೊರತೆಯಿಲ್ಲ. ಇದಲ್ಲದೆ, ನೀವು ಜೀವನದಲ್ಲಿ ಸಂತೋಷ ಮತ್ತು ಸಂಪತ್ತನ್ನು ಪಡೆಯುತ್ತೀರಿ. ಕಷ್ಟಪಟ್ಟು ದುಡಿಯುವವರು ಎಂತಹ ಪರಿಸ್ಥಿತಿಯಲ್ಲಿದ್ದರೂ ಬೇಗ ಯಶಸ್ಸು ಗಳಿಸುತ್ತಾರೆ ಎಂದು ಚಾಣಕ್ಯ ನಂಬಿದ್ದರು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ