Swapna Shastra: ಕನಸಿನಲ್ಲಿ ಗಣೇಶ ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?
ಗಣೇಶ ಚತುರ್ಥಿ ಸಮಯದಲ್ಲಿ ಗಣೇಶನ ಕನಸು ಕಾಣುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಬೆಳಗಿನ ಜಾವ ಗಣೇಶ ಕನಸಿನಲ್ಲಿ ಕಂಡರೆ ಶುಭ ಸೂಚನೆ. ಗಣೇಶನ ವಿಗ್ರಹ ಕನಸಿನಲ್ಲಿ ಧಾರ್ಮಿಕ ಕಾರ್ಯಕ್ರಮ ಅಥವಾ ಬಾಕಿ ಕೆಲಸ ಪೂರ್ಣಗೊಳ್ಳುವುದನ್ನು ಸೂಚಿಸುತ್ತದೆ. ಗಣೇಶನೊಂದಿಗೆ ಇಲಿ ಕಾಣಿಸಿಕೊಂಡರೆ ಯಶಸ್ಸು ಮತ್ತು ಸಂಪತ್ತು. ಆದರೆ, ಗಣೇಶ ವಿಸರ್ಜನೆಯ ಕನಸು ಅಶುಭವಾಗಿದೆ, ದುಃಖ ಮತ್ತು ಆರ್ಥಿಕ ತೊಂದರೆಗಳ ಸಂಕೇತ ಎಂದು ಪರಿಗಣಿಸಲಾಗಿದೆ.

ದೇಶ – ವಿದೇಶಗಳಲ್ಲೂ ಆಚರಿಸಲಾಗುವಂತಹ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಹಬ್ಬವೂ ಒಂದಾಗಿದೆ. ಗಣೇಶ ಉತ್ಸವದ ಸಮಯದಲ್ಲಿ ಕನಸಿನಲ್ಲಿ ಗಣೇಶ ಕಂಡರೆ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ವಿಶೇಷವಾಗಿ ಬೆಳಿಗ್ಗೆ ನಿಮ್ಮ ಕನಸಿನಲ್ಲಿ ಗಣಪ ಕಂಡರೆ ಅದು ಹೆಚ್ಚು ಶುಭ. ಅಂದರೆ ಗಣೇಶ ನಿಮ್ಮ ಒಂದು ಆಸೆಯನ್ನು ಪೂರೈಸಲಿದ್ದಾರೆ ಎಂದರ್ಥ.
ಗಣೇಶನ ವಿಗ್ರಹ:
ನಿಮ್ಮ ಕನಸಿನಲ್ಲಿ ಗಣೇಶನ ವಿಗ್ರಹ ಕಂಡರೆ, ನಿಮ್ಮ ಮನೆಯಲ್ಲಿ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮ ನಡೆಯಲಿದೆ ಅಥವಾ ಬಹಳ ದಿನಗಳಿಂದ ಬಾಕಿ ಇರುವ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬುದರ ಸೂಚನೆ ಎಂದು ಪರಿಗಣಿಸಲಾಗಿದೆ.
ಗಣೇಶನ ಜೊತೆಗೆ ಇಲಿ:
ನಿಮ್ಮ ಕನಸಿನಲ್ಲಿ ಗಣೇಶನ ಜೊತೆಗೆ ಇಲಿ ಕಾಣಿಸಿಕೊಂಡರೆ, ಅದು ಕೂಡ ಶುಭ ಸಂಕೇತ. ಇದನ್ನು ಕೆಲಸದಲ್ಲಿ ಯಶಸ್ಸು ಅಥವಾ ಸಂಪತ್ತಿನ ಗಳಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಗಣೇಶನನ್ನು ಪೂಜಿಸುವಾಗ ಈ ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ
ಗಣೇಶ ವಿಸರ್ಜನೆ:
ನಿಮ್ಮ ಕನಸಿನಲ್ಲಿ ಗಣೇಶ ವಿಸರ್ಜನೆಯನ್ನು ನೀವು ನೋಡಿದರೆ, ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಅದನ್ನು ಜೀವನದಲ್ಲಿ ದುಃಖ, ತೊಂದರೆ ಅಥವಾ ಆರ್ಥಿಕ ಬಿಕ್ಕಟ್ಟಿನ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




