
ಏಕಾದಶಿಯು ಹಿಂದೂ ಧರ್ಮದಲ್ಲಿ ತಿಂಗಳಿಗೆ ಎರಡು ಬಾರಿ ಬರುವ ಅತ್ಯಂತ ಪವಿತ್ರ ಹಾಗೂ ಪುಣ್ಯದಾಯಕ ತಿಥಿಯಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಏಕಾದಶಿಯಂದು ಮನೆಯನ್ನು ಪೊರಕೆಯಿಂದ ಗುಡಿಸುವುದು ಸೂಕ್ತವಲ್ಲ. ಗುಡಿಸುವಾಗ ಕಣ್ಣಿಗೆ ಕಾಣಿಸದ ಸಣ್ಣ ಇರುವೆಗಳು ಅಥವಾ ಸೂಕ್ಷ್ಮಜೀವಿಗಳು ಸತ್ತು ‘ಪ್ರಾಣಿಹಿಂಸೆ’ಯ ಪಾಪ ಸುತ್ತಿಕೊಳ್ಳುತ್ತದೆ ಎಂಬುದು ಇದರ ಹಿಂದಿನ ಮುಖ್ಯ ಕಾರಣ.
ಅದೇ ರೀತಿ ವಾಸ್ತು ಶಾಸ್ತ್ರದ ಪ್ರಕಾರ, ಏಕಾದಶಿಯ ದಿನ ಮನೆಯನ್ನು ಒದ್ದೆ ಬಟ್ಟೆಯಿಂದ ಒರೆಸುವುದರಿಂದ (ಮ್ಯಾಪಿಂಗ್) ಮನೆಯಲ್ಲಿರುವ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಅತ್ಯಂತ ಅಗತ್ಯವಿದ್ದರೆ, ಸೂರ್ಯೋದಯದ ನಂತರ ಒಣ ಬಟ್ಟೆಯಿಂದ ಲಘುವಾಗಿ ಧೂಳು ಒರೆಸಬಹುದು. ಮಧ್ಯಾಹ್ನ 12 ಗಂಟೆಯ ನಂತರ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮನೆ ಸ್ವಚ್ಛಗೊಳಿಸಬಾರದು.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!
ವಿಷ್ಣುವಿನ ಪೂಜೆ ಮತ್ತು ಉಪವಾಸಕ್ಕೆ ಮೀಸಲಾದ ಈ ಪವಿತ್ರ ದಿನದಂದು ಕಠಿಣ ಸ್ವಚ್ಛತಾ ಕಾರ್ಯಗಳಿಂದ ದೂರವಿದ್ದು, ಭಕ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗುವುದು ಶ್ರೇಯಸ್ಕರ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Sun, 23 August 26